ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಅವತಾರತ್ರಯ ಸ್ತುತಿ

ಸೂತ್ರವ ಪಿಡಿಯಿರೋ ಬಿಡದೆ ಸೂತ್ರನಾಮಕ ಕಾಯ್ವ ರಾಮದೂತ |

ದಾಟಿಸುವವಸಾಗರ ಸಹಜದಲಿ ಜಲಧಿಯ ಲಂಘಿಸಿದವ || 1 ||

ಲಂಕೆಯ ಸುಟ್ಟು ರಾವಣನ ಎದೆ ನಡುಗಿಸಿದ ಧೀರ ವಿಜ್ಞಾನಿ ||

ಯುಕುತಿಯಿಂದಲಿ ನಿಜಭಕುತಿಯ ಬೇಡಿದ ಸಂಜೀವಿನಿಗಿರಿ ತಂದು || 2 ||

ದ್ರೌಪದಿಗೆ ಸೌಗಂಧಕನಿತ್ತವ ಕೀಚಕನ ಪ್ರಾಣ ಹೀರಿದ ಸುಜ್ಞಾನಿ |

ಕಪಟ ಕೌರವರ ರಣರಂಗದಿ ತರಿದ ಧೀರ ಬಲವಂತನು || 3 ||

ದ್ವೈತಮತವನುದ್ಧರಿಸಿದ ವೇದಶಾಸ್ತ್ರ ಪಾರಂಗತ ತತ್ವಜ್ಞ |

ನಿತ್ಯ ವಿಶ್ವಸತ್ಯವೆಂದ ಗುರುಮಧ್ವೇಶ ಶ್ರೀಕೃಷ್ಣವಿಠ್ಠಲನ ದಯದಿ || 4 ||

ಪಂಚರೂಪಾತ್ಮಕ ಮುಖ್ಯ ಪ್ರಾಣನೇ ಸಲಹು |

ಪಂಚೇಂದ್ರಿಯ ಕಾರ್ಯಕಾರಣ ಕರ್ತ ||

ಪಂಚತತ್ವನರಿತ ಪಂಚಮುಖಿಯೇ |

ಪಂಚಭೇದ ನಿತ್ಯತ್ವ ಪ್ರತಿವಾದ್ಯ ತೇ ನಮೋ || 1 ||

ವಜ್ರಕಾಯ ಹರಣ |

ದುರ್ಜನ ಸಂಗ ಬಿಡಿಸಿ ಸಜ್ಜನರೊಳಿಡು ||

ಗರ್ಜಿಸಿ ದುಷ್ಟರ ತರಿದು ಶಿಷ್ಟ ಸಂರಕ್ಷಕ |

ಭಂಜಿಸಿಪಾಪಪುಣ್ಯಮಾರ್ಗತೋರಿಪ ತೇ ನಮೋ || 2 ||

ಅಂಜಿಸಿ ರಾವಣನ ಲಂಕಾಪುರಿ ಸುಟ್ಟು |

ಭುಂಜಿಸಿ ಬಂಡಿಅನ್ನ, ಅಸುರನಕೊಂದು ||

ಅಂಜದೇ ಖಂಡಿಸಿ ಅದ್ವೈತ, ದ್ವೈತ ಸಾರಿದ |

ಅಂಜನಾಪುತ್ರಶ್ರೀಕೃಷ್ಣವಿಠ್ಠಲನ ನಿಜದೂತ ತೇ ನಮೋ || 3 ||

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು