ಶ್ರೀ ಕೃಷ್ಣವಿಠ್ಠಲಪದಗುಚ್ಛ 2
ಅಚ್ಯುತನ ಕರುಣೆಯಿಂ ಕೊಂಚವಾದರೂ
ಕಡಿಮೆಯಾಗುವುದಂತೆ || ಹೇಗೋ | || ಅಪ ||
ಕೌಸಲ್ಯಾನಂದನನೇ ಆಗಿದ್ದೂ, ಪುತ್ರವಿರಹ ತಪ್ಪಲಿಲ್ಲಾ |
ಜಾನಕೀರಾಮನಾಗಿದ್ದೂ, ಪತ್ನಿಯ ಕಳೆದುಕೊಂಡವ ||
ಶ್ರೀರಾಮನ ಅನುಜನಾಗಿದ್ದೂ, ಹದಿನಾಲ್ಕುವರ್ಷದ ವನವಾಸ ತಪ್ಪಲಿಲ್ಲಾ |
ಮರ್ಯಾದಾಪುರುಷೋತ್ತಮನಿದ್ದೂ ಸೀತೆಯ ಶಂಕಿಸಿದನು | || 1 ||
ಲಕ್ಷ್ಮೀಪತಿಯಾಗಿದ್ದೂ ಇನ್ನೊಬ್ಬರ ಅನ್ನಕ್ಕೆ ಕೈಚಾಚಿದವ |
ಇಂದಿರೇಶನಾಗಿದ್ದೂ, ಇಂದುವದನೆಯ ಭೂಮಿಯ ಮಡಿಲೊಳಿಟ್ಟವ ||
ಶ್ರೀಮನ್ನಾರಾಯಣನೇ ಪುತ್ರನಾದರೂ ಸೆರೆವಾಸ ತಪ್ಪಲಿಲ್ಲಾ |
ಕೇಶವಸಖನಾದರೂ ವನವಾಸ ತಪ್ಪಲಿಲ್ಲಾ | || 2 ||
ಮುಕುಂದನ ಅತ್ತೆಯಾದರೂ ಮುತ್ತೈದೆತನ ಉಳಿಯಲಿಲ್ಲಾ |
ದ್ವಾರಕಾಧೀಶನ ತಂಗಿಯಾದರೂ ಅಪಮಾನ ಬಿಡಲಿಲ್ಲಾ ||
ಗುಣಪೂರ್ಣನಾಗಿದ್ದೂ ನವನೀತಚೋರನೆಂಬ ಬಿರುದು ಬಿಡಲಿಲ್ಲಾ |
ಶ್ರೀಕೃಷ್ಣವಿಟ್ಠಲನ ನಿರುತ ಭಜಿಸಿದರೆ ಸಂಚಿತಕರ್ಮ
ಕಿಂಚಿತ್ತಾದರೂ ಕಡಿಮೆಯಾಗುವುದಂತೆ | || 2 ||
ಎಎಎ
364. ಢೋಂಗಿ ಭಕುತಿಯ ಕಂಡು ಭಂಗಾರದಂತಹ
ನಮ್ಮ ಸ್ವಾಮಿ ನಗುವನು | || ಪ ||
ಎಲ್ಲರೂ ಕಾಣುವಂತೆ ಪೂಜೆ, ನಮಸ್ಕಾರ ಮಾಡಿದರೇನು
ಬಂತು ಹೃದಯದಿ ಲೇಶ ಭಕುತಿಯಿಲ್ಲದೆ |
ಶ್ರೀಮಂತಿಕೆ ಸೊಕ್ಕಿನಲಿ ಭಗವಂತನ ತೂಗಿದರೆ ಒಲಿಯುವನೇ || || 1 ||
ಶ್ವಾಸೋಚ್ಛ್ವಾಸದಂತೆ ಶುದ್ಧಮನದಿ ನಿರಂತರ ಜಪಿಸಿದರೂ ಸಾಕು |
ಆರ್ತನಾದದಿ ಒಮ್ಮೆ ಕರೆದರೂ ಸಾಕು ಓಡೋಡಿಬರುವ || 2 ||
ಸದಾಚಾರದಿಂದ ಸದಾ ಸದಾನಂದನನ ಕಾಣುವಗೆ |
ಸರ್ವಸಮರ್ಪಣೆ ಮಾಡಿದವನ ಸದಾ ಸಲುಹುವನು ಸಂಶಯಬೇಡಾ || 3 ||
ಢಂಬಾಚಾರವ ಬಿಟ್ಟು ನಿಜ ಭಕುತಿಯ ಧರಿಸಿ |
ಶ್ರೀಕೃಷ್ಣವಿಟ್ಠಲನ ಮನ ಮುಟ್ಟಿ ಭಜಿಸಲು ತ್ವರಿತದಿ ಒಲಿವ || 4 ||
ಎಎಎ
365. ಸೂತ್ರವ ಕಟ್ಟಿ ಬೊಂಬೆಯ ಇಳೆಗಿಳಿಸೆ ಆಟವನಾಡುವೆಯಾ |
ನಿನ್ನಗಿಲ್ಲಾ ಲಾಭಹಾನಿ ಆದರೂ ಆಡುವೆಯಾ-ಆಟವನಾಡುವೆಯಾ ||
ಇಚ್ಛೆಯಿಂದಲೆ ತಲೆ, ಕಾಲ್ಗಳಕುಣಿಸುವೆ |
ಇಲ್ಲದಿರೆ ಸುಮ್ಮನೆ ಬೀಳಿಸುವೆ ||
ಉಸಿರು, ಜೀವದ ಗಳಿಗೆ ಎಣಿಸಿ ಕಳಿಸುವೆ |
ಅದು ಮುಗಿಯಲು ಚಣ ಮಾತ್ರ ಇರಲು ಬಿಡದೊಯ್ಯವೆ | || 1 ||
ಇಷ್ಟಾನಿಷ್ಟಗಳ ಗಣನೆಗೆ ತಾರದೆ ಎಲ್ಲಾ |
ಸಂಚಿತ ಕರ್ಮ ಫಲವೆಂದುಣಿಸುವೆ ||
ಸಮದರ್ಶಿ ಎನಿಸುವ ನಿನಗಾಧೀನ ಸರ್ವ |
‘ಶ್ರೀಕೃಷ್ಣವಿಟ್ಠಲನೇ ಗತಿ’ ಎನ್ನುವರಾಧೀನ ನೀನು ಸದಾ | || 2 ||
ಎಎಎ
366. ಚಿತ್ತಜನಯ್ಯಾ, ಚಿತ್ತವನಿಲ್ಲಸೋ ಚಿನ್ಮಯನಲಿ ಚಿತ್ತವನಿಲಿಸೋ | || ಪ ||
ಸುತ್ತಮುತ್ತ ತುಂಬಿದೆ ಗಾಡಾಂಧಕಾರ |
ಎತ್ತಲೋ ಓಡಾಡಿದೆ ದಾರಿ ತಿಳಿಯದೇ ||
ಶತ್ರುಗಳೇ ಒಳ ಹೊರಗೆ ಮುತ್ತಿರುವಾಗ |
ಹತಾಶಳಾಗಿ ನಿನ್ನೇ ಮೊರೆ ಹೊಕ್ಕಿರುವೆ-ದಯಮಾಡು | || 1 ||
ವೇದಶಾಸ್ತ್ರ ಓದಿ ತಿಳಿಯದೆ |
ವಾದ ಮಾಡಿ ನಾನೇ ಸರಿಯೆಂದೇ ||
ವಿದ್ಯೆಯ ಮರ್ಮವನರಿಯದೆ |
ಬಿದ್ದಿರುವೆ ಸಂಸಾರಕೂಪದೊಳಗೆ-ಕೃಪೆತೋರು | || 2 ||
ಸರಸಿಜನಾಭನೇ ನೀನೆನಗಾಸರೆ |
ಕರುಣದಿ ಕಡೆಗಾಣಿಸದೆ ಎನ್ನನು ||
ಭರದಿಂದ ಎತ್ತಿ ನೀನೇ ಪಾರುಗಾಣಿಸು |
ಪರತರನೆನಿಸಿದ ಶ್ರೀಕೃಷ್ಣವಿಟ್ಠಲನೇ-ದೇವಾಧಿದೇವ | || 3 ||
ಎಎಎ
367. ಸಾಧನೇ, ಜಪ, ತಪ ಭಗವದ ಪ್ರಸಾದ ಸದಾ
ಸಾಗಿಸು ಜೀವನ ಪೂರ್ತಿ ಆ ದೇವನ ನಂಬಿ |
ಧರಿಸು ಹೃದಯದಿ ಅನುಗಾಲ ||
ನೆನೆದು ಹಗಲಿರುಳು ಎಡೆಬಿಡದೆ |
ಜನ್ಮ ಜನ್ಮಕ್ಕೂ ಅವನೇ ಸಂಗಾತಿ ||
ಪರಿತಪಿಸುವನು ನಮಗಾಗಿ |
ತನ್ಮಯತೆಯಿಂದ ಚಿನ್ಮಯನ ||
ಪರಿಪರಿಯಾಗಿ ಪೂಜಿಸಿ |
ಭಕ್ತಿಭಾವದಿ ಸಮರ್ಪಿಸಿಕೋ ||
ಗತಿನೀನೇ ಎಂದಾರ್ತದಲಿ ಕರೆಯೇ |
ವಲಿದು ಬರುವ ತವಕದಿ ತಡಮಾಡದೆ ||
ದಣಿದಿರುವೆ ಜೀವನ ಚಕ್ರದಿ ಸಿಕ್ಕು |
ಪ್ರಣವ ಮಂತ್ರ ಜಪಿತ ಮಾರುತಿಯೇ ||
ಸಾನುರಾಗದಿ ನಿನ್ನೆ ನಂಬಿರುವೆ |
ದಯೆ ತೋರಿ ಶ್ರೀಕೃಷ್ಣವಿಟ್ಠಲನ ||
ಸಮೀಪದಲ್ಲಿಡು ನಿನ್ನ ಪಾದದ |
ದಾಸ ನಾನೆಂದು ಎನ್ನ ಸ್ವೀಕರಿಸು ಬಿಡದೆ ||
ಎಎಎ
368. ಚಿಕ್ಕವರಿದ್ದಾಗ ತಾಯಿಯ ಆಶ್ರಯ |
ಸ್ಥಾನಮಾನಗಳಿಸಲು ತಂದೆಯ ಆಶ್ರಯ ||
ಯೌವನದಲಿ ಮಡದಿಯ ಆಶ್ರಯ |
ಮುದಿತನದಲಿ ಮಕ್ಕಳ ಆಶ್ರಯ ||
ಹುಲುಮಾನವರನ್ನೇ ಹೂಗಳುವ ಜಿಹ್ವೆಗೆ |
ಅನಾದಿ ಕಾಲದಿಂ ಆಶ್ರಯಿಸಿರುವಾಗ ||
ಕರೆದು ಪೇಳಿದರೂ ಒಪ್ಪಲಾರದೆ ನಿತ್ಯ |
ನರಕವೆಂಬ ಕೂಪದಲ್ಲಿ ಹೂರಳಾಡುವರಲ್ಲಾ ||
ಶ್ರೀಕೃಷ್ಣವಿಟ್ಠಲನ ನೆನೆದುಪಾಡಲು |
ಮನಬಾರದೇ ಹೀನಾಯರಾಗಿರುವರಲ್ಲಾ ||
ಎಎಎ
369. ತಾಯಿ, ತಂದೆ ಬಂಧು ಬಳಗ ರಕ್ಷಿಪುದು ಕೆಲವರಿಗೆ |
ಧನಧನಕ, ಮನೆಯೇ ಸರ್ವಸ್ವ ಜೀವನದಲಿ ಹಲವರಿಗೆ ||
ಇಚ್ಛಿತ ಮಡದಿ, ಮಕ್ಕಳು ಇರಲು ಜೀವನ ಸುಖವೆನಿಪುದು |
ಸುಗ್ರಾಸ ಭೋಜನದಿ ಎಲ್ಲಾದು:ಖ ಮರೆವರು ಬಹುಜನ ||
ಕಾಮಕೇಳಿಯಲಿ ನಿಜವಾದ ಸುಖವ ಕಾಣುವರು |
ವಾಂಛಿತ ಜೀವನ ಸುಖದ ಸುಪ್ಪತ್ತಿಗೆ ಇಷ್ಟೇ ಜೀವನ ||
ವೆನ್ನುವ ಮಂದಬುದ್ಧಿ ಜನ ನಿಜ ಮರ್ಮ ತಿಳಿಯದೇ |
ಸಂಸಾರದಲಿ ತೂಳಲಾಡಿ ಹೂರಳಾಡುವರು ಪದೆಪದೇ ||
ಶ್ರೀಕೃಷ್ಣವಿಟ್ಠಲನ ನಾಮಸ್ಮರಣೆ ಒಂದೇ ಪಾರಮಾರ್ಥಕ್ಕೆ |
ಸರಳ ಸೋಪಾನವೆಂದರಿಯದೆ ಮೋಸ ಹೋಗುವರಲ್ಲಾ ||
ಎಎಎ
370. ಬಹುಜನ್ಮದ ಸಂಚಿತಪಾಪ ಪುನ: ಪುನಃ ವಿನಾಶವಾಗಲಿ |
ಪಾಪಾತ್ಮಾ ಮಾಡಿದ, ಮಾಡುವ ಪಾಪಕರ್ಮನಾಶವಾಗಲಿ ನಿನ್ನನುಗ್ರಹದಿ ||
ಅನ್ಯನಾನಲ್ಲಾ ನಿನ್ನನೇ ಶರಣು ಹೂಕ್ಕಿರುವೆ ಕರುಣಿಯಿಂದ ರಕ್ಷಿಸೆನ್ನನವರಿತ |
ಜಪತಪ ಧ್ಯಾನಾದಿಗಳಲ್ಲಿ ನಿನ್ನ ನಾಮೋಚ್ಚಾರವೊಂದೇ ಗತಿ ||
ಎನ್ನದೋಷ ಪರಿಹರಿಸಿ ನಿನ್ನ ಚರಣದಲ್ಲಿರಿಸಿಕೋ |
ಎನ್ನದೇನೂ ಇಲ್ಲಾ ನೀ ಮಾಡಿಸಿದ ಕರ್ಮವೆಲ್ಲಾ ನಿನ್ನ ಪೂಜೆಯಾಗಲಿ ||
ಪೂಜಿಸುವ ಭಾಗ್ಯ ಎನಗಿರಲಿ ಅದರ ಫಲ ಎನ್ನ ಸಹಿತ ನಿನಗೇ ಅರ್ಪಿತ |
ಶ್ರೀಕೃಷ್ಣವಿಟ್ಠಲನ ಸಂತೃಪ್ತಿ ಪಡಿಸುವ ಭಾಗ್ಯ ಎನದಾಗಲಿ ||
ಎಎಎ
371. ಸಂಸಾರದಿ ಬರಲು ಸದಾ ನೆನೆದರೆ ಇಲ್ಲಕಷ್ಟ |
ಕಂಸಾರಿ ಸ್ಮರಣೇಲಿ ನಿಜಪೂರ್ಣಲಾಭ ನಿತ್ಯಸಂತುಷ್ಟ ||
ವಾಸಿತ ಹೃದ್ಗುಹನ ಗುರುತಿಸದಿರೆ ಜನ್ಮ ಪೂರ್ಣನಷ್ಟ |
ದಾಸನಾಗಿ ಸೇವಿಸೇ ಭಕ್ತವತ್ಸಲ ತಾನಾಗುವ ಹೃಷ್ಟ ||
ಆಶಾಪಾಶ ಕ್ಲೇಶ ಸಂಹರಿಸಿ ನೀಡುವ ದಿವ್ಯದೃಷ್ಟಿ |
ಅಷ್ಟಕರ್ತೃ ಶ್ರೀಕೃಷ್ಣವಿಟ್ಠಲನ ಕೊಂಡಾಡೆ ಒಲಿವ ವಿಶಿಷ್ಠ ||
ಎಎಎ
372. ಪರಮಾತ್ಮ ದಯದಿ ಇತ್ತ ನರಜನ್ಮ |
ವ್ಯರ್ಥವಾಗಿಸದೇ ಸಾರ್ಥಕವಾಗಿಸಿರೋ || ಪ ||
ತಿರುಗಿ ಎಂಬತ್ನಾಲ್ಕು ಲಕ್ಷಯೋನಿ ನಂತರಬಂದ ಜನ್ಮ |
ತಿರುಗಿಬಾರದು ಮತ್ತೀ ಜನ್ಮ ಯೋಚಿಸಿ ನೋಡಿರೋ ||
ಕರ್ಮೇಂದ್ರಿಯ ಜ್ಞಾನೇಂದ್ರಿಯಗಳೈದೈದು ತಿದ್ದಿ ತಿದ್ದಿ |
ಸರಿಯಾದ ಮಾರ್ಗದಿ ಬುದ್ಧಿ ಮನ ಅನುಸರಿಸಿರಿ || || 1 ||
ಈ ಹೃದಯದಿ ಅಷ್ಟದಳದಲ್ಲಿಪ್ಪವನ ಬೇಡಿರೋ |
ಬರಿದೇ ವಿಷಯ ಸುಖಲೋಲುಪದಿ ಹಾಳುಮಾಡದೆ ||
ಸರ್ವಪ್ರಯತ್ನದಿ ಸಕಲೇಂದ್ರಿಯವ ಸನ್ಮಾರ್ಗದಿ ನಡೆಸಿ |
ಪ್ರಾರಬ್ಧ ಅನುಭವಿಸುತ ಭಕ್ತಿಯೆಡೆ ಮನಹರಿಸಿ || || 2 ||
ಜಾರಿಹೋಗುವ ಸಮಯದಿ ಸಾಧಿಸಿ ಗುರು-ಹರಿಯೊಲುಮೆ |
ದುರ್ಲಭತರ ಮಾನವ ಜನುಮದ ಗುರಿ ತಿಳಿಯಿರೋ ||
ನಿದ್ರೆ, ನೀರಡಿಕೆ,ಹಸಿವು,ಮೈಥುನ ಪ್ರತಿ ಜನುಮದಿ ಸಿಗುವುದು |
ದಾರಿ ಇರದು ಸರಿಯಾದ ಜ್ಞಾನ-ವಿಜ್ಞಾನ ಪಡೆಯಲು || || 3 ||
ಸರಿದುಜನ್ಮ ವೇಳೆ ಸವೆಯುವ ಮುನ್ನ ಪ್ರಯತ್ನದಿ |
ಸ್ಮರಿಸಿ ಸುಗುಣನ ಸದಾ ಸದಾಚಾರದಿ ಬೇಡಿ ಅನುಗ್ರಹ ||
ಸುಪ್ರಯತ್ನದಿ ನವವಿಧಭಕ್ತಿ ವಿಧವಿಧದಿಂ ಮಾಡಿ |
ಮರುತಾಂತರ್ಗತ ಶ್ರೀಕೃಷ್ಣವಿಟ್ಠಲಗರ್ಪಿಸಿ ಧನ್ಯರಾಗಿರೋ || || 4 ||
ಎಎಎ
373. ಉತ್ತಮ ಲೋಕ ಪ್ರಾಪ್ತಿಗೆ ಉತ್ಕøಷ್ಟ ದಾನ ಮಾಡು |
ಉತ್ತಮೋತ್ತಮಾಂಗಾಯ ಒಲಿದು ಸಂಪ್ರೀತನಾಗುವ || ಪ ||
ಸತ್ಪಾತ್ರರಿಗೆ ಕೊಡುವ ಪ್ರತೀ ದಾನವು |
ಸತ್ಫಲ ರೂಪದಿ ಕುಲವುದ್ಧರಿಸುವುದು ||
ಅತೀ ಪ್ರಿಯ ವಸ್ತುವನ್ನೇ ದಾನವಾಗಿಸು |
ವ್ಯರ್ಥವಾದ ವಸ್ತುದಾನದಿ ಕೇಡನ್ನೇ ಉಣ್ಣುವಿ || 1 ||
ಕಾಟಾಚಾರಕ್ಕಾಗಿ, ಬೈದು ಕೊಡಬೇಡಾ |
ಇಟ್ಟು ಒಳ್ಳೆಯ ಮನ, ಸದ್ಭಾವನೆಯಲಿ ಕೊಡು ||
ಕೆಟ್ಟದ್ದುದ ಕೊಟ್ಟು ನೀ ಕೆಡಬೇಡ |
ಕೊಟ್ಟ ಮೇಲೆ ಅದಕ್ಕಾಗಿ ಪರಿತಪಿಸಬೇಡ || 2 ||
ಬೇರೆಯವರಿಗೆ ಕೊಡಲೆಂದೇ ಬಂದ ವಿದ್ಯೆ, ಧನ, ಸಂತೋಷ |
ವರವಾಗಿಹುದು ನಿನಗೆ ಪೂರ್ವಜನ್ಮಕೃತ ಪುಣ್ಯವು ||
ಹೆರವರಿಗೆ ಕೊಡದಿದ್ದರೆ ಧರ್ಮದೃಷ್ಟಿಯಲಿ ಕಳ್ಳನಾಗುವಿ |
ಬರುವ ಜನ್ಮಾಂತರಗಳಲಿ ತಪ್ಪುಕಾಣಿಕೆ ಕೊಡಲೇಬೇಕು || 3 ||
ಕೊಟ್ಟರೊಮ್ಮೆ ದಾನ ಋಣ ಮುಗಿದಂತಲ್ಲ |
ಹುಟ್ಟಿನಿಂದ ಸಾಯುವರೆಗೂ ಕೊಡುತ್ತಲೇ ಇರು ||
ಮಾತೃ, ಗುರು, ಸಮಾಜ ಋಣ ತೀರದು ಎಂದಿಗೂ |
ಶ್ರೀಕೃಷ್ಣವಿಟ್ಠಲ ಇತ್ತಿದ್ದು ಅವನಿಗೇ ಕೊಟ್ಟು ವರವ ಪಡಿ || 4 ||
ಎಎಎ
374. ಶುದ್ಧ ಬ್ರಹ್ಮನ ಪಡೆಯಲು ಶುದ್ಧಾತ್ಮವಿರಬೇಕು |
ಶುದ್ಧ ಬುದ್ಧಿಯಲಿ ಶುದ್ಧ ಮನವಿರಬೇಕು ||
ಶುದ್ಧ ಆಹಾರವಲ್ಲದೆ ಶುದ್ಧ ವಾಣಿ ಇರಬೇಕು |
ಶುದ್ಧ ವ್ಯವಹಾರದಿ ಶುದ್ಧ ದೃಷ್ಟಿ ಇರಬೇಕು ||
ಶುದ್ಧ ನಡೆ-ನುಡಿ ಸದಾ ಒಂದಾಗಿರಬೇಕು |
ಶುದ್ಧ ಧರ್ಮದಿ ಶುದ್ಧ ಕಾಯವಿರಬೇಕು ||
ಶುದ್ಧ ಕಾಯಕದಿ ಶುದ್ಧಾತ್ಮನರ್ಚಿಸಬೇಕು ಶುದ್ಧ ಹೃದಯದಲ್ಲಿಪ್ಪ ವಿಶುದ್ಧ ಶ್ರೀಕೃಷ್ಣವಿಟ್ಠಲ ಮಿಂಚಿನಂತೆ ಹೊಳೆವ ||
ಎಎಎ
375. ಎಲ್ಲ ಬಲ್ಲಿದರೂ ಮನ ನಿನ್ನಲಿ ನಿಲ್ಲದು |
ಬಲ್ಲಿದವರೊಡನಿದ್ದರೂ ತ್ರಿಕರಣ ಶುದ್ಧಿಯಾಗದು ||
ವೇಳೆ ವೇಳೆಗೆ ಜಾರಿದ ಮನ ಎಳೆತಂದರೂ ನಿಲ್ಲದು |
ಕಳೆದರೂ ಆಯುಷ್ಯ ನಾಯಿಬಾಲ ಡೊಂಕೆಂದಂತೆ ||
ಒಳಗೆ ಬದಲಾಗುವ ಇಚ್ಛೆ ಇದ್ದರೂ ಕರ್ಮಪ್ರಬಲ |
ಕಲ್ಲಮೇಲೆ ಮಳೆಗೆರೆದಂತೆ ಬರೀ ವ್ಯರ್ಥಯತ್ನ ||
ಗೋಳಾಡಿದರೂ ಪ್ರಾರಬ್ಧವೆಂದೂ ಮೀರಲಾಗರು |
ಒಲುಮೆಯಿಂದ ಕನಿಕರಿಸಿ ಪಾರುಗೈಸು ||
ಸಲಹುವರು ನಿನ್ನಹೊರತು ಬೇರ್ಯಾರು ಕಾಣೆ |
ಕೇಳಿ ಕೊಳ್ಳುವೆ ದೀನ ಬಂಧು ಶ್ರೀಕೃಷ್ಣವಿಟ್ಠಲನೇ ||
ಹೇಳು ಒಮ್ಮೆ ಎನ್ನನು ದಯದಿ ನಿನ್ನವಳೆಂದು ||
ಎಎಎ
376. ಜಿಹ್ವೆ ನಿನ್ನ ಮಹಿಮೆ ಪೊಗಳಲೆಂತು |
ಆಹಾ! ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ||
ಗುಹೆಯೊಳಿದ್ದಾಗ ನಿನ್ನ ಬಣ್ಣ ತಿಳಿಯದು |
ಮಹಾ ಮಹಾಜನರೂ ಸೋತು ಶರಣಾಗುವರು ||
ಪಹರೆ ಮಾಡುವ ಹಲ್ಲುಗಳದಿ ಸಿಕ್ಕು ನೋಯುವುದು |
ಮೋಹ ಅರಳುವುದು ಸವಿ ಸವಿ ಮಾತಿನಲಿ ||
ಕುಹಕ ಕಟುಮಾತಲಿ ಸಂಬಂಧದ ಅಳಿವು-ಉಳಿವು |
ದೇಹ ಅನುಭವಿಸುವುದು ಶಿಕ್ಷೆ ಜಿಹ್ವೆ ತಪ್ಪಿಗೆ ||
ಅಹಿತ ಆಹಾರ ನಾಲಿಗೆಗೆ ಬಹು ರುಚಿಯಾಗುವುದು |
ಅಹಾರ ವೈವಿಧ್ಯ ಬಯಸುವುದಷ್ಟೇ ಅಲ್ಲದೆ ||
ಸಹಜವೆಂಬಂತೆ ಪರರ ದೂಷಿಸಲೂ ಸದಾ ತಯಾರು |
ದಹಿಸಲೆನ್ನ ಪಾಪ ನಾಲಿಗೆಯಲ್ಲಿ ನಲಿದಾಡುತ ||
ದಹರಾಕಾಶ ಸ್ಥಿತ ಶ್ರೀಕೃಷ್ಣವಿಟ್ಠಲನ ನಾಮ ಜಪದಿ ||
ಎಎಎ
377. ತಿರುಗುತ್ತಲೇ ಇರಬೇಕು ಸದಾ ಸಂಸಾರ ಚಕ್ರದಿ |
ಪೂರ್ವ ನಿರ್ಧಾರಿತ ಜೀವನ-ಮರಣಗಳು ತಪ್ಪಿದ್ದಲ್ಲ || ಯಾರಿಗೂ || ಪ ||
ಗರ್ಭಾವಾಸ ದುಃಖದಿ ಪೂರ್ವಜನ್ಮದ ಸ್ಮøತಿಯಲಿ |
ಪರಿತಪಿಸಿ ಪರಮಾತ್ಮನ ಸ್ತುತಿಸಿ ಶರಣು ಹೋದಾಗ ||
ಹೊರ ತಳ್ಳುವುದು ಸೂತಿಕಾವಾಯು ಪ್ರೇರಣೆಯಲಿ |
ಮರೆತು ದುಃಖ, ಮೋಹಕ ಸಂಸಾರದಿ ಸಿಲುಕುವುದು|| ಜೀವ || 1 ||
ಬರುವ ಅಷ್ಟಮದದಿ ಅನಂತ ಅಪಚಾರಗೈದು |
ವೈರಾಗ್ಯ, ಭಕ್ತಿ, ಜ್ಞಾನಗಳಿಸದೇ ವ್ಯರ್ಥವಾಗಿಸಿ ಬದುಕು ||
ಇರುವಷ್ಟು ದಿನ ಸ್ವಾರ್ಥದಿ, ಅಹಂ-ಮಮಕಾರ ಗಳಿಸಿ |
ಪರಿಪರಿ ಜನುಮಕೂ ಸಾಕಾಗುವಷ್ಟು ಗಂಟು ಕಟ್ಟುವುದು|| ಕರ್ಮದ || 2 ||
ಸರ್ಪ, ವ್ಯಾಧಿ, ಕೊಲೆ, ಬೆಂಕಿ, ಅಪಘಾತ, ಆಕಸ್ಮಿಕ, ಆತ್ಮಹತ್ಯೆ |
ಕಾರಣವೇನೇ ಇರಲಿ ಒಂದಿನ ಎಲ್ಲಾ ತ್ಯಜಿಸಿ ಹೋಗೋದು ಸತ್ಯ ||
ಸುರ-ನರಾದಿಗಳಿಗೂ ದೇಹಪಾತ ಧೃಡ ನಿಶ್ಚಿತ |
ನಿರ್ಧಾರವಿದು ಜನಿತವಸ್ತು ಅಳಿಯಲೇಬೇಕು|| ತಪ್ಪದೇ || 3 ||
ಮರಣ ಯಾರನ್ನೂ ಹೇಳಿ ಕೇಳಿ ಬರುವುದಿಲ್ಲ |
ನರಕ ಯಾತನೆ ಯಾಗುವುದು ಪ್ರಾಣ ಬಿಡುವಾಗ ||
ಮರಳಿ ಬರಲೇಬೇಕು ಲಿಂಗದೇಹ ಇರುವತನಕ |
ಪ್ರಾರಬ್ಧ ತೀರಿದ ನಂತರ ತಿರುಗಿ ಬಾರದ ಸ್ಥಳಕೆ ಪೋಪುದು|| ಮುಕ್ತಿಗೆ ||4||
ಮರಣ ದುಃಖ ಶಮನವಾಹುದು ಸರ್ವತ್ರ ಸರ್ವೇಶ |
ಸರ್ವವ್ಯಾಪ್ತನ ಕಂಡು ಸ್ತುತಿಸಿ ಧ್ಯಾನಿಸಿದಾಗ ಮಾತ್ರ ||
ಸರ್ವಾಯುಷ್ಯಕೃತ ಸಾರ ಮುಂದಿನ ಜನುಮದ ಭೂಮಿಕೆ |
ಅರಿವು ತಿಳಿವುದರಲ್ಲೇ ಮರಣ ಸೆಳೆದೊಯ್ವುದು|| ನಿರ್ದಯದಿ | || 5 ||
ಮರಣಾನಂತರ ಜೀವನ ಕಂಡವರ್ಯಾರೂ ಇಲ್ಲ ಇಲ್ಲಿ |
ಕುರುಡ ಆನೆ ವರ್ಣಿಸಿದಂತೆ ಊಹೆಮಾಡಿ ಗಾಬರಿಯಾಗದೇ ||
ಶಾಸ್ತ್ರದಿ ಪೇಳಿದಂತೆ ಗುರುವಿನಿಂದ ಅರಿತು ಎದುರಿಸಿ |
ಹೊರಡುವ ಮೊದಲೇ ಸರ್ವ ರೀತಿಯಲಿ ತಯಾರಿರಬೇಕು|| ಧೈಂiÀರ್iದಿ ||6||
ಮರಣ-ಹರಿದ ವಸ್ತ್ರಕ್ಕೆ ಬದಲು ಹೊಸವಸ್ತ್ರ ತೊಟ್ಟಂತೆ |
ಇರುವತನಕ ಸತ್ಕರ್ಮ, ದಾನ, ಸತ್ಸಂಗದಿ ಕಾಲ ಕಳೆದು ||
ಸುಧೃತಿಯಲಿ ಜೀವಾತ್ಮ, ದೇಹಾತ್ಮ, ವಿಶ್ವಾತ್ಮರು ಒಂದೇ ಎಂದು ಧೇನಿಸಿ |
ಶ್ರೀಕೃಷ್ಣವಿಟ್ಠಲ ಕೈಬಿಡದೆ ಸಕಲಾವಸ್ಥೆಯಲಿ ಜೊತೆಯಿರುವ|| ಎಂದಿಗೂ ||7||
ಎಎಎ
378. ಸ್ವಚ್ಛ ಮೂರುತಿಯ ಪುಚ್ಫನಾದವಗೆ |
ಉಚ್ಛ್ರಾಯ ಹೇಗೆ ಒದಗುವುದೋ || || ಪ ||
ಇಚ್ಛಾ ಮಾತ್ರ ಪ್ರಭೋಸೃಷ್ಟಿಯಾದವನ |
ಇಚ್ಛೆಯೇ ಎನ್ನ ಇಚ್ಛೆಯಾಗದಿರಲು | || ಅಪ ||
ಕಂಚಿಕಾಶಿ ಬದರಿ ತಿರಗಿದರೇನು ಫಲ |
ಮಿಂಚುವಂತೆ ತನು ನದಿಯೊಳಗದ್ದಿದರೇನು ಫಲ ||
ಉಚ್ಚಸೇವೆ ಮಾಳ್ಪನ ಮನದಿ ಭಕ್ತಿಇಲ್ಲದಿರೆ |
ಸಚ್ಚಿದಾನಂದಾತ್ಮನು ಮೆಚ್ಚುವನೇ! ಭಲಾ! || || 1 ||
ಕೊಚ್ಚೆ ಹುಳುವಿನಂದದಿ ಬಿದ್ದಲ್ಲೇ ಸುಖಿಸುತಿರೆ |
ಹೆಚ್ಚಿನ ಅಘಗಳ ತೊಳೆಯಲು ಸಾಧನ ಮಾಡದಿರೆ ||
ಅಚ್ಯುತನ ದಯದಿ ದೊರೆತ ಮಾನವ ಜನ್ಮ ಹಾಳುಮಾಡಿ |
ಅಚಿಂತ್ಯಾದ್ಭುತ ಶ್ರೀಕೃಷ್ಣವಿಟ್ಠಲನ ನಿಶ್ಚಿತವಾಗಿ ತಿಳಿಯದಿರೆ | || 2 ||
ಎಎಎ
379. ಎಲ್ಲಿಯವರೆಗೆ ಈ ದೇಹ, ಎಲ್ಲಿವರೆಗೆ ಈ ದೇಹ |
ಕಾಲಕಾಲಕೆ ಅಳಿವುದು ಈ ದೇಹ ಉಳಿಯದು ಕಡೆತನಕ | || ಪ ||
ಬಾಲ್ಯ, ಯೌವನ ದುರ್ಮದದಿ ಸಮಯ ಗೊತ್ತಾಗದೆ ಸರಿಯುವುದು |
ಕಳೆವುದು ಐಹಿಕ ಸುಖಭೋಗ ಲೋಲುಪದಿ ನಿಶಿ-ಹಗಲೆನ್ನದೆ ||
ಬಾಳಿನ ಒಳಗುಟ್ಟು ಅರಿಯದೆ ಜೀವನವೇ ಸವೆಯುವುದು |
ಸುಳ್ಳು, ಮೋಸ, ದ್ವೇಷ, ಲೋಭ ಬಿಟ್ಟುಬೇರೇನೂ ಗಳಿಸೆವು | || 1 ||
ಒಳಗಿರುವುದು ಬೇರೆ ಹೊರಗಿನ ಮುಖವಾಡ ಬೇರೆ |
ಒಳಗಿನ ಕೊಳೆಯ ಮುಚ್ಚಿಟ್ಟು ಅತೀ ಶುಭ್ರರಂತೆ ತೋರ್ಪೆವು ||
ಒಳಗೊಳಗೆ ಅಸಹನೆ, ಮತ್ಸರದಿ ಬೆಂದು ಹಣ್ಣಾಗುವೆವು |
ಬೆಳ್ಳಗಿನ ವಸ್ತ್ರ ಉಟ್ಟವರೆಲ್ಲಾ ಒಳ್ಳೆಯವರೇ ಎಂದಿಲ್ಲ | || 2 ||
ಮಲಿನ ಮನ ಯೋಚಿಸುವುದೊಂದು ಮಾಡುವುದಿನ್ನೊಂದು |
ಹೊಲಸೆಂದು ತಿಳಿದಿದ್ದರೂ ಬಯಸುವುದು ಸುಖ ಅದರಲ್ಲೇ ||
ಬೆಲೆಯುಳ್ಳ ಸಲಹೆ ಒಪ್ಪಿ ಎಂದೂ ತಿದ್ದಿಕೊಳ್ಳದು
ಗೋಳಿನ ಗೋಜಲು ಬಗೆಹರಿಯದು ಕೊನೆಯತನಕ | || 3 ||
ಬಲು ಉಪಯೋಗಿ ಈ ದೇಹ ಸುದೈವದಿ ಲಭ್ಯ |
ಸಲಕರೆಣೆ ಇದು ಸಾಧನ ಮಾರ್ಗದಿ ಮುನ್ನಡೆಯಲು ||
ಅಳಿವುದೆಂದೋ ತಿಳಿಯದು ಮುನ್ನ ಸಾರ್ಥಕ ಮಾಡಿಕೊಳ್ಳಬೇಕು |
ಎಲ್ಲ ಬಲ್ಲ ಶ್ರೀಕೃಷ್ಣವಿಟ್ಠಲಗೆ ಸಮರ್ಪಿಸಿ ಮುಕ್ತರಾಗಬೇಕು | || 4 ||
ಎಎಎ
380. ಬದುಕೊಂದು ಕಲೆ, ಬದುಕಿರಿ-ಬದುಕಲು ಬಿಡಿ |
ವೈದಿಕ ಶಾಸ್ತ್ರ ವಿದ್ಯೆಯೇ ಅಧ್ಯಾತ್ಮವಿದ್ಯೆ ಬಿಡದೆ ಓದಿರಿ ||
ಹೃದಯಪೂರ್ವಕ ಆದಮ್ಯ ಇಚ್ಛೆಯಿಂದ ಪಡೆಯಿರಿ |
ಅಧ್ಯಯ-ಅಧ್ಯಾಪನದಿ ಕಾಲ ಸವೆಸಿ ಉದ್ಧಾರವಾಗಿರಿ ||
ಸದ್ವಿದ್ಯೆ ಇದು ಎಂದೂ ನಶಿಸದ ದೊಡ್ಡ ನಿಧಿ |
ವಿದ್ವಾಂಸ ಸರ್ವತ್ರ ಸರ್ವದಾ ಪೂಜ್ಯನೆಂಬುದು ದಿಟ ||
ಆಧ್ಯಾತ್ಮ ವಿದ್ಯೆಯೇ ಆತ್ಮೋದ್ಧಾರಕ ಸರ್ವಪ್ರದಾಯಕ |
ಆದಿಪುರುಷ ಶ್ರೀಕೃಷ್ಣವಿಟ್ಠಲನ ಪಾದದಾಣಿಗೂ ಇದು ಸತ್ಯ ||
ಎಎಎ
381. ಸಕಲವೂ ಪ್ರಭು ಶ್ರೀಹರಿಯ ಇಚ್ಛೆಯಂತೆ |
ಸಂಕಲ್ಪ-ವಿಕಲ್ಪ, ಮಾಡುವ-ಮಾಡದಿರುವುದೂ | || 1 ||
ಭಂಗ-ಅಭಂಗ, ಬಿಗುಮಾನ ಅಹಂಗಳು |
ಆಗು-ಹೋಗುಗಳು, ಜಾಗು-ನಿದ್ರೆಯು ಸಹ | || 2||
ಕ್ರೌರ್ಯ-ದಯಾಮನ, ಪರೋಪಕಾರ ಬುದ್ಧಿ |
ಅರಿವು-ಮರೆವು, ಕಾರ್ಯ ಅಕಾರ್ಯಗಳೆಲ್ಲಾ | || 3 ||
ಆಡುವ ಮಾತುಗಳು ವರ್ಣಗಳಲ್ಲಿರುವವನೇ |
ನೋಡುವ, ಉಡುವುದರಲ್ಲಿಯೂ ಇರುವ | || 4 ||
ಮನ, ಬುದ್ಧಿ, ಇಂದ್ರಿಯಗಳ ಪ್ರೇರಕನಿವ |
ಕಾಣುವ-ಕಾಣದ ಸರ್ವದರಲ್ಲಿರುವವ | || 5 ||
ಹಸನಾದ ಬಾಳು, ಅಡ್ಡಿ ಆತಂಕಗಳೆಲ್ಲಾ |
ಸಾಸಿರನಾಮದ ಶ್ರೀಕೃಷ್ಣವಿಟ್ಠಲನಿಂದಲೇ ನಡೆವುದು | || 6 ||
ಎಎಎ
382. ಗುಟ್ಟೊಂದು ಹೇಳುವೆ ಕೇಳು ಚಿನ್ನ |
ಒಟ್ಟಿನಲಿ ಶ್ರೀಹರಿಯ ಬಿಡದೆ ಭಜಿಸು ||
ಪ್ರಕೃತಿ ವೈವಿಧ್ಯ,ವಿರುದ್ಧ,ವ್ಶೆಚಿತ್ರ್ಯವೆಲ್ಲಾ ವಿಶೇಷನ |
ಸುಕೃತಿಯಿಂದಾದ ಸೃಷ್ಟಿಯೆಂದು ತಿಳಿದು ಭಜಿಸು ||
ಪರರ ಆಪೇಕ್ಷಿಸದೆ-ಆಕ್ಷೇಪಿಸದೆ ಸಹನೆಯಿಂದಿರು |
ಮರೆಯದೆ ಉಪಕರಿಸು ಸರ್ವರಿಗೂ ಭೇದವೆಣಿಸದೆ ||
ಸರ್ವತ್ರ ಸರ್ವರ ಒಳ-ಹೊರಗೂ ಪರಮಾತ್ಮನ ಕಾಣು |
ಸರ್ವ ಕಾರ್ಯಕರಣ ಕರ್ತನವನೊಬ್ಬನೇ ಕಾಣು ||
ಏನಾದರಾಗಲಿ ಸದ್ಭಾವದಿ ವರ್ತಿಸು ಪರರೊಡನೆ |
ಮನದ ಕ್ಲೇಷ, ಆಶಾ-ಪಾಶ ತೊಳೆದು ಸುಖದಿ ಜೀವಿಸು ||
ಮನದಂತಾದರೆ ಸುಖ, ಆಗದಿದ್ದರೆ ದುಃಖ ತಾಳದಿರು |
ಏನಾದ್ದದ್ದಾಗಲಿ ಎಲ್ಲ ಒಳಿತೆಂದೇ ತಿಳಿದಿರು ||
ನಡೆಯುವುದು ಸದಾ ಪರಮಾತ್ಮನ ಇಚ್ಛೆಯಂತೆ |
ಕೆಡಕು-ಒಳಿತು, ಆಗು-ಹೋಗುಗಳು ಯಾರ ವಶವೂ ಅಲ್ಲ ||
ಕಾಕು ಜನರ ಮಾತಿಗೆ ನೊಂದದೆ ಪ್ರಾರಬ್ಧವೆಂದು ತಿಳಿ |
ಸಕಲರ ತೃಪ್ತಿ ಪಡಿಸಲು ಆಗದು, ಮನಸಾಕ್ಷಿಯ ನಂಬು ||
ದ್ವೇಷ ಭಾವ ತನ್ನ ಸುಟ್ಟು ಪರರನೂ ಸುಡುವುದು |
ಈಶ ಜ್ಞಾನ ತನ್ನ ಬೆಳಗಿ ಪರರಿಗೂ ಜ್ಯೋತಿಯಾಗುವುದು ||
ದೈವದಿಂದೊಮ್ಮೆ ಸಿಗುವುದು ಮಾನವ ಜನುಮ |
ಜೀವೇಶನ ಜ್ಞಾನಗಳಿಸದೇ ವ್ಯರ್ಥವಾಗಿಸಬೇಡ ||
ನಾಮಸ್ಮರಣಿ-ಭಜನೆಯೇ ಪರಮ ಸುಖಕಾಣೋ |
ಸಮಯ ಸಮಯಕೆ ಬಿಡದೆ ಭಕ್ತವತ್ಸಲನ ನೆನೆಸು ||
ಗುಪ್ತನಾಗಿ ಜೀವಿಸಿ ಹಣ-ಖ್ಯಾತಿಯ ಹಿಂದೆ ಬೀಳದೆ |
ಒಪ್ಪವಾಗಿ ಅಪ್ಪ ಶ್ರೀಕೃಷ್ಣವಿಟ್ಠಲನ ನಂಬಿ ಬದುಕು ||
ಎಎಎ
383. ಸಾತ್ತ್ವಿಕರೆಂದರೆ ಯಾರು ಈ ಜಗದಿ | || ಪ ||
ಸತತ ಡಾಂಭಿಕರೇ ಕಾಣುವರಲ್ಲ-ಹೇಗೆ ತಿಳಿಯಲಿ | || ಅಪ ||
ಚಾಡಿ ಹೇಳುವರು, ಮಾಟ ಮಾಡಿಸುವರು |
ನಡೆ-ನುಡಿಲಿ ಮನ ನೋಯಿಸುವರು ||
ಒಡ ಹುಟ್ಟಿದವರನ್ನೇ ಕೊಲ್ಲಿಸುವರು |
ಮಡದಿ ಮಕ್ಕಳನ್ನೇ ಮಾರುವರಲ್ಲ | || 1 ||
ಕಷ್ಟದಿ ದೂರ ನಿಲ್ಲುವರು ಕಾಣದ ರೀತಿಲಿ |
ಎಷ್ಟು ಬೇಡಿದರೂ ಕನಿಕರಿಸರು ||
ಐಶ್ವರ್ಯ ಬಂದಾಗ ಮುಗಿ ಬೀಳುವರು |
ಒಟ್ಟಿನಲಿ ನಿಜರೂಪ ತಿಳಿಯದಲ್ಲ | || 2 ||
ಕಾಯಾ, ವಾಚಾ, ಮನಸಾ ವಂಚಿಸುವರಲ್ಲ |
ಭಯ ಇವರಿಗೆ ಇಲ್ಲವೇ ಇಲ್ಲ ||
ದಯಾ ಮಮತೆ ಒಂದಿನಿತೂ ಇಲ್ಲ |
ಆಯಾ ಕಾಲಕೆ ಬಣ್ಣ ಬದಲಾಯಿಸುವರಲ್ಲ | || 3 ||
ಪತಿತರೆಂದು ಪರರ ಜರೆಯುವರು |
ಸ್ವಂತ ತಮ್ಮನ್ನೇ ಅರಿಯದಂತಿಹರು ||
ಮತಿವಂತರು ಅತಿ ಕೆಲವರೇ ಕಾಣ್ವರು |
ಪ್ರತಿ ಜನುಮದ ಪತಿ ಶ್ರೀಕೃಷ್ಣವಿಟ್ಠಲನ ಭಜಿಪರು | || 4 ||
ಎಎಎ
384. ಅನುಭವದ ಅಡಿಗೆ ಮಾಡಿ ಬಡಿಸಣ್ಣ |
ಚೆನ್ನಾಗಿ ಕೇಳಿ ತಿಳಿದು ಸುರುಚಿಯಾಗಿ | || ಪ ||
ಮಾಡಲು ಸುಲಭವಿರಬೇಕು |
ನೋಡಲು ತಿನ್ನಬೇಕೆನಿಸಬೇಕು ||
ನೀಡಲು ಸರಳವಿರಬೇಕು |
ಬೇಡಿಕೊಳ್ಳುವಂತಿರಬೇಕು || ಅಂತಹ | || 1 ||
ಬಾಯಿಗೆ ಸವಿಯಿರಬೇಕು |
ಸುಯ್ ಎಂದು ಕೆಳಗಿಳಿಯಬೇಕು |
ನಯವಾಗಿ ಪಚನವಾಗಬೇಕು |
ಭಯವಿಲ್ಲದೆ ಹಿತವಾಗಿರಬೇಕು || ಅಂತಹ || 2 ||
ಸಕಲವು ಶುಚಿಯಾಗಿರಬೇಕು |
ಅಕಾಲಕೂ ಹಳಸದಂತಿರಬೇಕು||
ಮಕ್ಕಳಾದಿಯಾಗಿ ಸೇವಿಸುವಂತಿರಬೇಕು |
ಶ್ರೀಕೃಷ್ಣವಿಟ್ಠಲ ಮೆಚ್ಚುವಂತಿರಬೇಕು || ಅಂತಹ | || 3 ||
ಎಎಎ
385. ಇದು ಯಾರ ಕೃಪೆಯೋ, ಯಾವ ಜನ್ಮದ ಪುಣ್ಯವೋ|
ಪದಪುಂಜ, ಸುವಾಕ್ಯಗಳ ಸುರಿ ಮಳೆ ಹೇಗಾಯಿತೋ? | || 1 ||
ಸಾಧನೆಯ ಮಾರ್ಗದಿ ಪಾದ ಹೇಗೆ ಬೆಳೆಯಿತೋ ಅರಿಯದು|
ವಿಧಿಲಿಖಿತವಲ್ಲದೆ ಮತ್ತೇನು ಇರಲು ಸಾಧ್ಯ | || 2 ||
ತಕ್ಷಣಕೆ ಬರುವ ಯೋಚನೆ ಅಕ್ಷರ ರೂಪದಿ ಇಳಿದಿದೆ |
ಅಕ್ಷರ ಪ್ರತಿಪಾದ್ಯ ಅಕ್ಷರನಾಮಕ ಶ್ರೀಕೃಷ್ಣವಿಟ್ಠಲನ ಸೇವೆ ಮಾತ್ರ | || 3 ||
ಎಎಎ
386. ಹೋದದ್ದು ಹೋಯಿತು ಪರಿತಪಿಸದೆ, ಇದ್ದುದ್ದರ ಬಗ್ಗೆ ವಿಚಾರಿಸು|
ಬಂದಿದ್ದರ ಬಗ್ಗೆ ಸಂತೋಷಿಸು, ಬಾರದಿದ್ದರೆ ಹಿಂದೆ ಹೋಗಬೇಡಾ ||
ಮುಂದಿನದ್ದು ಯೋಚಿಸಿ ಬದುಕಿನಲಿ ಮುಂದೆ ನಡೆ |
ಮುದ್ದು ಶ್ರೀಕೃಷ್ಣವಿಟ್ಠಲನ ನಂಬಿ ನೆನೆದರೆ ಸದಾ ಕಾಪಾಡುವ ||
ಎಎಎ
387. ದೊಡ್ಡ ಕಡಲು ನೀನು, ಬಿಂದುವಿನ ಬಿಂದುನಾ |
ತಡಿಯಲಿ ನಿಂತು ನಿನ್ನಾಳರಿಯಬಲ್ಲನೆ? ||
ಒಡಲಲಿ ತ್ರಿಲೋಕವಿಟ್ಟವನೀನು |
ಒಡಲುಹೊಯ್ಯುವವ ನಾ, ನಿನ್ನೊಡಲ ತಿಳಿಯಬಲ್ಲನೆ? ||
ಸಿಡಿಲು-ಗುಡುಗು, ಮಿಂಚು-ಮಳೆ ನೀನು |
ಮಡಿಲ ಮರಿ ನಾ, ನಿನ್ನ ರೂಪ ಗುರುತಿಸಬಲ್ಲನೇ? ||
ಎಡಬಿಡದೆ ಸಕಲ ವಸ್ತುವಿನಂತೆ ಸಕಲದಲ್ಲಿರುವ ನೀನು |
ಒಂದೆಡೆ ಇರುವೆ ನಾ ನಿನ್ನ ಕಾಣಬಲ್ಲೆನೇ? ||
ಒಡನಾಡಿಯಾಗಿ ಸದಾ ಮೌನದಿಂದಿರುವ ನೀನು |
ಬಡಬಡ ಮಾತನಾಡುವ ನಾ ನಿನ್ನ ವರ್ಣಿಸಬಲ್ಲೆನೆ? ||
ಬಿಡದೆ, ಒಂದು, ದಶ, ಸಾವಿರಾರು ರೂಪು ತಳೆವ ನೀನು |
ಕೊಡಮಾಡಿದ ಒಂದೇ ದೇಹದಿ ನಾ ನಿನ್ನ ನೆನಪಿಡಬಲ್ಲೆನೇ? ||
ಅಡಿಯ ನಖದಿಂ ಸುರಗಂಗೆ ಹರಿಸಿದವ ನೀನು |
ಕಡೆಯತನಕ ನೀರಿನಿಂದ ಜೀವಿಸುವ ನಾ ನಿನ್ನ ನೆಲೆ ತಿಳಿಯಬಲ್ಲೆನೆ? ||
ತಡಮಾಡದೇ ಸುಜ್ಞಾನವಿತ್ತು ನಿನ್ನ ನೀನೇ ತಿಳಿಸು |
ಗಂಡರ ಗಂಡ ಉದ್ದಂಡ ಶ್ರೀಕೃಷ್ಣವಿಟ್ಠಲ ನಿನಗೇ ಶರಣೆಂಬೆ ||
ಎಎಎ
388. ಅಕ್ಷರಗಳು ಸ್ವಂತ ಆಸ್ತಿಯಲ್ಲ | ಅಕ್ಷರ ಜೋಡಣೆ ಎನ್ನ ಬುದ್ಧಿಯಿಂದಲ್ಲ ||
ಅಕ್ಷರಾರ್ಥ ಎನಗೆ ತಿಳಿದಿಲ್ಲ | ಲಕ್ಷ್ಯವಿದ್ದಲ್ಲಿ ಅನುಭವ ವೇದ್ಯ ||
ಭಕ್ಷ್ಯದಲ್ಲಿಯ ಸವಿ ಇದ್ದಂತೆ | ಭಕ್ಷಿಸಲು ತಿಳಿವುದು, ವರ್ಣಿಸಲಶಕ್ಯ ||
ಅಕ್ಷರ ಪ್ರತಿಪಾದ್ಯ ಅಕ್ಷರದಾತಾ | ಲಕ್ಷ್ಮೀಪತಿ ಶ್ರೀಕೃಷ್ಣವಿಟ್ಠಲನೇ ಕರ್ತೃ ||
ಎಎಎ
389. ಯೋಚಿಸಲಾಗದು, ಯೋಚಿಸಿದರೆ ಬರೆಯಲಾಗದು |
ಹಚ್ಚಿದ ಹಣತೆ ಕಾಣದಂತೆ ಘೃತ ಬಳಸಿ ಉರಿವಂತೆ ||
ಹೆಚ್ಚೇನೂ ಆಲೋಚಿಸದೆ ಪದ ರೂಪದಲ್ಲಿ ಮೂಡುವುದು |
ಅಚ್ಚಿನಲ್ಲಿಳಿದ ತಪ್ಪು-ಒಪ್ಪು ಎನಗೆ ಸಂಬಂಧವಿಲ್ಲ ||
ಮೆಚ್ಚಿ ಪರಮಾತ್ಮ ದಯಪಾಲಿಸಿದ ವರವಿದು |
ಇಚ್ಛೆ ಶ್ರೀಕೃಷ್ಣವಿಟ್ಠಲನದು ಒಕ್ಕಣಿಕೆ ಎನ್ನದು ಅಷ್ಟೇ ||
ಎಎಎ
390. ಅಧ್ಯಯನ-ಅಧ್ಯಾಪನಕ್ಕಾಗಿ ಬ್ರಾಹ್ಮಣ ಮುಖದಿಂ |
ಯುದ್ಧ-ರಕ್ಷಣೆಗಾಗಿ ಕ್ಷತ್ರಿಯ ಬಾಹುದಿಂ ||
ಬದ್ಧನಾಗಿ ವೈಶ್ಯ ಕೃಷಿ, ವ್ಯಾಪಾರದಿ ಊರುವಿನಿಂ |
ಶೂದ್ರ ಸಕಲ ಸೇವೆಗಾಗಿ ಪಾದದಿಂ ||
ಪದ್ಮನಾಭನಿಂದ ಹೊರ ಹೊರಟವರು |
ಭೇದವೆಲ್ಲಿದೆ ಸವಿಯೊಳು ಸಕ್ಕರೆಗೊಂಬೆ ಅವಯವದಿ ||
ಭೇದ ಜನ್ಮದಿಂದಲ್ಲ, ಕರ್ಮದಿಂದಾಗುವುದು |
ವೇದ ಪ್ರತಿಪಾದ್ಯ ಶ್ರೀಕೃಷ್ಣವಿಟ್ಠಲನ ದೃಷ್ಟಿಯಲಿ ಸಕಲರೂ ಸಮರೇ ||
ಎಎಎ
391. ಯಾರನ್ನೂ ಅನುಮಾನಿಸಬೇಡಾ, ಅಪಮಾನಿಸಬೇಡಾ |
ಯಾರ ಯೋಗ್ಯತೆ ಯಾರು ಬಾಹ್ಯದಿಂ ಅರಿಯರು ||
ಯಾರ ಅಂತರಂಗ ಯಾರಿಗೂ ಪೂರ್ಣ ತಿಳಿಯದು |
ಯಾರ ಶಾಪ-ಅನುಗ್ರಹ ಯಾವಾಗ ಫಲಿಸುವುದೋ ಹೇಳಲಾಗದು ||
ಯಾರ ಜೊತೆಗೂ ದ್ವೇಷ-ಅಸೂಯೆ, ಕೆಡುಮಾತುಗಳು ಸಲ್ಲದು |
ಸರ್ವರನೂ ಆದರದಿ ಕಾಣು ಶ್ರೀಕೃಷ್ಣವಿಟ್ಠಲ ಒಲಿವನು ||
ಎಎಎ
392. ಹಿತವಚನ ಯಾರೇ ಹೇಳಲಿ ಕೇಳಬೇಕು |
ಸತ್ಸಂಗ ಸಜ್ಜನರೊಡಗೂಡಿ ಸದಾ ಇರಬೇಕು ||
ಭಕ್ತಿಯ ಮಾರ್ಗ ವಿವಿಧ ರೀತಿಯಲ್ಲಿದ್ದರೂ ಬಿಡಬಾರದು |
ಪತಿತ ಪಾವನ ಶ್ರೀಕೃಷ್ಣವಿಟ್ಠಲಪಾದ ನಿರುತ ನೆನೆಯಬೇಕು ||
ಎಎಎ
393. ಮೊಸರಲಿ ಅವಲಕ್ಕಿ ನೆನೆದಂತೆ |
ಹೊಸವಧು ಪತಿಯ ಮುಖ ವೀಕ್ಷಿಸುವಂತೆ ||
ಬಿಸಿಹಾಲಲಿ ಸಕ್ಕರೆ ಬೆರೆತಂತೆ |
ಕೂಸಿನ ಕಂಡು ಮಾತೆ ಮೈಮರೆತಂತೆ ||
ಹಸನಾದ ಬಾಳಲಿ ದಿನಗಳು ಉರುಳುವಂತೆ |
ಈಶನ ನೆನೆಸಿ, ಪ್ರೇಮದಿಂದ, ಭಕ್ತಿಲಿ ಒಂದಾಗಿ ||
ದೋಷರಹಿತ ಶ್ರೀಕೃಷ್ಣವಿಟ್ಠಲನ ಸ್ಮರಿಸೆ ಜನುಮ ಸಾರ್ಥಕವಾಹುದು ||
ಎಎಎ
394. ಜ್ಞಾನಬೇಕು, ವಿಶೇಷ ಸುಜ್ಞಾನ ಬೇಕು |
ಜೀವ ಪರಮಾತ್ಮರೊಳು ಭೇದ ||
ಜೀವ-ಜೀವಕೆ ಭೇದ |
ಜೀವಜಡಕೆ ಭೇದ ಸಾರುವ ಪ್ರತ್ಯಕ್ಷ ಜ್ಞಾನಬೇಕು ||
ದ್ವೈತಾದ್ವೈತ ಭೇದ, ಕ್ಷರಾಕ್ಷರ ಭೇದ |
ಎಲ್ಲಕಿಂತ ಶ್ರೇಷ್ಠ ಪುರುಷೋತ್ತಮ ||
ಎಂದು ಸಾರುವ ವೇದಗಳ ಜ್ಞಾನಬೇಕು |
ಗುರು ಮಧ್ವರಾಯರ ದಯದಿ ||
ಶ್ರೀ ಕೃಷ್ಣವಿಟ್ಠಲನ ಗುಣಮಹಿಮಗಳ ಅರಿತು |
ಮುಕ್ತಿಮಾರ್ಗದೆಡೆ ಸಾಗಲು ಜ್ಞಾನಬೇಕು ||
ಎಎಎ
395. ಬಿರುದೇಕೆ, ಈ ಹೊಗಳಿಕೆ ಯಾತಕೆ, ಈ ಲೋಕದಲಿ | || ಪ ||
ಹೊಗಳುವ ಭಟ್ಟಂಗಿ ಕಂಡರೆ ಅಂಜಿಕೆ ಎನಗಯ್ಯಾ |
ಹೊಗಳಿದವರೇ ಮರುಕ್ಷಣ ತೆಗಳುವರಯ್ಯಾ ||
ಚಿತ್ತ ಚಂಚಲರಿಂದ ಸದಾ ಎನ್ನ ಕಾಪಾಡು |
ಚಿತ್ತಜನಕ ನಿನ್ನೊಲಮೆ ಇದ್ದರೆ ಸಾಕು | || 1 ||
ನಶ್ವರ ಜಗತ್ತು, ನಶ್ವರದೇಹ |
ಶಾಶ್ವತ ಆತ್ಮಕ್ಕೆ ನಿನ್ನ ಸ್ಮರಣೆ ಸಾಕು ||
ಗುರುಗಳಾಶೀರ್ವಾದ ಬಲದಿಂದಲೇ |
ಮುಳ್ಳಿನ ಹಾದಿ ಹುಲ್ಲುಹಾಸಾದರೆ ಸಾಕು | || 2 ||
‘ನಾಹಂ ಕರ್ತಾ, ಹರಿಃ ಕರ್ತಾ’ ಎಂದಂತೆ |
ಮನ ನಿನ್ನದು, ತನು ನಿನ್ನದು ಸದಾ ||
ನೀ ನಡೆಸಿದಂತೆ ನಡೆವ ಈ ಜೀವ |
ಶ್ರೀಕೃಷ್ಣವಿಟ್ಠಲ ಪ್ರೇರಣೆಯಾಂ,
ಪ್ರೀತ್ಯರ್ಥಂ ಎಂದು ಮಾಡುವ ಕೆಲಸಕೆ | || 3 ||
ಎಎಎ
396. ಸರ್ವಕರ್ತೃನ ಮುಂದೆ ನಾನೇ ಮಾಡಿದೆ ಎಂದರೆ |
ಸೃಷ್ಠಿಕರ್ತನ ಮುಂದೆ ನಾನೇ ಜನಕನೆಂದರೆ ||
ನಿರ್ದೋಷನಿಗೆ ನನ್ನ ತಪ್ಪೆಲ್ಲಾ ನಿನ್ನಿಂದಲೇ ಎಂದರೆ |
ಸರ್ವಜ್ಞನ ಮುಂದೆ ನನಗೆ ಎಲ್ಲಾ ತಿಳಿದಿದೆ ಎಂದರೆ ||
ಸದ್ಗುಣಸಾಂದ್ರನ ಮುಂದೆ ನನ್ನ ಗುಣಗಳ ಹೊಗಳಿ ಕೊಂಡರೆ |
ಅನಾದ್ಯನಂತನ ಮುಂದೆ ನಾನೇ ಚಿರಾಯು ಎಂದರೆ ||
ಪುರುಷೋತ್ತಮನ ಮುಂದೆ ನಾನೇ ಶ್ರೇಷ್ಠನೆಂದರೆ |
ಶ್ರೀಕೃಷ್ಣವಿಟ್ಠಲ ಮೆಚ್ಚುವನೇನಯ್ಯಾ ||
ಎಎಎ
397. ಶರೀರದ ವಿವಿಧ ಕಾರ್ಯಗಳ ಪ್ರೇರಕ ಅದ್ಭುತ! ಅತ್ಯದ್ಭುತ |
ತರತರದ ವಸ್ತುಗಳು ಸೇರುವುದು ಒಂದೇ ಚೀಲದಲಿ ||
ನೀರಿರಲಿ, ಅನ್ನವಿರಲಿ ಒಳ ಹೋಗುವ ಮಾರ್ಗ ಒಂದೇ |
ಸಂತೃಪ್ತಿ, ತುಷ್ಟಿ, ಪುಷ್ಟಿ ನೀಡುವುದು ಉಂಡ ದೇಹಕೆ ||
ಕರಗಿಸಿ-ಅರಗಿಸಿ ವಿವಿಧರೂಪದಿ ಸಕಲಾಂಗಗಳಗೆ ಪೋಪುದು |
ಸೇರುವುದು ತದ್ರೂಪದಿ ತದಂಗಗಳಿಗೆ ||
ವೀರ್ಯರೂಪದಿ ಪ್ರಜನಕೆ ಕಾರಣವಾಹುದು |
ಕ್ಷೀರರೂಪದಿ ಉಣಿಸಿ-ತಣಿಸುವುದು ಶಿಶುವ ||
ಪುರೀಷ, ಮಾಂಸ, ಮೂಳೆ ಆಗಿ ಮಾರ್ಪಡುವುದು |
ನರ, ನಾಡಿಗಳಲಿ ರಕ್ತವಾಗಿ ನಿರಂತರ ಹರಿವುದು ||
ಬೇರೆ ಬೇರೆ ಕಾರ್ಯ ಉದ್ದೇಶ ಸಫಲವಾಗುವುದು |
ಮರುತ ಪಂಚರೂಪದಿ ಸಂಚರಿಸಿ ಕಾರ್ಯವೆಸಗುವ ||
ಕಾರ್ಯಕಾರಣ ಕರ್ತ ಶ್ರೀಕೃಷ್ಣವಿಟ್ಠಲನ ಕಾರುಣ್ಯದಿಂದಲೇ ||
ಎಎಎ
398. ಲೆತ್ತವಾಡಿ ಸೋತರಂತೆ ಪತಿಗಳೈವರು |
ಆಂತ:ಪುರದಲ್ಲಿದ್ದ ಪತ್ನಿಯ ಪಣಕ್ಕಿಟ್ಟರು ||
ಸೋತು ಕೌರವೇಶನ ಅಪಮಾನಕ್ಕಿಡಾದರು ||
ಕಾತರಿಸಿದ ದುಷ್ಟ,ಸೇಡು ತೀರಿಸಿಕೊಳ್ಳಲು |
ಸತಿಯ ಸಭೆಗೆಳೆತರಲು ಭ್ರಾತೃಗ್ಹೇಳಿದ ||
ಋತುಮತಿಯಾದ ಕುರುಕುಲವಧು ಬರಲು ನಿರಾಕರಿಸೆ |
ಸಂತಾಪದಿ ಮುಡಿಹಿಡಿದು ಜಗ್ಗುತ್ತಾ ಎಳೆತಂದ ||
ಧೃತರಾಷ್ಟ್ರ ಹುಟ್ಟು ಕುರುಡ ಧರ್ಮಾಂಧನೂ ಆದ |
ಪಿತಾಮಹರಾದಿಯಾಗಿ ನಾಚಿಕೆಯಲಿ ತಲೆ ತಗ್ಗಿಸಿದರು ||
ಸೋತ ಪತಿಗಳು ಪತ್ನಿಯ ಹೇಗೆ ಪಣಕ್ಕಿಟ್ಟರೆಂದಳಾ ನಾರಿಗೆ |
ಉತ್ತರ ಕೊಡದೆ ತಡಬಡಿಸಿದರೆಲ್ಲ ಸುಬುಧರು ||
ವಸ್ತ್ರ ಸೆಳೆಯಲು ತಮ್ಮನಿಗೆ ಆಜ್ಞಾಪಿಸಿದ ಮಂದಾಂಧ |
ತತ್ತರಿಸಿದ ಸಾಧ್ವಿ ಸಹಾಯಕ್ಕಾಗಿಸಭೆಯಲಿ ಬೇಡಿಕೊಂಡಳು ||
ಉತ್ಸಾಹದಿ ಮುಂದೆ ಬಂದು ಸೆರಗನೆಳೆದ ಧೂರ್ತ |
ಭೀತಿಯಿಂದ ಮಾನ ಕಾಯಲು ದ್ವಾರಕಾಧೀಶನ ಕೂಗಿ ಕರೆದಳು ||
ಆರ್ತನಾದ ಆಲಿಸಿ ಧಾವಿಸಿ ಬಂದು ಸಂರಕ್ಷಿಸಿದ |
ಹಸ್ತದಿಂದ ಅನಂತಮಡಿ ವಸ್ತ್ರ ದಯಪಾಲಿಸಿದ ||
ಮತ್ತೆ ಮತ್ತೆ ಸೆಳೆಯಲು ಸೀರೆಯ ಪರ್ವತವಾಯಿತು |
ಸೋತು ಬಸವಳಿದು ಧರಾಶಾಯಿಯಾದ ದುಷ್ಟ ||
ಭಕ್ತೆ ಮಾನಿನಿಯ ಮಾನ ಕಾಯ್ದ ಶ್ರೀಕೃಷ್ಣವಿಟ್ಠಲನ ಕಾರುಣ್ಯ ಸೀಮಾತೀತ ||
ಜೊತೆ
ಭಕ್ತರ ದು:ಖ,ಅಸಹಾಯಕತೆ ಸಹಿಸನು ಎಂದಿಗೂ |
ಸತತ ಪಾಲಿಪ ದೀನರಕ್ಷಕ ನಮ್ಮ ಶ್ರೀಕೃಷ್ಣವಿಟ್ಠಲ ||
ಎಎಎ
399. ಸರ್ವರಿಗೂ ಸುಖವನ್ನುಂಟು ಮಾಡು |
ದೇವಾ, ಯಾರಿಗೂ ದು:ಖ ನೀಡದಿರು ||
ಸರ್ವದಾ ಶುಭವೇ ತೋರುತಿರು |
ಸರ್ವರ ತಪ್ಪು ಮನ್ನಿಸಿ ಕಾಪಾಡು ||
ಸರ್ವರ ಸುಖದಲಿ ಎನ್ನ ಸುಖವಡಗಿದೆ |
ಸರ್ವರ ತಪ್ಪು ಕಾಯೋ ಅಪ್ಪ, ಶ್ರೀಕೃಷ್ಣವಿಟ್ಠಲ ||
ಸರ್ವರಕ್ಷಕ ನೀನಲ್ಲವೇ? ಬಿಡದೇ ಎನ್ನನ್ನೂ ಕಾಯೋ ||
ಎಎಎ
400. ನಿತ್ಯ ಸಾಯುವುದು ನೋಡಿ ದು:ಖಿಸದೆ, ನಮ್ಮವರಿಗಾಗಿ ದು:ಖ ಏಕೆ? |
ನಿತ್ಯವೂ ಸಾಯುವವು ಅನೇಕ ಕ್ರಿಮಿ, ಕೀಟಾದಿಗಳು ||
ನಿತ್ಯವೂ ಸಾಯುವವು ಅನೇಕ ಅರಳಿದ ಹೂಗಳು |
ನಿತ್ಯವೂ ಸಾಯುವವು ಅನೇಕ ಹಣ್ಣಾದ ಎಲೆಗಳು ||
ನಿತ್ಯವೂ ಸಾಯುವವು ಆಹಾರ ರೂಪದಿ ಶಾಕಗಳು |
ನಿತ್ಯವೂ ಸಾಯುವವು ಅನೇಕ ಜೀವಿಗಳು, ಜೀವಿಗಳ ಬದುಕಿಗಾಗಿ ||
ನಿತ್ಯವೂ ಸಾಯುವವು ಕರ್ಮಗಳು ಅನೇಕ ಕರ್ಮದ ಹುಟ್ಟಿನಲಿ |
ನಿತ್ಯವೂ ಸಾಯುವುದು ಸಮಯವು ಕಾಲಗರ್ಭದಲಿ ||
ನಿತ್ಯವೂ ಸಾಯುವುದು ದುರ್ಬಲತೆ ಬಲಿಷ್ಠತೆ ತೆಕ್ಕೆಯಲಿ |
ನಿತ್ಯವೂ ಸಾಯುವುದು ಹೊಸತಲ್ಲ ಹಾಗೇ ಹುಟ್ಟು ಹೊಸತಲ್ಲ ||
ನಿತ್ಯ ಸಾಯುವುದು ಹುಟ್ಟಲೇಬೇಕು, ಹುಟ್ಟಿದ್ದು ಸಾಯಲೇಬೇಕು |
ನಿತ್ಯ ಸಾಯುದು ದೇಹದ ಕಣಗಳನೇಕ, ಹೊಸ ಕಣಗಳು ಹುಟ್ಟುವುವು ||
ನಿತ್ಯ ಸಾಯುವುದು ಹೊರರೂಪ ಹೊರತು ಒಳಾತ್ಮಕ್ಕೆ ಸಾವಿಲ್ಲ |
ನಿತ್ಯ ಸಾಯುವ ರೂಪ ಹೊಸ ರೂಪಕೆ ನಾಂದಿಯಾಗುವುದು ||
ನಿತ್ಯ ಸಾಯುವ ಹಳೆರೂಪ ಹೋದರೆ ದು:ಖವೇಕೆ? |
ನಿತ್ಯ ಸಾಯುವುದಕ್ಕೆ ಶೋಕವೇಕೆ? ವಿಷಾದವೇಕೆ? ||
ನಿತ್ಯ ಸಾಯಲಿ ನಮ್ಮಅಹಂ-ಮಮ ಭಾವನೆಗಳೆಲ್ಲ |
ನಿತ್ಯ ಆತ್ಮ ಸತ್ಯ ಎನ್ನುವ ನಮ್ಮ ಸತ್ಯಸ್ಯಸತ್ಯ ಶ್ರೀಕೃಷ್ಣವಿಟ್ಠಲ ||