ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಗಜೇಂದ್ರ ಮೋಕ್ಷ

122. ಗರುಡಾರೂಢ ಶ್ರೀ ಹರಿಯೇ ಆಲಿಸೆನ್ನ ಮೊರೆ |

ತ್ವರಿತದಿ ಬಂದು ಪರಿಹರಿಸೆನ್ನ ಸಂಕಟವ  || 1 ||

ಧರಿಸಿದ ಚಕ್ರವ ಸರಸರ ತಿರುಗಿಸಿ |

ತರಿದು ನಕ್ರನ ಕೊರಳು ಪಾರುಗಾಣಿಸೋ || 2 ||

ಕರುಣದಿ ಎನ್ನೆತ್ತಿ ನಿನ್ನ ಮಂದಿರಕೆ ಕರೆದೊಯ್ಯೋ |

ಶ್ರೀಕೃಷ್ಣವಿಠ್ಠಲ ಎನಗೂ ಸಾಯುಜ್ಯ ಪದವಿತ್ತು ಕಾಯೋ  || 3 ||       

123. ಸುಂದರ ಶೀತಲ ಜಲದೊಳು ಗಜರಾಜ ಕ್ರೀಡಿಸುತಿರೆ |

ಬಂದ ಮೊಸಳೆ ಕಾಲು ಪಿಡಿದು ಒಳ ಗೆಳೆಯಲು || 1 ||

ಬಿಡಿಸಲು ನೋಡಿ ಆಗದೆ ಅತಿಯಾದ ದುಃಖದಿ |

ಕಡೆಗೆ ಆರ್ತಿಯಿಂದ ಪಕ್ಷಿವಾಹನ ಶ್ರೀಹರಿಗೆ ಮೊರೆ ಇಡೆ || 2 ||

ಕಂದನ ಕರೆಗೆ ತಾಯಿ ಬರುವಂತೆ ಬಲು ಬೇಗನೆ |

ಓಡಿ ಬಂದು ಕಂಡು ದೀನಾರ್ತನ ಸುದರ್ಶನ ಬಿಡಲು || 3 ||

ಕೊಂದಿತು ಮೊಸಳೆಯ, ಅನುಗ್ರಹಿಸಿ ಗಜೇಂದ್ರನ |

ವಂದ್ಯ ಶ್ರೀಕೃಷ್ಣವಿಠ್ಠಲ ಕರುಣದಿ ಮೋಕ್ಷವನಿತ್ತ || 4 || 

     

         "ಏಕವಾಕ್ಯ ಗದ್ಯ ರೂಪ ಗಜೇಂದ್ರಮೋಕ್ಷ"

124. ಸುಂದರ ಸರಸ್ಸಿನಲಿ ಸಾವಿರವರುಷದಿಂ ತಪಗೈಯ್ದ ಗಜರಾಜನ ಆರ್ತ |

ಮೊರೆ ಆಲಿಸಿ ವರಗಿರಿ ಶ್ರೀಹರಿ ತ್ವರಿತದಿ ಗರುಡಾರೂಢನಾಗಿ ಧರೆಗವತರಸಿ |

ಕರಿಯ ಕಾಲ್ಪಿಡಿದ ಮಕರದ ಶಿರ ಭರದಿಂ ಚಕ್ರದಿ ತರಿದು ಶಾಪಗ್ರಸ್ತ |

ನಕ್ರನಿಗೆ ಗಂಧರ್ವಲೋಕ ಪಾಲಿಸಿ ಪ್ರೀತಿಯಿಂ ಕರಿಗೆ |

ಪರಲೋಕದಿ ಮುಕುತಿಯಿತ್ತ ಶ್ರೀಕೃಷ್ಣವಿಠ್ಠಲನ ಕರುಣೆಗೆ ಪಾರುಗಾಣೆ ||

 

 

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು