ಶ್ರೀ ವೆಂಕಟೇಶ ಕಲ್ಯಾಣ
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ|
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ||
ಗಜಮುಖ ಅಜನರಸಿಯಳಿಗೆ ನಮಿಸುತ ಭುಜಗಗಿರೀಶ ಕಲ್ಯಾಣವನೂ|
ಋಜುಗುರುಅಂತರ್ಗತ ಶ್ರೀ ಹರಿಪ್ರೇರಿಸಿಸದಂದದಿ ರಚಿಸಿದೆನಿದನೂ||೧||
ಭೃಗುಮುನಿಯೊದೆದರೂ ಹರಿಯ ನಡತೆ ನೋಡಿ ಸರಿಬಾರದೆ ಶಿರಿ ತೆರಳಲು
ತಾನಿರದೆ ವೈಕುಂಠವ ತೊರೆದು ಹುತ್ತಿನಲ್ಲಿ ವರಗೋರಸ ಸ್ವೀಕರಿಸುತಲೇ|| ೨||
ಇರುತಿರೆ ಗೋಪನಕೊಡಲಿ ಪೆಟ್ಟಿಗೆ ತಲೆಒಡೆದುದಕೌಷಧ ಅರಸುತಿರೇ |
ವರಹದೇವ ಕನಿಕರದಿ ಸ್ಥಳವನಿತ್ತು ತ್ವರ ಬಕುಲೆಯ ಸೇವೆಗಿರಿಸಿದನೂ|| ೩ ||
ಒಂದುದಿನ ಬೇಟೆಗೆಂದು ಪೋಗಿ ರಾಜನಂದಿನಿಯಳ ನೋಡಿ ಮೋಹಿಸುತಾ|
ಸುಂದರಾಂಗಿ ಅರವಿಂದ ನಯನೆ ಎನಗಿಂದು ವಧುವಾಗೆನುತ ನುಡಿದಾ || ೪ ||
ಎಲವೂ ನೀನ್ಯಾರೊ ಬಲು ಬಾಯ್ಬಿಡುತಿಹೆ ತಿಳಿಯೊ ರಾಜಕುವರಿಯು ನಾನೂ|
ತೊಲಗೊ ತೀವ್ರದಿ ರಾಜಭಟರು ಕಂಡರೆ ನಿನ್ನ ಬಲು ಬಾಧಿಸಿ ಬಂಧಿಸುತಿಹರೂ ||೫||
ಇಂದುವದನೆ ನಿನ್ನ ಚಂದಕಟಾಕ್ಷದಿ ಬಂಧಿಸಿರುವಿ ಬೇರೆ ಬಂಧನವೇ? |
ಇಂದು ನಿನ್ನಯ ತಂದೆಗೆ ಜಾಮಾತನೆಂದು ನಿನ್ನನೆ ಪೊಂದೆ ಬಂದಿಹೆನೂ || ೬ ||
ಹೆಚ್ಚು ಕಡಿಮೆ ಮಾತಾಡದಿರೋ ನಿನ್ನ ಕೊಚ್ಚಿಕೊಂದು ಹಾಕುವರೀಗ |
ಇಲ್ಲಿ ಬಂದು ಅನಾಥಾಗಿ ಮರಣವಾಗಲೂ ಹಂದಿ ನಾಯಿ ತಿಂದು ತೇಗುವವು || ೭ ||
ವಿಧಿಬರೆದುದ ಒರೆಸುವರ್ಯಾರ್? ಆದಿರಲಿ ಚದುರೆ ವರಿಸೆನ್ನ ನೀನೆನುತಾ|
ಕುದರೆ ಅವಳೆಡೆಗೆ ನಡೆಸುತಲಿರೆ ಆ ಪದುಮೆ ಸಖಿಯರಿಂದೊಡಗೂಡೀ || ೮ ||
ಕಲ್ಲು ಕಲ್ಲಿ ನಿಂದ್ಹೊಡೆಯಲು ಕುದುರೆಯು ಅಲ್ಲೆ ಪ್ರಾಣ ತ್ಯಜಿಸಲು ಆಗ |
ಮೆಲ್ಲನೆ ಕಾಲ್ನಡಿಗೆಯಲಿ ಗಿರಿಯನೇರಿ ಸೊಲ್ಲು ಸದ್ದಿಲ್ಲದೆ ಮಲಗಿದನು || ೯ ||
ಹಸಿದನೆಂದು ಷಡ್ರಸ ಅನ್ನವತಂದು ಶಶಿಮುಖಿ ಬಕುಲೆ ಎಬ್ಬಿಸಲಾಗ|
ಹಸಿವೆ ಇಲ್ಲವಮ್ಮಾ ಕುಸುಮಗಂಧಿಯ ಕಂಡು ಬೆಸೆದುದೆನ್ನ ಯ ಮನ ಆಕೆಯಲೀ ||೧೦||
ಎಲ್ಲಿರುವಳು ನೀನಲ್ಲೆ ಕಳುಹಿಸೆನ್ನ ಒಳ್ಳೆ ಮಾತುಗಳನಾಡುತಲೇ|
ಎಲ್ಲ ಕಾರ್ಯ ಕೈಗೂಡಿಸೆಂದು ಶಿರಿನಲ್ಲನ ಪ್ರಾಥಿಸಿತೆರಳುವೆನು || ೧೧ ||
ಆಕಾಶರಸನ ಸುತೆ ಪದ್ಮಾವತಿ ಆಕೆಲಿಮನ ನೆಲೆಸಿಹುದೀಗ ಜೋಕೆಲಿ |
ಕಾರ್ಯಸಾಧಿಸಿಕೊಂಡು ಬಾ ಎಂದು ಆಕೆಯ ಕಳುಹಿಸಿ ಯೋಚಿಸಿದಾ || ೧೨ ||
ತನ್ನ ಕಾರ್ಯತಾ ಮಾಡುವದುತ್ತಮ ಹೆಣ್ಣು ಮಕ್ಕಳ ಸವಿ ಮಾತಿನಲೀ |
ಸುಮ್ಮನೆ ಕೂಡುವದುಚಿತವಲ್ಲವೆಂದು ರಮ್ಯ ಕೊರವಿ ವೇಷ ಧರಿಸಿದನೂ || ೧೩ ||
ಹರಕ ಕುಪ್ಪುಸ ತೊಟ್ಟು ಹಳೆಯ ಸೀರೆಯುನುಟ್ಟು ಕೊರಳೊಳ್ ಮಣಿಗಳ ಸರಧರಿಸೀ|
ಕರದಿ ಕಾಜಿನಬಳೆ ಕಂಕುಳೊಳ್ ಕೂಸನೆತ್ತಿ ಶಿರದಿ ಬುಟ್ಟಿಯನ್ಹೊತ್ತು ತೆರಳಿದಳೂ ||೧೪ ||
ಅತ್ತ ಆಕಾಶನ ಪುತ್ರಿ ಮೈಯ್ಯಮೇಲೆಚ್ಚರಿಲ್ಲದೇ ಮಲಗಿರಲೂ |
ಸುತ್ತು ಮುತ್ತು ಪಟ್ಟಣದೊಳಹೊರಗಿನ ಶ್ರೇಷ್ಠ ವೈದ್ಯರುಪಚರಿಸುತಿರೇ || ೧೫ ||
ಮಾತಾಪಿತರೂ ಪ್ರೀತಿಯ ಮಗಳಿಗೆ ಭೂತಬಾಧೆಯೊ ಎಂದು ಚಿಂತಿಸುತಾ |
ಭೂತನಾಥಗಭಿಷೇಕ ಮಾಡಿರೆಂದು ಪ್ರಖ್ಯಾತ ಬ್ರಾಹ್ಮಣರ ಕಳಿಸಿದರೂ || ೧೬ ||
ಪುರದೊಳು ಹರಿಚರಿತೆಯ ಪಾಡುತಲೇ ಕೊರವಿ ಬರುವದನೆ ನೋಡಿ ಜನಾ |
ತ್ವರದಿ ಪೇಳಲೂ ಅರಸಿ ಕರೆಸ್ಯವಳ ವರ ಪೀಠದಿ ಕುಳ್ಳಿರಿಸಿದಳೂ || ೧೭ ||
ಕೊರವಿಯ ಸ್ವರ ಕೇಳುತ ರಾಜ ಕುಮಾರಿ ತಾ ಇರದೆ ಮಂಚವನಿಳಿದ್ಹೊರಗೆ ಬರೇ |
ಪರಮಾಶ್ಚರ್ಯದಿ ಮಗಳ ಬಿಗಿದಪ್ಪಿ ಹರುಷದಿ ಕೊರವಿಗೆ ಹೇಳಿದಳೂ || ೧೮ ||
ಎರಡು ವಾರದಿಂದ ಕಣ್ಣು ತೆರೆಯದೇ ಅನ್ನ ನೀರಿಲ್ಲದೆ ಮಲಗಿಹಳೂ |
ನಿನ್ನ ಕಾಲ್ಗುಣದಿ ಹೊರಗೆ ಬಂದಿಹಳು ಇನ್ನು ಏನಾಗಿರುವದು ಪೇಳೂ || ೧೯ ||
ಮುತ್ತುಲಿ ತುಂಬ್ಹೊನ್ನು ಮತ್ತೆ ಕೂಸಿಗೆ ಅನ್ನ ಉತ್ತುಮಳೆನೀ ನೀಡೆನಲೂ |
ಆರಸಿ ಅನ್ನ ತರಿಸೆ ಉಣದಿರೆ ಶಿಶು ತಾಉಂಡು ಕೊರವಿ ವೀಳ್ಯ ಮೆಲ್ಲುತಲೇ || ೨೦ ||
ಆರಸಿಯಾತುರ ಕಂಡು ತ್ವರದಿ ಕಂಗಳ ಮುಚ್ಚಿ ಸ್ಮರಿಸಿ ಸಕಲದೇವತೆಗಳನೂ |
ವರವೇಂಕಟೇಶನೆಂಬವಗೆ ಮೋಹಿಸಿ ಕಾಮಜ್ವರ ಪೀಡಿತಳಾಗಿ ಮಲಗಿಹಳೂ ||೨೧ ||
ಆತನೊಡನೆ ತನ್ನ ಪ್ರೀತಿ ಪ್ರೇಮವ ಮುಚ್ಚಿ ಮಾತಿನಿಂದಲಿ ವಾದಿಸಿ ಅವನ |
ಪ್ರಖ್ಯಾತ ಹಯಕೆ ಕಲ್ಲೊಗೆದು ಕೊಲ್ಲಲೂ ಆತ ಪೋದ ತನ್ನಯ ಸ್ಥಳಕೇ || ೨೨||
ಆದೇ ಚರಿತೆಯ ನಾ ಪಾಡುತ ಬರುತಿರೆ ಮುದದಿ ಧೇನಿಸಿ ಬಂದಳು ಹೊರಗೇ |
ಇದು ಸುಳ್ಳೋನಿಜವೋ ತಿಳಿಯಲು ನೀ ಮೊದಲು ನಿನ್ನ ಮಗಳಿಗೆ ಕೇಳೂ || ೨೩ ||
ಮಗಳ ಮುಗಳುನಗೆ ನೋಡಿ ಕೊರವಿ ಅವನಿರುವ ಸ್ಥಳವ ನೀನರುಹೆನಲೂ |
ವರ ವೈಕುಂಠದೊಳಿರುವವನ ಸರಿ ಮಿಗಿಲು ಮೂರ್ಜಗದೊಳ್ಯಾರಿಹರೂ|| ೨೪ ||
ಇನ್ನೊಂದು ಘಳಿಗೆಗೆ ಕನ್ನೆಯ ಕೇಳಲು ನಿನ್ನಲ್ಲಿ ಬರುವಳಾವರದವಳೂ |
ಪನ್ನ ಗಾಚಲಾಸಿ ಉನ್ನತವರನವ ಮನ್ನಿ ಸ್ಯವಗೆ ಮಗಳನ್ನೆ ಕೊಡೂ || ೨೫ ||
ಬಿಟ್ಟರೀಕೆಗೇ ತಟ್ಟೊದು ಮರಣವು ಸ್ಪಷ್ಟನಿನಗೆ ಹಿತಹೇಳಿದೆನೂ |
ದುಷ್ಟಕೊರವಿ ಎಂಥ ಕೆಟ್ಟನುಡಿದಳೆಂದು ಸಿಟ್ಟು ಮಾಡಿದಿರು ನಿಜವಿಹುದು || ೨೬ ||
ಎನ್ನ ಒಡೆಯನಾಣೆ ಎನ್ನ ಕೂಸಿನ ಆಣೆ ಎನ್ನಾಣೆಯನಿತ್ತು ಪೇಳಿದೆನೂ |
ನಿನ್ನ ಮಗಳಿಗಿನ್ನೂಮ್ಮೆ ಏಕಾಂತದಿ ಚನ್ನಾಗಿ ಕೇಳಿಕೊಎನ್ನು ತಲೇ || ೨೭||
ಖರೆಯಾದರಿನ್ನೂಮ್ಮೆ ಕರೆದು ಮನ್ನಿಸೆನ್ನ ತಿರಿದುಣ್ಣೊ ಕೊರವಿಯು ನಾನಲ್ಲಾ |
ಪರ ಉಪಕಾರಕೆ ಚರಿಸಿ ಭೂಮಂಡಳ ತಿರುಗತಿಹೆನು ನಿನಗರುಹಿದೆನೂ || ೨೮ ||
ಪರಮ ಶ್ರೀ ಪಾದರೆಣು ಹಣೆಗೆ ಹಚ್ಚಿ ಜ್ವರವೀಗಲೆ ನಾಶವಾಗುವದು ತ್ವರವಿದೆ |
ಹೋಗಿ ಬರುವೆನೆನೆ ಕೊರವಿಗೆ ಕರ ಮುಗಿದು ನಮಿಸಿ ಕಳುಹಿದಳೂ || ೨೯ ||
ಕೊರವಿ ಹೇಳಿಕೆಯಂತೆ ಬರಲು ಬಕುಲೆಯಳ ಕರೆದು ಪೀಠದಲ್ಲಿ ಕುಳ್ಳಿರಿಸೀ |
ವರನ ವೃತ್ತಾಂತವ ಅರಸ ಕೇಳಿ ತಾ ಕರೆಸಿ ಶುಕಮುನಿಯ ಗುರು ಸಹಿತಾ || ೩೦||
ಬರುತಲ್ಯವರ ಮತಕೇಳೆ ಹರುಷ ಬಟ್ಟು ಹರಿಗೆ ಬರಿಪತ್ರ ತೀವ್ರದಲೀ|
ಎನಲು ಬರೆದು ಪತ್ರ ಮುನಿಯ ಕೈಯ್ಯೂಳಿತ್ತು ಕಳುಹಿದ ವೆಂಕಟಗಿರಿಗಾಗ || ೩೧ ||
ಪತ್ರ ನೋಡಿ ಹರಿ ಅತ್ಯಂತ್ಹರುಷದಿ ಉತ್ತಮ ಮುನಿಗಾಲಂಘಿಸಿದಾ |
ಅಷ್ಟರೊಳ್ ಬಕುಲೆ ಬರುತ್ತಲೆ ನುಡಿದಳು ವತ್ಸ ನಿನ್ನ ಕಾರ್ಯ ಫಲಿಸಿಹುದು || ೩೨ ||
ಶ್ರಮದಿಂದ ಕ್ರಮದಿ ನೀ ಮಾಡಿದ ಕಾರ್ಯವ ಮುನಿರಾಯನು ಪೇಳಿದನೆನಗೇ |
ಎಲ್ಲತರದ ಪುಣ್ಯ ಕೂಡಿ ಬರುವದೊಂದು ಕಲ್ಯಾಣವ ಕಟ್ಟಿದವರಿಗೆ | ೩೩ | ||
ನಿನ್ನ ಕಾರ್ಯಕೆ ನಾ ಪೋಗುವ ಮುನ್ನವೇ ಧನ್ಯಕೊರವಿ ಹೋಗಿ ಮಾಡಿದ್ದಳೂ|
ಇನ್ನೇತಕೆ ತಡ ನಿನ್ನ ಬಳಗದವರನ್ನೆ ಕರೆಸು ಈಗ ತೀವ್ರದಲೀ || ೩೪ ||
ಮದುವೆಯ ವಾರ್ತೆಯ ವಿಧಿಗೆ ತಿಳಿಸಲೂ ಮುದದಿ ಸರುವ ಬಳಗವಕೂಡೀ |
ಒದಗಿ ಬಂದು ತಂದೆಯ ಪಾದಕೆರಗಲೂ ಮಗನಿಗ್ಹಿಂದಿನದೆಲ್ಲ ಹೇಳಿದನು || ೩೫ ||
ಇಷ್ಟು ಜನರಿದ್ದು ಲಕ್ಷ್ಮೀ ಇಲ್ಲದಿರೆ ಇಷ್ಟವಿಲ್ಲ ಕಾರ್ಯದಲೀ |
ಮತ್ತೆ ಸುಳ್ಳು ಹೇಳಿ ಕರೆದು ತಾರೆಂದು ಉತ್ತಮ ಸೂರ್ಯನ ಕಳುಹಿದನೂ || ೩೬||
ರವಿಯ ಮಾತು ಕೇಳಿ ತವಕದಿಂದ ಬಂದು ಹರಿಯ ಮುಖವನ್ನೆ ದಿಟ್ಟಿಸುತಾ|
ಇನ್ನೊಬ್ಬಳ ನೀ ಮದುವೆಯಾಗುವವ ಎನ್ನನ್ಯಾಕೆ ಕರೆಸಿದಿ ಎನಲು || ೩೭||
ತ್ರೇತೆಲಿ ನಿನಗೆ ನಾ ಮಾತು ಕೊಟ್ಟದನು ಜ್ಞಾಪಿಸಿಕೋ ವೇದವತಿಯಳನೂ |
ಆಕೆಯೆ ಪದ್ಮಾವತಿಯಾಗಿಹಳು ವಿವೇಕದಿ ಮಸುವೆ ನೀ ಮಾಡೆನಲೂ || ೩೮ ||
ಒಪ್ಪಿದೆ ಹರುಷದಿ ತಪ್ಪು ಕ್ಷಮಿಸೆಂದು ಭಕ್ತಿಲಿ ಪಾದಕೆ ನಮಿಸುತಲೇ |
ಉತ್ಸಾಹದಿ ಮದುವೆಯ ಮಾಡುವೆ ಮನ ತೃಪ್ತವಾಯಿತೆಂದು ಪೇಳಿದಳೂ || ೩೯ ||
ತಂದೆಯ ಮದುವೆಗೆ ಬಂದ ಸುರರಿಗೊಂದೊಂದು ಕಾರ್ಯವಿಧಿ ನೇಮಿಸಿ ತಾ |
ನಿಂತು ದೇವರೂಟ ಮಾಡಿ ಎಲ್ಲರೂ ಅಂದಣೇರಿ ಹೊರಟರು ಆಗ || ೪೦ ||
ಮಾರ್ಗದಿ ಶುಕಮುನಿ ಭೋಜನ ಮಾಡೆನೆ ಬಹು ಜನರಿರುವೆವು ಬೇಡೆನಲೂ |
ನೀ ಒಬ್ಬನುಂಡರೆ ಜಗತೃಪ್ತವಾಗುವದೆಂದು ಉತ್ತರಣೆಯ ಅನ್ನ ಅರ್ಪಿಸಿದಾ || ೪೧ ||
ತರತರದ ವಾದ್ಯ ವೈಭವಗಳಿಂದ ಅರಸ ಬಂದು ಆಳಿಯನ ಸಹಿತಾ |
ಸರುವ ಬೀಗರನು ಕರೆದು ತಂದು ಒಂದರಮನೆಯೊಳಗಿಳಿಸ್ಯುಪಚರಿಸೀ || ೪೨ ||
ಶಿಷ್ಟಾಚಾರದಿ ವರಪೂಜೆಯನೂ ನಿಷ್ಠೆಯಿಂದ ಮಾಡಿದ ರಾಜಾ |
ಮೃಷ್ಟಾನ್ನ ಮಾಡಿಸಿ ಬೀಗರಿಗೆಲ್ಲ ಋಕ್ಕೋತದ ಊಟ ಮಾಡಿಸಿದಾ || ೪೩ ||
ನಾನಾ ವಾದ್ಯದಿ ಆನೆ ಅಂಬಾರಿಲಿ ಶ್ರೀನಿವಾಸನನು ಕರತಂದೂ |
ಹೇಮ ಮಂಟಪದಿ ಭಾಮೆ ಪದಮೆಯಳ ಕರೆದು ನಿಲ್ಲಿಸಿದರು ವರನೆದುರು || ೪೪ ||
ಶ್ರೇಷ್ಠ ಪುರೋಹಿತ ಋಷಿಮುನಿಗಳು ಮಂಗಳಾಷ್ಟಕ ಪಠಿಸುತ ಸುಸ್ವರದೀ |
ಸುಮುಹೂರ್ತೇ.. ಸಾವಧಾನ ವೆನ್ನು ತಲೆ ಸರುವರಕ್ಷತೆಗಳ ಹಾಕಿದರು || ೪೫ ||
ಮಂಗಳ ವಾದ್ಯಗಳ್ ಭೋರ್ಗರೆಯಲು ಸುರರಂಬರದಿಂ ಪುಷ್ಟವರ್ಷಿಸಲೂ |
ತುಂಬರು ನಾರದರಿಂಬಾಗಿ ಪಾಡೊರು ರಂಭೆರು ನರ್ತನ ಮಾಡಿದರೂ || ೪೬ ||
ಕೊಟ್ಟನು ಶತಭಾರ ಸುವರ್ಣ ಕಿರೀಟವ ಆರ್ಥಿಯಿಂದ ಆಳಿಯಗೆ ರಾಜಾ |
ಅತ್ಯಂತ್ಹ ರುಷದಿ ಇತ್ತನು ಪುತ್ರಿಗೆ ಸಮಸ್ತ ಸುವಸ್ತ್ರಾಭರಣಗಳಾ || ೪೭ ||
ನಡುವೆ ವೇಂಕಟೇಶ ಎಡಬಲ ಲಕ್ಷುಮಿ ಪದುಮಾವತಿಯರ ಕುಳ್ಳಿರಿಸೀ ಮಂಗಳ |
ಜಯಜಯಮಂಗಳ ವೆನ್ನುತ ಶುಭಾಂಗಿಯರಾರುತಿ ಬೆಳಗಿದರೂ || ೪೮ ||
ನಾಲ್ಕುದಿನಕೆ ನಾಗೋಲಿಯ ಮಾಡೀ ಮಗಳು ಅಗಲುವಳೆಂದು ಮನನೊಂದೂ |
ಸೊಗಸಿಲ್ಲದಲೆ ನಿರೂಪವ ಕೊಟ್ಟು ಕಳುಹಿಸಿದನು ಬೀಗರನಂದು || ೪೯ ||
ಚಿತ್ತವಿಟ್ಟೀ ಕಥೆ ನಿತ್ಯ ಪಠಿಪರಿಗೆ ಭಕ್ತಿ ಸುಜ್ಞಾನ ವೈರಾಗ್ಯವನೂ |
ಕೊಟ್ಟು ಕಡೆಯಲೀ ಮುಕ್ತಿಯನೆಯಿತ್ತು ಕರ್ತೃ ವೆಂಕಟಪತಿ ಪೊರೆಯುವನೂ || ೫೦ ||
ಮಂದಮತಿಯ ತಿದ್ದಿ ನಿಂತು ನುಡಿಸಿದನು ಬಿಂದುಮಾಧವ ವಿಠ್ಠಲನಿದನೂ |
ಹಿಂದೂ ಮುಂದೂ ಎಂದೆಂದಿಗೂ ಸಲಹುವನೆಂದು ಪದೇ ಪದೇ ವಂದಿಪೆನೂ || ೫೧ ||
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ |
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ||
ಶ್ರೀ ಕೃಷ್ಣಾರ್ಪಣಮಸ್ತು
ಇನ್ನೂಯಾಕೆ ಬರವಲ್ಲಿ ವೈಕುಂಠ ಪುರದವನೇ |
ಭಕ್ತಿಲಿ ಕರೆದವರಲ್ಲಿಗೆ ಬರುವನೆಂಬ ಬಿರುದು ಪೋತ್ತವನೇ || ಪ ||
ಎಲ್ಲ ಜೀವಿಗಳ ಹೃದಯದೊಳಿದ್ದು ತೋ.. ರ ಗೊಡದವನೇ |
ಸ್ವಾಮೀ ಬಲ್ಲಿದ ಭಜಕರಿಗೊಲಿದು ಕೈ...ವಲ್ಯ ಕೊಡುವನೇ || ಅ ಪ ||
ಅನ್ಯಾಯದ ಖಣಿ ಕಲಿಯ ಬಲೆಯಲೀ ಸಿಲುಕೀ ಬಳಲಿಹೆನೋ |
ದೇವಾ ನಿನ್ನ ನಾಮವು ಬಾಯಿಗೆ ಬರದಂತೆ ಬಂಧನ ಮಾಡಿಹನೋ|
ಅಂದು ಹಿರಣ್ಯಕಶಿಪನ ಕಂದನ ಪೊರೆದ ನರಹರಿಯೇ |
ಸ್ವಾಮೀ ಇಂದು ಈಬಡ ಜೀವಿಯ ಮರೆವರೆ ನಿನಗೆ ಇದು ಸರಿಯೇ || ೧ ||
ಕರಿರಾಜಾ ದ್ರೌಪದೀ ದೇವಿಯರು ಕರೆದಾಕ್ಷಣ ಬಂದೂ |
ನೀಪೊರೆದ ಮಹಿಮೆ ಗುರು ಮುಖದಿಂದ ಅರಿತೂ ನಾ ಇಂದೂ |
ದುಷ್ಕರ್ಮವ ತರಿದೂ ಪೊರೆನೀ ನೆಂದೂ ಮೊರೆ ಇಡುತಲೆ ಬಂದೂ |
ನಾವರಲುತಿರುವದು ನಿನಗೆ ಅರಿಯದೇ ದೀನದಯಾ ಸಿಂಧೂ || ೨ ||
ಕರಿಯ ಮೊರೆಯನೂ ಕೇಳೀ ಸರಸಿಯ ಅರಸೀ ಬಂದೆಲ್ಲಾ |
ಸ್ವಾಮೀ ತರಳ ಧೃವನು ತಪ ಮಾಡುವ ವನವೇನು ಸನೀಯದಲ್ಲಿರಲಿಲ್ಲಾ |
ದೇವಾ ಗತಿ ಏನೆನಗವರಂತೇ ಭಕ್ತಿಯ ಪಥವೂ ಗೊತ್ತಿಲ್ಲಾ |
ಸ್ವಾಮೀ ಪತಿತ ಪಾವನನೆಂಬ ಬಿರದು ನಿನಗೊಬ್ಬನಿಗಿಹುದಲ್ಲಾ || ೩ ||
ಆಂತ್ಯ ಕಾಲಕಜಮಿಳನುದ್ದರಿಸಿದ ನಾರಾಯಣ ನಾಮಾ |
ಅವನಂತೆ ಎನಗು ಅಂಥ ಸಮಯ ಕೊದಗಿ ಸೆಂದು ಬೇಡುವೆ ನಿಸ್ಸೀಮಾ |
ಸಂತತ ಮನಸಿನಲ್ಲಿ ನಿನ್ನ ಸ್ಮರಿಸುತಿರುವಂತೆ ಕರುಣವನ್ನೆ ಬೀರೋ |
ಸ್ವಾಮೀ ಕನಸಿನಲ್ಲಾದರು ಆಗಾಗ್ಗೆ ಬಂದು ನಿನ್ನ ದಿವ್ಯರೂಪ ತೋರೋ || ೪ ||
ಮಂದ ಮತಿಯನಿತ್ತು ಮಾನವ ಜನ್ಮದಿ ತಂದವರ್ಯಾರಯ್ಯಾ |
ಸ್ವಾಮೀ ಬಿಂದು ಮಾಧವ ವಿಠ್ಠಲನಿನ್ನ ಧ್ಯಾನವ ಕೊಡದಿರೆ ಹ್ಯಾಂಗಯ್ಯಾ |
ಈಗಲೆ ಬೆಂದು ಭವದಿ ಬೆಂಡಾಗಿಹೆ ಬೇಗ ಉದ್ದರಿಸೋದಮ್ಮಯ್ಯಾ |
ನಿನ್ನ ತೊಂಡರದಾಸರ ದಾಸ್ಯವ ನೀಡಿ ಪಾಲಿಸಬೇಕಯ್ಯಾ ಸ್ವಾಮೀ || ೫ ||
ಶ್ರೀ.. ನಿವಾಸ ಪಾಲಿಸೆನ್ನಾ ಸಾನುರಾಗದಿ ಶ್ರೀಹರೀ |
ಹೀನಪಾಪಿ ಎಂದು ಉದಾಸೀನಮಾಡದೇ ಷೇರೀ || ಪ ||
ಈ… ಸಿ ಭವಸಾಗರದಿ ಕೈಕಾಲ್ ಸೋತುಬಳಲಿ ಪರರ ಕೂಗುತ |
ಮೋಸಹೋಗಿ ಘಾಸಿಯಾದೇ ನಿನ್ನ ದಾಸರೊಳಗೆನ್ನ ಸೇ.. ರಿಸೋ || ೧ ||
ಜಗದವೃಕ್ಷ ದಲಗಲದ ಮಹಾ ಖಗದಮಹಿಮೆ ಅರಿಯದೇ |
ಮೂರ್ಬಗೆಯ ತಾಗಳುಣುತಲದೇ. ಸೊಗಸು ಎಂದುತಿಳಿದೆನೋ || ೨ ||
ಆರು ಅರಿಗಳೆನ್ನ ಮನದಿ ಸೇರಿ ತೋರದಲಿರುವರೋ |
ವೀರ ಬಿಂದುಮಾಧವವಿಠಲ ಸೇರಿಸಿಕೋತವಚರಣಕೇ || ೩ ||
ಶ್ರೀ ವಾದಿರಾಜಾಂತರ್ಗತ ಶ್ರೀ ಭಾರತಿರಮಣ ಮುಖ್ಯಪ್ರಾಣಾಂತರ್ಗತ
ಶ್ರೀರಾಮ ಕೃಷ್ಣ ವೇದವ್ಯಾಸಾತ್ಮಕ
ಶ್ರೀ ಆಶ್ವಿನಿ ಹಯಗ್ರೀವಾಭಿನ್ನ ಶ್ರೀಕೃಷ್ಣಾರ್ಪಣಮಸ್ತು
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ|
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ||