ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಶ್ರೀ ಕೃಷ್ಣವಿಠ್ಠಲಪದಗುಚ್ಛ 2

ಸಂಗರಹಿತನಾಗಿ ಏಕಾಂತದಿ

ಮಾರುತಿರಮಣನ ಧ್ಯಾನದಿ ಮುಳುಗಿಸು | || 1 ||

ಅಪರೋಕ್ಷ ಪಡೆದ ಮುಮುಕ್ಷಗಳನರಿತು

ಸೇವಿಸುವವರ ನಿರುತದಿ ಸೇವೆ ಕೊಡು |

ಪಾಪ-ಪುಣ್ಯಗಳ ಲೆಕ್ಕವಿಡದೆ ಸಕಲವೂ

ಪರಮಾತ್ಮನ ಸೇವೆ ಎಂದರಿತು ||

ಅಪರಿಮಿತ ಭಕ್ತಿಯಿಂ ಶರಣೆಂಬೆ ದೈನ್ಯತೆಯಲಿ ಬೇಡುವೆ |

ಸರ್ಪಶಯನ ನಮ್ಮಪ್ಪ ಶ್ರೀಕೃಷ್ಣವಿಟ್ಠಲ ಚಿತ್ತಕ್ಕೆ ತಂದು ಪಾರುಗಾಣಿಸೋ ||

220. ಏನು ಮಾಡಿದರೆ ಮುಕುತಿಯಾಗುವುದು ಜಗದೊಳು |

ಅಣು, ರೇಣು ತೃಣಕಾಷ್ಟದಿ ನೆಲೆಸಿರುವ ಹರಿಯೆ | || 1 ||

ಏಸು ದೇಹ ದಂಡಿಸಿದರೇನು? ಮಂಡೆಯೂರಿ ನಮಿಸಿದರೇನು? |

ಏಸುವ್ರತ, ಯಾಗ ಮಾಡಿದರೇನು? ಏಸು ಜಪ, ತಪದಿಂದೇನು? | || 2 ||

ದಿನದಿನದಿ ಅನ್ನದಾನ, ಧನ, ಕನಕದಾನದಿ ಒಲಿಯನು |

ಮನಮುಟ್ಟಿ ಮಾಡಿದ ಭಜನೆ, ಸಜ್ಜನ ಸಂಗದಿ ಒಲಿಯನು | || 3 ||

ಅನುದಿನ ಮಾಳ್ಪ ಜ್ಞಾನಸಹಿತ ಕರ್ಮ ಸ್ವೀಕರಿಪ |

ದಾನವಾಂತಕ ಶ್ರೀಕೃಷ್ಣವಿಟ್ಠಲನ ಕೃಪೆಯಾದರೆ ಮಾತ್ರ | || 4 ||

221. ಅವನಿಯೊಳು ಗಂಧವಿಟ್ಟೆ, ಗರ್ಭದಿ ಜೀವವಿಟ್ಟೆ |

ವನ(ನೀರು)ದೊಳು ರಸವಿಟ್ಟೆ, ಅದರಲಿ ರುಚಿಯಿಟ್ಟೆ ||

ಉಜ್ವಲ ಶಿಖಿಯಲಿ ರೂಪವಿಟ್ಟೆ, ಜೊತೆ ಶಾಖವಿಟ್ಟೆ |

ಪವನನಲಿ ಸ್ಪರ್ಶವಿಟ್ಟೆ, ಅದರಲಿ ಅರಿವುಇಟ್ಟೆ ||

ಭವ್ಯ ಆಗಸದಿ ಶಬ್ದವಿಟ್ಟೆ, ಸುವಿಶಾಲ ಭಾವವಿಟ್ಟೆ |

ಅವ್ಯಕ್ತಾವ್ಯಕ್ತ ಶ್ರೀಕೃಷ್ಣವಿಟ್ಠಲ ಎನ್ನೊಳು ಏನಿಟ್ಟೆ ತಿಳಿಸು ||

ಊಊಊ

ಉಗಾಭೋಗಗಳು

222. ನಿನ್ನ ಗುಣಶ್ರವಣದಿ ಜನುಮ ಸಾರ್ಥಕವೆನಿಸುವುದು |

ನಿನ್ನ ಸ್ಮರಣೆಯಲಿ ಚಿತ್ತದಿ ಹರುಷವಾಗುವುದು ||

ನಿನ್ನ ದರುಶನದಿ ಮನವರಳಿ ಹೂವಾಗುವದು |

ಅನ್ಯಥಾ ಭೇದಿಸದೆ ಸದಾ ಸಕಲರ ಪೊರೆಯುವವನೇ ||

ನಿನ್ನ ನಿಜ ಭಕುತಿಯಲಿ ಮುಳುಗುವ ಸೌಭಾಗ್ಯ ಕೊಡು |

ನೀನೇ ನನಗೆ ಪರಮಾಗತಿ ಶ್ರೀ ಕೃಷ್ಣವಿಟ್ಠಲ ||

223. ಹೊಡಿ, ಬಡಿ, ಜಡಿ, ಕಡಿ, ಸುಡು ಬೇಡುವೆನೊಂದೇ |

ಕಡೆಗೂ ನಿನ್ನ ಬಿಟ್ಟರೆ ಅನ್ಯಗತಿಯಿಲ್ಲ, ಸುಖವಿಲ್ಲ ||

ದಡ ಸೇರಿಸು ನೋಡುವೆ ಒಮ್ಮೆ ಮನ ದಣಿಯಾ |

ಬಿಡದೆ ಪಾಲಿಸೋ ದಯದಿ ಶ್ರೀಕೃಷ್ಣವಿಟ್ಠಲಾ ||

224. ಅನ್ಯರ ದೂಷಿಸಿ, ದ್ವೇಷಿಸೇ ಸಿಗುವುದು ಏನೋ |

ವೈಮನದಿ ಕೋಪ-ತಾಪದಿ ಕಳೆದುಕೊಳ್ಳುವುದೆ ಬಹಳ ||

ಮನಸಾ ಪ್ರೀತಿಸೇ ಶಾಂತಿ ಒಲುಮೆ ಸಿಗುವುದು |

ಕನ್ನಡಿಯಂತಿರ್ಪುದೀ ಜಗ ಶ್ರೀಕೃಷ್ಣವಿಟ್ಠಲನಾಣೆಗೂ ಸತ್ಯ ||

225. ಎಲ್ಲ ದೇಶಗಳಲ್ಲಿ ಭರತ ಖಂಡ ಶ್ರೇಷ್ಠ |

ಎಲ್ಲಯೋನಿಗಳಲ್ಲಿ ಮಾನವ ಜನ್ಮ ಶ್ರೇಷ್ಠ ||

ಎಲ್ಲ ಮನೆಗಳಲ್ಲಿ ದೇವರ ಮನೆ ಶ್ರೇಷ್ಠ |

ಎಲ್ಲ ಅನ್ನಗಳಲ್ಲಿ ನೈವೇದ್ಯನ್ನ ಶ್ರೇಷ್ಠ ||

ಎಲ್ಲ ಸಂಗಗಳಲ್ಲಿ ಸತ್ಸಂಗ ಶ್ರೇಷ್ಠ |

ಎಲ್ಲ ಸಾಧನೆಗಳಲ್ಲಿ ಮೋಕ್ಷ ಸಾಧನೆ ಶ್ರೇಷ್ಠ ||

ಎಲ್ಲ ಗುರುಗಳಲ್ಲಿ ಸಂತೋಷ ತೀರ್ಥರು ಶ್ರೇಷ್ಠ |

ಎಲ್ಲ ದೇವರಲ್ಲಿ ಪುರುಷೋತ್ತಮ ಶ್ರೀಕೃಷ್ಣವಿಟ್ಠಲ ಶ್ರೇಷ್ಠ ||

226. ಭಾಗವತ ಎಂದರೆ ಎನ್ನ ಭಾಗವ-ತಾ |

ಎಂದರೆ ಭಕ್ತಿ, ಎಂದರೆ ಜ್ಞಾನ, ಎಂದರೆ ವಿರಕ್ತಿ ||

ಇವುಗಳನ್ನು ಮನೋಬುದ್ಧಿ, ಇಂದ್ರಿಯಗಳಲಿ ತುಂಬಿ ತುಳುಕಿಸಿದಾಗ |

ಎಂದರೆ ತರುವುದು ಭಾಗವತ ತತ್ವ, ಆಗುವುದು ಶ್ರೀಕೃಷ್ಣವಿಟ್ಠಲನ ದರ್ಶನ ||

227. ಆನಂದ ಆನಂದ ಆತ್ಮಪರಮಾತ್ಮ ಸಂಬಂದ ತ್ರಿಶುದ್ಧಿಲಿ ತಿಳಿದವಗೆ |

ಆನಂದ ದೇಹದ ಚತುರ್ವಿಂಶತಿ ತತ್ವ ತಿಳಿದವಗೆ ||

ಆನಂದ ಪಂಚಭೇದ, ತಾರತಮ್ಯ ಕಾರುಣ್ಯವರಿತವಗೆ |

ಆನಂದ ತತ್ತ್ವೇಶರ ಕಾರ್ಯ ಸ್ಥೂಲದಿ ಅರಿತವಗೆ ||

ಆನಂದ ತತ್ತ್ವೇಶರಲ್ಲಿದ್ದ ಮುಖ್ಯಪ್ರಾಣನ ಪಾತ್ರವರಿತವಗೆ |

ಆನಂದ ಪ್ರಾಣನಲ್ಲಿದ್ದ ಶ್ರೀಕೃಷ್ಣವಿಟ್ಠಲನ ಪ್ರಸಾದಿತಗೆ ||

228. ನಿತ್ಯದಲ್ಲಿ ನಿತ್ಯಮಂಗಳ ಚರಿತನಾದ ಪರಮಾತ್ಮನ |

ನಿತ್ಯಚಿಂತನದಿಂದಲೇ ದೊರಕುವುದು ನಿತ್ಯಮಂಗಳ ||

ಸಾತ್ತ್ವಿಕ ಸದ್ವಾಸನಾ ಅಭಿಲಾಷೆಯೇ ಪುಣ್ಯ ಲೋಕಗಳ ಪ್ರಾಪ್ತಿ |

ಸ್ವತಂತ್ರ ಶ್ರೀಕೃಷ್ಣವಿಟ್ಠಲ ಅನುಗ್ರಹಿಪ ಯದೃಚ್ಛಾಲಾಭ ಸಂತುಷ್ಟನ ||

229. ಹಿಂದೆ-ಇಂದು-ಮುಂದೆ ಮಾಡಿದ,

ಮಾಡುವ ಕರ್ಮಫಲ ಅರ್ಪಿಸುವೆ |

ಹಿಂದಿನದು ಗೊತ್ತಿಲ್ಲಾ, ಮುಂದೇ ಬುದ್ದಿ

ಇರುವುದೊ ಇಲ್ಲವೋ ತಿಳಿಯದು ||

ಮುಂದೇ ಮಾಡುವುದನ್ನು ಇಂದೇ

ನಿನಗೊಪ್ಪಿಸಿರುವೆ ದಯದಿ ಸ್ವೀಕರಿಸು |

ಇಂದಿರಾರಮಣ, ಸದಾನಂದ, ಸಖ ಶ್ರೀಕೃಷ್ಣವಿಟ್ಠಲ ಇಂದೇ

ಎನ್ನ ಒಪ್ಪಿಕೊ ಇಲ್ಲಾ ಅಪ್ಪಿಕೊ ||

230. ಮುಂದೆ ನರಸಿಂಹ ರಕ್ಷಿಸೇ, ಹಿಂದ ನಂದನ ಕಂದ |

ಎಡಬಲದಲಿ ಧನುರ್ಧಾರಿ ಶ್ರೀರಾಮಲಕ್ಷ್ಮಣರಿರೇ ||

ಇಂದಿರಾರಮಣ ಎನಗೇತರ ಭಯವೋ |

ಸದಾ ಎನ್ನ ನಡೆ-ನುಡಿ ಕಾಯ್ವ ಶ್ರೀಕೃಷ್ಣವಿಟ್ಠಲ ||

231. ಆಡಿಸಿದಂತೆ ಆಡುವ | ನುಡಿಸಿದಂತೆ ನುಡಿವ ||

ನಡೆಸಿದಂತೆ ನಡೆವ | ಓಡಿಸಿದಂತೆ ಓಡುವ ||

ಕೂಡಿಸಿದಂತೆ ಕೂಡುವ | ದಡ ಸೇರಿಸಿದರೆ ಸೇರುವ ||

ಹಿಡಿತಕ್ಕೆ ಸಿಗದ ಜಗ್ಗದ (ಲೌಕಿಕದಿ) | ಕಡಲಾಬ್ಧಿವಾಸನ ಕೈಗೊಂಬೆ ||

ಕೊಂಡವರ ವಶವಾಗುವ (ಜನ್ಮದಾತರ) | ಮಂಡೆ ತಗ್ಗಿಸಿ ಹೇಳಿದಂತೆ ಕೇಳುವ || (ಪರಮಾತ್ಮನಧೀನ)

ಕಂಡವರ ಕಡೆಗಣಿಸುವ (ಅಹಂ)| ಗುಂಡಾಕೃತಿಯಲ್ಲಿ ಸುತ್ತುವ || (ಸಂಸಾರದಿ)

ಮಾಡದೆಯೂ ತಾ ಮಾಡಿದಂತೆ | ಒಡೆತನವ ತೊರಿಸಿಕೊಳ್ಳುವ ||

ಕಡೆಗಣಿಸಿದರೂ ಓಲೈಸುವ (ಸಂಸಾರದಿ ಹೀನ ಬದುಕು) | ಭಂಡತನದಿ ಬದುಕುವ ||

ಲಂಡತನದೀ ಜೀವ| ಅಂಡಲೆದರು ಬಿಡದೆ ||

ಉಂಡುಂಡು ತೇಗಿದರೂ| ಕಡಿಮೆಯಾಗದ ಕಾಮ ||

ಬಿಡುಗಡೆಗೆ ಯತ್ನಿಸದೆ| ಮೂಢತನದಿ ತನ್ನನರಿಯದೆ || (ಆತ್ಮ)

ಜಡ ಶರೀರವೇ ತಾನೆಂದು| ಒಡನೆ ಮೆಚ್ಚಿ ಶಾಶ್ವತ ತಾನೆಂದು ತಿಳಿದು ||

ಸಡಗರದಿ ಜನ್ಮ ಕಳೆದು| ಕೊಡಮಾಡಿದವರ ಮರೆತು || (ಪರಮಾತ್ಮನ)

ಪಡೆಯದೆ ಮುನ್ನ ಸುಜ್ಞಾನ| ಕಡೆಗೆ ಪರಿತಪಿಸಿದರೇನು ಬಂತು ಭಾಗ್ಯ ||

ಮುಂಡೆ ಹೂ-ಜಡೆಗತ್ತಂತೆ | ಸೊಡರು ಆರಿದಮೆಲೆ ಸೂಜಿ ಹುಡುಕಿದಂತೆ ||

ಹೆಡೆಮುರಿಗಿ ಕಟ್ಟಿ ಎಳೆದೊಯ್ವಾಗ | ಗಂಡರ ಗಂಡ ಶ್ರೀಕೃಷ್ಣವಿಟ್ಠಲನ ನೆನೆಯದಿರೆ ||

232. ಬಾಧಕಗಳೆಲ್ಲ ಸಾಧಕವಾಗಲಿ ಅನುದಿನ ಸಾಧನೆ ಹೆಚ್ಚಲಿ |

ಬಂಧಕ ವಿಷಯದಿಂದ ವಿಮುಖವಾಗಲಿ ಇಂದ್ರಿಯ ||

ದುರ್ದಿನಗಳೆಲ್ಲಾ ಸುದಿನವಾಗಿ ಸಂತೈಸಲಿ ನಿತ್ಯ |

ಬಿದ್ದು ಹೊಗುವ ಮುನ್ನ ತೀರಲಿ ಪ್ರಾರಬ್ಧವೆಲ್ಲಾ ||

ಬಂಧು ಬಾಂಧವರ ಸಂಗತೊರೆದು ಏಕಾಂತವಾಗಲಿ ಮನ |

ವೃಂದಾವನಸ್ಥ ವರದೇಶ ವರಪ್ರದ ಶ್ರೀಕೃಷ್ಣವಿಟ್ಠಲನ ದಯದಿ ||

233. ಒಂದೇ ಮನದಿ ಬೇಡುವೆ ನಿರ್ಮಲ, ನಿಚ್ಚಳ, ನಿರವಧಿಕ,

ನಿರಂತರ ನಿತ್ಯ, ನಿಜ ಭಕುತಿ ನಿನ್ನ ಪದತಲದಿ |

ಇದೇ ಜ್ಞಾನ ಇರಲಿ ಸಾಕು ಪ್ರತಿ ಜನುಮದಿ,

ಇದನ್ನೇ ದಯಪಾಲಿಸು ಶ್ರೀಕೃಷ್ಣವಿಟ್ಠಲ ||

234. ಅತ್ತ-ಇತ್ತ, ಸುತ್ತ-ಮುತ್ತ ಎತ್ತಲೂ ಪ್ರತೀ ಜನುಮದಿ |

ಕರ್ತೃ ಪ್ರೇರಕ ಶ್ರೀಕೃಷ್ಣವಿಟ್ಠಲನೇ ಕಾಣಲಿ ದಯದಿ ||

235. ಖಾಲಿ ಕೈಲಿ ಬಂದು ಜೀವನದಿ ಸರ್ವಸುಖ |

ಓಲೈಸಿ ಲೀಲೆಯಲಿ ಸಂಸಾರ ಜಯಿಸಿ ||

ಕೆಲಕಾಲ ಸುಖದಿ ಅತಿಥಿಯಂತಿದ್ದು |

ಕಾಲಕರೆದಾಗ ಒಲ್ಲೆಯೆಂದರೆ ಬಿಡದೆ ಒಯ್ವ ಶ್ರೀಕೃಷ್ಣವಿಟ್ಠಲ ||

236. ಹರಿದು ಸುರಿದು ಬಂದಾಗ ಸಂಸಾರದಿ |

ಸರಿಯಾಗಿ ಸರಿದು ಇರದಿದ್ದರೆ ||

ಸರ್ರನೇ ಸರಿಯುವ ಸಮಯದಿ |

ಕರೆಕರೆ ಮಾಡಿದರೆ ಕೇಳುವನೇ ಶ್ರೀಕೃಷ್ಣವಿಟ್ಠಲ||

ಪರರ ಪರಿವೆ ಇಲ್ಲದೆಸ್ವಾರ್ಥಿಯಂತೆ |

ಪರಜ್ಞಾನ ಗಳಿಸದೆ ಪ್ರಾಣಿಯಂತೆ ||

ಹೆರವರ ಉಪಕಾರ ಭಾರಹೊತ್ತಂತೆ |

ಪರೋವರ ಶ್ರೀಕೃಷ್ಣವಿಟ್ಠಲ ಮೆಚ್ಚುವನೇ? ||

ಬಂದಾಗ ಇಲ್ಲದ ಅಹಂ-ಮಮಕಾರ |

ಬಂದ ಮೇಲೆ ಬಿಡದೆ ಗಳಿಸಿದ ಆಸ್ತಿ ||

ಇದ್ದಾಗ ಮೆರೆದು, ತೊರೆಯದೆ |

ಒಯ್ದರೆ ಜೊತೆಯಲಿ ಶ್ರೀಕೃಷ್ಣವಿಟ್ಠಲ ಶಿಕ್ಷಿಸದಿರುವನೇ ||

237. ಪತಿ ಮಾಡಿದ ಪುಣ್ಯದಲಿ ಸತಿಗೆ ಸಮಪಾಲು |

ಸತಿ ಮಾಡಿದ ಪುಣ್ಯದಲಿ ಪತಿಗೆ ಪಾಲಿಲ್ಲ ||

ಪತಿ ಮಾಡಿದ ಪಾಪ ಸತಿಗೆ ಪೊಗದು |

ಸತಿ ಮಾಡಿದ ಪಾಪದ ಪಾಲು ಪತಿಗುಂಟು ||

ಪ್ರತಿಜನುಮದ ಪತಿ ನೀನೆನಗೆ ಶ್ರೀಕೃಷ್ಣವಿಟ್ಠಲ ರಕ್ಷಿಸನವರತ ||

238. ನೆಂಟರೆಲ್ಲಾ ಇಷ್ಟರಲ್ಲಾ |

ಇಷ್ಟರೆಲ್ಲಾ ನೆಂಟರಲ್ಲಾ ||

ಕಂಟಕ ಕಳೆವ ಶ್ರೀಕೃಷ್ಣವಿಟ್ಠಲ |

ಒಂಟಿ ಜೀವಕೆ ನೀನೇ ನೆಂಟ-ಇಷ್ಟ ||

239. ಬಗೆಬಗೆಯ ಉಪದೇಶ ಪೇಳುವರೆಲ್ಲಾ ಆಪ್ತರಲ್ಲಾ |

ಒಗೆತನದ ಮಾತಿನಲ್ಲಿ ಹೊಗೆ ಹಾಕುವರು ||

ಕಂಗೆಡಿಸಿ ಬೇಕೆಂದೆ ದಾರಿ ತಪ್ಪಿಸುವರು |

ಅಗ್ರೇಶ ಶ್ರೀಕೃಷ್ಣವಿಟ್ಠಲನ್ನೇ ನಂಬಿದರೆ ಉದ್ಧರಿಸುವಾ ||

ಸಾಧನೆಯಲ್ಲಿ ಪಂಚಪ್ರಾಣರ ವ್ಯಾಪಾರ ||

240. ಎಲ್ಲ ಕೊಡುವವ ನೀನೇ, ಕೊಡಲು ಬುದ್ಧಿಕೊಡುವವ ನೀನೇ |

ಕಲ್ಪಿಸಿ ಅವಕಾಶ ಕೊಡಿಸುವವ ನೀನೇ ಶ್ರೀಕೃಷ್ಣವಿಠ್ಠಲ ||

ಎಲ್ಲ ಬಲ್ಲಿದ್ದು ಅಹಂ ಮಾತ್ರ ಎನಗೇಕೆ ಕೊಡುವಿ? ||

241. ಮೃತ್ಯುವು ಬಡವ-ಶ್ರೀಮಂತ ಭೇದವಿಲ್ಲದೆ |

ಸತ್ಯದಿ ಸಕಲರಿಗೂ ಸಮಾನದಿ ಬರುವುದು ||

ಮೃತ್ಯುವಿಗೂ ಮೃತ್ಯುವಾದ ಶ್ರೀಕೃಷ್ಣವಿಟ್ಠಲನ |

ನಿತ್ಯದಿ ಸೇವಿಸಿ ಜೀವಿನ ಧನ್ಯವಾಗಿಸಿಕೋ ||

242. ಬೇಡುವವರಿಗೆ ನೀಡದೇ ಮೂದಲಿಸಬೇಡ |

ಕೊಡದಿದ್ದರೆ ಮುಂದೆ ನೀನು ಬೇಡುವವನಾಗುವಿ ||

ಒಡನೆಯೇ ಕೊಡು ಇಲ್ಲದಿದ್ದರೆ ಬುದ್ಧಿ ಬದಲಾಗುವುದು |

ಒಡಲು ಹೊಯ್ಯಲು ಶ್ರೀಕೃಷ್ಣವಿಟ್ಠಲನಿರೆ ನಿನಗೇತರ ಚಿಂತೆ ||

243. ದೊಡ್ಡವರ ಅಪಮಾನಿಸಬೇಡಾ | ನಿಂದೆಯ ಫಲ ವಜ್ರಲೇಪದಂತೆ ||

ಬಿಡದೇ ನಿನ್ನ ಬವಣಿ ಪಡಿಸಿ ಹಾನಿಮಾಳ್ಪುದು ||

ವೇದ, ಬ್ರಾಹ್ಮಣ, ಗೋಪೂಜೆ ಪೂಜಿಸದವರ ಸಾಧನೆ ವ್ಯರ್ಥ ||

ಉದ್ದಾರ ಕರ್ತ, ಶ್ರೀಕೃಷ್ಣವಿಟ್ಠಲನ ಸಂಗ ಬಿಟ್ಟು ಕೆಡಬೇಡ ||

244. ಅಂತರಂಗ ಸಖ, ಸರ್ವಾಂತಯಾಮಿ, ಸರ್ವಪ್ರೇರಕ,

ಮೂಕಪ್ರೇಕ್ಷಕ ಅನವರತ ಸಂಗಾತಿ |

ಇತ್ತೆನಗೆ ಅಮಲ ಭಕುತಿ ಪರಿಪಾಲಿಸೊ ಕರುಣಾಕರನೇ ||

ಸತತ ನಿನ್ನ ಸ್ಮರಣೆಯಲ್ಲಿದ್ದು ಅನ್ಯಾಪೇಕ್ಷೆ

ಇಲ್ಲದಂತೆ ದಯಮಾಡೋ ಶ್ರೀಕೃಷ್ಣವಿಟ್ಠಲ ||

245. ಏಸು ಜನುಮ ಕಳೆದವೋ, ಏಸು ತಾಯಿ, ತಂದೆ,

ಬಂಧುಬಳಗವೋ ಒಡೆಯಾ |

ನೀನೇ ನನ್ನ ಶಾಶ್ವತ ತಾಯಿ ತಂದೆ ಎಲ್ಲ ಜನುಮಕೂ |

ನೀನೆ ನನ್ನ ಬಂಧು ಬಳಗ ||

ನಿನ್ನ ಬಿಟ್ಟು ಅನ್ಯರ ಭಜಿಸದಂತೆ ಮಾಡೋ

ಶ್ರೀಕೃಷ್ಣವಿಟ್ಠಲ ನೀನೆ ನನ್ನ ಪರದೈವ ಸದಾ ||

246. ಲೋಕದಿ ಮನುಜರ ಮೆಚ್ಚಿಸಲರಿಯೇ,

ಎನ್ನ ಮಾಧವನ ಮನವ ಮೆಚ್ಚಿಸಬಹುದು |

ಪರಿಪರಿ ಸ್ತುತಿಸೆ ಪರರಿಂದ ಅಪವಾದ ತಪ್ಪದು,

ಆರ್ತದಿಂದೊಮ್ಮೆ ಕರೆಯೇ ಅನಿಕೇತನೊಲಿವಾ ||

ಪರರ ಆಪೇಕ್ಷೆಗೆ ಮಿತಿಯಿಲ್ಲಾ, ಅಮಿತವಿಕ್ರಮನ ಅವಿರತ

ನೆನೆದೊಡೆ ಶ್ರೀಕೃಷ್ಣವಿಟ್ಠಲನ ಕಾರುಣ್ಯಗೆ ಎಣೆಯಿಲ್ಲಾ ||

247. ನನ್ನ ಕರ್ಮವೆಲ್ಲಾ ನಿನ್ನ ಸೇವೆಯಾಗಲಿ,

ನಿನ್ನ ಸೇವೆಯೇ ನನ್ನ ಕರ್ಮವಾಗಲಿ |

ನಿನ್ನ ಇಚ್ಛೆಯೇ ನನ್ನ ಇಚ್ಛೆಯಾಗಲಿ, ನನ್ನಜೀವ,

ಆತ್ಮ ಎರಡೂ ಪರಮಾತ್ಮನದಾಗಲಿ ||

ನಿರಂತರ ನಿನ್ನ ಧ್ಯಾನ ನನದಾಗಲಿ, ಸದಾನುಗ್ರಹ ಎನಗಾಗಲಿ |

ಶ್ರೀಕೃಷ್ಣವಿಟ್ಠಲನ ಸ್ಮರಣೆ ಸೌಭಾಗ್ಯದಿಂದ ನನದೆಲ್ಲಾ ನಿನ್ನದಾಗಲಿ ||

ನಾನು ಸದಾ ನಿನ್ನವನಾದರೆ ಸಾಕು ಎಂದೆಂದಿಗೂ ಮರೆಯದಿರು ||

248. ಪ್ರತ್ಯಕ್ಷ ಕಂಡು, ಎಲ್ಲಾ ಕೇಳುವ, ಹೇಳುವ |

ಸರ್ವವಿದಿತ ಮನಸ್, ಸರ್ವ ಪ್ರೇರಕನೇ ||

ಪ್ರಾಣ, ಗುಣಪೂರ್ಣನಾದ ಸಂಹಾರಕನೇ |

ಬ್ರಹ್ಮಗಿರಿಯಾದ ನಮ್ಮ ಶ್ರೀಕೃಷ್ಣವಿಟ್ಠಲ ||

249. ಜೀವ-ಈಶ್ವರ ಭೇದ, ಜೀವ-ಜೀವಕೆ ಭೇದ |

ಜಡ-ಈಶ್ವರ ಭೇದ, ಜಡ-ಜಡಕೆ ಭೇದ ||

ಜಡ-ಜೀವಕೆ ಭೇದ ಸತ್ಯವಿದು ಪಂಚಭೇದವು |

ಮುಕ್ತಿ, ಸಂಸಾರದಲ್ಲೂ ಅನ್ಯಥಾ ಹೇಳಿದರೆ ನರಕ ತಪ್ಪದು ||

ಜಗತ್ತು ಮಿಥ್ಯೆಯಾದರೆ ತಾನೂ ಮಿಥ್ಯೆಯೇ |

ನಿಯಾಮಕನಿಲ್ಲವೆಂದು ಅಸತ್ಯವಾದಿ ನುಡಿಯೇ ||

ಅಲ್ಪ ಜ್ಞಾನಿಗಳು ಜನ್ಮಜನ್ಮದಲಿ ಅಸುರಯೋನಿಯಲಿ ಜನಿಸಿ |

ಅನಿಕೇತನ ಪಡೆಯದೇ ನಿತ್ಯನರಕದಲ್ಲಿ ಪೊರಳುವರು ||

ಜನ್ಮವು ಮುಂದಿನ ಜನ್ಮಕ್ಕೆ ಒಂದು ಸಿದ್ಧತೆ ಮಾತ್ರ |

ಶ್ರೀಕೃಷ್ಣವಿಟ್ಠಲನ ದಯದೀ ಸುಜ್ಞಾನ ನಿತ್ಯವೂ ದೊರಕಲಿ ||

250. ನೀ ಎನ್ನ ಹೃದಯದಲಿ | ನಾ ನಿನ್ನ ಸನಿಹದಲಿ ||

ನಾ ನಿನ್ನ ಧರಿಪೆ | ನೀ ಎನ್ನ ಭರಿಸೋ ಶ್ರೀಕೃಷ್ಣವಿಟ್ಠಲ || ಜೀಯಾ ||

251. ಬೇಡಿದರೂ ಕೊಡಲಾಗದರಿಗೆ ಕರೆದುಕೊಡುವ ಮನಸ್ಸೆಲ್ಲಿ? |

ಮನುಜರಲ್ಲೇ ಕರುಣೆ ತೋರದವಗೆ ಪ್ರಾಣಿಗಳಲ್ಲಿ ದಯೆಯೆಲ್ಲಿ? ||

ಹಸಿದವರ ಮುಂದೆ ಸುಗ್ರಾಸ ಭೋಜನ ಮಾಡುವವ ಕಾಗೆಗಿಂತ ಕಡೆ |

ಹೃದಯವಂತಿಕೆ ಇಲ್ಲದವನ ಜೀವನ ಇಹಪರದಲ್ಲೂ ದು:ಸ್ಸಹ ||

ಶ್ರೀಕೃಷ್ಣವಿಟ್ಠಲನ ಭಜಿಸದಿರುವನ ಜನುಮ ವ್ಯರ್ಥ ||

252. ತಿಳಿಯಬೇಕು ತಿಳಿದು ತಿಳಿಸಬೇಕು |

ಒಳ್ಳೆಯದು ಹೇಳಿದರೆ ಕೇಳಬೇಕು ||

ತಿಳಿಯಾಗಿರುವುದ ನೋಡಬೇಕು |

ಗಿಳಿಯಂತೆ ಶ್ರೀಕೃಷ್ಣವಿಟ್ಠಲ ಹೇಳಿದ್ದು ಕೇಳಬೇಕು ||

253. ನವ ನವದ್ವಾರದಿ ಒಳಬರುವ ಅರಿಷಡ್ವರ್ಗಗಳ |

ನವ ನವರೀತಿಯಿಂ ಕರ್ಮಬಂಧಕವಾಗದಂತೆ ||

ನವವಿಧ ಭಕುತಿ ಅಹರ್ನಿಶಿ ಮಾಡಲು |

ನವೋದಯದಿ ಆತ್ಮಶುದ್ಧಿಯಾಗುವುದು ||

ಸರ್ವಸಮರ್ಪಣವೆನೆ ಶುದ್ಧಜ್ಞಾನ ಪ್ರಾಪ್ತಿ |

ನಾವೆ ತೀರ ಸೇರುವಂತೆ ಸುಜ್ಞಾನ ಕಾರಣ ಮುಕುತಿಗೆ ||

ಯಾವತ್ತೂ ಮಾಡುವ ಕಾರ್ಯ, ಕರ್ಮ, ಕಾರಣ ಕರ್ತೃ |

ಅವಿನಾಶಿ ಶ್ರೀಕೃಷ್ಣವಿಟ್ಠಲನಲ್ಲದೆ ಬೇರಾರುಂಟು ||

254. ನಮ್ಮ ಉಸಿರು ನಾವೇ ತೆಗೆದುಕೊಳ್ಳುವಂತೆ |

ನಮ್ಮ ಕಣ್ಣೇ ನಮಗೆ ನೋಟ ತೋರುವಂತೆ ||

ನಮ್ಮ ಹಸಿವಿಗೆ ನಾವೇ ಉಣ್ಣುವಂತೆ |

ನಮ್ಮ ಹೃದಯ ಮಿಡಿದರೆ ನಾವೇ ಜೀವಿಸುವಂತೆ ||

ನಮ್ಮ ಸಾಧನೆ ನಾವೇ ಮಾಡಿದಾಗ ಮಾತ್ರ |

ನಮ್ಮ ಜೀವನ ಸಾರ್ಥಕತೆ ಪಡೆಯುವುದು ||

ನಮ್ಮ ದೇಹದಿ ದೇವ ಶ್ರೀಕೃಷ್ಣವಿಟ್ಠಲ ಇರುವರೆಗೂ |

ನಮ್ಮ ಜೀವ, ಜೀವನ, ನಂತರ ಯಾವುದು ಏನಾದರೇನು ||

ಶ್ರೀ ಕೃಷ್ಣವಿಠ್ಠಲಪದಗುಚ್ಛ 3 ಅನುಕ್ರಮಣಿಕಾ

255. ಹರಿಯಂತಹ ಮನವ ಅತ್ತಿತ್ತ ಹರಿಗೊಡದಲೆ |

ಹರಿದಿನದಿ ಬರೀ ಹರಿ ಚಿಂತನೆಯಲಿ ಕಳೆಯುತ ||

ಸರಿಯಾಗಿ ರಾತ್ರಿ ಜಾಗರಣೆ ಮಾಡುತ |

ಮರುದಿನ ಪಾರಣೆಯ ಹೊತ್ತುಕಳೆಯದೆ ಮಾಡಲು ||

ಸರ್ವೇಶ ಶ್ರೀಕೃಷ್ಣವಿಟ್ಠಲ ತನ್ನ ಪದ ಸಮೀಪವಿಡುವ ||

256. ಅಚಿಂತ್ಯಾಶಕ್ತಿ ಸ್ವತಂತ್ರ ಸ್ವಗತಾಭೇದ |

ಅಚೇತನ ಶರೀರ ಗುಣರಹಿತ ||

ಅಚ್ಚುಮೆಚ್ಚಿನ ಅಚ್ಯುತ ಸಚ್ಚಿದಾನಂದಾತ್ಮಕ |

ಸ್ವಚ್ಛ ಮೂರುತಿ ಶ್ರೀಕೃಷ್ಣವಿಟ್ಠಲನಲ್ಲದೆ ಬೇರ್ಯಾರು? ||

257. ವೇದವೇ ಸರ್ವಧರ್ಮದ ಮೂಲ |

ಸರ್ವ ವೇದವೇ ಪರಮಾತ್ಮನರಿವಿಗೆ ||

ವೇದದಿ ಪೇಳಿದಂತೆ ಶ್ರೀಕೃಷ್ಣವಿಟ್ಠಲನಾ |

ರಾಧಿಪರಿಗೆ ಶ್ರೇಷ್ಠಪರಗತಿಯೇ ಪ್ರಾಪ್ತಿ ||

258. ಯಾರು ಹಳಿದರೇನು, ಯಾರು ಹಂಗಿಸಿದರೇನು |

ಯಾರು ಹೂಗಳಿದರೇನು, ಯಾರು ಹೀಯಾಳಿಸಿದರೇನು ||

ಯಾರಿಂದ ನನಗೇನು ಭಯ, ಯಾರಿದ್ದರೇನು ಇಲ್ಲದಿದ್ದರೇನು |

ಬೇರಾವ ಚಿಂತೆಗಳೆನಗಿಲ್ಲ ಕಾರುಣ್ಯಗುಣ ನಿಧಿ ||

ಶ್ರೀಕೃಷ್ಣವಿಟ್ಠಲ ನಿನ್ನ ಬಿಟ್ಟರಿನ್ಯಾರ ಭಿಡೆ ಎನಗಿಲ್ಲ ||

259. ರಥದಿ ಕುಳಿತಿಹ ಜೀವ ಸಾರಥಿ ಪರಮಾತ್ಮ |

ತಥಾಸ್ತು ಎನ್ನುತ ಯಾಚಕಗೆ ಸದಾ ||

ಸ್ವಾರ್ಥ ಕೇಳಲಿ ಪಾರಮಾರ್ಥ ಕೇಳಲಿ ತಥಾಸ್ತು |

ಮಥಿಸಿ ಮನವ ಮಾರ್ಗಸೂಚಿಪ ಸದ್ಭಕ್ತಿಗೆ ಒಲಿದು ||

ಪಂಥವನಾಡುವ ಪಂಚಪ್ರಾಣನಾಡಿಸುತ ಸರ್ವಕರ್ತೃ |

ಇಂಥಾ ಉದ್ಗೀಥ ಶ್ರೀಕೃಷ್ಣವಿಟ್ಠಲ ಸ್ವಯಂಭೂ ಸರ್ವೇಶ ||

260. ತನ್ನತನವ ಬಿಡದೆ ಇನ್ನೊಬ್ಬರಗೂ ಪೂರ್ಣತಿಳಿಸದೆ |

ಅನ್ನಂ ದೇಹಿ ಎಂದವರಿಗೆ ನಾಸ್ತಿ ಎನ್ನದೆ ||

ಉನ್ನತ ಪ್ರಾರ್ಥಿಪರಿಗೆ ಇಹ-ಪರ ಸುಖ ವೀವ |

ಮನವನಿತ್ತರೆ ತನ್ನನೀವ ಶ್ರೀಕೃಷ್ಣವಿಟ್ಠಲ ಭಕ್ತಾನಾಂ ವಶಃ ||

261. ಇಳೆಯ ಕೊಳೆ ಚಿಂತೆಮಾಡಿ ಕೆಡಬೇಡಾ |

ತಿಳಿ ನೀರ ಮನ, ಒಳಕೊಳೆ ತೊಳೆವುದು ||

ತಿಳಿ ನೀ ರಮಣನ, ಒಳ ಕೊಳೆ ತೊಳೆವುದು |

ಒಳಗೊಳಗೆ ಧ್ಯಾನಿಸು ಶ್ರೀಕೃಷ್ಣವಿಟ್ಠಲನ ಅನವರಿತ ||

262. ಹಗೆತನದಿ ಸಾಧಿಸುವುದೇನು? | ಹಗರಣದಿ ಆಗುವುದೇನು? ||

ಬಿಗುಮಾನದ ಬಗೆಯಲಿ ಸಗ್ಗಸುಖವಿರದು |

ಜಗದಕಗ್ಗಂಟು ಹರಿಯದು ಚೆನ್ನಾಗಿ ತಿಳಿಯುವತನಕ ||

ಸೋಗಿನ ಮಾತಿಗೆ ಒಲಿಯನು ಮಂಗಳಾಂಗ ಶ್ರೀಕೃಷ್ಣವಿಟ್ಠಲ ||

263. ಶಕ್ತಿಯೇ ದೇಹದಿ ಭಕ್ತಿಯಾಗಿ |

ಭಕ್ತಿಯೇ ಜ್ಞಾನದ ಜೊತೆಯಾಗಿ ||

ಮುಕ್ತಿ ಪಥಕೆ ಕರೆದೊಯ್ಯುವುದು |

ಶ್ರೀಕೃಷ್ಣವಿಟ್ಠಲನ ಕೃಪೆ ಇರಲು ||

264. ಸಂತತ ವಿಷಯ ಚಿಂತೆ ಚಿತೆಗೆ ದಾರಿ |

ಸಂತರ ಸಂಗ ಸದ್ಭಕ್ತಿಗೆ ದಾರಿ ||

ಸತ್ಯ ನಿರ್ಮಲ ಭಕ್ತಿ ಮುಕ್ತಿಗೆ ದಾರಿ |

ಶಾಂತ ಶ್ರೀಕೃಷ್ಣವಿಟ್ಠಲನಾಮ ಸರ್ವ ದುರಿತಾಪಹಾರಿ ||

265. ಬೇರೆಯವರು ನಮ್ಮ ಗುಣ-ದೋಷ ತಿಳಿಸುವುದಕ್ಕಿಂತ |

ಸರಿಯಾಗಿ ನಮ್ಮನ್ನು ನಾವೇ ಅರಿತರೆ ಉತ್ತಮ ||

ಇರುವುದನ್ನು ಒಪ್ಪಿಕೊಂಡು ತಿದ್ದಿ ನಡೆದರೆ ಮಧ್ಯಮ |

ಶ್ರೀಕೃಷ್ಣವಿಟ್ಠಲನ ಮರೆತು ಅಹಂಕಾರದಿ ಮೆರೆದರೆ ಅಧಮ ||

266. ಹಣ ಹಣವೆಂದು ಓಡಿ ಓಡಿ ದಣಿವುದ್ಯಾಕೆ |

ಅಣುರೇಣು ತೃಣದಲ್ಲಿರುವ ಗುಣೈಶ್ವರ್ಯ ||

ಒಣ ಪ್ರತಿಷ್ಠೆ ಬಿಟ್ಟರೆ ಕಣಕಣದಲ್ಲೂ ಕಾಣುವ |

ಕ್ಷಣವೂ ಜೊತೆ ಬಿಡದಿರುವ ಶ್ರೀಕೃಷ್ಣವಿಟ್ಠಲನೆಂಬ ಶ್ರೇಷ್ಠನಿಧಿ ಕಾಣಿರಿ ||

267. ಗುರುಭಕ್ತಿ ಎಂಬ ಅಮೃತವ ಸವಿಯಿರಿ |

ಗುರುಸೇವೆಯಲಿ ಪಾಪವ ಕಳೆಯಿರಿ ||

ಗುರುದರುಶನದಿ ಸುಖವ ಕಾಣಿರಿ |

ಪೂರ್ವಜನುಮದ ಪುಣ್ಯದಿಂ ಸಿಗುವುದೀ ಭಾಗ್ಯ ||

ಗುರು ಆಶೀರ್ವಾದವೇ ಸುದೈವ |

ಶ್ರೀಕೃಷ್ಣವಿಟ್ಠಲನ ಪರಮಾನುಗ್ರಹವೆಂದು ತಿಳಿಯಿರಿ ||

268. ಅಖಿಲ ಜಗತ್ ದುಃಖ ಭಂಜಕ |

ಪ್ರಖರ ಸುಖಪ್ರದಾತ ||

ಶಂಖ-ಚಕ್ರ, ಮುಕುಟಧರ |

ಸುಖಾತ್ಮ ಸಖ ಶ್ರೀಕೃóಷ್ಣವಿಟ್ಠಲ ಪಾಹಿಮಾಂ ಪಾಹಿಮಾಂ ||

269. ನೀನೇ ಎನ್ನ ಶ್ವಾಸ | ನೀನೇ ಎನ್ನ ಶ್ರವಣ |

ನೀನೇ ಎನ್ನ ದೃಷ್ಟಿ | ನೀನೇ ಎನ್ನ ಮಿಡಿತ (ಪ್ರಾಣ) ||

ನೀನೇ ಎನ್ನ ಸಕಲ ಕ್ರಿಯೆ | ನೀನೇ ಸಕಲ ಕಾರಣ ಕರ್ತ |

ನೀನೇ ಸರ್ವಸ್ವ ಶ್ರೀಕೃಷ್ಣವಿಟ್ಠಲ | ನೀನಿಲ್ಲದಿರೆ ಏನೂ ನಡೆಯದು ||

270. ಅನ್ನ ಕೊಡುವವರಲ್ಲೂ ನೀನಿರುವಿ |

ಅನ್ನ ತೆಗೆದು ಕೊಳ್ಳುವರಲ್ಲೂ ನೀನಿರುವೆ ||

ಅನ್ನದೊಳು ನೀನಿರುವಿ |

ತಿನ್ನುವುದರೊಳು ನೀನಿರುವಿ || (ಕ್ರಿಯೆ)

ತಿನ್ನುವವರಲ್ಲಿ ನೀನಿರುವಿ |

ಆನಂತರ ಅರಗುವಿಕೆಯೆಲ್ಲೂ ನೀನಿರುವಿ ||

ಅನ್ನವನ್ನು ಎಲ್ಲಡೆ ಮುಟ್ಟಿಸುವವ ನೀನೇ |

ಅನ್ನದಲ್ಲಿಯ ತುಷ್ಟಿ, ಪುಷ್ಟಿ ನೀನೇ ||

ಅನ್ನದಲ್ಲಿಯ ಪ್ರಾಣವೂ ನೀನೇ |

ಅನ್ನದಿಂ ದೇಹ ನೀಡುವವ, ಬಿಡಿಸುವವ ನೀನೇ ||

ನೀನೇ ಗುಹ್ಯ, ಅನ್ನಂ ಅನ್ನಾದ ಏವಚ |

ಎನ್ನ ಶ್ರೀಕೃಷ್ಣವಿಟ್ಠಲನೊರ್ವನೇ ಸರ್ವವೂ ||

271. ಹಾರುವವರು ಹಾರಲಿ, ಕುಣಿಯುವವರು ಕುಣಿಯಲಿ |

ಜೋರಾಗಿ ಓಡುವವರು ಓಡಲಿ, ನಡೆಯುವವರು ನಡೆಯಲಿ ||

ಹಾರಾಟ, ಹೋರಾಟ, ಭೋರಾಟದ ಜೋರಾಟ ಎಷ್ಟು ದಿನ |

ಘೋರ ಸಂಸಾರ ತೆವಳುತ್ತಾ ದಾಟಿದರೂ ಸಾಕು ಶ್ರೀಕೃಷ್ಣವಿಟ್ಠಲನ ದಯದಿ ||

272. ರಕ್ಷಿಸುವವ ಅವನೇ | ಶಿಕ್ಷಿಸುವವ ಅವನೇ ||

ಭಕ್ಷಿಸುವವ ಅವನೇ | ತಕ್ಷಣಕೆ ಒದಗುವವ ಅವನೇ ||

ಲಕ್ಷ್ಮೀಪತಿ ಶ್ರಿಕೃಷ್ಣವಿಟ್ಠಲ | ಈಕ್ಷಿಸುವ ನಮ್ಮನನವರತ ||

273. ದಿನಂಪ್ರತಿ ಎಡಬಿಡದೆ ನಡೆಯುವ |

ಮಾನವನ ಅಂತರ್ಬಹಿಶ್ಚ ಕರ್ಮಗಳಿಗೆ ||

ದಿನಕರ, ಸೋಮ, ನಿಶಿ, ಹಗಲು, ಭೂಮಿ |

ಬಾನು, ಅನಲಾನಿಲ, ಆಪ್, ಅಂತರಂಗ |

ಮನಾದಿಸ್ಥ ಶ್ರೀಕೃಷ್ಣವಿಟ್ಠಲನೇ ಸರ್ವಸಾಕ್ಷಿಗ ||

274. ನನ್ನ ಕರ್ಮದ ಗಂಟೇ ಹೊರೆಯಾಗಿರಲು |

ನೀನೇನು ಮಾಡುವಿ ಒಳ-ಹೊರಗಿದ್ದು ||

ನಿನ್ನ ಮನಸಿಗೆ ಬಂದಂತೆ ಉಣಿಸುವಿ |

ಎನಗೇಕೆ ಹೊಗಳಿಕೆ-ತೆಗಳಿಕೆ ಚೆನ್ನಿಗರಾಯ ಶ್ರೀಕೃಷ್ಣವಿಟ್ಠಲ ||

275. ಪಕ್ಷಿ, ಪ್ರಾಣಿ, ಪಶುವಾಗಿರಲಿ | ವೃಕ್ಷ, ತೃಣ, ಲತೆಯಾಗಿರಲಿ ||

ದೀಕ್ಷೆ ಸದಾ ಎನಗಿರಲಿ | ಲಕ್ಷ್ಮೀಪತಿ ಶ್ರೀಕೃಷ್ಣವಿಟ್ಠಲನಡಿಯಲಿ ||

276. ಕೃತಿಯಾಗಲಿ ಜ್ಞಾನಕ್ಕೆ ಮೂಲ |

ಧೃತಿ ಇರಲಿ ಧ್ಯಾನಕ್ಕೆ ಮೂಲ ||

ಶಾಸ್ತ್ರೋಕ್ತವಾಗಿರಲಿ ಸಕಲದ ಮೂಲ |

ಉತ್ಕøಷ್ಟತೆಗೆ ಶ್ರೀಕೃಷ್ಣವಿಟ್ಠಲನೇಮೂಲ ||

277. ಸೂರ್ಯನ ಬೆಳಗುವಿಕೆ, ವಾಯು ಬೀಸುವಿಕೆ |

ವರ್ಷಾ ಸುರಿಸುವಿಕೆ, ಅಗ್ನಿಸುಡುವಿಕೆ ||

ಚಂದ್ರನ ಶೀತಲತೆ, ಯಮನ ಧರ್ಮಕಾರ್ಯ |

ಸುರರ ಸಕಲಕಾರ್ಯವೂ, ಶ್ರೀಕೃಷ್ಣವಿಟ್ಠಲನ ಭಯದಿ ಆಗುವುದು ||

278. ಸರಿಯಾದ ನೋಟ | ಸರಿಯಾದ ಶ್ರವಣ ||

ಸರಿಯಾದ ಊಟ | ಸರಿಯಾದ ನಡತೆ ||

ಸರಿಯಾದ ನುಡಿ | ಸರಿಯಾದ ಯೋಚನೆ ||

ಸರಿಯಾದ ಜ್ಞಾನ | ಸರಿಯಾದ ವಿಜ್ಞಾನ ||

ಸರಿಯಾದ ಪರಿ | ಸರಿಯಾಗಿ ತಿಳಿಯದಲ್ಲ ||

ಸರ್ವವಿದಿತ ಶ್ರೀಕೃಷ್ಣವಿಟ್ಠಲ | ಸರಿಯಾಗಿ ತಿಳಿಸಿ ನಡೆಸು ||

279. ಏಳು ಸಂಸಾರದ ಏಳು-ಬೀಳು ಅಲೆಗಳಿಂದ |

ಏಳುದಿನಗಳ ಕಥೆ ಕೇಳಿ ವೈಕುಂಠಕೆ ನಡಿ ||

ಸುಳ್ಳು ಹೇಳದಿರೆ ಒಳ್ಳೆಯದನ್ನೇ ಕಾಣುವಿ |

ಕಳ್ಳರೈವರ ಸುಳಿಯಿಂದ ಉಳಿದು ಜಯಿಸಿಕೋ ||

ಬೆಳೆಸು ಪುಷ್ಪ ಮನದಿ ಮುಳ್ಳನ್ನು ಕಿತ್ತೊಗೆದು |

ಗಳಿಸು ಶ್ರೀಕೃಷ್ಣವಿಟ್ಠಲನೊಲುಮೆ ಒಳ್ಳೆಯತನದಿ ||

280. ಹರಿಹರಿ ಹರಿ ಎಂದರೆ ಹರಿಯುವುದು ಸಂಸಾರ |

ಹರಿಹರಿ ಹರಿ ಎಂದರೆ ಹರುಷದಿ ಮನ ||

ಹರಿ ಅಭಿನ್ನ ಶ್ರೀಕೃಷ್ಣವಿಟ್ಠಲನ ಚರಣವ ಪೊಂದುವುದು ||

281. ‘ನಾಮಕ ಅಕ್ಷರ ಪ್ರತಿಪಾದ್ಯ ಪೂರ್ಣೇಂದು |

ತಾನೂಪೂರ್ಣ, ಇಲ್ಲಿಯೂ ಪೂರ್ಣ-ಅಲ್ಲಿಯೂ ಪೂರ್ಣ ||

ಕಣ-ಕಣದಲ್ಲೂ ಪೂರ್ಣ, ಸದಾ ಸರ್ವತ್ರ ಪೂರ್ಣ |

ಪೂರ್ಣಾತಿ ಪೂರ್ಣ ಪರತಮ ಶ್ರೀಕೃಷ್ಣವಿಟ್ಠಲನೇ ಪರದೈವ ||

282. ಸರ್ವತ್ರ, ಸರ್ವ ಸಮಯದಿ | ಸರ್ವಗುಣ ಪರಿಪೂರ್ಣ ಸ್ವಭಾವ ||

ಸರ್ವದೋಷದೂರ | ಸರ್ವೇಶ, ಸರ್ವವಂದ್ಯ ಶ್ರೀಕೃಷ್ಣವಿಟ್ಠಲಂ ತ್ವಂ ಭಜೆ ||

283. ಅಖಿಲ ಮೂಲ ಜಗತ್ಕಾರಣ |

ಅಖಿಲ ಮೂಲ ಘಟನಾಕಾರ ||

ಅಖಿಲ ಮೂಲ ಫಲ ಪ್ರದಾಯಕ |

ಅಖಿಲೇಶ ವಿಶೇಷ ಶ್ರೀಕೃಷ್ಣವಿಟ್ಠಲಂ ವಂದೇ ||

284. ದೋಷದೂರ, ಮಂಗಳಸ್ವರೂಪ |

ದೋಷನಾಶಕ, ಭಕ್ತೋದ್ಧಾರಕ ||

ಶ್ರೀಶ ಶ್ರೀಕೃಷ್ಣವಿಟ್ಠಲ ಎನ್ನಂತರ್ಯಾಮಿ |

ವಿಶೇಷಗೆ ನಿವೇದನರೂಪ ಅರ್ಪಣಾ ನಮನಗಳು ||

285. ಸರ್ವ ಜೀವಿಗಳಿಗೆ ಸತ್ತಾಪ್ರದ ವಾಯು ಧಾರಣಾ ಪ್ರದ |

ಸರ್ವೇಂದ್ರಿಯಾಭಿಮಾನಿ ನಿಯಾಮಕ ಮುಖ್ಯಪ್ರಾಣ ||

ಇವನಿಗೂ ಪ್ರೇರಕಳು ರಮಾ ಭಕ್ತಿಪ್ರದಾಯಕಳು |

ಸರ್ವರಿಗೂ ಮುಕ್ತಿಪ್ರದಾಯಕ ನಮ್ಮ ಶ್ರೀಕೃಷ್ಣವಿಟ್ಠಲ ||

286. ಹರಿಕಥೆ ಶ್ರವಣದಿ, ಹರಿಗುಣಗಳ ಕೀರ್ತಿಸು |

ಹರಿಸ್ಮರಣೆಯಲಿ, ಹರಿಪಾದ ಸೇವೆಯಾಗಲಿ ||

ಹರಿ ಮೂರ್ತಿಗಳ ಪೂಜಿಸು, ಹರಿ ನಮಸ್ಕಾರದಿಂದ |

ಹರಿದಾಸನೆಂಬ ನಿತ್ಯಭಾವನೆ, ಹರಿಯೇ ನಿತ್ಯ ಸಖ ||

ಹರಿಯ ನಿತ್ಯಾಧೀನ, ಸ್ವಸ್ವರೂಪವೆಂದು ಆತ್ಮ ಅರ್ಪಿಸು |

ಹರಿಯಾಭಿನ್ನ ಶ್ರೀಕೃಷ್ಣವಿಟ್ಠಲನ ಪ್ರಸಾದವಾಹುದು ಶುದ್ಧಭಕ್ತಿಲಿ ||

287. ಬೇಡಾ, ಬೇಡಾ ಎನ್ನ ದೂಡಬೇಡಾ | (ಸಂಸಾರದಿ)

ಬೇಡುವೆ ದಿನತೆಯಲಿ ಒಡೆಯಾ ||

ನೋಡಿದರೆ ಭಯ ಪಡುತಿರುವೆ |

ಕಾಡುವರನೇಕರು ವಿಧ ವಿಧದಿ ||

ಕಂಡು ಅವರ ದಿಕ್ಕೆಟ್ಟು ಹೋಗಿರುವೆ |

ಪಡಬಾರದ ಕಷ್ಟ ಪಡುತಿರುವೆ ||

ಬೇಡಿಕೊಂಬೆ ದೀನಳಾಗಿ ಶ್ರೀಕೃಷ್ಣವಿಟ್ಠಲ |

ಒಡಲೊಳಗೆ ಬೆಚ್ಚಗೆ ಸದಾ ಇರಿಸಿಕೋ ||

288. ನಿನ್ನ ಆಗು-ಹೋಗುಗಳಿಗೆ | ನೀನೇ ಹೊಣೆಗಾರನಲ್ಲವೆ? ||

ಚೆನ್ನಾಗಿ ಯೋಚಿಸಿ ನೋಡು | ಇನ್ನಾದರೂ ಪರರ ದೂಷಿಸದಿರು ||

ಅನ್ಯಾಪೇಕ್ಷೆಮಾಡದಿರು | ಧನ್ಯತೆಯಲಿಸ್ವಸಹಾಯ ನಂಬು || (ಸ್ವನಾಮಕ ಪರಮಾತ್ಮ)

ಮಾನ್ಯಮಾಡು ಸ್ವನಾಮಕ | ಸುನಾಥ ಶ್ರೀಕೃಷ್ಣವಿಟ್ಠಲನ ನಿರ್ಧಾರವ ||

289. ಸುಂದರ ಶ್ಯಾಮ ಮುರಳಿ ಮನೋಹರ |

ಬಂದ ಯಮುನೆಗೆ ಗೋಪಿಯರೊಡನೆ ||

ಚೆಂದದಿ ಬೆಳದಿಂಗಳ ನೊಡಿ ಅತಿ |

ಮೋದದಿ ಶ್ರೀಕೃಷ್ಣವಿಟ್ಠಲ ರಾಸ ರಚಿಸಿದ ||

290. ಅಗಿಯಲಿ, ಉಗುಳಲಿ | ಹುಗಿಯಲಿ, ಬಗೆಯಲಿ ||

ನೆಲೆಯಾಗಿ ಪಶು, ಪ್ರಾಣಿ, ವೃಕ್ಷಂಗಳಿಗೆ |

ಸೆಲೆಯಾಗಿ ಜೀವ ನದಿಗಳಿಗೆ ||

ಪರ್ವತಗಳ ಎದೆಮೇಲೆ ಪೊತ್ತು |

ಸರ್ವದಾ ಹಸಿರಾಗಿ ವನಸುಮಗಳಿಗೆ ||

ತುಳಿಯಲಿ, ಕೊಳೆಯಾಗಿಸಲಿ | ಒಳ್ಳೆಯದನ್ನೇ ಹರಸುವ ||

ಕಷ್ಟ-ಸಹಿಷ್ಣುತೆಯ ಪ್ರತೀಕ |

ಶ್ರೀಕೃಷ್ಣವಿಟ್ಠಲನ ರಾಣಿಗೆ ವಂದಿಸಿ ಬೇಡುವೆ, ಕ್ಷಮಿಸು ತಾಯೇ ||

291. ಭವಾಟವೀಯಲ್ಲಿ ಮಾರ್ಗ ತೋರುವುದು ಒಂದೇ ನಾಮ |

ಭವಾಬ್ಥಿಯಲಿ ಸರಳವಾಗಿ ತೇಲಿಸುವುದು ಒಂದೇ ನಾಮ ||

ಯಾವಾಗಲೂ ಜಪಿಸಬೇಕಾದುದು ಒಂದೇ ನಾಮ |

ಶಾಶ್ವತ ಪದ ನೀಡುವ ಸಹಜನಾಮ ಅದುವೇಶ್ರೀಕೃಷ್ಣವಿಟ್ಠಲನಾಮ ||

292. ಭಿಕ್ಷು ಇರಲಿ ಲಕ್ಷ ಇರಲಿ | ಲಕ್ಷ್ಯ ಸದಾ ಒಂದೇ ಇರಲಿ ||

ಲಕ್ಷಣವಾದ ಅಕ್ಷಯದಾತ | ಲಕ್ಷ್ಮೀಪತಿ ಶ್ರೀಕೃಷ್ಣವಿಟ್ಠಲನ ಪದತಲದಿ ||

293. ಸರದಿಯಾಗಿ ಪ್ರಾರಬ್ಧ ಸುಖ-ದುಃಖ ಉಣಿಸುವ |

ಪರಿಹಾರ ಸೂಚಿಸುವ ಕಷ್ಟ ಕಳೆಯಲು ||

ಸೈರಿಸುವಷ್ಟೇ ದುಃಖವೀವ ಸಾಮಥ್ರ್ಯ ತಿಳಿದು |

ಹೊರಲಿಕ್ಕಾಗುವಷ್ಟೇ ಜೀವನ ಭಾರ ಮಾಡುವ ||

ಆರ್ತರ ಕರೆ ಆಲಿಸಿ ಕೈ ಪಿಡಿಯುವ ಬಿಡದೆ |

ಪೊರೆವ ಸದಾನಾನ್ಯಥಾ ಪಂಥಾಃ ಅಯನಾಯ ವಿದ್ಯತೇ ಎಂದವರ ||

ಆಶ್ರಯದಾತ ಶ್ರೀಕೃಷ್ಣವಿಟ್ಠಲ ಸರ್ವರ ಸರ್ವವಿದಿತ ||

294. ದೈವ ಬಲವಿದ್ದರೆ ಹುಲ್ಲು ನಿಗರಬಲ್ಲದು |

ಭವದ ಕಡಲು ಗೋಪಾದದಂತೆ ತಾರಿಸಬಲ್ಲದು ||

ಆವ ಪ್ರಯತ್ನವಿಲ್ಲದಯೇ ಯಶವಾಗಬಲ್ಲದು |

ಅವನೀಪತಿ ಶ್ರೀಕೃಷ್ಣವಿಟ್ಠಲನ ದಯೆ ಇಲ್ಲದಿರೆ ಎಲ್ಲ ವಿಪರೀತವಾಹುದು ||

295. ಜಗದಲ್ಲಿಯ ಅನಘ್ರ್ಯರತ್ನ ವಿಷ್ಣು ಭಕ್ತಿಸುಖ |

ಭಗವದ್ಭಕ್ತರ ಸಂಗದ ಸವಿ ಬಲ್ಲವನೇ ಬಲ್ಲ ||

ಸಗ್ಗ ಸುಖವು ಬಯಸದೇ ಸಾಧನ ಜನುಮ ಬೇಕೆನುತ |

ಭಂಗ ಬರದಂತೆ ಶ್ರೀಕೃಷ್ಣವಿಟ್ಠಲನ ಪಾದಸೇವೆ ಬಯಸುವರು ||

296. ಸಜ್ಜನ ಪ್ರೇಮಿಗಳಿಹರು ಜಗದೀ | ವರ್ಜಿಸಿ ಐಹಿಕ ಸುಖಗಳ ||

ತ್ಯಜಿಸಿ ಕಾಮಕ್ರೋಧಗಳ | ಭಜಿಸಿ ಜಯ-ವಿಜಯ ಹಂತಕನ ||

ನಿಜದಿ ಆನಂದನಾಮಕ ಶ್ರೀಕೃಷ್ಣವಿಟ್ಠಲನ ಪೊಂದುವರು ||

297. ಮಾಡಿದ್ದೆಲ್ಲವು ಸೇವೆಯೆಂದು |

ಮಾಡುತ್ತಿರುವುದೆಲ್ಲ ಪೂಜೆಯೆಂದು ||

ಮಾಡಬೇಕಾದ್ದು ಎಲ್ಲಾ ಕೂಡಿಸಿ |

ಒಡೆಯಾ ಶ್ರೀಕೃಷ್ಣವಿಟ್ಠಲಗರ್ಪಿಸುವೆ ಸಲಹೆನ್ನ ಕೃಪಾಲುವೇ ||

298. ಐವತ್ತೊಂದು ಅಕ್ಷರ ನಾಮ ವರ್ಣಗಳೇ |

ಸರ್ವ ವೇದಗಳು, ಸರ್ವಭಾಷೆ ||

ಸರ್ವಮಾತು, ಸರ್ವಕ್ಕೂ ನಾಮಗಳು |

ಅವರಿವರೇನೆಂದರೇನು ಸಕಲವೂ ಸುಶ್ರಾವ್ಯ ||

ಭವತಾರಕ ಶ್ರೀಕೃಷ್ಣವಿಟ್ಠಲನ ನಾಮಗಳೇ ಎಲ್ಲಾ ಎಂದು ತಿಳಿದವಗೆ ||

299. ನಿತ್ಯದೈನ್ಯತೆಯ ಜೀವನ ಬೇಡಾ |

ಪ್ರತಿಕ್ಷಣ ನರಳಿ ಸಾಯುವುದರಿಂದ ||

ಪತಿತಪಾವನ ಸಂರಕ್ಷಿಸೆನ್ನನು |

ಎತ್ತಿ ನಿನ್ನ ಲೋಕದಲ್ಲಿರಿಸು ಶ್ರೀಕೃಷ್ಣವಿಟ್ಠಲ ||

300. ಶೃತಿ-ಸ್ಮøತಿಗಳಿಗಗೋಚರ | ಸ್ತೋತ್ರ-ಸ್ತುತಿಗಳಿಗೊಲಿಯದ ||

ಸ್ಥಿತಿಕರ್ತಾ ತನ್ನಂತಾನೇ ತಿಳಿಸುವ | ಕೃತಿಪತಿ ಶ್ರೀಕೃಷ್ಣವಿಟ್ಠಲ ಒಲಿದಾಗ ||

301. ಸತ್ಕವಿಗಳ ಸತ್ಸಂಗವೇ ಸದ್ಗತಿಗೆ ದಾರಿ |

ಸುಕಥಾ ಶ್ರವಣ ಹೃತ್ಕರ್ಣ ರಸಾಯನವಾಹುದು ||

ಭಕ್ತಿ-ಶ್ರದ್ಧೆಯನ್ನನುಸರಿಸಿ ಸಿಗುವುದು ಮುಕ್ತಿ |

ಹೃತ್ಕಮಲಸ್ಥ ಶ್ರೀಕೃಷ್ಣವಿಟ್ಠಲಾಪರೋಕ್ಷಾನಂತರ ||

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು