ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಶ್ರೀ ಪಾಂಡುರಂಗ

79.  ಹೊರೆಯಾದನೆ ನಾ ನಿನಗೆ ಪಂಢರಿರಾಯಾ |

ಪೊರೆಯಲಾರೆಯಾ ಎನ್ನ ನೀನು ಪುಂಡರೀಕಾಕ್ಷ || ಪ ||

ದುರುಳ ಜನರೊಳು ನಾ ದುರ್ಮತಿಯಾಗದಂತೆ |

ಮರುಳ ಮಾಡಯ್ಯಾ ನಿಜ ಮರ್ಮವನರಿತವನೇ || ಅ ||

 

ಕಾಕು ಜನರೊಳು ನೂಕದೆ ಸಜ್ಜನ ಸಂಗದಿ ಇರಿಸು |

ರಕ್ತಿ ಇರಲಿ ನಿನ್ನ ಕಥೆಯೊಳು ರೂಪವಿರಲಿ ಮನದೊಳ್ ||

ಭಕ್ತಿ ಇರಲಿ ನಿನ್ನಂಘ್ರಿಯಲಿ ಎಂದನುಗ್ರಹಿಸು ಸದಾ |

ಲೋಕಜ ಎನ್ನನ್ನೆತ್ತಿ ನಿನ್ನ ಪದ ಸಮೀಪದಿ ಇರಿಸು || 1 ||

 

ತನು, ಮನವಿರಲಿ ಸದಾ ನಿನ್ನ ಏಕಾಂತ ಧ್ಯಾನದಿ |

ಜನುಮ ಜನುಮದಿ ದೊರಕಲಿ ನಿನ್ನ ಕೃಪಕಟಾಕ್ಷ ||

ನಿನಗೇ ಶರಣೆಂಬೆ ಕಲಿಬಾಧೆ ತಪ್ಪಿಸಯ್ಯಾ |

ಎನ್ನ ಅವಗುಣಗಳೆಣಿಸದೇ ಒಲಿದು ಬಾರೋ || 2 ||

 

ಅತೀ ನಿಕೃಷ್ಟ ಪಾಪದ ಮೇರು ಪರ್ವತ ನಾ ಕಾಣೋ |

ಹತ್ತಿಗೂಡ, ಕಿಡಿಯಿಂದ ಸುಡುವಂತೆ ಸಂಚಿತ ಪ್ರಾರಬ್ಧ ಕಡೆಗಾಣಿಸೋ ||

ಸಂತತ ನಿನ್ನ ಚಿಂತೆ ಇರಲಿ ಅಂತ್ಯ ಕಾಲಕೆ ವಿಶೇಷದಿ |

ಅಂತ್ಯಾದಿವಿದೂರ ಪಾಂಡುರಂಗಾಭಿನ್ನ ಶ್ರೀಕೃಷ್ಣವಿಠ್ಠಲ ಪಾಲಿಸೋ || 3 || 

 

80.  ಇಟ್ಟಿಗೆಯ ಮೇಲೆ ನಿಂತ ವಿಠ್ಠಲ | ಕಟಿಯಲ್ಲೆರಡು ಕರವಿಟ್ಟ

     ಪಂಢರಿರಾಯ |

     ದಿಟವಾಗಿ ಇವನೇ ಶ್ರೀಕೃಷ್ಣವಿಠ್ಠಲ | ಕಟ್ಟ ಕಡೆಗೆ ಪರಗತಿತೋರ್ಪ ಭಕುತರಿಗೆ ||

 

 

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು