ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಶ್ರೀ ಹನುಮಂತ

27. ಅಂಜನಾಸುತ ಹನುಮಂತ ಒಬ್ಬರಿಗಂಜುವನಲ್ಲ |

ಜಗದಿ ಸರ್ವತ್ರ ಓತ ಪ್ರೋತನಾಗಿರುವ || ||

ಜೀವದ ಜೀವಕೆ ಕಾರಣ ಪ್ರಾಣ | ಇವನಧೀನ ಸರ್ವೇಂದ್ರಿಯಗಳು |

ಇವನಿರೇ ದೇಹ ಶಿವವಾಹುದು | ಶವವಾಹುದು ಈತ ದೇಹ ತೊರೆಯಲು || 1 ||

ಪಂಚಾವರಣದೊಳು ಪಂಚರೂಪದಿ | ಸಂಚರಿಪ ಈಶನಾಜ್ಞೆಯಲಿ ||

ಕೊಂಚ ಇವನ ಕೃಪೆ ತಪ್ಪಲು | ಹೊಂಚು ಹಾಕುವ ಕಾಲನ ದೂತ || 2 ||

ಜಾಗ್ರತ ಸ್ವಪ್ನ ಸುಷುಪ್ತಿಯಲ್ಲೂ ಕಾವ | ಭಗವಂತನಧೀನದಿ ಕಾರ್ಯನಡೆಸುವ ||

ಸದ್ಗುಣಸಾಂದ್ರ ಸದಾ ಹಂಸಮಂತ್ರ ಜಪಿತ | ಉಗ್ರ ಪ್ರತಾಪಿ ಅಸುರರ ಸದೆ ಬಡೆವ || 3 ||

ಮುಖ್ಯಪ್ರಾಣನ ವಶ ಸರ್ವವೂ ಇವರು ವಿಷ್ಣುವಶ | ಮುಖ್ಯಪ್ರಾಣನ ಪ್ರೀತಿಕರ ಸರ್ವವೂ ವಿಷ್ಣುಪ್ರಿಯ ||

ಮುಖ್ಯ ಪ್ರಾಣನಿದ್ದೆಡೆ ಜತೆ ಇರುವ ಹರಿ | ಮುಖ್ಯಪ್ರಾಣನೊಪ್ಪುವ ಹರಿಮತ || 4 ||

ಜ್ಞಾನಮಾರ್ಗ ಪ್ರೇರಕನಿವ ದಯದಿ | ಧ್ಯಾನಮಾರ್ಗತೋರುವ ಸಾಧಕರಿಗೆ ||

ದಾನವರ ಲಿಂಗದೇಹ ಭಂಗಿಸುವ ಗದಾಪ್ರಹಾರದಿ | ಘನ ಹಂಸಮಂತ್ರ ಜಪಿಸುವ ಶ್ರೀಕೃಷ್ಣವಿಠ್ಠಲನ ನಿಜದೂತ || 5 ||

28. ನಮಾಮಿ ಮಾರುತಂ ವಾಯುಪುತ್ರಂ |

ರಾಮಕಿಂಕರÀ, ಸೀತಾನ್ವೇಷಕಂ ಶುಭದಂ |

ಲಕ್ಷ್ಮಣಪ್ರಾಣದಾತಾರಂ ದಶಕಂಠಹಂತಕ ಪ್ರಿಯಂ |

ಸ್ವಾಮೀ ಶ್ರೀಕೃಷ್ಣವಿಠ್ಠಲ ನಿಜ ಭಕ್ತಂ |

ಸುಸ್ಮರೇಣೇನ ಸದಾಶತ್ರು ನಾಶನಂ ||

"ಸಂಕ್ಷಿಪ್ತ ಸುಂದರಕಾಂಡ"

29. ಸುಂದರ ಸಂದರ್ಶಿಸಿ ಸುರಪತಿ ಸುಂದರಿನಾಥನ |

ಸುಂದರಿಯ ಕಾಣಲು ನಿರಾಯಾಸದಿ ಸಾಗರತಾರಿಸಿ ||

ಬಂದ ವಿಘ್ನಗಳ ನಿರ್ಭಯದಿ ನಿವಾರಿಸಿ |

ಮಂದಿರ ಪ್ರವೇಶಿಸಿ ಕಂಡ ಬೀಭತ್ಸದಿಂ ||

ಬಂದ ಹೊರಗೆ ಅಶೋಕವನ ಪ್ರವೇಶಿಸಿ |

ಕ್ಷುದ್ರ ರಾಕ್ಷಸಿಯರ ನಡುವೆ ಕಂಡ ಸ್ತ್ರೀರತ್ನ ||

ವಂದಿಸಿ ಭಕ್ತಿಯಲಿ ಕೈಗಿತ್ತ ಉಂಗುರ |

ಮುದ್ರೆಯಂ ನೋಡಿ ಸಂತೋಷದಿ ಹರಸಿ ||

ಒಡನೇ ತಾ ಚೂಡಾಮಣಿಯನಿತ್ತಳು |

ಬಂಧಿತನಾದ ಕಪಿ ವನವ ಹಾಳುಮಾಡಲು ||

ಮದಭüರಿತ ರಾವಣನ ಕಂಡ ದೂತ |

ಮರ್ದಿಸದೇ ಅವನ ತನ್ನ ಸ್ವಾಮಿಗೆ ಮೀಸಲಿಟ್ಟ ||

ನಡುಗಿಸಿದ ಲಂಕೆಯ ಭರದಿಂ ಅಗ್ನಿಗರ್ಪಿಸಿ |

ಮುದದಿ ತನಗೊಪ್ಪಿಸಿದ ಕಾರ್ಯ ನೆರವೇರಿಸಿ ||

ಸಂದೇಶವಿತ್ತ ವಿನೀತನಾಗಿ ಕಾರ್ಯ ಒಪ್ಪಿಸಿದವಗೆ |

ಸುದೈವ ಶ್ರೀಕೃಷ್ಣವಿಠ್ಠಲ ಪೂರ್ಣಾಲಿಂಗನ ಪ್ರಸಾದವಿತ್ತ ||

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು