ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಶ್ರೀ ಕೃಷ್ಣವಿಠ್ಠಲಪದಗುಚ್ಛ 2

114. ರಥದಿ ಕುಳಿತಿಹ ಜೀವ ಸಾರಥಿ ಪರಮಾತ್ಮ |

ಎನ್ನುತ ಯಾಚಕನಿಗೆ ಸದಾ ||

ಸ್ವಾರ್ಥ ಕೇಳಲಿ, ಪಾರಮಾರ್ಥಕೇಳಲಿತಥಾಸ್ತು |

ಮಥಿಸಿ ಮನವ ಮಾರ್ಗಸೂಚಿಪ ಸದ್ಭಕ್ತಿಗೆ ಒಲಿದು ||

ಪಂಥನಾಡುವ ಪಂಚಪ್ರಾಣನಾಡಿಸುತ ಸರ್ವಕರ್ತೃ |

ಇಂಥಾ ಉದ್ಗೀಥ ಶ್ರೀಕೃಷ್ಣವಿಟ್ಠಲ ಸ್ವಯಂಭೂ ಸರ್ವೇಶ ||

115. ತನ್ನತನವ ಬಿಡದೆ, ಇನ್ನೊಬ್ಬರಿಗೂ ಪೂರ್ಣತಿಳಿಸದೆ |

ಅನ್ನಂ ದೇಹಿ ಎಂದವರಿಗೆ ನಾಸ್ತಿ ಎನ್ನದೆ ||

ಉನ್ನತಪ್ರಾರ್ಥಿಪರಿಗೆ ಇಹ-ಪರ ಸುಖವೀವ |

ಮನವನಿತ್ತರೆ ತನ್ನನೀವ ಶ್ರೀಕೃಷ್ಣವಿಟ್ಠಲ ಭಕ್ತಾನಾಂ ವಶ ||

116. ಏನೆಂತು ಪಾಡಲಿ, ಏನೆಂತು ಪೊಗಳಲಿ |

ಅನಂತ ಗುಣಗಳು ನಿನ್ನಲುಂಟು || || ||

ಎನಗೆ ಒಂದೇ ನಾಲಿಗೆ ಮಂದಮತಿ ನಾ |

ಎಣಿಸಲುಂಟೇ ಈಜಗದಿ ಮಳಲಕಣಗಳ || || ಅಪ ||

ಆನಂದ ಆನಂದವೋ ಅಲ್ಪವೇ ಗುಣ ನೆನೆಯಲು |

ಎನಿತು ಆನಂದವೋ ಪೂರ್ಣ ಗುಣತಿಳಿಯಲು ||

ಮನದನ್ನೇ ಚೆಲುವೆ ಲಕುಮಿ ಜೊತೆಗಿರಲು ಸದಾ |

ಮನಸಾ ಅರಿಯಳು ಸಕಲ ರೂಪಂಗಳ || || 1 ||

ಜನುಮ ಜನುಮಕ್ಕೂ ನಿನ್ನ ಸ್ಮರಣೆ ಕೊಡೆ |

ಮನಸಾ ಕೊಂಡಾಡುವ ಬುದ್ಧಿ ಇರೆ ||

ಇನಿತು ಇನಿತು ಪಾಡಿ ಕೊಂಡಾಡುವೆ |

ನಿನ್ನೊಲುಮೆಯಿಂ ಮನ ತುಂಬಿ ಪಾಡುವೆ ಶ್ರೀಕೃಷ್ಣವಿಟ್ಠಲ || || 2 ||

117. ಪೇಳೇ ಸಖಿ ನೀ ಎಲ್ಲಿಂದ ಬಂದೆ |

ತಿಳಿಸಿ ಒಲವಿಂದ ನೀ ನಿಜ ಪೇಳೇ || || ||

ಅಯೋಧ್ಯಾ ನಗರಿ ದಶರಥ ನಂದನ |

ಮರ್ಯಾದಾ ಪುರುಷೋತ್ತಮಾ ಕಳುಹಿದನೇನೆ || || 1 ||

ಕ್ಷೀರಶಯನ ಶೇಷಶಾಯಿ ನಾರಾಯಣ |

ವರಗಿರಿ ತಿಮ್ಮಪ್ಪ ಕಳುಹಿದನೇನೆ || || 2 ||

ವೈಕುಂಠದಿ ಶ್ರೀ ಲಕುಮಿಪತಿ |

ಲೋಕದ ಸೃಷ್ಟಿ ನೋಡಲು ಕಳುಹಿದನೇನೆ || || 3 ||

ಕರ್ಮವ ಕಳೆದು ಸಾಧಿಸಿ ಭಕ್ತಿಯ |

ಮರ್ಮವನರಿಯಲು ಕಳುಹಿದನೇನೆ || || 4 ||

ವೃಂದಾವನ ಕಂದ ಗೋಕುಲ ಚಂದ್ರ |

ರಾಧಾರಮಣ ಶ್ರೀ ಕೃಷ್ಣವಿಟ್ಠಲ ಕಳುಹಿದನೇನೆ || || 5 ||

118. ಪೊರೆ ಎನ್ನ ಸ್ವಾಮಿ ಶರಣೋದ್ಧಾರಕ |

ಪರಮಾತ್ಮ ಪರಮಾಪ್ತ ಜೀಯಾ ||

ಕರುಣಾ ಸಮುದ್ರ ಲೋಕಪಾಲಕ |

ಪರಿ ಪರಿಯಿಂದ ಬೇಡಿಕೊಂಬೆ ||

ಸರ್ವಸ್ವಾಮಿ ಎನ್ನ ಹೃದಯಂತಸ್ಥ |

ಪರಿಪೂರ್ಣಗುಣಸಾಗರ ದೋಷದೂರ ||

ಸರ್ವೇಶ ಸರ್ವವಂದ್ಯ ಸರ್ವಜ್ಞ |

ಸರ್ವತ್ರ ಸರ್ವಾಂಗೀಣ ಸರ್ವದಾ ||

ಶ್ರೀಕೃಷ್ಣವಿಟ್ಠಲ ಬಿಡದೆ ಸಲಹೋ ದೇವಾ ||

119. ಹರಿ ನಿನ್ನ ಚರಣದಿ ಸ್ಥಿರ ಭಕುತಿ ಕರುಣಿಸೋ |

ಪರಿ ಪರಿ ಬೇಡಿಕೊಂಬೆ ನಿಜ ಭಕುತಿ ದಯಪಾಲಿಸೋ ||

ನೀರಿಗಿಂತ ತಿಳಿಯಾದ ಜ್ಞಾನವಿತ್ತು ಸಲುಹೋ |

ಉರ್ವಿಗಿಂತ ಭಾರವಾದ ಪಾಪದಿಂದ ಉಳಿಸೋ ||

ಕರಿಯಾದ ಕಾಡಿಗೆಗಿಂತ ಕಲಂಕದ ಕಪ್ಪು ಅಳಿಸೋ |

ಉರಿಗಿಂತ ತೇಜವಾದ ಕ್ರೋಧದಿಂದ ತಪ್ಪಿಸೋ ||

ಅರಿಯದೇ ಬರುವ ಒಳಗಿನ ಅರಿಯ ತರಿಯೋ |

ನರಜನ್ಮದಿ ಹೊರುವ ಕರ್ಮದ ಭಾರ ಇಳುಹೋ ||

ಬರದಂತೆ ಜನುಮ ಇರುವ ಉಪಾಯ ತಿಳಿಸೋ |

ಭರದಿಂದ ಸಂಸಾರ ಸಾಗರ ದಾಟುವ ದಾರಿ ತೋರೋ ||

ಬೇರೆಯವರ ದೈನ್ಯಕೆ ಸಿಲುಕದಂತೆ ನಡೆಸೋ |

ಸ್ಮರಿಸಿ ಸದಾ ಶ್ರೀಕೃಷ್ಣವಿಟ್ಠಲನ ಬದುಕುವಂತೆ ಮಾಡೋ ||

120. ಓಡಾಡಿದೆಡೆ ಎಲ್ಲಾ ತೀರ್ಥಯಾತ್ರೆಯಾಗಲಿ |

ನಡೆದಾಡಿದ್ದೆಲ್ಲಾ ದೇವಸ್ಥಾನವಾಗಲಿ ||

ನೋಡಿದ್ದೆಲ್ಲಾ ಪರಮಾತ್ಮನ ಮೂರ್ತಿಯಾಗಲಿ |

ನುಡಿದಿದ್ದೆಲ್ಲಾ ಸ್ತುತಿ ಸ್ತೋತ್ರವಾಗಲಿ ||

ಓದಿದ್ದೆಲ್ಲಾ ವೇದ ಶಾಸ್ತ್ರವೇ ಇರಲಿ |

ಕೊಡ ಮಾಡಿದ್ದೆಲ್ಲಾ ದಾನ ಧರ್ಮವಾಗಲಿ ||

ಒಡಲಲ್ಲಿ ಹಾಕಿದ್ದೆಲ್ಲಾ ನೈವೇದ್ಯವಾಗಲಿ |

ಮಾಡಿದ್ದೆಲ್ಲಾ ಶ್ರೀಹರಿಯ ಕೈಂಕರ್ಯವಾಗಲಿ ||

ಬಿಡದೆ ಸಕಲವೂ ಶ್ರೀಕೃಷ್ಣವಿಟ್ಠಲನ ಪ್ರೀತಿಯಾಗಲಿ ||

121. ಸುಗುಣಾಂತರಂಗ ಅವಿರ್ಭವಿಸಿ ಅದಿತಿ ಕಶ್ಯಪ ಪುತ್ರನಾಗಿ |

ಆಗಲೇ ತೋರಿದ ಸುಂದರ ವಟು ವಾಮನರೂಪದಿ ||

ಅಗಮಿಸಿ ಯಜ್ಞಮಂಟಪದಿ ಬೇಡಿದ ಬಲಿಗೆ ದಾನವ |

ಬಗೆಬಗೆಯ ದಾನ ಒಲ್ಲದೆ ಬೇಡಿದ ತ್ರಿಪದಿ ಭೂವಿಯ ||

ಆಗಣಿತ ಬೆಳೆದ ಅಚಿಂತ್ಯಾದ್ಭುತ ತ್ರಿವಿಕ್ರಮ ರೂಪದಿ |

ಬೇಗ ಅಳೆದ ಎರಡು ಪಾದದಿ ಭುವಿ, ಅಂತರಿಕ್ಷವ ||

ನಗೆ ಬೀರಿ ಕೇಳಿದ ಎಲ್ಲಿಡಲಿ ಮೂರನೇಪಾದ ಸ್ಥಳತೋರು |

ಯೋಗದಿ ಅರಿತ, ಸಾಮಾನ್ಯನಲ್ಲ ಇವ ಪರಮಾತ್ಮನೆಂದು ||

ಭಂಗವಾಗದಂತೆ ತನ್ನ ಪ್ರತಿಜ್ಞೆ, ಶಿರವ ತೋರಿದ ಸ್ಥಳವಾಗಿ |

ಬೇಗನೆ ಬಲಿ ಶಿರವ ಮೆಟ್ಟಿ ಪಾತಾಳಕ್ಕಟ್ಟಿದ ||

ಅಂಗನೆಯ ಜೊತೆಗೂಡಿ ನಡೆದ ಚಿರಂಜೀವಿ ಬಲಿ |

ಈಗಲೂ ಕಾಯುತ್ತಿರುವ ಭಕ್ತವತ್ಸಲ, ಅರಮನೆಯ ಬಾಗಿಲವ ||

ಗಗನಕ್ಕೆತ್ತಿದ ಪಾದ ನಖ ತಾಕಿ ಒಡೆಯಿತು ಬ್ರಹ್ಮಾಂಡ ಖರ್ಪರ |

ಸುಜ್ಞಾನಿ ಬ್ರಹ್ಮ ಜಲದಿ ಮಾಡಿದ ಪಾದ ಪೂಜೆಯ ||

ಆಗ ವಿಷ್ಣುಪದಿ ಎನಿಸಿ ಪವಿತ್ರಳಾಗಿ ಕೆಳಗೆ ಹರಿದಳು |

ನುಗ್ಗಿ ಬಂದ ರಭಸ ತಡೆದು ಶಿವ ಜಟೆಯಲಿ ಬಂಧಿಸಿದ ||

ಭಗೀರಥ ಮಾಡಿದ ಘೋರತಪಕ್ಕೆ ಮೆಚ್ಚಿ ಕೆಳಗೆ ಕಳುಹಿದ |

ಸಂಗತೊರೆಯಲು ಮನವಿಲ್ಲದೆ ದೇವಲೋಕ ಬಿಟ್ಟು ಇಳಿದಳು ||

ಸಾಗಿ ಬಂದು ಜನ್ಹು ಋಷಿ ಆಶ್ರಮವ ತೇಲಿಸಿದಳು |

ಗಂಗೆಯನು ತೀರ್ಥವೆಂದು ಆಪೋಷನದಿ ಸಕಲ ಸ್ವೀಕರಿಸಿದ ||

ಸುಜ್ಞಾನಿಗಳು ಪಾವನವಾದುದು ಎಂದು ಬಿಟ್ಟಗಲರು |

ವಿಜ್ಞಾಪಿಸಲು ಭಗಿರಥ, ಕಿವಿಯಿಂದ ಹೊರ ಹೊರಟಳು ಜಾಹ್ನವಿ ||

ಮಂಗಳೆ, ಕೆಳಗೆ ಹರಿದು ಭುವಿ, ಪಾತಾಳಾದಿ ಲೋಕ ಪಾವನಗೊಳಿಸಿ |

ಸಗರ ಕುಲ ಬಾಂಧವರನ್ನೆಲ್ಲಾ ಉದ್ಧರಿಸಿದ ಸುಚರಿತನ ಗಾಥಾ ||

ಗಗನ ಸುರನದಿ, ಭೂಮಿಲಿ ಪಾಪ ಕಳೆವ ಗಂಗೆ |

ಜಗದೋದ್ಧಾರಕ ಶ್ರೀ ಕೃಷ್ಣವಿಟ್ಠಲನ ಪ್ರೇಮ ಕುವರಿಯಾದಳು ||

122. ಜೀವೇಶ ದೇವೇಶ ಈರೇಶ ಬ್ರಹ್ಮೇಶ ಲಕ್ಷ್ಮೀಶ |

ವಿಶ್ವೇಶ ಜಗದೀಶ ವೇದೇಶ ಸರ್ವೇಶ ಶರಣೇಶ ||

ಭೂಮೇಶ ಅಸುರೇಶ ದುರ್ಗೇಶ ತತ್ವೇಶ ಅದ್ರೀಶ |

ಕಾಮೇಶ ಧರ್ಮೇಶ ರಾಮೇಶ ಮುಕ್ತೇಶ ಜ್ಞಾತೇಶ ||

ಪರಮೇಶ ಅಬ್ಧೀಶ ಭವೇಶ ಸ್ತಂಭೇಶ ಪೊಡವೀಶ |

ಪ್ರೇರಕೇಶ ನಿಯಮೇಶ ಪ್ರೋಷ್ಠೀಶ ರವೀಶ ಕವೀಶ ||

ನಾಮೇಶ ರೂಪೇಶ ವಾದೀಶ ಜಯೀಶ ಸರ್ವಾಧೀಶ |

ವ್ಯೋಮಕೇಶ ಯೋಗೇಶ ಅನೀಶ ಸುಂದರೇಶ ಸ್ವಯಂಮೇಶ ||

ಗೀತೇಶ ಗುರ್ವೇಶ ಹೃದಯೇಶ ವಿಜಯೇಶ ಗಮ್ಯೇಶ ||

ಕಾಂತೇಶ ಶಾಂತೇಶ ಸ್ವರೂಪೇಶ ಚಿತ್ತೇಶ ಸ್ವವಶ |

ಪ್ರಾಣೇಶ ಅಗ್ರೇಶ ಮೂಲೇಶ ಕರ್ಮೇಶ ಕಮಲೇಶ |

ಗುಣೇಶ ಕಾರಣೇಶ ಕಾರ್ಯೇಶ ಬುದ್ಧೇಶ ಸಿದ್ಧೇಶ ||

ಪೂರ್ಣೇಶ ಜ್ಞಾನೇಶ ಆನಂದೇಶ ಸತ್ಯೇಶ ನಿತ್ಯೇಶ |

ಗಣೇಶ ವ್ಯಾಪ್ತೇಶ ಸ್ಥಿತೇಶ ವಿಶೇಷ ಸರ್ವಜ್ಞೇಶ ||

ಭೂತೇಶ ಇಂದ್ರೇಶ, ವಾಗೀಶ ಹರೀಶ ಪುರುಷೇಶ |

ಕ್ಷೇತ್ರೇಶ ಅಕ್ಷರೇಶ ತ್ರಿಗುಣೇಶ ಭಕ್ತೀಶ ಶ್ರೀಶ ||

ಸಂಕರ್ಷ ತ್ರಿಲೋಕೇಶ ಭಿನ್ನಾಭಿನ್ನೇಶ ಸೃಷ್ಟೀಶ |

ಮುಖ್ಯೇಶ ಅದೃಶ್ಯಾದೃಶ್ಯ ದೃಷ್ಟೀಶ ಸಂತುಷ್ಟೀಶ ||

ವಂದ್ಯೇಶ ಅಮಲೇಶ ಸರ್ವೇಶ ತ್ರಯೀಶ ಅವಿನಾಶಿ |

ರುದ್ರೇಶ ಹೃಷಿಕೇಶ ಅಂಶಿ ಶ್ರೀಕೃಷ್ಣವಿಟ್ಠಲೇಶ ಆಶೀಶಮೇ (ಕ್ಷಮಸ್ವಮೇ) ||

123. ಪ್ರಾರಬ್ಧ ತಪ್ಪದು ಗುಡ್ಡದಷ್ಟಿರುವ ಕಷ್ಟ ಕಡ್ಡಿಯಂತೆ ಮಾಡಿದೆ | || ||

ಸರ್ವದಾ ಸರ್ವತ್ರ ಕಣ್ಣರೆಪ್ಪೆಯೆಂದದಿ ಎನ್ನ ರಕ್ಷಿಸಿದೆ || || ಅಪ ||

ಏನು ಕರುಣೆಯೋ ಕಾರುಣ್ಯನಿಧಿಯೇ ಎಷ್ಟೆಂದು ಪೇಳಲಿ |

ಸ್ವಾನುಭವದ ಮಾತಿದು ಉತ್ಪ್ರೇಕ್ಷೆ ಸ್ವಲ್ಪವೂ ಇಲ್ಲ ||

ವದನದಿ ನುಡಿಸಿದ ಮಾತನ್ನು ನಿಜವಾಗಿಸಿ ಗೌರವಿಸಿದೆ |

ಮಾಡಿದ ಕಾರ್ಯವ ಜಯವನ್ನಾಗಿಸಿ ಉನ್ನತಿ ನೀಡಿದೆ || || 1 ||

ಶುದ್ಧ ಮಾಡುತ ಅಂತ:ಕರಣ ಸರ್ವಕಾರ್ಯ ಕಾರಣಪ್ರೇರಕನಾದೆ |

ಮಾಡಿದುಪಕಾರವ ಅಳೆಯಲಾರೆ,ಮರೆಯಲಾರೆ,ತೀರಿಸಲಾರೆ ||

ತನುಮನದಿ ಅಶುದ್ಧಳ ಶುದ್ಧಗೊಳಿಸಿದೆ ಸ್ವಚ್ಛಮೂರುತಿಯೆ |

ಮನದಿ ನೆನೆದಿದ್ದನ್ನು ನಿಜಕೆ ತಂದು ತೋರಿಸಿದೆ ಸಾಕ್ಷಿಯೆ || || 2 ||

ನಿನಗೇನು ಸಂಬಂಧವೆಂದು ಇದೆಲ್ಲವ ಮಾಡಿದೆಯೋ ದಯಾನಿಧೆ

ನಿನ್ನರಿಯದಾದೆ ಒಮ್ಮೆಯಾದರು ನಿನ್ನ ತೋರಿಸಿ ಕೊಡೊ ಅದೃಷ್ಯ ಬಾಂಧವನೇ ||

ಕಣ್ಣಿಗೆ ಕಾಣದಿದ್ದರೂ ಸದಾ ನೆರವಿನ ಹಸ್ತ ಚಾಚಿದ ಅಪ್ರತ್ಯಕ್ಷದೈವವೆ |

ನಿನ್ನ ಇರುವು ಹರವಿನ ಅರಿವು ನೀಡಿ ಸರ್ವವಶತ್ವವ ನಿರೂಪಿಸಿದೆ || ||3||

ದೊಡ್ದ ಗಂಡಾಂತರ ಒದಗಿದಾಗ ಬಿಡದೇ ಚಿಕ್ಕದಾಗಿಸಿ ಸಲಹಿದೆ |

ಬಂದ ನೋವು ಅರಿವಿಗೆ ಬಾರದಂತೆ ಎನಗೆ ಉಣಿಸಿದೆ ||

ಬಿಡದೆ ನಿನ್ನುಪಕಾರವ ಜನುಮ ಜನುಮಕ್ಕೂ ಸ್ಮರಿಸುವಂತೆ ಮಾಡು

ಒಡೆಯಾ ಪ್ರಾಣಸಖ ಶ್ರೀಕೃಷ್ಣವಿಟ್ಠಲ ನಿನ್ನ ಋಣ ತೀರಿಸುವ ಬಗೆ ಹೇಗೆ? ತಿಳಿಸು || ||4||

124. ಅಧಿಕರಾರೈ, ಸಮರಾರೈ ದೇವಾ ನಿನಗಧಿಕರಾರೈ ಸಮರಾರೈ |

ಭೇದ ವಿವರ್ಜಿತನ ಮಹಿಮೆಗಳೇ ಅಧಿಕ, ನಿನ್ನ ಗುಣಗಳೇ ಸಮ ನಿನಗೆ ||

ಸುಂದರರಾರೈ, ಸರ್ವಶಕ್ತರಾರೈ, ನಿನಗಿಂತ ಸುಂದರರಾರೈ ಸರ್ವಶಕ್ತರಾರೈ |

ಸುಂದರಾತಿ ಸುಂದರ ಸಕಲಾವತಾರಗಳು, ಸರ್ವಶಕ್ತನೀನೇ ಶ್ರೀಕೃಷ್ಣವಿಟ್ಠಲ ಸರ್ವದಾ ||

125. ಅನುಗ್ರಹಿಸು, ಅನುಗ್ರಹಿಸು ಎನ್ನ ಬಿಡದೆ ಸದಾ | || ||

ಜನುಮ ಜನುಮದ ಬಂಧು ಅನಿಮಿತ್ತ ಸಖನೇ || || . ||

ನಿತ್ಯದಿ ಸದಾ ನಿನ್ನ ಸ್ಮರಣೆಯಲ್ಲಿರುವಂತೆ |

ಸತ್ಯದಿ ಸಾಧು ಸಜ್ಜನರ ಸಂಗದಲ್ಲಿರುವಂತೆ || || 1 ||

ಚಿತ್ತೈಕಾಗ್ರದಿ ಸುಂದರ ಮೂರುತಿ ನೆನೆವಂತೆ |

ಅತ್ಯಾಸಕ್ತದಿ ಮಂಗಳ ಮಹಿಮೆ ಪಾಡುವಂತೆ || || 2 ||

ಭಕ್ತಿಯು ಮನದಿ ಪ್ರತಿ ಕ್ಷಣ ವೃದ್ಧಿಸುವಂತೆ |

ಮತ್ತೆ ಮತ್ತೆ ಶ್ರೀಕೃಷ್ಣವಿಟ್ಠಲನ ಕಾಣುವಂತೆ || || 3 ||

126. ಹರಿರೂಪದಿ ಗರುಡನ ಮೇಲೇರಿ ಭರ ಭರ್ರನೆ |

ಸರೋವರಕೆ ತೀವ್ರವೇ ಬಂದು ಚಕ್ರದಿಂದ ||

ನಕ್ರನ ಕೊರಳು ಸರ ಸರನೇ ಕತ್ತರಿಸಿ |

ಕರಿರಾಜನ ಪಾಪಗಳ ಕರ ಕರ್ರನೇ ತರಿದು ||

ಶ್ರೀಕೃಷ್ಣವಿಟ್ಠಲ ತನ್ನ ಚರಣದಲ್ಲಿಟ್ಟವನೇ |

ಹರಿದು ಎನ್ನ ಪಾಪವ ಪರ್ರನೇ ಸಂಸಾರದಿಂ ತಾರಿಸು ಕರುಣಾನಿಧಿಯೇ ||

127. ಪ್ರದ್ಯುಮ್ನನೇ ಹಿಂಕಾರನಾಮಕನಾಗಿ ಪ್ರಾಣನಲಿ |

ಉದ್ಗೀಥನಾಮಕ ನಾರಾಯಣ ಚಕ್ಷುವಿನಲಿ ||

ವಾಗೀಂದ್ರಿಯಲಿ ಪ್ರಸ್ತಾವನಾಮಕ ವಾಸುದೇವ |

ಶ್ರೋತ್ರೇಂದ್ರಿಯಲಿ ಪ್ರತಿಹಾರ ನಾಮಕ ಅನಿರುದ್ಧ ||

ನಿಧನನಾಮಕ ಸಂಕರ್ಷಣನು ಮನದಿ |

ಐದು ಇಂದ್ರಿಯಗಳಲಿ ಪಂಚರೂಪಿ ಪರಮಾತ್ಮನ ಉಪಾಸಿಸಿ ||

ಪರೋವರೀಯ ಶ್ರೀಕೃಷ್ಣವಿಟ್ಠಲನು ಮಾಡುವುಪಕಾರವ |

ಪ್ರತಿಕ್ಷಣದಿ ನೆನೆ ನೆನೆದು ಧನ್ಯರಾಗಿರಿ ||

128. ಕ್ಷೀರಸಾಗರಂ ಶೇಷಶಯನಂ, ಲಕ್ಷ್ಮೀಸಂಸೇವಿತಂ |

ಸರ್ವ ಭೂತಚೇಷ್ಟಕಂ, ಸೃಷ್ಟ್ಯಾದಿ ಕರ್ತಾರಂ ||

ಮಹದಾನಂದಂ ವಿಜ್ಞಾನಂ ಪರಮಂ ಸತ್ಯಂ |

ಬ್ರಹ್ಮರುದ್ರೇಂದ್ರಸುರಾದಿಗಣಯೋಗಿವಂದ್ಯಂ ||

ದೋಷದೂರಂ ಅನಂತಂ ಕಲ್ಯಾಣ ಗುಣಪೂರ್ಣಂ |

ವಿಶ್ವಾಧಾರಂ ಓಂಕಾರವಾಚ್ಯಂ ಸುಂದರಂ ||

ಅಘಹರ್ತಾರಂ ದಯಾನಿಧಿಂ ಸಮೀಕ್ಷಂ ಸ್ವಭಾನುಂ |

ಯುಗಪ್ರವರ್ತಕಂ ಶುಭಾಂಗಂ ನಿಖಿಲಾಧೀಶಂ ಸರ್ವಜ್ಞಂ ||

ಅಣೋರಣೀಯಾನ್ ಮಹಿತೋ ಮಹಿಯಾನ್ ಸರ್ವಶಕ್ತಂ |

ಅನಾದಿ ನಿತ್ಯಂ, ಮುಕ್ತಿಪ್ರದಾಯಕಂ ಶ್ರೀಕೃಷ್ಣವಿಟ್ಠಲಂ ಭಜೇ ||

129. ಅನ್ಯನಲ್ಲವೋ ನಾ ನಿನ್ನವಳೇ ಭೇದವೆಣಿಸÂದಿರು |

ಮನದಣಿಯೆ ನೀ ಕೊಟ್ಟರುಂಟು ಇಲ್ಲದಿರೆ ಇಲ್ಲ || || ||

ಎಷ್ಟು ಯಾವಾಗ ಹೇಗೆ ಕೊಡಬೇಕೆಂದು ನಿನಗೆ ಗೊತ್ತು |

ಕಷ್ಟ ಪಟ್ಟರೂ ಬೇಡಿಕೊಂಡರೂ ಸಿಗಲಾರದೆನಗೆ ||

ಬೇಡಿ ಬಡವನೆನಿಸದಿರು ಭವದಿ ಬನ್ನಬಡಿಸದಿರು |

ಕೊಡುವ ಒಡೆಯ ನಿನ್ನ ಇಚ್ಛೆಯೇ ಎನ್ನ ಇಚ್ಛೆ ಆಗಲಿ || || 1 ||

ಸ್ವತಂತ,್ರ ಸರ್ವಜ್ಞ ನಿನಗೆ ನಾ ಹೇಳಲೇಕಿನ್ನು |

ಅತಂತ್ರ ಪರತಂತ್ರಳ ಮಾಡದೇ ಪದತಲದಲ್ಲಿರಿಸಿಕೋ ||

ಹೆಜ್ಜೆ ಹೆಜ್ಜೆಗೆ ಒಜ್ಜೆ ಇಳಿಸಿ ಸನ್ಮತದಿ ನಡೆಸೆನ್ನ |

ಜಜ್ಜಿ ಗೋಜಲು ಬಿಡಿಸಿ ಭಕ್ತಿಮಾರ್ಗದಿ ಸರಳವಾಗಿಸೆನ್ನ || || 2 ||

ತಪ್ಪೆಣಿಸಿ ಕುಟ್ಟದಿರು ಅಘನಾಶನೇ ಸೈರಿಸುಎನ್ನ |

ಒಪ್ಪವಾಗಿ ತಿದ್ದಿ, ಜ್ಞಾನ ಉತ್ತುಂಗಕ್ಕೇರಿಸು ಖರ್ಪರ ಛೇದಕನೆ ||

ಆರು ಅರಿಗಳು ಪರಿಪರಿಯಲಿ ಸಂಸಾರದಿ ಎಳೆಯುತಿರಲು |

ಅರಿತು ತರಿದು ತೀವ್ರ ವೈರಾಗ್ಯ ನೀಡಿ ರಕ್ಷಿಸನವರತ || || 3 ||

ಒದ್ದರೂ, ಹೊಡೆದರೂ ಬಿಡಲಾರೆ ನಾ, ಮಗು ತಾಯಿಗಂಟಿದಂತೆ

ದೇಹಧಾರಿ ನಾನಾದರೇನು, ಆತ್ಮನಿನ್ನದಲ್ಲವೇ? ಸೃಜ್ಯಕಾರಣನೇ ||

ನಿರುತ ಕೃಪೆ ತೋರೊ ಅಂಶ ನಾನು ಅಂಶಿ ನೀನು |

ಸರ್ವೇಶ ಇಷ್ಟ ಬಾಂಧವಾ ಶ್ರೀಕೃಷ್ಣವಿಟ್ಠಲ ಪರಮಗತಿ ನೀಡೆನಗೆ || || 4 ||

130. ಸ್ವಲಕ್ಷಣವಂತ ಭಗವಂತ ಸ್ವಯಂ ವಿಲಕ್ಷಣ |

ಆಳದರಿವಿಲ್ಲದ ಅಗಣಿತ ಗುಣಧಾಮ ||

ಸ್ವಕಾಂತಿ ಪೊಂದಿರುವ ಜ್ಞಾನೀ ಜೌದಾರ್ಯವಂತ |

ಸಕಲಾಧಾರ ಸರ್ವ ಸಂರಕ್ಷಕ ಸ್ವಪ್ರಕಾಶಕ ||

ಸಂಪೂಜ್ಯವಂತ ಅವಿನಾಶ ನಿಶ್ಚಲ |

ಸುಪಾಲಯಾ, ನಿಖಿಲ ಹೃದಯ ಸಂಚಾರಿ ||

ಉತ್ತಮೋತ್ತಮ ಸ್ವತಂತ್ರ ಸ್ವಾಮಿ ನಿತ್ಯ |

(ವೇದ ಹೇಳುವ) ಸಂತತ ವಚನ, ಸತತ ಸುಸೇವ್ಯ ||

ಶುದ್ದ ಬ್ರಹ್ಮ, ಪುರಾಣ ಪುರುಷ ಅಮಿತ ಪರಾಕ್ರಮ |

ಸೌಂದರ್ಯಸಾರ ಶ್ರೀಕೃಷ್ಣವಿಠ್ಠಲ ಸಂಧಾನದಾತಾ ನಮೋ ನಮ: ||

(ಯಮಕಭಾರತ-ಭಾ (32) ರಿಂದ ಪ್ರೇರಿತವಾಗಿ ಬರೆದಿದ್ದು)

131. ನಮಿಸು ಸುಮನ ಸದಾ, ದಾಸರಮಾ ಮಾರರ |

ಮರ್ಮದಿ ಜೊತೆ ತೇಜೋತಮ ಶ್ರೀಕೃಷ್ಣವಿಟ್ಠಲನ ಮತವ ||

132. ಸಿರಿ ತಾ ತಾರಿಸಿ ಸಂಸಾರ, ಸುರಿತಾ ರಸ ಸಾರ |

ಸ್ವರಾಟ, ಸ್ವಸಾರ ಶ್ರೀಕೃಷ್ಣವಿಟ್ಠಲನ ಪ್ರಿಯೆ ದಯದಿ ||

133. ಯಜ್ಞ ಮನದಿ ಜ್ಞೇಯ, ಲಕ್ಷ್ಮೀ ತೀಕ್ಷ ಲಕ್ಷ್ಯ |

ಪ್ರಾಜ್ಞ ಶ್ರೀಕೃಷ್ಣವಿಟ್ಠಲಗೆ ಮನದಿ ನಮೋ ನಮ: ||

134. ಒಂದು ರೂಪದಿ ವಿಶ್ವ ಒಳ ಹೊರ ವ್ಯಾಪಿಸಿ |

ಭೇದವಿಲ್ಲದೇ ಅನೇಕರೂಪ ತಳೆದವಗೆ ನಮೋ ನಮ: ||

ಅಂಶ, ಪೂರ್ಣಾವತಾರವೆಂಬೆರಡು ರೀತಿಯಲಿ ತಾ |

ಶೇಷ, ರಮಾದಿರೊಳಗಿದ್ದು ಜಗದ್ರಕ್ಷಕನಾದವನಿಗೆ ನಮೋ ನಮ: ||

ಮೂರುರೂಪದಿ ಜಾಗ್ರತ, ಸ್ವಪ್ನ, ಸುಷುಪ್ತಿ ನೀಡುವ | (ವಿಶ್ವ,ತೈಜ,ಸಪ್ರಾಜ್ಞ)

ಮೂರು ರೂಪದಿ ಹೃದಂiÀiದಿ ನೆಲಸಿ ಸಂಚರಿಪಗೆ ನಮೋ ನಮ: || (ಅಗ್ರೇಶ,ಮೂಲೇಶ ಪಾದೇಶ)

ಮೂರು ನಾಮದಿ ಪಾಪ ಸಂಹಾರಕನೆನಿಸಿದ ಸರ್ವೋದ್ಧಾರಕ |

ಕರ್ಮ ಲೋಪ-ದೋಷಗಳ ತಿದ್ದುವಗೆ ನಮೋ ನಮ: || (ಅಚ್ಯುತಾನಂತ ಗೊವಿಂದ)

ವಿಚಿತ್ರ ಸೃಷ್ಟ್ಯಾದಿ ಕರ್ತ, ನಿಯಾಮಕ ನಾಲ್ಕು ರೂಪದಿ ಭರಿಸಿ | (ಸಂಕರ್ಷಣಾದಿ)

ಪಂಚರೂಪದಿ ದೇಹ ವ್ಯಾಪಿಸಿ ಕರ್ಮವೈದಿಸುವಗೆ ನಮೋ ನಮ: ||

ಅಜಾದಿ ಐವತ್ತೊಂದು ಶಬ್ದರೂಪದಿ ಸೇವಿಸಲ್ಪಡುವವನೇ |

ನಿಜದಿ ಶತ, ಸಹಸ್ರನಾಮಾವಳಿಂದ ಪೊಗಳ್ಪಡುವವನೆ ನಮೋ ನಮ: ||

ಬಾಲರೂಪದಿ ಜಲದಿ ಆಲದೆಲೆ ಮೇಲೆ ಪವಡಿಸಿ |

ಲೀಲೆಯಲಿ ಕ್ರೀಡಿಸುವ ಯುಗಪ್ರವರ್ತಕಗೆ ನಮೋ ನಮ: ||

ಅಗಣಿತರೂಪ, ಅಗಣಿತ ನಾಮದಿ, ಪೂರ್ಣತಿಳಿಯಲಾಗದ |

ಖಗಪತಿ ಶ್ರೀಕೃಷ್ಣವಿಟ್ಠಲ ಸ್ವಯಂ ವ್ಯಕ್ತಾವ್ಯಕ್ತಗೆ ನಮೋ ನಮ: ||

135. ಸುಖ ಸ್ವರೂಪನೇ, ಶೇóಷಶಾಯಿಯೇ |

ಪಂಕಜನಾಭನೇ, ಸುರಚಕ್ರವರ್ತಿಯೇ ||

ಜಗದಾಶ್ರಯನೆ, ಆಕಾಶಾಧಿಪತಿಯೆ |

ನೀಲವರ್ಣನೇ, ಸುರಸುಂದರನೇ ||

ರಮಾಪತಿಯೇ, ಅರವಿಂದನಯನೇ |

ಯೋಗಿ,ಧ್ಯಾನಿಗೋಚರಿಪನೇ, ಸಂಸಾರ ಭಯತಾರಕನೇ||

ಶ್ರೀಕೃಷ್ಣವಿಟ್ಠಲನೇ ನಮೋ ನಮ: ||

136. ನಾನೊಂದು ಹುಲು ಮಾನವ ಎನ್ನಿಂದೇನು ಸಾಧ್ಯವೋ | || ||

ಎನ್ನಲಿ ನೀನಿಂತು ಮಾಡಿಸಿದ ಕರ್ಮದ ಸುಫಲ ಜಯ ಎನ್ನದೆ?|| ||ಅಪ||

ಸಕಲ ವಸ್ತುಗಳ ಒಳ-ಹೊರಗೆ ವ್ಯಾಪುತ ಸರ್ವದಾ |

ಸಕಲ ವಸ್ತುಗಳೊಳಗಿನ ಶಕ್ತಿ, ಗುಣ ನೀನೇ ||

ಅಖಿಲ ಜಗತ್ ಸೃಷ್ಟಿ-ಲಯ-ಪಾಲನಕರ್ತನೆ |

ಮಂಕು ಬುದ್ಧಿ, ಅರಿಯದೇ ನಾನೇ ಮಾಡಿದೆ ಎನ್ನುವೆ || || 1 ||

ಪ್ರತಿಯೊಂದು ಕ್ಷಣದಲ್ಲೂ ನೀನಿರುವಿ ನೀನಿರದ ಕಾಲವಿಲ್ಲ |

ಪ್ರತಿಯೊಂದು ತಾವಿನಲ್ಲೂ ನೀನಿರುವಿ ನೀನಿರದ ತಾವಿಲ್ಲ ||

ಪ್ರತಿಯೊಂದು ಅಂಗಾಂಗದಿ ನೀನಿದ್ದು ಕಾರ್ಯಮಾಡಿಸುವೆ |

ಪ್ರತಿಯೊಂದು ಕಾರ್ಯದ ಉದ್ದೇಶ-ಆರಂಭ-ಕೊನೆ ನೀನೇ || || 2 ||

ಕ್ಷಣವೂ ಬಿಡದೇ ಜೀವಿಯ ಜೊತೆಗಾರ ಸರ್ವರಕ್ಷಕ |

ಕಣ ಕಣದಿ ಇದ್ದು ಅದರ ಅರಿವುಮೂಡಿಸುವೆ ||

ಬಣ್ಣ ಬಣ್ಣದ ಜಗತ್ತಿನ ರೂಪಕಂಡು ಮರುಳಾಗಿ |

ಒಣ ಪ್ರತಿಷ್ಠೆ, ಧನ, ಬಾಂಧವರ ಬೆನ್ಹತ್ತಿ ನಿನ್ನ ಮರೆತಿರುವೆ || || 3 ||

ಎನ್ನ ಅದೃಷ್ಟದ (ಪಾಪ ಪುಣ್ಯ) ಫಲ ಎನಗೇ ಉಣಿಸುವಿ ಅದೃಶ್ಯದಿ |

ನೀ ನೀಡುವೆ ಸರಿಯಾದ ಕಾಲಕ್ಕೆ ಭಾಗ್ಯವನನುಸರಿಸಿ ನಿಷ್ಪಕ್ಷಪಾತಿ ||

ಜನರ ನಿಂದಿಸಿ ಫಲವೇನು? ಅವರೊಳು ನಿಂತು ನೀನೇ ಮಾಡಿಸುವಿ |

ಮುನ್ನವೇ ಬರೆದಿಟ್ಟ ಹಣೆ-ಬರಹ ಅಂದಿಗಂದಿಗೆ ತೋರಿಸುವಿ || || 4 ||

ಒಮ್ಮೆ ಇಲ್ಲಿರಿಸುವೆ ಮತ್ತೊಮ್ಮೆ ಎಲ್ಲೋ ಇರಿಸುವಿ |

ಒಮ್ಮೆ ಸಕಲ ಸೌಭಾಗ್ಯ ಹರುಷವಿತ್ತು ಕ್ಷಣದಿ ಅಪಹರಿಸುವಿ ||

ಒಮ್ಮೆ ನಗಿಸುವಿ ಮತ್ತೊಮ್ಮೆ ಅಳಿಸುವಿ ಸೂತ್ರಧಾರನೇ |

ಸ್ವಾಮಿ, ಶ್ರೀಕೃಷ್ಣವಿಟ್ಠಲ ನೀ ಮಾತ್ರ ಮೂಕಸಾಕ್ಷಿ ಸಕಲ ಆಗುಹೊಗುಗಳಿಗೆ|| ||5||

137. ದಟ್ಟೋ ದಟ್ಟೋ ಹೆಜ್ಜೆಯಿಕ್ಕುತಾ ಅಂಗಳದಲ್ಲಾಡ ಬಾರೋ |

ಪುಟ್ಟ ಪುಟ್ಟ ಪಾದ ಚಿನ್ಹೆ ಎಲ್ಲ ಕಡೆ ಮೂಡಿಸೊ ||

ದೃಷ್ಟಿ, ಮನ, ಶ್ರವಣವೆಂಬ ಗೆಜ್ಜೆಗಳ ಪೋಣಿಸಿ |

ಗಟ್ಟಿಯಾಗಿ ನಿನ್ನಕಾಲಿಗೆ ಕಟ್ಟುವೆ ಕುಣಿಯೋ ||

ಸೊಟ್ಟಗಿರುವ ಎನ್ನ ಹೃದಯ ತಿದ್ದಿ ಸರಿಯಾಗಿಸೋ |

ಇಷ್ಟಪಡುವ ನಿನ್ನ ಮೂರುತಿ ನೆಟ್ಟಗೆ ನಿಲ್ಲಿಸೋ ||

ಕಷ್ಟಪಟ್ಟು ಬಂದದ್ದು ವ್ಯರ್ಥವಾಗದಂತೆ ಮಾಡೊ |

ಪುಟ್ಟಿಸಿದಕ್ಕೆ ಇಷ್ಟು ಮಾತ್ರ ಸಲಹೋ ಶ್ರೀಕೃಷ್ಣವಿಟ್ಠಲರಾಯಾ ||

138. ಓಂಕಾರ ಸ್ವರೂಪ ಶಾಂತಸ್ವಭಾವ |

ಲೋಕೈಕ ಸುಂದರ ಮೂಲ ಪುರುಷೋತ್ತಮ ||

ಭಕ್ತ ಜನರೋದ್ಧಾರ ಸತ್ಯವಚನ ಪರಿಪಾಲಕ |

ಶ್ರೀಕೃಷ್ಣವಿಟ್ಠಲನೇ ಸರ್ವಕಾರ್ಯಕಾರಣ, ಕರ್ತ ||

139. ನಿನ್ನ ಸ್ಮರಣೆಯ ಮರೆಯದೇ ದಯಪಾಲಿಸೋ | || ||

ನಾರಾಯಣ ನಿನ್ನ ಪ್ರೇರಣೆಯಿಲ್ಲದೇ ದೊರೆಯದೋ ಭಾಗ್ಯ | ||ಅಪ||

ಜ್ಞಾನಿ ನೀನು ಅಜ್ಞಾನಿ ನಾ ನಿನ್ನ ಗುಣಗಳರಿಯೆ |

ಭಕ್ತಿಗೆ ಒಲಿದು ಮುಕ್ತಿಯ ನೀಡುವ ಮುಕುಂದನೇ | || 1 ||

ಅನಂತಗುಣಗಳ ಮಹಿಮನೇ, ಭವ ಪಾಶಮೋಚಕನೇ |

ಪಂಚಭೇದ ಜ್ಞಾನಕೊಟ್ಟು ಸಲಹೋ ಕರುಣಾಕರನೇ | || 2 ||

ನನ್ನನು ಅರಿಯೆ ನಿನ್ನನು ತಿಳಿಯೇ ಸ್ವತಂತ್ರನೇ |

ಸೂತ್ರಧಾರಿ ಶ್ರೀಕೃಷ್ಣವಿಟ್ಠಲ ಎಲ್ಲಾ ನೀನಾಡಿಸಿದಂತೆಯೇ | || 3 ||

140. ಈಶನೀನು, ನಿನ್ನದಾಸಿ ನಾನು |

ನೀನು ನಡೆಸಿದಂತೆ ನಡೆವೆ ನಾನು ||

ಚಲಿಸಿದರೆ ಚಲಿಸುವೆನು |

ಮಲಗಿಸಿದರೆ ಮಲಗುವೆ ||

ಬಿಂಬನೀನು, ಪ್ರತಿಬಿಂಬ ನಾನು |

ಡಿಂಬದ ಇಂದ್ರಿಯಗಳ ವ್ಯಾಪಾರನಡೆಸುವ ||

ನಿನ್ನ ಚರಣಕೆ ಶರಣಾಗಿರುವೆ |

ಶ್ರೀಕೃಷ್ಣವಿಟ್ಠಲನೇ ಎನ್ನ ಉದ್ಧರಿಸೋ ||

141. ನಮಿಪೆ ಶ್ರೀಹರಿಯ ಪಾದಪದ್ಮಕೆ, ಮುಕ್ತಿಪಥ ತೋರುವ ಪಾದ |

ಅಮಿತ ಸೂರ್ಯ ಸಮಪ್ರಭ, ನಖಕಾಂತಿಯುಕ್ತಪಾದ ||

ಋಷಿ, ಮುನಿಯಿಂ ವಂದಿತಪಾದ, ಶಂಖ-ಚಕ್ರಾಂಕಿತ ಪಾದ |

ಜಾನ್ಹವಿ ಜನಕಪಾದ, ಸರ್ವಲೋಕಂಗಳ ಅಳೆದಪಾದ ||

ನಖದಿಂ ಭೂಮಿಯ ಮೆಟ್ಟಿದಪಾದ, ಜಾನಕಿ ಸೇವಿತ ಸೌಭಾಗ್ಯಪಾದ |

ಅಹಲ್ಯೋದ್ಧಾರಕ ಪಾದ, ಕಪಿ ವರಹನುಮಂತ ಪೂಜಿತ ಪಾದ ||

ಸುರರು ಸದಾ ಹೃನ್ಮನದಿ ನೆನೆಯುವ ಪಾದ |

ಭಕ್ತಿಗೊಲಿದು ದಯಪಾಲಿಸುವ ಶ್ರೀಕೃಷ್ಣವಿಟ್ಠಲನ ಪಾದ ||

142. ಮಾಡಿದ ಕರ್ಮವ ಕೇಶವಗರ್ಪಿಸಿ ನಿಸ್ವಾರ್ಥದಿ |

ಕ್ಲೇಶವ ಕಳೆವ ನಿಜ ಮರ್ಮವ ತಿಳಿಯಿರೋ ||

ಬಿದ್ದುಹೋಗುವ ದೇಹದ ಬಾಧೆಗೆ ಸಿಲುಕದೆ ಚಿತ್ತಶುದ್ಧಿಯ ಕಾಣಿರೋ |

ನಡೆ-ನುಡಿ ಒಂದಾಗಿ, ದಾನ-ಧರ್ಮವಗೈದು, ದಯಾವಂತರಾಗಿ ||

ತನುಶುದ್ಧಿಗಾಗಿ ವ್ರತ-ನೇಮ ಆಚರಿಸಿ, ನಿರ್ಮಲರಾಗಿ |

ಮನ:ಶುಚಿಗಾಗಿ, ಸತ್ಯಸಾಧಕರಾಗಿ ಸಜ್ಜನ ಸಂಗದಿ ||

ಒಡೆಯ ಶ್ರೀಕೃಷ್ಣವಿಟ್ಠಲನ ಮೆಚ್ಚಿಸಿ ಶಾಶ್ವತಪದ ಪಡೆಯಿರೋ||

143. ಅನವರತವೂ ನಿನ್ನ ಗುಣಗಳನ್ನೇ ಪಾಡುತ್ತಿರಲಿ ವದನ |

ನಿನ್ನ ನಾಮಸಂಕೀರ್ತನೆಯನ್ನೆ ಪೇಳಲಿ ಜಿಹ್ವೇ ||

ನಿನ್ನ ಹೆಸರನ್ನೇ ಜಪಿಸಲಿ ಶ್ವಾಸವು |

ನಿನ್ನ ಕಥೆಯನ್ನೇ ಕೇಳಲೀ ಕಿವಿಗಳು ||

ನಿನ್ನನು ಬಗೆ ಬಗೆಯಲಿ ಚಿಂತಿಸಲಿ ಮನವು |

ಒಳ-ಹೊರಗೂ ಸದಾನಿನ್ನನೇ ಕಾಣುವಂತಾಗಲಿ ಕಂಗಳು ||

ಯಾವಾಗಲೂ ನಿನ್ನ ಕೆಲಸವೇ ಮಾಡಲಿ ಕೈಗಳು |

ಎಲ್ಲಿ ಹೋದರೂ ನಿನ್ನ ಬಳಿಗೆ ನಡೆಯಲಿ ಕಾಲ್ಗಳು ||

ನಿಜ ಭಕುತರ ಸಂಗ ದೂರೆತು ನಿತ್ಯದಲಿ |

ಶ್ರೀಕೃಷ್ಣವಿಟ್ಠಲನಲಿ ಅನನ್ಯರತಿ, ಅನ್ಯರಲಿವಿರೆಕ್ತಿ ಆಗಲಿ ||

144. ಸರ್ವವ್ಯಾಪುತನಿಗೆ, ಗುಡಿಯಿಂದೇನು ಫಲ? |

ಮಂಗಳಮೂರ್ತಿಗೆ, ಮಂಗಳಾರತಿಯಿಂದೇನು ಫಲ? ||

ಪುಣ್ಯಶ್ಲೋಕನಿಗೆ, ಸ್ತೋತ್ರಗಳಿಂದೇನು ಫಲ? |

ಸರ್ವಭಕ್ಷಕನಿಗೆ, ನೈವೇದ್ಯದಿಂದೇನು ಫಲ? ||

ಲಕ್ಷ್ಮೀಪತಿಗೆ, ದಕ್ಷಿಣೆಯಿಂದೇನು ಫಲ? ||

ಸ್ವಯಂಭೂಷಿತನಿಗೆ, ಅಲಂಕಾರದಿಂದೇನು ಫಲ? |

ಶೇಷಶಯನಿಗೆ, ಶಯನೋತ್ಸವದಿಂದೇನು ಫಲ? ||

ಜಗತ್ತೇ ತೂಗುವವಗೆ, ತೊಟ್ಟಿಲುಸೇವೆಯಿಂದೇನು ಫಲ? |

ಅನ್ನ ಬ್ರಹ್ಮನಿಗೆ, ಅನ್ನ ಸಮರ್ಪಣೆಯಿಂದೇನು ಫಲ? ||

ಹೃದಯದಲ್ಲಿರುವಗೆ, ಮಂಟಪದಿಂದೇನುಫಲ? |

ಸದ್ಗುಣಗಳ ಖನಿಯಾದ ಶ್ರೀಕೃಷ್ಣವಿಟ್ಠಲಗೆ ||

ಭಕ್ತಿಯಿಂದ ಸರ್ವಸಮರ್ಪಣೆ ಮಾಡಿ ಧನ್ಯರಾಗಿರೋ ||

145. ಕೇಶವ ನಾರಾಯಣ ಮಾಧವ ಗೋವಿಂದಾ ಎನೆ ಸಂಸಾರ ಭವತಾರಕ |

ವಿಷ್ಣುಮಧುಸೂದನ ತ್ರಿವಿಕ್ರಮ ವಾಮನ ನೆನೆದರೆ ಸರ್ವತ್ರರಕ್ಷಿಪ ||

ಶ್ರೀಧರ ದಾಮೊದರ ಹೃಷಿಕೇಶ ಪದ್ಮನಾಭ ಎನೆ ಹೃದಯದಿವಾಸಿಪ |

ಸಂಕರ್ಷಣ ವಾಸುದೇವ ಪ್ರದ್ಯುಮ್ನ ಅನಿರುದ್ಧ ಎನೆ ಆತ್ಮೋದ್ಧಾರಮಾಳ್ಪ ||

ಪುರುಷೋತ್ತಮ ಅಧೋಕ್ಷಜ ನಾರಸಿಂಹ ಸ್ವಾಮಿ ಅಚ್ಯುತವೆನೆ ದುರಿತಪರಿಹಾರಕ |

ಜನಾರ್ದನ ಉಪೇಂದ್ರ ಹರೀ ಶ್ರೀಕೃಷ್ಣವಿಟ್ಠಲವೆನೆ ಸಾಯುಜ್ಯದಯಪಾಲಿಪ ||

146. ಮೂಲರೂಪ ಶ್ರೀಹಯಗ್ರೀವ ಜ್ಞಾನಪ್ರದಾಯಕ ಪುಣ್ಯರೂಪ |

ಮತ್ಸ, ಕೂವರ್i, ವರಾಹ ಜಗದೋದ್ಧಾರಕ ರೂಪ ||

ನಾರಸಿಂಹ, ವಾಮನ, ಭಾರ್ಗವ ಅಸುರೀಶಕ್ತಿ ದಮನ |

ಬುದ್ಧ, ಕಲ್ಕೀ, ರೂಪ ಅಜ್ಞಾನ ನಾಶಕ ||

ದಶಾವತಾರಸ್ತುತೀ ಸುಖದಾಯಕ ಸರ್ವದಾ |

ಶ್ರೀಕೃಷ್ಣವಿಟ್ಠಲನ ಪಾದದಾಣೆಗೂ ಇದು ಸತ್ಯ ||

ಶ್ರೀ ಕೃಷ್ಣವಿಠ್ಠಲಪದಗುಚ್ಛ 3 ಅನುಕ್ರಮಣಿಕಾ

147. ನಿನ್ನನ್ನೆ ನಂಬಿರುವೆ ನಂಬಿಸಿ ಕೈಬಿಡಬೇಡಾ || ||

ಹೆಜ್ಜೆಹೆಜ್ಜೆಗೆ ಭಯ ತರುವ ಜನ್ಮಚಕ್ರವ ತಪ್ಪಿಸಿ ಅಭಯವೀಯೆಯ ||ಅಪ||

ಭವಬಂಧಪಾಶದಿ ಸಿಲುಕಿ ನಲಗುತ್ತಿರುವೆನೆಗೆ |

ಬಂಧಮೋಕ್ಷಕರುಣಿಸಿ ಸಾಯುಜ್ಯವೀಯೆಯಾ ||

ಕರುಣಾಕರ ನೀ ಕವರ್iಬಂಧವ ತಪ್ಪಿಸಿ |

ಸದಾಎನ್ನ ಹೃದಯದಲ್ಲಿ ನೆಲಸೆಯಾ | || 1 ||

ಸರ್ವದೇವರದೇವ ಸಜ್ಜನೋದ್ಧಾರಕ, ಸಕಲವ ಮನ್ನಿಸಿ ಸಲಹಲಾರೆಯಾ ||

ಮುಗಿಯಲಾಗದ ಪಯಣದ ಅಂತವೆಂತೋ ನಾನರಿಯೇ |

ಆದಿ-ಅಂತ್ಯವಿರದ ಅನಂತ ಗುಣಪೂರ್ಣ ಶ್ರೀಕೃಷ್ಣವಿಟ್ಠಲ

ಸದಾ ಎನ್ನ ಜೊತೆಗಿರಲಾರೆಯಾ | || 2 ||

148. ಎನ್ನ ಜೀತಕಿಟ್ಟು ಕೊಳ್ಳೋಮಹರಾಯಾ, ಜೀಯಾ | || ||

ನಿನ್ನ ಪಾದ ಸೇವೆಯಮಾಡಿ, ನಿನ್ನನ್ನೆ ಓಲೈಸುವೆನು |

ಸರ್ವಕಾಲದಿ ನಿನ್ನ ಒಂದರಗಳಿಗೆ ಬಿಟ್ಟಿರೆನೋ || ಜೀಯಾ || || 1 ||

ತಿನ್ನುವ ಉಡುವ ಆಶೆಎನಗಿಲ್ಲಾ, ಬೇರೆಡೆಹೋಗಲು ಮನಸಿಲ್ಲಾ |

ಹೊಡೆದರೂ ಒದೆದರೂ ನೀನೆ ಗತಿ ಎಂಬೆ || ಜೀಯಾ || || 2 ||

ಒಂದು ಕ್ಷಣ ನೀ ಎನ್ನ ನೋಡಿದರೂ ಸಾಕಯ್ಯಾ|

ಏನನ್ನೂ ಬೇಡೆನು ನಿನ್ನಹೊರತು ಶ್ರೀಕೃಷ್ಣವಿಟ್ಠಲ || ಜೀಯಾ | || 3 ||

149. ನಿನ್ನ ದಾಸನ ದಾಸನಂತೆ ಸೇವೆ ಮಾಳ್ಪೆ |

ನಿನ್ನ ಪಾದದಲ್ಲೇ ಸೇರಿಸಿಕೋ ಪಾಂಡುರಂಗ ||

ತನು ಮನ ನಿನ್ನದೇ, ಎಂದೆಂದೂ ಪ್ರತಿ ಜನುಮದಲ್ಲೂ |

ನಿನ್ನ ಕಾಣುವಂತಾಗಲಿ ಶ್ರೀನಿವಾಸ ಬಿನ್ನಹವಿದೊಂದೇ ||

ನಾ ನಿನ್ನ ಧರಿಪೆ ಸದಾ | ನಿ ಎನ್ನ ಭರಿಸೋ ಶ್ರೀಕೃಷ್ಣವಿಟ್ಠಲ || ಜೀಯಾ ||

150. ನಾನೆಂತು ಪೊಗಳಲಿ ನಿನ್ನನು ನಾನೆಂತು ವರ್ಣಿಸಲಿ | || ||

ಸಹಸ್ರಶೀರ್ಷ ನೀನು, ಒಂದೇ ತಲೆ ನನ್ನದು ಹೇಗೆ ಯೋಚಿಸಲಿ |

ಸಹಸ್ರಾಕ್ಷ ನೀನು, ಒಂದೇ ದೃಷ್ಟಿ ನನ್ನದು ಹೇಗೆ ಕಾಣಲಿ ||

ಸಹಸ್ರಪಾದನೀನು, ಒಂದೇ ನಡುಗೆ ನನ್ನದು ಹೇಗೆ ನಡೆಯಲಿ | || 1 ||

ಅನಾದಿ ಮೂರುತಿ ನೀನು, ಕ್ಷಣಭಂಗುರ ನಾನು ಹೇಗೆ ತಿಳಿಯಲಿ |

ಸಮದರ್ಶಿನೀನು, ಸ್ವಾರ್ಥದ ಪರಾಕಾಷ್ಠೆ ನಾನು ಹೇಗೆ ಸರಿ ಇರಲಿ ||

ಅನಂತ ಗುಣಸಾಂದ್ರ ನೀನು, ಅವಗುಣಗಳ ಗೂಡು ನಾನು ಹೇಗೆ ವಿಮರ್ಶಿಸಲಿ | || 2 ||

ಸುಜ್ಞಾನ ಸರ್ವವಿದಿತ ನೀನು, ಅಜ್ಞಾನದ ಆಗರ ನಾನು ಜ್ಞಾನವ್ಹೇಗೆ ತಿಳಿಯಲಿ |

ಸೃಷ್ಠಿ ಸ್ಥಿತಿ ಲಯಕರ್ತ ನೀನು, ಸ್ವಾತಂತ್ರವಿಲ್ಲದವ ನಾನು ಏನು ಮಾಡಲಿ ||

ಸವೋತ್ತಮನಾದ ಶ್ರೀಕೃಷ್ಣವಿಟ್ಠಲ ನಾನೇನೆಂಬುದು ನಿನಗೆ ತಿಳಿಯದೆ || 3 ||

151. ಸರ್ವವೇದ ಸಾರ ತಿಳಿಯಿರೋ ಜಗದೊಳು |

ಮಾನವ ಜನ್ಮದಿ ಪಾವನರಾಗಿರೋ | || ||

ಕೃಷ್ಣನ ಸ್ಮರಿಸಿರೋ ಶ್ರೀಹರಿಯ ಭಜಿಸಿ ಬದುಕಿರೋ |

ವಿಷ್ಣುವಿನ ನಮಿಸಿರೋ ಅಚ್ಯುತನಾಶ್ರಯಿಸಿ ಬಾಳಿರೋ ||

ಶೌರಿ ಕಥಾಶ್ರವಣಮಾಡಿ ಪುಣ್ಯದಿ ಶ್ರೀಪತಿ ವಿಗ್ರಹನೋಡಿರೋ | || 1 ||

ಶ್ರೀಪಾದತುಳಸಿ ಆಘ್ರಾಣಿಸಿ, ವೈಕುಂಠಪತಿಯ ಮನಮುಟ್ಟಿ ಭಜಿಸಿರೊ |

ಕೇಶವನ ನೈವೇದ್ಯ ಭುಂಜಿಸಿ, ನಿತ್ಯಮಾಧವನ ಸಂಗದಿ ಇರೆ ||

ಮಂಗಳಮೂರ್ತಿ ಶ್ರೀನಾರಾಯಣಮಂತ್ರ ಉಸಿರಾಗಿಸಿ ಜಪಿಸಿರೋ || 2 ||

ಕ್ಷಮೆಯೇ ತಪಸ್ಸಾಗಿಸಿ ನಿತ್ಯ ಹಿತವಾದ ಸತ್ಯವ ನೇಮವಾಗಿಸಿ |

ಐಹಿಕ ಸುಖವ ತೊರೆದು ಸದಾ ಸಜ್ಜನ ಸಂಗವಬಯಸಿ ||

ಸರ್ವರಲಿ ದಯೆಯಿರಲಿ ಧರ್ಮಾಚರಣೆಯಲಿ ಮನವಿರಲಿ | || 3 ||

ಆತ್ಮ ಅಮರ ದೇಹ ನಶ್ವರವೆಂಬ ಸುಜ್ಞಾನವಿರಲಿ |

ಸತ್ಯಜಗದಿ ಶುದ್ಧಾನಂದಗೆ ಸರ್ವ ಸಮರ್ಪಿಸಿ ಧನ್ಯರಾಗಿರಿ ||

ಸರ್ವ ವೇದಾರ್ಥದ ಸಾರವೇ ಇದೆಂದು ತಿಳಿಯಿರಿ | || 4 ||

ಸರ್ವರಲಿ ನರಹರಿಯ ಚಿಂತಿಸಿ ಸದಾನಂದ ಪೊಂದಿರೋ |

ಏಕಮೇವಾದ್ವಿತೀಂiÀi ನಾರಾಯಣನ ಸಮರಾರಿಲ್ಲಾ ||

ಎಂಬ ಸತ್ಯವಾಕ್ಯ ಶ್ರೀಕೃಷ್ಣವಿಟ್ಠಲನ ಪಾದದಾಣೆಗೂ ಸತ್ಯ | || 5 ||

152. ದರ್ಶನ ಭಾಗ್ಯ ಕರುಣಿಸೋ ಬೇಗ ಶ್ರೀಹರಿಯೇ |

ಸ್ವರ್ಣರತ್ನಾಭರಣ ಕಿರೀಟ ಭೂಷಿತ | || ||

ಪೂರ್ಣಗುಣಾಖಿಲ ನಿಜಭಕ್ತ ವತ್ಸಲ |

ಸರ್ಪಶಯನ ಲಕ್ಷ್ಮೀಪತೀ ಶ್ರೀವತ್ಸ | || ಅಪ ||

ಸರ್ವೋತ್ತಮ ಸೃಷ್ಟಿ, ಸ್ಥಿತಿ ಲಯ ಕರ್ತ |

ಸರ್ವಜ್ಞ ಸುಜ್ಞಾನ ಪ್ರದಾಯಕ ||

ಸರ್ವ ಪ್ರೇರಕಶ್ಚ ಭೇದ ಭಾವ ವರ್ಜಿತ |

ಸರ್ವವಂದಿತ ಸುಜನ ಪೂರೆವ ||

ಸರ್ವಕಾಲಿಕ ಜಗದ್ರಕ್ಷಕ |

ಸರ್ವವ್ಯಾಪ ವಿಶ್ವಧಾರ್ಯಕ | || 1 ||

ಕರ್ಮಾಕರ್ಮ ಬಂಧಕ ಮೋಚಕ ||

ಸರ್ವಸಮರ್ಥ ದೋಷವಿದೂರ |

ಸರ್ವಕ್ರಿಯಾ ವಿಶೇಷಾಭಿನ್ನ ||

ಸರ್ವಸಂಕಲ್ಪ ಮಹಿಮಾತೀತ |

ಇಚ್ಛಾಮಾತ್ರ ಸರ್ವ ಕಾರ್ಯಸಿದ್ಧಿ | || 2 ||

ಸರ್ವಾವತಾರ ಭೇದ ವಿವರ್ಜಿತ |

ಸವೋತ್ತಮಸ್ಯ ಸದಾ ಪರಮಾಗತಿದಾತಾ ||

ಸರ್ವವೇದಶಾಸ್ತ್ರ ರಚಿತ |

ಸರ್ವಾಕ್ಷರ ಪ್ರತಿಪಾದಿತ ಸದಾ ||

ಗುರ್ವಾದಿ ವಾಯುಬ್ರಹ್ಮನಿಂ ಪೂಜಿತ |

ಮಮ ಶ್ರೀಕೃಷ್ಣವಿಟ್ಠಲ ಪ್ರವರ ಸರ್ವತ್ರ | || 3 ||

153. ಭಕ್ತಿಯ ಅಗಳು ತಿನ್ನುವನೇ ಅಕ್ಷಯ ಫಲದಾತ |

ಮೂರುಹೆಜ್ಜೆ ಭೂಮಿ ಬೇಡುವನೆ ತ್ರಿಲೋಕದೊಡೆಯ ||

ಬೆಣ್ಣೆ ಮೊಸರು ಕದಿಯುವನೇ ಕ್ಷೀರಸಾಗರಶಾಯಿ |

ತಂದೆ, ತಾಯಿ ಬಯಸುವನೇ ಸರ್ವ ಲೋಕಪಾಲಕ ||

ಅಧರ್ಮದಿ ಯುದ್ಧ ಮಾಡುವನೇ ಧರ್ಮಜನಕ |

ಜಾರನೆಂಬುವರೇ ಪತಿತೋದ್ಧಾರಕನಿಗೆ ||

ಕಾಲಯುವನಿಗಂಜುವನೆ ರಾಕ್ಷಸ ಕುಲಾಂತಕ |

ಮಡದಿಯ ಮೋಹವೇ ಮೋಹಿನಿ ರೂಪಧಾರಿಗೆ ||

ದೋಷ ಕಲ್ಪಿಸುವರೇ ನಿರ್ದೋಷನಿಗೆ |

ಅಳಿವುಂಟೇ ಸಂಕಲ್ಪ ಮಾತ್ರದಿ ಸೃಷ್ಟಿ, ಲಯ ಮಾಳ್ಪಗೆ ||

ಭಕ್ತಿಯಿಂ ಕರೆಯೇ ಓಡೋಡಿ ಬರುವ ನಮ್ಮ ಶ್ರೀಕೃಷ್ಣವಿಟ್ಠಲ ||

154. ಆಶಾಪಾಶಾ ಕ್ಲೇಶ ಕಳೆದು ಪದಸಮೀಪದಲ್ಲಿಡು ಪುರುಷೋತ್ತಮದೇವಾ|

ಹರ್ಷಚಿತ್ತನಾಗಿ ನಿನ್ನ ಸದಾ ಸ್ಮರಿಸುವಂತೆ ಮಾಡು ಹೃಷೀಕೇಶ ||

ಬುದ್ಧಿ ಶೂನ್ಯ ಕಳೆದು ದುರ್ಬುದ್ಧಿಯ ಬಿಡಿಸು ಪ್ರೇರಕ ಪ್ರದ್ಯುಮ್ನ |

ಆಧ್ಯಾತ್ಮವಿದ್ಯೆ, ಸತ್ಯ ಜ್ಞಾನ ಕೊಟ್ಟು ನಿತ್ಯ ಕಾಪಾಡು ಅಧೋಕ್ಷಜ ||

ಸದ್ಬುದ್ಧಿ ಕೊಟ್ಟು ಸಂಕಟ ಬಾರದಂತೆ ನೋಡಿಕೋ ಸಂಕರ್ಷಣ |

ಅನಿತ್ಯ ಸಂಸಾರದಲ್ಲಿ ತೊಳಲಾಡುವುದು ತಪ್ಪಿಸಿ ನಿತ್ಯ ಲೋಕದಲ್ಲಿರಿಸು ||

ಶ್ರೀಕೃಷ್ಣವಿಟ್ಠಲ ನೀ ಎನ್ನ ತಂದೆ ಜನುಮ ಜನುಮಕೂ ||

155. ಜಗವ ಮೆಚ್ಚಿಸಲರಿಯೇ ನಾನಿನ್ನ ಮೆಚ್ಚಿಸಲರಿಯೇ ಹರಿ | || ||

ಅರ್ಚಿಸಲರಿಯೇ ನಿನ್ನಪೂಜಿಸಲರಿಯೇ |

ಸ್ತೋತ್ರ, ವ್ರತವ ಏನೊಂದು ನಾ ಅರಿಯೇ | || 1 ||

ನಿನ್ನ ನಾಮಸ್ಮರಣೆ ಸದಾ ಎನ್ನ ನಾಲಿಗೆಯಲ್ಲಿರಲಿ |

ಮನದ ವೀಣೆಯು ನಿನ್ನ ಸ್ಮøತಿಯ ಝೇಂಕಾರ ಮೀಟಲಿ | || 2 ||

ಧೃಡಭಕುತಿಯ ಕರುಣಿಸು ನಿನ್ನ ಚರಣಕಮಲದಿ |

ಶ್ರೀಕೃಷ್ಣವಿಟ್ಠಲ ಮುಕ್ತಿಪಥವ ತೋರೋ ದಯಾಸಾಗರನೇ | || 3 ||

156. ಕಟ್ಟಿಹಾಕು ಎನ್ನನು ಬಿಟ್ಟುಬಿಡದೇ ನಿನ್ನ ಚರಣದಿ |

ಚಾಟಿ ಏಟಿನಿಂದ ಥಳಿ ಥಳಿಸು ಸದಾ ನಿನ್ನ ಗುಣದಿ ||

ಹೊಟ್ಟೆ ಖಾಲಿಯಾಗದಂತೆ ಉಣಿಸುತಿರು ನಿನ್ನ ನಾಮದಿ |

ಗಂಟು ಭಾರ ಹೂರೆಸು ನಿನ್ನ ಸೇವೆಯ ಪುಣ್ಯಫಲದ ||

ಬಂಟನಾಗಿ ಸ್ವೀಕರಿಸೆನ್ನ ದಾಸನಾಗಿ ಪಡೆದು |

ನೆಂಟ ಶ್ರೀಕೃಷ್ಣವಿಟ್ಠಲ ಕಾಯೆನ್ನೆ ಎಡಬಿಡದೆ | || 1 ||

ಒಂಟಿನಾನಲ್ಲ, ಎನ್ನೊಳಗೆ ನೀನಿರುವಿ ನೆರಳಿನಂದದಿ |

ಒಂಟಿಬಡುಕ ನೀನೇ ನಿನ್ನ ಜೊತೆ ಯಾರಿಲ್ಲ ||

ಬಿಟ್ಟರೆ ಕೈಯೆನ್ನ ಮತ್ತೆ ನಿನ್ನಡೆ ಬರಲಾಗದು |

ಕಂಟಕ ಪ್ರಾಯ ಸುಖವನಳಿಸಿ, ಬಿಂಬ ದರುಶನದ ಹರುಷ ನೀಡು ||

ಇಷ್ಟು ಮಾತ್ರ ಬೇಡಿ ಕೊಂಬೆ ಪ್ರಾಣಪ್ರಿಯನೇ |

ನಿಷ್ಠೆಯಿಂದ ಶ್ರೀಕೃಷ್ಣವಿಟ್ಠಲನ ಪ್ರಸಾದವಾಗಲಿ | || 2 ||

157. ಅತ್ತ ಇತ್ತ ಚಲಿಸದಂತೆ ಚಿತ್ತ ಒಟ್ಟಿಗೆ ನಿಲ್ಲಿಸು |

ಸುತ್ತಮುತ್ತ ತಿರುಗದಂತೆ ಕಟ್ಟಿಹಾಕು ಒಂದೆಡೆ ||

ಕಿತ್ತು ತಿನ್ನುವ ವಿಷಯಸುಖ ಬಿಸುಟಿ ಬೇರೆಡೆ |

ಎತ್ತಿ ಶಿಶುವ ತನ್ನೆಡೆ ತಾಯಿ ಕರೆದು ಕೊಳ್ಳುವಂತೆ ||

ಕೃತಿಯೆ ಎನ್ನುಡಿಯಾಗಲಿ ನೋಟವೇ ನೀನಾಗಲಿ |

ಸತಿ ಲಕುಮಿ ಒಲಿದರೆ ಬಿಟ್ಟಿರದಂತೆ ಎನ್ನನ್ನು ಅಪ್ಪಿಕೋ ||

ಆತ್ಮನಿತ್ಯ ನಾನಾದರೆ ಪರಮಾತ್ಮ ನೀನೆಂದಿಗೂ ಜೊತೆಗಿರು |

ಶ್ರುತಿ ಪೊಗಳುವ ಚೆಲ್ವ ಶ್ರೀಕೃಷ್ಣವಿಟ್ಠಲ ಎನ್ನವನಾಗಿರಲಿ ||

ಶಕ್ತಿ ಎನಗೆ ನೀನೇ, ಮುಕ್ತಿ ಪಥದಿ ನಡೆಸೆಯಾ |

ಅರ್ಥ, ಕಾಮ, ಮೋಕ್ಷ ಕೂಡುವ ಧರ್ಮ ತಿಳುಹಲಾರೆಯಾ ||

ಸತ್ಯ ಭಕ್ತಿಎನ್ನ ಉಸಿರಾಗುವಂತೆ ಮಾಡಲಾರೆಯಾ |

ತತ್ವ ಜ್ಞಾನ ತಿಳಿಸಿ ಜನ್ಮ ಸಾರ್ಥಕ ಮಾಡೆಯಾ ಶ್ರೀಕೃಷ್ಣವಿಟ್ಠಲಾ ||

158. ಸ್ವಾಮಿ ನೀನು, ಎನಗಾದರೂ ದಾನಿ ನಾನೇ ಸದಾ |

ಅಮಿತ ಗುಣಿ ನಿರ್ದೋಷಿಯಾದರೂ ನೀನೆನ್ನ ಹಿಂದೆ ||

ಅಂತಸ್ಥ ನೆಲಸಿದರೂ ಏಕೆ ಮೂಕಸಾಕ್ಷಿಯಾಗಿರುವೆ? |

ಪ್ರಾತ: ಸಾಯಂ ನಿನ್ನ ಪರ ನಾ ಕರ್ಮ ಎಸಗುವೆ ||

ಭಕ್ತಿಯಿಂದ ಸಕಲ ನಿನಗೇ ಸಮರ್ಪಿಸುವೆ |

ಹೇಳಿ ಮಾಡಿ ಮಾಡಿಸಿದ್ದು ಚಾಚೂ ಬಿಡದೆ ಮಾಡುವೆ ||

ನಿಲುವಿಗೂ ಸಿಲುಕದ ವೇದಾಂತ ವೇದ್ಯನೇ |

ನಿಲುಗಡೆ ಇಲ್ಲದ ಜೀವನಚಕ್ರದಿ ತಿರುಗುತಿರುವೆ ||

ಕರುಣೆಯಿಂದ ಒಮ್ಮೆಯಾದರೂ ನಾ ಬೇಡಿದ್ದು ನೀಡಿದ್ದುಂಟೆ |

ಅರಿತಾದರೂ ನಾ ಕೇಳಿದ ಸಾಮಿಪ್ಯ, ಸಾನಿಧ್ಯ ಇತ್ತಿದ್ದುಂಟೆ ||

ಸ್ಮರಣೆ ಸಂತತವಿತ್ತಾದರೂ ನೀ ದಾನಿಯಾಗು, ಶ್ರೀಕೃಷ್ಣವಿಟ್ಠಲಾ ಎನ್ನ ಮುಂದೆ ಸುಳಿದಾಡು ||

159. ಏನು ಆಟ ಆಡಲಿ ನಿನ್ನ ಜೊತೆ ನಾನೇನು ಆಟ ಆಡಿ ಗೆಲ್ಲಲಿ |

ಈಜಾಟ ಮಾಡುವೆನೆಂದರೆ ಮತ್ಸರೂಪಿಯಾಗಿ ಸಕಲರ ದಡ ಸೇರಿಸಿದವನಲ್ಲವೆ ||

ಭಾರ ಎತ್ತುವಾಟ ಎಂದರೆ ಕೂರ್ಮರೂಪದಿ ಮಂದರ ಪೊತ್ತವನಲ್ಲವೆ | ಅಂಜಿಸುವಾಟವಾಡುವೆನೆಂದರೆ ನರಸಿಂಹನಾಗಿ ಹಿರಣ್ಯಕನ ಕೊಂದವನಲ್ಲವೆ ||

ಬೆನ್ನ ಮೇಲೆ ಹೊತ್ತೊಯ್ಯುವ ಆಟವೆಂದರೆ ತೃಣಾವರ್ತನ ಹಣಿಸಿದೆಯಲ್ಲವೆ ||

ತಿನ್ನುವ ಆಟ ಆಡುವನೆಂದರೆ ಖಾಂಡವವನ ಮೆದ್ದವನಲ್ಲವೆ |

ಕಣ್ಣುಮುಚ್ಚಾಟವೆಂದರೆ ಕಣ್ತಪ್ಪಿಸಿ ಹಾಲುಬೆಣ್ಣೆ ಕದ್ದವನಲ್ಲವೆ ||

ಮುಷ್ಟಿ ಯುದ್ಧಾಟವೆಂದರೆ ಮುಷ್ಟಿಕನ ಸದೆ ಬಡೆದವನಲ್ಲವೆ |

ಮೋಜಿನಾಟ ನಾಡುವೆನೆಂದರೆ ಒಂದೇ ಸಮಯಕೆ ಷೋಡಶ ಸಾವಿರ ಹೆಂಡಿರ ಒಡನಾಟ ಸೋಜಿಗವಲ್ಲವೆ ||

ಚೆಂಡಾಟ ಎಂದರೆ ಚೆಂಡಿನ ನೆಪದಿ ಗೋಪಿಕೆಯರ ವಸ್ತ್ರಾಪಹರಿಸಿದವನಲ್ಲವೆ |

ಅಡುಗೆ ಆಟ ಆಡುವೆನೆಂದರೆ ಕಣ್ಣಂಚಲಿ ಖಾದ್ಯವ ಅಕ್ಷಯವಾಗಿಸಿದವನಲ್ಲವೆ ||

ಕಾಮದಾಟವೆಂದರೆ ಗೋಪಿಯರೂಡನೆ ರಾಸಕ್ರೀಡಿಸಿದ ಕಾಮಪಿತನಲ್ಲವೆ |

ನಾಟ್ಯಮಾಡುವೆನೆಂದರೆ ಕಾಳಿಂದಿಫಣೆಲಿ ತಕ್ಕಥೈ ಮಾಡಿದವನಲ್ಲವೆ ||

ಒಂದುಕೈಯಲ್ಲಿ ಸಾಹಸ ಮಾಡುವೆನೆಂದರೆ ಕಿರುಬೆರಳಲಿ ಗಿರಿಯನ್ನೆತ್ತಿದವನಲ್ಲವೆ |

ಕದಿಯುವ ಆಟನಾಡುವೆನೆಂದರೆ ರುಕ್ಮಿಣಿಯಪರಿಹರಿಸಿದ ಚಿತ್ತಚೋರನಲ್ಲವೆ ||

ಸಂಸಾರದಾಟವೆಂದರೆ ಜಗತ್ತನ್ನೆ ಗೊಂಬೆಯಾಟ ಆಡಿಸುವ ಜಗದೀಶನಲ್ಲವೆ ||

ನಿನಗೆ ತಿಳಿಯದಂತಹ ಆಟವನ್ಯಾರು ಆಡಬಲ್ಲರು ಜಗದೊಳು |

ಎನ್ನಂತರಂಗದಿ ನಿಂತು ಆಡಿಸುವ ಶ್ರೀಕೃಷ್ಣವಿಟ್ಠಲ ನಿನ್ನ ಜೊತೆ ಎಂತಹ ಆಟ ||

160. ಹರಿಯ ಪೊಗಳಿ ಪಾಡಿ ಆನಂದಿಸಿ ಸದಾ |

ವಿರಮಿಸದಂತೆ ಅನುಗಾಲವೂ ಸೇವಿಸಿರಿ | || ||

ಸಾವಿರ ಮುಖದ ಶೇಷ ಇಂದ್ರರಿಗಸಾಧ್ಯದ |

ಸಾವು ಹುಟ್ಟಿಲ್ಲದ ಮುಕ್ತಾಮುಕ್ತರಿಗಾಗದ ||

ನವವಿಧಭಕುತಿಂ ಒಲಿಸಿ ಭಜಿಸಿರಿ |

ಅವನಿಪತಿಯ ತಡೆ ಇಲ್ಲದೆ ಸ್ಮರಿಸಿರಿ | || 1 ||

ಸಂತತ ಸ್ಮರಣೆಯಿಂದೆಮಗೆ ಬಹುಲಾಭ |

ಅಂತ್ಯಾದಿಗಳಿಲ್ಲದವನಿಗೇನದರ ಸಂಬಂಧ ||

ಸಂತೋಷದಿ ಹಿಗ್ಗಿಲ್ಲದವಗೆ ದುಃಖದ ಮಾತಿಲ್ಲಾ |

ಅತಿಶಯ ಭಕ್ತಿಜ್ಞಾನದಿ ದೊರಕುವನೆಮಗೆ | || 2 ||

ಕುಣಿದು ಕುಪ್ಪಳಿಸಿದರೂ ನಾವೆಂದಂತಾಗದು |

ಒಣಮಾತು ಢಂಬಾಚಾರಕೆ ಬಗ್ಗುವನಲ್ಲ ||

ಹಣಾಹಣಿಗೆ ಮಣಿಯಲಾರ ದೋಷವಿದೂರ |

ಸಣ್ಣಕ್ರಿಯೆ ಸಹ ಅವನಿಚ್ಛೆಯಂತೆ ನಡೆಯುವುದು | || 3 ||

ಮಾಡಿ ಮಾಡಿಸುವ ಬೇಡೆಂದರೆ ಬಿಡ |

ನೋಡಿ ನೋಡಿಸುವ ಕಣ್ಣಿಗೆಂದೂ ಕಾಣಿಸ ||

ನುಡಿದು ವದನದಿ ನಿಂತು ನುಡಿಸುವ |

ಒಡೆಯ ಕರ್ತೃ ಶ್ರೀಕೃಷ್ಣವಿಟ್ಠಲ ಅನುಕ್ಷಣವೂ | || 4 ||

161. ಚಿತ್ತವ ಹರಿ ಚರಣದಲಿ ನಿಲ್ಲಿಸೋ |

ಅತ್ತಿತ್ತ ಸರಿದರೂ ಮತ್ತೆ ತಂದು ಪದಕಮಲದಲಿ ನಿಲ್ಲಿಸೋ | || ||

ಲೌಕಿಕ ವಿಷಯ ಭೋಗಗಳ ಕಂಡೊಡೆ |

ವಿರಕ್ತಿ ಓಡಿ ಪೋಪುವುದು ಕಂಡರಿಯದಂತೆ ||

ಕುತರ್ಕಬಿಡಿಸಿ ಸುಭಕ್ತಿ ನೀಡು ಶಾಶ್ವತದಿ | || 1 ||

ಬಾಲಕನ ತಪ್ಪುಗಳ ಮಾತೆ ಎಣಿಸದ ತೆರದಿ |

ಭಾವುಕನ ಭಾವನೆಗಳಿಗೆ ಬೆಲೆಕೊಡೊ ||

ಬಯಕೆಯ ನೀಗಿಸು ಮೋಚಕ ಶ್ರೀಕೃಷ್ಣವಿಟ್ಠಲ ಜೀಯಾ ||

162. ಸುಂದರ ಜಗವೆಲ್ಲಾ ಅತೀ ಸುಂದರ |

ಸುಂದರಾಂಗ ಶ್ರೀಕೃಷ್ಣವಿಟ್ಠಲನ ಸೃಷ್ಟಿಯಲಿ | || ||

ಹರಿವ ನದಿ ಸುಂದರ |

ಸಾಗರದ ತೆರೆ ಅತೀ ಸುಂದರ ||

ಅರಳುವ ಪುಷ್ಪ ಸುಂದರ |

ಬಣ್ಣದ ಚಿಟ್ಟೆ ಅತೀ ಸುಂದರ ||

ಮರ-ಗಿಡದ ಹಸಿರು ಸುಂದರ |

ಉಲಿವ ಹಕ್ಕಿಗಳ ಇಂಚರ ಅತೀ ಸುಂದರ ||

ಸೂರ್ಯೋದಯಸ್ತಮಾನ ಸುಂದರ |

ಚಂದಿರನ ಶೀತಲತೆ ಅತೀಸುಂದರ | || 1 ||

ಮುಗಿಲೆತ್ತರ ಪರ್ವತಗಳ ಸಾಲು ಸುಂದರ |

ಕಾರ್ಮೋಡದ ಕೋಲ್ಮಿಂಚು ಅತೀ ಸುಂದರ |

ಮಗಿಮಗಿಸುವ ಹಸಿಮಣ್ಣಿನ ಪರಿಮಳ ಸುಂದರ |

ಮಳೆನಂತರ ಮೈಚೆಲ್ಲಿನಿಂತ ಕಾಮನಬಿಲ್ಲು ಅತೀ ಸುಂದರ ||

ಮೂಗುತಿ ಮೂಗಿಗೆಸುಂದರ |

ಹಣೆಯಲಿ ರಾರಾಜಿಸುವ ಕುಂಕುಮ ಅತೀಸುಂದರ ||

ಮಗುವಿನ ನಗುವೇ ಸುಂದರ |

ಮುಗ್ಧಯುವತಿಯ ಚೆಲುವೆ ಕಂಗಳು ಅತೀ ಸುಂದರ | || 2 ||

ಪ್ರಕೃತಿ ಸೌಂರ್ಯದ ರಮ್ಯತೆಸುಂದರ |

ಸಾಧನ ಪುರುಷರ ಸತ್ಸಂಗ ಅತೀ ಸುಂದರ |

ಸಂಸ್ಕøತಿ ಬಿಂಬಿಸುವ ವ್ಯಾಸರ ಕೃತಿ ಸುಂದರ |

ಭಗವಂತನ ಭಜನೆ, ನಾಮ ಸಂಕೀರ್ತನೆ ಅತೀ ಸುಂದರ ||

ಮುಕ್ತಿ ಧಾಮಗಳು ಸುಂದರ |

ಯುಕುತಿಯುತವಾದ ಭಕ್ತಿ ಅತೀಸುಂದರ |

ತ್ರಿಕಾಲಜ್ಞನ ಸೃಷ್ಟಿ, ಸ್ಥಿತಿ, ಲಯ ಸುಂದರ |

ಭವಪಾಶ ಕಳೆಯುವ ಶ್ರೀಕೃಷ್ಣವಿಟ್ಠಲ ಅತೀ ಸುಂದರ | || 3 ||

163. ಧ್ಯಾನಕೊಡು ಧ್ಯಾನಕೂಡು ಧ್ಯಾನಕೂಡು ನಿರಂತರ | || ||

ಮನ ಶುಚಿಮಾಡಿ ನಿನ್ನ ದಿವ್ಯರೂಪ ನಿಲ್ಲಿಸು | || ಅಪ ||

ಕ್ಷಣ ಕ್ಷಣಕೆ ಎನ್ನ ಭಕ್ತಿ ಹೆಚ್ಚುವಂತೆ ಮಾಡು |

ಕಣಕಣದಿ ನಿನ್ನ ನಾಮ ರಸಹರಿವಂತೆ ಮಾಡು ||

ಹಣಕನಕ ಬಂಧುಗಳ ವ್ಯಾಮೋಹ ನೀಗಿಸು |

ಪಣವಾಗಿಡುವೆ ದೇಹ ನಿನ್ನ ಹೆಸರಲಿ | || 1 ||

ಯಾವ ಭಂಗ ಬರದಿರಲಿ ನಿನ್ನ ಧ್ಯಾನದಿ |

ನವವಿಧ ಭಕುತಿಯೇ ದಾರಿದೀಪವಾಗಲಿ ||

ಭವ್ಯಮಂಟಪ ಎನ್ನ ಹೃದಯವಾಗಲಿ |

ದಿವ್ಯಮೂರುತಿ ಸದಾ ನೆಲಸಲಿ | || 2 ||

ಅಖಂಡ ಧ್ಯಾನ ಪಡೆಯುವ ಸೌಭಾಗ್ಯ ನನ್ನದಾಗಲಿ |

ನಿಖಿಲಾಂಡ ಕೋಟಿಬ್ರಹ್ಮಾಂಡನಾಯಕ ಹರಸಲಿ ||

ಅಖಿಳ ಜೀವರಾಶಿ ಅಂತರ್ಯಾಮಿ ಎನ್ನಲ್ಲೂ ಇರುವ |

ಸಖ ಶ್ರೀಕೃಷ್ಣವಿಟ್ಠಲ ಸದಾ ಎನ್ನ ಅನುಗ್ರಹಿಸಲಿ | || 3 ||

164. ಯೋಗನಿದ್ರೆ ಮಾಡು ಯೋಗಿವಂದ್ಯ ಯೋಗೀಶ |

ಕ್ಷೀರ ಸಾಗರದಿ ಪವಡಿಸಿದ ಸರ್ಪಶಾಯಿಯೇ ಲಾಲಿ ||

ಮೋಹಿನಿರೂಪಿಯೇ, ರಾವಣಾದಿ ಅಸುರಾಂತಕ |

ಒಂದೆಲೆ ಮೇಲೆ ಮಲಗಿದ್ದ ಶಿಶುವೇ ಲಾಲಿ ||

ಪುಟ್ಟ ಬಾಲಕ ದಾನವ ಬೇಡಿ ತ್ರಿಜಗವನಳೆದ |

ಬ್ರಹ್ಮಾಂಡ ಕಟಾಹನೊಡೆದ ತ್ರಿವಿಕ್ರಮಗೆ ಲಾಲಿ ||

ನರಸಿಂಹರೂಪದಿ ಪ್ರಲ್ಹಾದಗಭಯವಿತ್ತ |

ದ್ರೌಪದಿಗೆ ಅಕ್ಷಯಾಂಬರವಿತ್ತವಗೆ ಲಾಲಿ ||

ಪೂತನ ಸಂಹಾರಿ ಕಂಸಾರಿ ವಾಸುದೇವಗೆ |

ಗೋವರ್ಧನಧಾರಿ, ಜ್ಞಾನಬೋಧಿಪ ಪಾರ್ಥಸಾರಥಿಗೆ ಲಾಲಿ ||

ವನಮಾಲೆ ಕೊರಳೊಳು ಶೋಭಿಪ ಶಂಕಚಕ್ರಧಾರಿ |

ಕನಕವಸನದಿ ಮೆರೆವ ಶ್ರೀವತ್ಸಾಂಕಿತಗೆ ಲಾಲಿ ||

ಅಮರಾದಿ ಸುರ ಮುನಿವಂದ್ಯ ಶ್ರೀಸಹಿತ |

ಸುಮ್ಮನೆ ಮಲಗೋ ವೇದವೇದ್ಯ ಶ್ರೀಕೃಷ್ಣವಿಟ್ಠಲಗೆ ಲಾಲಿ ||

165. ಪ್ರಾತಃ ಕಾಲದಿ ಕೇಶವ ಗೋವಿಂದ ಎನ್ನಿ |

ಮಧ್ಯಾಹ್ನದಿ ವಿಷ್ಣು, ಮಧುಸೂದನ ಎನ್ನಿ ||

ಸಾಯಂಕಾಲದಿ ನೃಸಿಂಹ, ಹೃಷಿಕೇಶನೆನೆದು |

ರಾತ್ರಿಯಲಿ ಪದ್ಮನಾಭ ಪದ್ಮಾವತಿ ನೆನೆದು ||

ಹಗಲಿನಿಂದ ಇರುಳು ಇರುಳುನಿಂದ ಹಗಲು |

ಮಾಡಿದ ಸರ್ವ ಕಾರ್ಯಗಳನ್ನು ಶ್ರೀಹರಿಗರ್ಪಿಸಿ ||

ಲಕ್ಷ್ಮೀಪತಿ ಕರುಣಾಳು ಕಣ್ರೆಪ್ಪೆ ತೆರದಿ ಕಾಯ್ವ |

ಸಕಲವೂ ಶ್ರೀಕೃಷ್ಣವಿಟ್ಠಲನ ಪೂಜೆಯೆನ್ನಿ ||

166. ಅಂತರಂಗದಿ ಪೊಳೆವ ಚಿನ್ಮಯ ವಚನಾತೀತ |

ಅತಿಶಕ್ತ ಸುಜೀವಿಗಳ ವೈಕುಂಠದಲ್ಲಿಡುವ |

ಚೇತನ ಪರಮನ ಅಧೀನ ಎನ್ನಕರ, ಶ್ರವಣ, ಚರಣ, ಪ್ರಾಣ |

ಆತ್ಮಸ್ಥ ಪುರುಷ ಶ್ರೀಕೃಷ್ಣವಿಟ್ಠಲ ನಿನಗೆ ನಮೋನಮಃ ||

167. ಮೊರೆ ಇಡಲು ಭಕ್ತರು ಸದಾ ಸಂಕಟದಿ ಕೇಳದೇನು |

ಪಾರುಮಾಡು ಸಂಸಾರ ಭಯ ನೀಗಿಸೆಂದು ಕೇಳಿದರೂ ||

ಸ್ತೋತ್ರ ಮಾಡಲು ನೀ ಒಲಿವೆಂದು ನಂಬಿದರು |

ತ್ವರಿತದಿಂ ಅಭಯವಿತ್ತು ಪರಿಹರಿಸು ಆಪತ್ತು ||

ಪೂರ್ವಕೃತ ಪುಣ್ಯ ನನ್ನದಿರಲು ನೀ ದಯೆ ತೋರುವಿ |

ಕರುಣಿ ನೀನೆಂದು ಹೇಗೆ ನಾ ತಿಳಿಯಲಿ ||

ಪ್ರಾರಬ್ಧವೇನೆ ಇರಲಿ ಶ್ರೀಕೃಷ್ಣವಿಟ್ಠಲ ನಿನ್ನಿಚ್ಛೆ ನನದಾಗಲಿ ||

168. ಪರಮಪುರುಷ ಪರಮೇಶ್ವರ ಪರಾಶಕ್ತಿ ಪರಾತ್ಪರ |

ಪರಶುದ್ಧ ಪರಮಕಾರಣ ಪರಮಪರಿಣಾಮ ಪರೇಶಾಯ ||

ಸರ್ವವೀಕ್ಷಕ ಪ್ರೇಕ್ಷಕ ಸಾಕ್ಷಿ ಸಾಕ್ಷಾತ್ ಸ್ಥಿತ |

ಸರ್ವತ್ರಸ್ಥಿತ ಅಂತರ್ಬಹಿಶ್ಚ ವ್ಯಾಪ್ತ ಅವ್ಯಕ್ತ ||

ಪರಮಚೇತನ ಆದಿ ಬೀಜಾಯ ಪರಂ ಬ್ರಹ್ಮ |

ಪರಮಧಾಮ ಹೃದಿ ಸ್ಥಿತ ಶ್ರೀಕೃಷ್ಣವಿಟ್ಠಲ -ವಿದುಃ ||

169. ಭಕ್ತನ ಕರೆಗೆ ಭಕ್ತಿಯ ಕೂಗಿಗೆ ಭೂಮಿಗೆ ಬರುವ ಭಗವಂತ ಇದು ನಿಶ್ಚಯ |

ಭಕುತಿಗೆ ಒಲಿದು ಬಾಲಕ ಧ್ರುವನ ಕರೆಗೆ ಶ್ರೀಮನ್ನಾರಾಯಣ ಬರಲಿಲ್ಲವೇ ||

ಶಕ್ತಿಯ ಸೆಣಸಾಟದಿ ಸೋತ ಗಜೇಂದ್ರನ

ಆರ್ತಧ್ವನಿಗೆ ಶ್ರೀಹರಿಬರಲಿಲ್ಲವೇ? |

ಭಕ್ತಿಯಿಂ ಬಾಲಕ ಪ್ರಹ್ಲಾದ ಪ್ರಾರ್ಥಿಸೆ

ಕಂಬ ಒಡೆದು ಶ್ರೀನರಸಿಂಹತಾ ಬರಲಿಲ್ಲವೇ? ||

ಮೂಕರೋದನದಿ ಶಿಲೆಯಂತಾದ ಅಹಲ್ಯೆಯ

ಬಳಿಗೆ ಶ್ರೀರಾಮ ತಾ ಬರಲಿಲ್ಲವೇ? ||

ಯಾಕೆ ಇನ್ನೂ ಬರಲಿಲ್ಲವೆಂದು ಕಾಯುತ್ತಿದ್ದ

ಶಬರಿಯ ಕಾಣಲು ಶ್ರೀರಾಮ ತಾ ಬರಲಿಲ್ಲವೇ? |

ದು:ಖಿತ ಅಬಲೆ ದ್ರೌಪದಿ ಶರಣರಾಗಲು

ಶ್ರೀಕೃಷ್ಣವಿಟ್ಠಲ ಬಂದೊದಗಿದನಲ್ಲವೆ? |

ಏಕ ಪರಮಾತ್ಮ ಅನೇಕ ರೂಪದಿ ಭಕ್ತರು

ಕರೆದಲ್ಲಿ ತಾ ಬರುವನೆಂಬುದು ನಿಜವಲ್ಲವೆ? ||

170. ಸರ್ವೇಶ, ಸರ್ವಾಭಿಜ್ಞ, ಸರ್ವದಾತಾ |

ಜೀವಕ್ಕೆ ದೇಹವಿತ್ತು ಸೃಷ್ಟಿಸಿದ ಚಾತುರ್ವಣ್ರ್ಯ ||

ಅವನ ಬುದ್ಧಿಯೇ ಬ್ರಾಹ್ಮಣ ಭುಜಬಲವೇ ಕ್ಷತ್ರಿಯ |

ಅವನುದರವೇ ವೈಶ್ಯ ಸಮರ್ಪಕ ಶಕ್ತಿ ಪ್ರದಾಯಕ ||

ಸರ್ವವಣ್ರ್ಯ ಸೇವೆ ಮಾಳ್ಪ ಕಾಲುಗಳೇ ಶೂದ್ರ |

ಸರ್ವರ ಪರಸ್ಪರ ಅವಲಂಬನ ಸಹಕಾರವೇ ಸುಖ ||

ಜೀವನದಿ ಸಾಧನೆಗನುಕೂಲಕರ ಸಾಧ್ಯ-ಸಾಧನಗಳು |

ಇವೆಲ್ಲಕ್ಕಿಂತ ಅವಶ್ಯಕ ಶ್ರೀಕೃಷ್ಣವಿಟ್ಠಲನ ಅನುಗ್ರಹ ||

ಸರ್ವೇಚ್ಛಾ ಕಾರ್ಯಕಾರಣ ಅವಕಾಶಪ್ರದಾಯಕ ನಮೋ ನಮಃ ||

171. ಶರಣೆಂಬೆ ನಾ ನಿನ್ನ ಸೇರುವ ಪರಿ ಅರಿಯೆನು |

ಮಾರ್ಗವ ತೋರಿ ಪಾರುಗಾಣಿಸೋ ಕೃಪಾಕರನೇ | || ||

ಬರಿದೇ ಮೂಢ ಭಕ್ತಿಯಲೇನು ಪ್ರಯೋಜನ ಜ್ಞಾನವಿರದೆ |

ಸರಿಯಾಗಿ ನಿನ್ನ ಅನುಗ್ರಹವಿಲ್ಲದೆ ಬದುಕುವುದೆಂತು ||

ತೋರು ದರುಶನ ಎನ್ನೊಳ-ಹೊರಗಿನ ಶಕ್ತಿಯಾಗಿರುವನೇ |

ಪ್ರೇರಕನಾಗಿರುವ ಸಕಲೇಂದ್ರಿಯಗಳ ನಿನ್ನ ಗುರುತಿಸುವುದೆಂತು | || 1 ||

ಪರಮಾತ್ಮ ಹಿರಿಯನೆಂದಷ್ಟೇ ಹೇಳಿದರೆ ಸಾಕೆ? |

ಅರಿಯುವ ಪರಿ ತಿಳಿಯುವುದು ಹೇಗೆ? ||

ಪರಿ ಪರಿಯಲಿ ತಾನೇ ತಿಳಿಸುವ ತನಕ |

ಕವರ್i ತೀರಿಸಿ ಮರ್ಮವ ಭೇದಿಸಿ ಬೋಧಿಸುವತನಕ | || 2 ||

ಒಪ್ಪಾಗಿ ತಪ್ಪುಗಳ ಅರಿಯಿಂದ ತರಿದು |

ತಪ್ಪಿಸು ಬಾಧೆಗಳ ಶಂಖದ ಧ್ವನಿಯಿಂದ ||

ಬಪ್ಪ ವಿಘ್ನಗಳ ಗದೆಯಿಂದ ಸದೆಬಡೆದು |

ಸುಪುಷ್ಪ ಪದ್ಮದಂದದಿ ಸುಖವಿತ್ತು ಸಲಹೋ | || 3 ||

ಕ್ಷಮಿಸಿ ಅಗಣಿತ ದುರಿತ ಪಾಪರಾಶಿಯ |

ಶಮ, ದಮಾದಿ ಇತ್ತು ಸರಿಯಾಗಿ ಪರಿಪಾಲಿಸೋ ||

ಸುಮ್ಮಾನದಿ ಅವಿರತ ಭಕ್ತಿಯಿಂದ ಜೀವಿಸಿ |

ಒಮ್ಮನದಿ ಶ್ರೀಕೃಷ್ಣವಿಟ್ಠಲನ ಸದಾ ಸೇವಿಸುವಂತೆ ಮಾಡು | || 4 ||

172. ನಿಗರ್ವಿ ಹರಿಯ, ಗುರುವಿನಿಂದ ತಿಳಿದು ಧನ್ಯನಾಗು |

ಅಗಣಿತ ಗುಣಧಾಮ ನಿಖಿಲಗುಣಪೂರ್ಣನ ||

ಉಗಾಭೋಗ, ಸುಳಾದಿ, ಕೀರ್ತನೆ ಸರ್ವಾಕ್ಷರದಲ್ಲಿರುವನ |

ಹಗೆರಹಿತ ಬಗೆಬಗೆಯ ರೂಪಧಾರಿಯ ಅರಿಯಲು ||

ಗಗನಂ ಗಗನಾಕಾರ ಸಾಗರಕೆ ಸಾಗರ ಸಾಟಿ ಎನಿಪ |

ಜಗಸೃಷ್ಟಿ ಸ್ಥಿತಿ ಲಯ ನಿಯಮನ ಕಾರಣಕರ್ತನ ಭಜಿಸು ||

ನಿಗಮ ವೇದ್ಯ ತದ್ವನಂ(ಸರ್ವವ್ಯಾಪ್ತನ ಭಜಿಸು)ಆಗಮ ಹರಿಕಾರ ಜ್ಞಾನಪೂರ್ಣ |

ಜಾಗು ಮಾಡದೆ ಜಾಗರರಿ ಭವತಾರಕ ಭಗವಂತನೇ ||

ಹೃದ್ಗುಹಾವಾಸಿ ಶ್ರೀಕೃಷ್ಣವಿಟ್ಠಲನೆಂದು ತಿಳಿಯೇ, ಸಕಲವೂ ತಿಳಿದಂತೆ ||

173. ಶ್ರೀಂಗಾರ ಶ್ರೀಲೋಕ ಪೂರ್ಣ ಲೀಲಾ ವಿನೋದಿ |

ಗಂಗಾಜನಕ ನಿರ್ವಿಕಾರಿ ಭಕ್ತಜನ ಪ್ರಿಯ ||

ಯೋಗಿ ವಂದ್ಯ ಸರ್ವತ್ರ ತದಾಕಾರ ಸ್ಥಿತ |

ಸದ್ಗುಣ ಸಾಂದ್ರ ಶ್ರೀಕೃಷ್ಣವಿಟ್ಠಲನ ಭಜಿಸೆ ಒಲಿವಾ ಕಾಣೋ ||

174. ವಾಚಕೆ ಸಿಲುಕದ ಶುಚಿರ್ಭೂತ ನಿಗಮಗೋಚರ |

ಆಚಾರ-ವಿಚಾರವಿಲ್ಲದ ಬುದ್ಧಿಗೆ ನಿಲುಕುವನೆ ||

ಸಂಚಿತಾಗಾಮಿ ಪ್ರಾರಬ್ಧ ಕಳೆಯಲು ಅರ್ಚಿಸಿ |

ಅಚ್ಯುತಾನಂತ ಗೋವಿಂದ ಎನೆ ಶ್ರೀಕೃಷ್ಣವಿಟ್ಠ¯ ಮೆಚ್ಚುವಾ ||

175. ಪ್ರ()ಕ್ಷಯ ಫಲದಾತಾ, ಮೋಕ್ಷ ಪ್ರದಾಯಕ ಅಕ್ಷರ ನಾಮಕ ಲಕ್ಷ್ಮೀಶ |

ಲಕ್ಷಣೋಪೇತ ಪುಂಡರಿಕಾಕ್ಷ ಸರ್ವಲೋಕ ಭೋಕ್ತಾರ ||

ಸಾಕ್ಷಿಭೂತ ಸರ್ವತ್ರ ವೀಕ್ಷಿತ ಸರ್ವದಾ ಸರ್ವಶಕ್ತ |

ಸ್ವಕ್ಷ ಸದಾನಂದ ರಕ್ಷಸ್ವಮಾಂ ಶ್ರೀಕೃಷ್ಣವಿಟ್ಠಲ ||

176. ನಿಂದು ಮನದಲಿ, ಮಾಡುವ ಬಯಕೆ ಮೂಡಿಸಿ |

ಬುದ್ಧಿಯಲಿದ್ದು ಬಿಡದೆ ಮಾಡುವ ಛಲ ಮೂಡಿಸಿ ||

ಪಾದದಲ್ಲಿದ್ದು ಅಲ್ಲಿಗೆ ನಡೆದಾಡಿಸಿ ಬಿಡದೆ |

ಮಾಡಿಸಿ ಕರದಿಂದ ಕರ್ಮವ ಅಚ್ಚುಕಟ್ಟುತನದಿ ||

ಮೂಡಿಸಿ ಹೆಮ್ಮೆ, ಅಭಿಮಾನ ಹೃದಯದಿ |

ನಡೆಸಿರುವಿ ನಿನ್ನಿಚ್ಛೆಯಂತೆಯೇ ಸದಾ ||

ಆದರೂ ಯದೃಚ್ಛಾ ಫಲ ಎನಗೇ ಉಣಿಸುವಿ |

ಇದು ಸರಿಯೇನೋ ಇಂದಿರೇಶ ಶ್ರೀಕೃಷ್ಣವಿಟ್ಠಲ ||

ಎಎಎ

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು