ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಶ್ರೀ ಕೃಷ್ಣವಿಠ್ಠಲಪದಗುಚ್ಛ 2

ಶ್ರೀ ರಾಘವೇಂದ್ರ ನಮ:

10. ಶ್ರೀನಾಥನ ಒಂದೇ ಮನದಿ ಪೂಜಿಸಲು |

ರಾರಾಜಿಸುವ ವಿಷ್ಣು ಲೋಕದಿ ||

ಘಸಣೆ(ಚಿಂತೆ) ಕಳೆದು ಘನತೆವೆತ್ತಿ |

ವೇಂಕಟಪತಿ ಶ್ರೀಕೃಷ್ಣವಿಟ್ಠಲನ ದಯದಿ ||

ದ್ರವಿಣ ಪಡೆದು ಸುಖಿಸುವ |

ನಮಿಸಲು ಬಾರಿ ಬಾರಿಗೂ ||

ಮರೆಯದೆ ಸಕಲರ |

ಹರುಷದಿ ಜನ್ಮ ಸಾರ್ಥಕವಾಗಿಸುವ ||

ಶ್ರೀ ವಾದಿರಾಜರು

11. ನೆನೆವೆ ಗುರು ವಾದಿರಾಜರ ಚರಣವ |

ಶ್ರೀಹಯವದನ ನಿಜ ಭಕುತ | || ||

ಯುಕ್ತಿಮಲ್ಲಿಕಾ ಸೊಬಗು ಪಸರಿಸಿದ |

ವಿಷ್ಣೋ: ಸರ್ವೋತ್ತಮತ್ವಂ ಸಾರಿದ | || 1 ||

ಬೆಲ್ಲ ಕಡಲೆ ನೈವೇದ್ಯ ಇತ್ತು ಸಾಕ್ಷಾತ್ತಾಗಿ |

ಹಯಗ್ರೀವನ ಕಂಡು ಕೊಂಡಾಡಿದವರ | || 2 ||

ಸಜ್ಜನರ ತಾಪ ಕಳೆಯಲು ಸೋಂದಾಕ್ಷೇತ್ರದಿ ನೆಲಸಿ |

ಪೂಜಿಪನ, ಶ್ರೀಕೃಷ್ಣವಿಟ್ಠಲ ಸಲಹಲಿ ಅನವರತ | || 3 ||

ಎಎಎ

12. ಶ್ರೀವಾದಿರಾಜಗುರು ಕೃಪೆದೋರು ಸದಾ |

ಸೋಂದಾಕ್ಷೇತ್ರದಿನೆಲಸಿರುವ | || ||

ಭಕ್ತಗಣ ಶ್ರೇಷ್ಠ ಸಕಲಾಭೀಷ್ಟಪ್ರದ |

ಭಕ್ತ ಜನೋದ್ಧಾರಕ ಹಯಗ್ರೀವ ಉಪಾಸಕ | || 1 ||

ಸಕಲ ಸಲ್ಲಕ್ಷಣೋಪೇತ, ಸರ್ವಲಕ್ಷಣ ಸಂಪನ್ನ |

ಭೂತರಾಜರನುಗ್ರಹಿಪ, ರಮಾ-ತ್ರಿವಿಕ್ರಮರ ಕರೆಸಿದವ | || 2 ||

ಸುಜ್ಞಾನಪ್ರದಾಯಕ, ಮಧ್ವಮತೋದ್ಧಾರಕ |

ಸ್ವಾಮಿ ಶ್ರೀಕೃಷ್ಣವಿಟ್ಠಲನ ಅನವರತ ಪೂಜಿಪ | || 3 ||

13. ಸುಜ್ಞಾನಗುಣಸಂಪನ್ನ ಸರ್ವಕಾಮಪ್ರದಾಯಕಂ |

ವಾದಿರಾಜಗುರುಂ ಭಜೇ ಶ್ರೀಹಯಗ್ರೀವ ದಯಾಶ್ರಯಂ ||

ವಾದಿರಾಜಗುರುವೇ ಕರುಣದಿ ಎನ್ನಕಾಯೋ |

ಪ್ರೀತಿಯಿಂದ ಕರುಣಿಸೋ ಸುಜ್ಞಾನವ ||

ಭಕ್ತಿಮಾಡಲರಿಯೇ ಸೇವೆ ಮಾಡಲರಿಯೇ |

ನಿಷ್ಠೆಯಿಂದ ಗುರು ನಿನ್ನ ನೆನೆವೆನು ||

ಲಕ್ಷ್ಮಿ ಶೋಭಾನ ಪಾಡಿ ವರನ ಬದುಕಿಸಿದೆ |

ರುಕ್ಮಿಣೀಶ ವಿಜಯ ರಚನ ಸರ್ವಮಾನ್ಯ ||

ಧವಳ ಗಂಗೆಯ ತಟದಿ ಮಹಾದೇವನ ಸ್ಥಾಪಿಸಿ |

ಲಕ್ಷ್ಮೀ ತ್ರಿವಿಕ್ರಮರ ಬದರಿಯಿಂದ ಕರೆಸಿದೆ ||

ಭೂತರಾಜರ ಸೇವೆ ನಿತ್ಯದಲಿ ಸೇವಿಪ |

ಸಕಲ ಭಕ್ತರ ಆಭೀಷ್ಟೆ ಪೂರೈಪ ||

ನಿತ್ಯದಿ ಕಡಲೆ ಹೂರಣ ನೈವೇದ್ಯ ಅರ್ಪಿಸಿ |

ಹಯಗ್ರೀವನ ದಯದಿ ಸುಜ್ಞಾನ ಪಡೆದೆ ||

ಪರಮತ ಜಯಸಿ ಮಧ್ವಮತ ಪ್ರಚಾರಿಸಿ |

ನಾರಾಯಣ ಮಂತ್ರವ ಬಿಡದೆ ಜಪಿಸಿದ ಹಯವದನಾಂಕಿತನೆ ||

ದೈತಮತ ಪ್ರವರ್ತಕನೇ, ಶಿಷ್ಯವತ್ಸಲನೆ |

ಉಡುಪಿಲಿ ಶ್ರೀಕೃಷ್ಣವಿಟ್ಠಲನ ಕೈಂಕರ್ಯ ಮಾಳ್ಪ ||

ಶ್ರೀ ಜಯತೀರ್ಥರು

14. ಜಯರಾಯರ ಕರುಣೆ ಅಪಾರ ಅಪರಂಪಾರ |

ಎಂತು ಪೂಗಳಲಿ ಮಹಾಮಹಿಮ ಮುನಿವರ್ಯನ | || ||

ಕಾಗಿನಿ ತಟದಿ ವೃಂದಾವನದಿ ನೆಲಸಿಹ ಸದಾಯೋಗನಿರುತ |

ಭಕ್ತರ ಸಂಸಾರ ಮಲ ನಿವರ್i ಮಾಡುವ ಮಲಖೇಡದಿ ವಾಸಿಪ ||

ಎತ್ತಾಗಿ ಜನಿಸಿ ಮಧ್ವಶಾಸ್ತ್ರ (ಪುಸ್ತಕ) ಪೊತ್ತುನಿಷ್ಠೆಯಿಂದಲಿ ತಿರುಗುತ |

ಗುರುಕೃಪೆಯಿಂ ಅದಕ್ಕೆ ಟೀಕೆ ಬರೆದ ಟೀಕಾರಾಯರ | || 1 ||

ಇಂದ್ರಾವತಾರಿ ಶೇಷಾಂಶ ಸಂಭೂತ ಸಂಸಾರ ವಿಷಯ ತೊರೆದ |

ಪರಮ ವೈರಾಗಿ ಭಕ್ತಜನರಿಗೆ ಅಭಯವಚನವೀವ ||

ದಿವ್ಯ ಸನ್ನಿಧಿ ತವ ಚರಣ ಪಿಡಿದಿರುವೆ ಬಿಡದೆ ಎನ್ನುದ್ಧರಿಸೋ |

ಗುರುವೇ ಜಯರಾಯ ಶ್ರೀಕೃಷ್ಣವಿಟ್ಠಲನ ವಾತ್ಸಲದ ಕಂದನೇ | || 2 ||

ಊಊಊ

ಸರ್ವಗುರುಗಳು

15. ಶ್ರೀಪೂರ್ಣಪ್ರಜ್ಞಂ ಜಯರಾಯಂ |

ಬ್ರಹ್ಮಣ್ಯತೀರ್ಥಸ್ಯಂ ಶ್ರೀಪಾದಂ |

ಶ್ರೀವ್ಯಾಸಂ ವಾದಿರಾಜಂ |

ವಿಜಯೀಂದ್ರಂ ರಘೂತ್ತಮಂ ||

ಶ್ರೀರಾಘವೇಂದ್ರಂ ಸತ್ಯಬೋಧಕಂ |

ಸತ್ಯಧ್ಯಾನಾಸಕ್ತಂ ಶ್ರೀಸತ್ಯಪ್ರಮೋದಂ ||

ವಂದೇ ಗುರುಂ ಪರಂಪರಾಂ |

ಭೂಯೋ ಭೂಯೋ ನಮಾಮ್ಯಹಂ ||

ಪ್ರಾತ: ಕಾಲ ಸ್ಮರಣೇನ ಶ್ರೀಕೃಷ್ಣವಿಟ್ಠಲ ಕೃಪಾಪ್ರಾಪ್ತಿರ್ಭವತಿ ||

16. ವಂದೇಂ ಗುರು ಪರಂಪರ

ಪೂರ್ಣಪ್ರಜ್ಞಂ ಶ್ರೀಪದ್ಮನಾಭಂ |

ಜಯತೀರ್ಥ ಬ್ರಹ್ಮಣ್ಯ ತೀರ್ಥ ಶ್ರೀಪಾದರಾಜಾನ್ ||

ಶ್ರೀವ್ಯಾಸಂ ವಾದಿರಾಜಂ ವಿಜಯಿಂದ್ರಂ |

ರಘೂತ್ತಮ ಶ್ರೀ ಸತ್ಯವ್ರತೌ ||

ಶ್ರೀರಾಘವೇಂದ್ರ ಸತ್ಯಬೋಧೌಚ |

ಸತ್ಯಧ್ಯಾನ ಶ್ರೀಸತ್ಯಪ್ರಮೋದಕೌ ||

ಶ್ರೀಸತ್ಯಾತ್ಮಂ ಭೂಯೋ ಭೂಯೋ ನಮಾಮ್ಯಹಂ |

ಏವಂ ಸರ್ವ ಗುರುಸ್ಮರಣ ಮಾತ್ರೇಣ ಶ್ರೀಕೃಷ್ಣವಿಟ್ಠಲ ಕೃಪಾಪ್ರಾಪ್ತಿ: ||

ಶ್ರೀ ಗಣಪತಿ

17. ಹೇರಂಬಾ, ಗಜಾನನ ಗಣಾಧಿಪತಿಯೈ ನಮೋನಮ: |

ಸರ್ವದುಖ: ನಿವಾರಕ ಸ್ಮರಣೆ ಮಾತ್ರ ಸುಖಪ್ರದಾಯಕ | || 1 ||

ವಕ್ರತುಂಡ ಮೋದಕಪ್ರಿಯ ಮೂಷಿಕವಾಹನ |

ಏಕದಂತ ಅಕಳಂಕ ಚರಿತ ಮಹಾಕಾಯ ಫಾಲಚಂದ್ರ | || 2 ||

ಸತ್ಯವ್ರತ ಲಂಬೋದರ ಪಾಶಾಂಕುಶಧರಿತ |

ಮಾತೃಭಕ್ತ ಉತ್ತುಂಗಶ್ರೇಷ್ಠ ಗೌರಿತನಯ | || 3 ||

ಸಜ್ಜನ ಮುನಿ ಸುಪೂಜಿತ ಹೇ|ವಿಘ್ಯರಾಜ ಶರಣು |

ತ್ರಿಜಗವಂದಿತ ಶ್ರೀಕೃಷ್ಣವಿಟ್ಠಲ ಪರಮಭಕ್ತ | || 4 ||

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು