ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಶ್ರೀ ಮತ್ಸ

50. ಮೀನು, ಚಿಕ್ಕ ಮೀನು, ಜಗದ್ವಂದ್ಯ ಮೀನು |

ದಾನವ ಹಯಗ್ರೀವನ ಕೊಂದ ಮೀನು || ಪ ||

ವೇದಗಳ ಚತುರ್ಮುಖನಿಗಿತ್ತ ಮೀನು | ಉದಧಿ ಶೇಷಶಾಯಿಯಾದ ಮೀನು ||

ಸತ್ಯವ್ರತಗೆ ಒಲಿದು ಬಂದ ಮೀನು | ಅತ್ಯಾಶ್ಚರ್ಯದಿ ಅಗಾಧವಾಗಿ ಬೆಳೆದ ಮೀನು || 1 ||

ಪ್ರಲಯ ಕಾಲದಿ ಬಂದು ಸಲಹಿದ ಮೀನು | ಉಳಿಸಿ ವನಸ್ಪತಿ ಸಪ್ತರ್ಷಿಗಳ ಮೀನು |

ಭಗವಂತನ ಭಜಿಸಿ ಸತ್ಯವ್ರತ ಭಕ್ತಿಲಿ | ಬಿಗಿದ ಸರ್ಪದಿ ಹಡಗನು ಮೀನಿಗೆ || 2 ||

ಸ್ವಚ್ಛ ಗೌಪ್ಯಯೋಗ ಅರುಹಿದ ಮೀನು | ಮೆಚ್ಚಿ ರಾಜನ ವೈವಸ್ವತ ಮನು ಮಾಡಿದ ಮೀನು |

ಚಿಕ್ಕದಾದರೂ ಅಚಿಂತ್ಯಾದ್ಭುತ ಮೆರೆವ ಮೀನು | ನಮ್ಮ ಚೊಕ್ಕ ಶ್ರೀಕೃಷ್ಣವಿಠ್ಠಲನೇ ಅನ್ಯನಲ್ಲ || 3 ||

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು