ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಶ್ರೀ ಕೃಷ್ಣವಿಠ್ಠಲಪದಗುಚ್ಛ 2

ಶ್ರೀ ಮಹಾಲಕ್ಷ್ಮೀ ದೇವಿ

39. ಅನುಗ್ರಹಿಸೆ ಎನ್ನ ಭಾಗ್ಯದೇವತೆಯೇ ಅನುಗ್ರಹಿಸೆ | || ||

ಕಣ್ಣು ತೆರೆದು ಕ್ಷಣದಿ ಎನ್ನ ನೋಡಿ ಅನುಗ್ರಹಿಸೆ | || ಅಪ ||

ಐಶ್ವರ್ಯ ಲಕ್ಷೀ ಸಿರಿ ಭೂದೇವಿ |

ವಿಶ್ವಾಧಾರನ ಅರ್ಧಾಂಗಿ ಲಕ್ಷಣೆ ||

ದೇಶಕಾಲದಿ ನಿತ್ಯ ಇರುತಿಹ ಸಮನಾ |

ಸೃಷ್ಟಿಕರ್ತನ ವಕ್ಷಸ್ಥಳವಾಸಿ ಅನುಪಮಳೇ | || 1 ||

ಬ್ರಹ್ಮರುದ್ರಾದಿ ವಂದಿತಜಗನ್ಮಾತಾ ಅಂಬಾ |

ಅಹಂ ಮಮಕಾರ ವರ್ಜಿತ ರಮಾ ||

ಸಹನಾಮೂರುತಿ ಶಾಂತಿ ಸ್ವರೂಪ |

ಬಹುರೂಪ ತಳೆದು ಸಲಹುವ ದುರ್ಗೆಯೇ | || 2 ||

ಮಲ್ಲೆಜಾಜಿ ಪಾರಿಜಾತ ಕೇದಿಗೆ |

ಪಲ್ಲವಿಸುವ ಕಮಲ ಸಂಪಿಗೆ ||

ಒಲವಿನಿಂದ ಅರ್ಪಿಸಿ ಪೂಜಿಪೆ |

ನಿಲ್ಲೇ ಮನದಿ ಸದಾ ಹರಿಯೊಡಗೂಡಿ | || 3 ||

ಹಚ್ಚುವೆ ಘೃತ ನಂದಾದೀಪ ನಿರುತದಿ |

ಪಂಚಭಕ್ಷ್ಯ ಪರಮಾನ್ನ ಪಾಯಸ ||

ಪಚ್ಚಕರ್ಪೂರ ವೀಳ್ಯವ ಸಮರ್ಪಿಸುವೆ |

ಮೆಚ್ಚು ಎನ್ನ ಸೇವೆ ಹರಸುತ ತಾಯೆ | || 4 ||

ಸರ್ವತ್ರ ಸರ್ವೇಶನ ಸೇವಿಪ ಶುಭಾಂಗಿ ||

ಸರ್ವ ಶ್ರುತಿಗಳಭಿಮಾನಿ ಸುವಿದ್ಯೆ |

ಅವಿಕಾರಿ ನಿತ್ಯಾವಿಯೋಗಿ ಕನಕವರ್ಣೇ ||

ಸುವಂದ್ಯ ಇಂದಿರೇಶ ಶ್ರೀಕೃಷ್ಣವಿಟ್ಠಲನಪ್ರಿಯೆ | || 5 ||

40. ಧನ್ಯ ಧನ್ಯ ಲೊಕಮಾತೆ, ಸರಸ್ಸಿಜಾಸನೇ |

ಲಕ್ಷ್ಮಿಸಮುದ್ರವಸನೇ, ಶ್ವೇತಾಂಬರಧಾರಿ ||

ಜ್ಞಾನಪ್ರದಾಯಿನಿ, ಸಂತೋಷದಾಯಿನಿ |

ಶುಭದಾ, ಸದಾ ವಂದಿಪೆ ಚರಣದ್ವಯ ||

ನೀಲಕುಂತಳೇ, ಹರಿಣಾಕ್ಷಿಯೇ ಕರುಣಾಮಯಿ |

ಯೋಗಿನಿ, ನಿತ್ಯಾವಿಯೋಗಿನಿ ಚಿರನೂತನೆ ||

ಹರಿ ವಕ್ಷಸ್ಥಲ ವಾಸಿನಿ ಮಹಾಲಕ್ಷ್ಮಿಯೇ |

ಶ್ರೀಕೃಷ್ಣವಿಟ್ಠಲನ ನಿರಂತರ ಸೇವಿಪಳೇ ||

41. ಮಂಗಳೇ, ಸರ್ವಮಂಗಳೆ, ಮನಕಾನಂದವೀವ ರಮಾದೇವಿಯೇ |

ಸಂಗಸುಖ ಬಯಸುವೆ ಸದಾ ಎನ್ನ ಕೈ ಹಿಡಿಯೇ ||

ಇಂದ್ರಿಯ ನಿಗ್ರಹಿಸುವಂತೆ ಒಲುಮೆಯ ತೋರೆ ಇಂದಿರೆಯೇ |

ನಿನ್ನಲ್ಲಿ ಏಕ ಲಕ್ಷ್ಯವಿರುವಂತೆ ಅನುಗ್ರಹಿಸು ಲಕ್ಷ್ಮೀಯೇ ||

ಸುಮನದಿ ಸಂತೋಷ ತೋರೆ ಸರಸಿಜಾಕ್ಷಿಯೇ |

ಸಕಲ ಕಾರ್ಯವ ಜಯಸುವಂತೆ ಮಾಡೆ ಜಲಜಾಕ್ಷಿಯೇ ||

ಶ್ರೀ ಧೀ: ಶಕ್ತಿದಯಪಾಲಿಸೆ ತಾಯೇ ಶ್ರೀವಾರಿಧಿಯೇ |

ಸಂಚಿತ ಕರ್ಮ ಕೊಂಚ ಮಾಡುವಂತೆ ಪೇಳೆ ||

ಕಮಲಾಕ್ಷಿಯೇ, ನಿನ್ನ ಪ್ರಿಯ ಶ್ರೀಕೃಷ್ಣವಿಟ್ಠಲಗೆ ||

42. ಮಾರಮಣನ ಪಾದವ ತೋರೇ ತಾಯೇ ಅಂಬುಜಾಕ್ಷಿಯೇ |

ಪಾರುಗಾಣಿಸು ಭವಸಂಸಾರವ ನೀ ದಯೆದಿ ||

ಸುರಗುರುವಂದ್ಯ ವಾಯು ಬ್ರಹ್ಮ ಸುಪೂಜಿತ |

ಚಾರುಚರಣನ ತವಕದಿ ತೋರೇ ತಾಯೇ | || 1 ||

ಮೂರುಪಾದದಿ ಜಗವನೆಳೆದ ತ್ರಿವಿಕ್ರಮ |

ತೋರಿದ ಮೊದಲ ವಾಮನ ಪುಟ್ಟ ಬಾಲಕನಾಗಿ ||

ಗಿರಿಯನೆತ್ತಿದ ಕಿರುಬೆರಳಲಿ ನಂದಕುಮಾರ |

ಪರಮಾದರದಲಿ ಪಾಡಲು ಒಲಿದು ಬರುವ | || 2 ||

ಮುರುಳಿಯ ನಾದದಿ ಮೋಹಕ ಗೊಳಿಸುವ |

ಜಾರ ಶ್ರೀವೇಣುಲೋಲ ನವನೀತ ಚೋರನ ||

ಎರಗಿ ನಿನ್ನಪಾದಕ್ಕೆ ಬೇಡಿಕೊಂಬೆ ನೀ ಚಿತ್ತಕ್ಕೆ ತಂದು |

ಸಿರಿ ಕೃಷ್ಣವಿಟ್ಠಲನ ಪಾದಪದ್ಮ ಸಮೀಪದಲ್ಲಿಡು ಎನ್ನ | || 3 ||

43. ಮಹಾಸಾಗರದಂತೆ ವಿಶಾಲ ಮನದವಳೇ |

ಮಹಾ ಪರ್ವತಗಳ ಭಾರ ಪೊತ್ತವಳೇ ||

ಸಹಿಸೆನ್ನಪರಾಧ,ಕ್ಷಮಿಸಿ ಸ್ವೀಕರಿಸೆನ್ನ |

ಮಹಾಗುಣಾರ್ಣ ಶ್ರೀಕೃಷ್ಣವಿಟ್ಠಲನರ್ಧಾಂಗಿಯೇ ||

ಊಊಊ

ಶ್ರೀಮದ್ಭಾಗವತ

ಶ್ರೀಮದ್ಭಾಗವತ ರಶ್ಮಿ

44. “ಶ್ರೀ ಮದ್ಭಾಗವತ ಶ್ರವಣ ನಿಜ ಭಕ್ತಿಗೆ ಸೋಪಾನ |

ಸಮಚಿತ್ತದಿ ಆಲಿಸೇ ದ್ವಾದಶಸ್ಕಂಧ ಮುಕ್ತಿಮಾರ್ಗ ||

ಶ್ರೀ ಮದ್ಭಾಗವತ ಫಲ ಶುಭರಸ ಪುನಃ ಪುನಃ ಸ್ವಾದಿಸೆ |

ಪ್ರಮೇಯ, ಜಗದ್ವ್ಯಾಪಾರ ತಿಳಿವುದು ಶ್ರೀಕೃಷ್ಣವಿಟ್ಠಲನ ದಯದಿ ||

ಪ್ರಥಮ ಸ್ಕಂಧ

ನಾರದ ಮಹರ್ಷಿ ವಿನಂತಿಸೇ ರಚಿಸಿದರು |

ಪುರಾಣ, ಭಾಗವತ ಶ್ರೀ ವ್ಯಾಸ ಮಹರ್ಷಿ ||

ಪುತ್ರ ಶುಕರಿಗೆ ಪ್ರಥಮ ಉಪದೇಶಿಸಿದ್ದು |

ಪರೀಕ್ಷಿತರಾಜಗೆ ಶುಕರು ಅಂತ್ಯಕಾಲದಿ ಬೋಧಿಸಿದರು ||

ಸಂತನಾರದ, ಸನಕಾದಿಗಳ ಸಂದರ್ಶಿಸಿ |

ಭಕ್ತಿ, ಜ್ಞಾನ, ವೈರಾಗ್ಯ, ಭೇಟಿ ಸಂದರ್ಭದಿ ಪ್ರಚಾರಿಸಿದರು ||

ಮುಕ್ತಿ ಪಡೆದ ದುಂಧುಕಾರಿ ಗೋಕರ್ಣ ಮಹಾತ್ಮೆಯಲಿ |

ಸಪ್ತಾಹ ಶ್ರವಣ ವಿಧಾನದಿ ಭಾಗವತ ತಿಳಿಯುತ ||

ಪರೀಕ್ಷಿತ ನೀರಡಿಸಿ ಕೇಳಲು, ಸಮಾಧಿಸ್ಥ ಶಮೀಕ ನೋಡದಿರಲು |

ಬಲು ಕ್ರೋದಧಿ ಸತ್ತಸರ್ಪವನ್ನೆತ್ತಿ ಅಲಂಕರಿಸಿದ ಋಷಿ ಕೊರಳೊಳು ||

ಅಳಲಿನ ದನಿಗೆ ಎಚ್ಚರವಾಗುವುದರಲಿ ರಾಜನಿಗೆ ದುರ್ಮರಣ ಶಾಪವಿತ್ತಿದ್ದ ಗುರುಪುತ್ರ |

ಕಾಲಕೆ ಅಂಜದ ರಾಜ ಪ್ರಾಯೋಪೇಶಕೆ ಸಿದ್ಧನಾದ ||

ತರುಣ ಶುಕಯತಿ ಆಗಮಿಸಿದರಾಗ ಹರಿ ಪ್ರೇರಣೆಯಂತೆ |

ಏಳುದಿನ ಬಿಡದೆ ಹರಿಮಹಾತ್ಮೆ ಕೇಳಿದ ರಾಜ, ಸಂತೋಷದಿ ನಡೆದ ಹರಿಪುರಕೆ ||

ದ್ವಿತಿಯ ಸ್ಕಂಧ

ಎರಡನೇಸ್ಕಂಧದಿ ಪರಮಾತ್ಮನ ರೂಪಧಾರಣೆ |

ಬೇರೆ ದೇವತೆಗಳ ಆರಾಧನೆ ಫಲಬೇರೆ ||

ಅರುಹಿದರು ಚತುಃಶ್ಲೋಕಿ ಭಾಗವತದ ಸಾರ |

ವಿರಾಟ ಪುರುಷನ ಪ್ರಾದುರ್ಭಾವ ವಿಭೂತಿಯ ||

ಪರಮಾತ್ಮನ ವಿವಿಧ ಅವತಾರಗಳಿವೆ ||

ತೃತೀಯ ಸ್ಕಂಧ

ತೃತೀಯ ಸ್ಕಂಧದಿ ನವವಿಧ ಸೃಷ್ಟಿ ಪ್ರಕಾರಗಳು |

ಮೈತ್ರೇಯ-ವಿದುರ ಸಮಾಗಮ, ಯುಗಮನ್ವಂತರ ವಿವರ ||

ಅಂತೇ ಜಯವಿಜಯರ ಶಾಪ, ವರಾಹಾವತಾರ |

ಮಾತೆ ದೇವಹೂತಿ-ಕಪಿಲ ಪರತತ್ತ್ವ ಪ್ರಾಪ್ತಿ ಸಂವಾದ ||

ಭಕ್ತಿ ಪ್ರಬೇಧ, ಪ್ರವೃತ್ತಿ-ನಿವೃತ್ತಿ ಪೇಳಿ ಮುಕ್ತಿಯಿತ್ತಕಥೆ ||

ಚತುರ್ಥ ಸ್ಕಂಧ

ನಾಲ್ಕನೇ ಸ್ಕಂಧದಿ ದಕ್ಷ-ಮಹಾದೇವರ ವಿರೋಧಕಾರಣ |

ಶಂಕರಸತೀ ಯಜ್ಞದಿ ದೇಹತ್ಯಾಗ, ಧ್ರುವ ಚರಿತ್ರೆ ||

ಉತ್ಕಲ, ಅಂಗ, ಪೃಥುಕಥೆ, ರುದ್ರಗೀತೆ |

ಮುಕ್ತಿ ಪಡೆದ ಪ್ರಾಚೇತಸರು, ಪುರಂಜನೋಪಾಖ್ಯಾನವಿದೆ ||

ಸಕಲ ಆಧ್ಯಾತ್ಮಿಕದ ಅರ್ಥ ಅಡಗಿದೆ ಇಲ್ಲಿ ||

ಪಂಚಮ ಸ್ಕಂಧ

ಐದನೇ ಸ್ಕಂಧದಿ ಪ್ರಿಯವೃತ, ಋಷಭರ ಚರಿತೆ |

ಜಡಭರತಾಖ್ಯಾನ, ರಹೂಗಣ ಸಂವಾದ, ಗಯಚರಿತೆ ||

ಇದರಲ್ಲಿದೆ ಭೂಗೋಲ-ಖಗೋಲ, ಶಿಂಶುಮಾರ ವಿಚಾರ |

ಖಂಡಗಳ ವಿವರ ಜೊತೆ ಭವಾಟವಿ ವರ್ಣನೆ ||

ಕಡೆಗಿದೆ ಅಧೋಲೋಕ-ನರಕಗಳ ವರ್ಣನೆ ||

ಷಷ್ಠ ಸ್ಕಂಧ

ಷಷ್ಠಿಸ್ಕಂಧದಿ ಹರಿ ತನ್ನ ಭಕ್ತರ ಪೋಷಣ ಬಗೆ ತಿಳಿಸುವ |

ವಿಷ್ಣುದೂತ-ಯಮಭಟರ ಸಂವಾದವಿದೆ ಅಜಮಿಳನ ಕಥೆಯಲಿ ||

ವಿಶ್ವರೂಪ ಚರಿತೆ, ನಾರಾಯಣವರ್ಮ ಕವಚದ ಮಾಹಿತಿ |

ಶ್ರೇಷ್ಠ ಭಕ್ತ ವೃತ್ರಾಸುರನ ಕಥೆ, ಚಿತ್ರಕೇತುವಿನ ಶಾಪ ||

ಪುಂಸವನ ವ್ರತವಿಧಿ, ಬ್ರಹ್ಮಹತ್ಯಾ ನಿವೃತ್ತಿ, ಮರುತರ ವೃತ್ತಾಂತವಿದೆ ||

ಸಪ್ತಮ ಸ್ಕಂಧ

ಏಳನೇ ಸ್ಕಂಧದಲಿ, ಜಯ-ವಿಜಯರ ಮೂರು ಜನ್ಮಗಳ ವೃತ್ತಾಂತ, ಸುಯಜ್ಞೋಪಾಖ್ಯಾನ |

ಪ್ರಹ್ಲಾದಭಗವನ್ನಿಷ್ಠೆ, ಪಿತಹಿರಣ್ಯಕನ ಅತ್ಯಾಚಾರ ಕಥೆಯಲ್ಲಿದೆ ||

ಕೊಲ್ಲಲು ಹಿರಣ್ಯಕನ ಪ್ರಾದುರ್ಭವಿಸಿದ ನರಸಿಂಹ ಕಂಬದಿಂದ |

ಇಲ್ಲಿ ಹೇಳಿದೆ ಸನಾತನ ಧರ್ಮ, ಯತಿಧರ್ಮ, ಬ್ರಹ್ಮಚರ್ಯ, ವಾನಪ್ರಸ್ಥಗಳಬಗ್ಗೆ ||

ಬಲು ನಿರೂಪಿಸಲಾಗಿದೆ ಗೃಹಸ್ಥಧರ್ಮ, ಲಯ ಚಿಂತನೆ, ಕರ್ಮಜ್ಞಾನಗಳ ||

ಅಷ್ಠಮ ಸ್ಕಂಧ

ಅಷ್ಟಮ ಸ್ಕಂಧದಲ್ಲಿದೆ ಹದಿನಾಲ್ಕು ಮನ್ವಂತರಗಳ ವಿವರ |

ಮೋಕ್ಷ ಪಡೆದ ಗಜೇಂದ್ರೋಪಾಖ್ಯಾನ, ಕ್ಷೀರಸಾಗರ ಮಥನ ||

ವಿಷಪಾನ, ಅಮೃತೋತ್ಪತ್ತಿ, ದೇವಾಸುರ ಸಂಗ್ರಾಮ |

ಲಕ್ಷ್ಮೀನಾರಾಯಣರ ಕಲ್ಯಾಣ, ಅದಿತಿಪುತ್ರ ವಾಮನಾವತಾರ, ಬಲಿ ಉದ್ಧಾರ ||

ಔಷಧೀ, ಬೀಜ, ಸಪ್ತರ್ಷಿಗಳ ಪ್ರಳಯದಿ ರಕ್ಷಿಸಿದ ಮತ್ಸ್ಯಾವತಾರದ ಕಥೆ ||

ನವಮಸ್ಕಂಧ

ಒಂಭತ್ತನೇ ಸ್ಕಂಧದಿ ಬರುವುದು ಸುದ್ಯುಮ್ನ, ಮನುಸುತರೈವರ ಚರಿತೆ |

ನಾಭಾಗ, ಚ್ಯವನ, ಅಂಬರೀಷಾಖ್ಯಾನ, ಮಾಂಧಾತ ||

ಸೌಭರಿ, ಹರಿಶ್ಚಂದ್ರ ಉಪಾಖ್ಯಾನಗಳು, ಸಗರ ಖಟ್ವಾಂಗರ ಕಥೆ |

ನಭದಿಂದ ಭೂಮಿಗೆ ಗಂಗೆಹರಿಸಿದ ಭಗೀರಥ, ರಘು, ನಿಮಿವಂಶಗಾಥಾ ||

ಬಿಂಬಿಸಿದೆ ಶ್ರೀರಾಮ, ಪರಶುರಾಮಾವತಾರ ಅಲ್ಲದೆ ಯದುವಂಶದ ಕೃಷ್ಣಾವತಾರ ಪ್ರಸ್ತಾವನೆ ||

ದಶಮಸ್ಕಂಧ

ದಶಮಸ್ಕಂಧ ಪೂರ್ವಾರ್ಧದಲ್ಲಿದೆ ಕಂಸ ಚರಿತೆ |

ವಸುದೇವ-ದೇವಕಿ ವಿವಾಹ, ಯೋಗ ಮಾಯಾ ಮಹಿಮೆ ||

ಕೃಷ್ಣಾವತಾರ, ಗೋಕುಲ ನಿರ್ಗಮನ, ಬಾಲ ಲೀಲೆಗಳನೇಕ |

ರಾಕ್ಷಸರಾದ ಪೂತನಾ, ಶಕಟಾಸುರಾದಿ ಸಂಹಾರ ಕಥೆ, ಕಾಲೀಂiÀiಮರ್ದನ ||

ಗ್ರೀಷ್ಮಾದಿ ಋತುಗಳವರ್ಣನೆ, ಗೋವರ್ಧನೋದ್ಧಾರ, ಗೋಪಿಗೀತೆ, ರಾಸಲೀಲೆ |

ಕೇಶಿವಧೆ, ಅಕ್ರೂರ ಜೊತೆ ಮಥುರಾಗಮನ, ತ್ರಿವಕ್ರೆ ಉದ್ಧಾರ ||

ಕಂಸವಧೆ, ರಾಮ-ಕೃಷ್ಣರ ಗುರುಕುಲವಾಸ, ಉದ್ಧವ ಗೀತೆ |

ಪೂರ್ವಸ್ಕಂಧ ಕೊನೆಯಾಗಲಿದೆ, ಉತ್ತರಾರ್ಧದಲ್ಲಿದೆ ||

ಜರಾಸಂಧ ಮರಣ, ಸೃಗಾಲವಾಸುದೇವ ವಧೆ, ಪಾಂಡವರ ಕ್ಷೇಮ ವಿಚಾರ |

ದ್ವಾರಕಾ ನಿರ್ಮಾಣ, ಮುಚಕುಂದ ಚರಿತೆ, ಕಿರೀಟ ಪ್ರಾಪ್ತಿ ||

ಶ್ರೀರುಕ್ಮಿಣಿ ಕಲ್ಯಾಣ, ಸ್ಯಮಂತಕಾಖ್ಯಾನ, ಸತ್ಯಭಾಮಾದಿಯರ ಕಲ್ಯಾಣ |

ನರಕಾಸುರ ವಧೆ, ರಾಜಸೂಯಯಾಗ,ಶಿಶುಪಾಲವಧೆ ||

ಶ್ರೀಕೃಷ್ಣ ಗಾರ್ಹಸ್ಥ್ಯಧರ್ಮದರ್ಶ, ಕುರುಕ್ಷೇತ್ರ ಯುದ್ಧ, ಸುದಾಮ ಚರಿತ್ರೆ, ಶ್ರುತಿಗೀತೆ |

ದ್ವಾರಕಾ ಮಹಿಮೆ, ಶ್ರೀ ಕೃಷ್ಣವಿಹಾರ, ದಂತವಕ್ರ ವಧೆ ||

ಏಕಾದಶ ಸ್ಕಂಧ

ಏಕಾದಶ ಸ್ಕಂಧದಲ್ಲಿದೆ ಅವಧೂತಗೀತೆ, ಜಾಯಂತೇಯೋಪಾಖ್ಯಾನ |

ಭಕ್ತರ ಲಕ್ಷಣ, ಜೊತೆ ಭಕ್ತಿ, ಧ್ಯಾನಪ್ರಕಾರ ಯೋಗ್ಯ ಉಪಾಸನಾಕ್ರಮ ||

ಭಿಕ್ಷುಗೀತೆ, ಐಲಗೀತೆ, ಕರ್ಮ, ಜ್ಞಾನ, ಭಕ್ತಿಯೋಗಸಾರ ಇಲ್ಲಿವೆ |

ಪ್ರಕೃತಿ ಬಂಧ-ಮೋಚಕ ನಂತರ ಯದುಕುಲೋಪಸಂಹಾರ ||

ಶ್ರೀಕೃಷ್ಣ ಬೋಧಿಸಿದ, ವ್ಯಾಪ್ತೋಪಾಸನೆಯ ಫಲವೇ ಸಂಸಾರದಿಂದ ಮುಕ್ತಿ |

ಏಕಾಂತ ಭಾಗವತ ಭಕ್ತ ಉದ್ಭವಗೆ ಉಪದೇಶಾನಂತರ ಶ್ರೀಕೃಷ್ಣಪರಂಧಾಮಗಮನ ||

ದ್ವಾದಶ ಸ್ಕಂಧ

ಕಲಿಯುಗ ಲಕ್ಷಣ, ಕಲಿದೋಷದ ಪರಿಹಾರ, ದ್ವಾದಶ ಸ್ಕಂದದಲಿ

ಕಲ್ಪ ಪ್ರಳಯ, ಮಾರ್ಕಂಡೇಯ ಕಥೆ, ಮಾನಸ ಪೂಜೆ ಪ್ರಾಮುಖ್ಯತೆ ||

ಕಳೆದ ಅಜ್ಞಾನ, ಪಡೆದ ಜ್ಞಾನ, ನಿವಾರಿಸಿ ಸರ್ಪಯಾಗ ಮುಕ್ತನಾದ |

ನಾಲ್ಕು ಮುಖದಿಂದ, ನಾಲ್ಕು ವೇದಗಳ ಬೋಧಿಸಿದ ಚರ್ತುಮುಖ ||

ಕೇಳಿದರು ಕಶ್ಯಪಾದಿಋಷಿಗಳು, ಆರು ಪೌರಾಣಿಕರು |

ಪೇಳಿದರು ಶ್ರೀ ಮದ್ಭಾಗವತದ ದಶಲಕ್ಷಣಗಳ ಮಹಾಪುರಾಣ ||

ಕಲಿಯುಗದಿ ಇದನು ತಿಳಿದವ ಜ್ಞಾನೀಯಾಗುವ |

ಒಲಿಸಿಕೊಳ್ಳುವ ಸುಲಭದಿ ಶ್ರೀ ಕೃಷ್ಣವಿಟ್ಠಲನ ದಯೆ ನಿಜದಿ ||

45. ದ್ವಾದಶ ಸ್ಕಂಧಗಳ ಶ್ರೀಮದ್ ಭಾಗವತದ ಸಾರ |

ಇದು ಸಂಕ್ಷೇಪದಿ ತಿಳಿಸಿದ ವೇದಗಳಸಾರ ||

ಮೊದಲ ಸ್ಕಂಧದಿ ದೇಹಾಭಿಮಾನ ಬಿಟ್ಟು ಸಾವಿಗಂಜದೇ ಮೊಕ್ಷಧರ್ಮ ಕಲಿಯಿರಿ |

ಸ್ಕಂಧ ಎರಡರಲ್ಲಿ ಯೋಗ್ಯ ಗುರುಗಳ ಮೂಲಕ ಸಂಸಾರತಾರಕ ಭಗವತ್ಕಥಾಶ್ರವಣ ಮಾಡಿ ||

ಸ್ಕಂಧ ಮೂರರಲ್ಲಿ ತತ್ವ ನಿಶ್ಚಯಿಸಿ, ಶ್ರೀಕಪಿಲ-ದೇವಹೂತಿ ಸಂವಾದದಿ |

ಸ್ಕಂಧ ನಾಲ್ಕರಲ್ಲಿ ತತ್ವನಿಶ್ಚಯವಾಗದಿದ್ದರೆ ದಕ್ಷಾಧ್ವರ ಧ್ವಂಸದಂತೆ ಬಾಧಕವು ||

ಐದರ ಸ್ಕಂಧದಂತೆ ಭೂಗೋಲ, ಖಗೋಲ ವಿಚಾರ ಅರಿತು ಸ್ಥೂಲೋಪಾಸನೇ ಮಾಡು |

ಸ್ಕಂಧ ಆರರಲ್ಲಿ ಉದಾಸಿನದಿ ತಪ್ಪೆಸಗಿದರೆ ಮಹಾನರ್ಥವೆಂದು ವೃತ್ರಾಸುರನ ಕಥೆಯೇ ಸಾಕ್ಷಿ ||

ಸ್ಕಂಧ ಏಳರಲಿ ಭಕ್ತಿಯ ಬಹು ಧಾಡ್ರ್ಯ ಬೆಳಿಸಿ, ಸಾಕ್ಷಿಯಾಗಿ ಪ್ರಲ್ಹಾದ ಹಿರಣ್ಯಕನ ಕಥೆ |

ಸ್ಕಂಧ ಎಂಟರಲ್ಲಿ ಬಿಡದೇ ಪ್ರಯತ್ನದಿ ಶ್ರೀಹರಿಗೇ ಶರಣಾಗಿ ಸ್ತುತಿಸಿ ಗಜೇಂದ್ರನಂತೆ ||

ಸ್ಕಂಧ ಒಂಬತ್ತರಲ್ಲಿ ಹೇಳಿದರು ಬಹುರಾಜರ ವಂಶಾವಳಿ ಭಕ್ತಿಘಟ್ಟ್ಯಾಗಿ ವಿರಕ್ತಿ ಬರಲು |

ಸ್ಕಂಧ ಹತ್ತರಲ್ಲಿ ನಿರ್ವಾಜ್ಯ ಪ್ರೀತಿ-ಭಕ್ತಿ ಮಾಡಿ ಭಗವಂತನೊಲಿಸಿ ಗೋಪಿಕಾಸ್ತ್ರೀಯರಂತೆ ||

ಸ್ಕಂಧ ಹನ್ನೊಂದರಲ್ಲಿ ಭವ ಭಯ ಸಂಸಾರ ದಾಟಲು ಉಪಾಸನೆ ಒಂದೇ ಮಾರ್ಗವೆಂದು ಉದ್ಧವನ ಉಪದೇಶಾಖ್ಯಾನದಲ್ಲಿದೆ |

ದ್ವಾದಶಸ್ಕಂಧದಿ ಗುರುಮುಖೇನ ಉಪದೇಶವೇ ಅಪರೋಕ್ಷ ಕಾರಣವೆಂದು ಮಾರ್ಕಂಡೇಯರ ಉದಾಹರಿಸಿದೆ ||

ಓದಿರಿ ಬಿಡದೇ ನಿತ್ಯ ಉಸಿರಿರುವರೆಗೂ ಜ್ಞಾನ, ಭಕ್ತಿ, ವೈರಾಗ್ಯದ ತಾತ್ಪರ್ಯವೇ ಇದರಲ್ಲಿ

ಶ್ರೀಕೃಷ್ಣವಿಟ್ಠಲನೇ ಒಂದಂಶದಿ ನೆಲೆಸಿದ್ದು ಅನುಗ್ರಹಿಪ ||

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು