ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಶ್ರೀ ಕೃಷ್ಣವಿಠ್ಠಲಪದಗುಚ್ಛ 2

ಶ್ರೀರಾಮ,ಸ ಕೃಷ್ಣ ವಿಠ್ಠಲ

ಶ್ರೀಸೀತಾರಾಮ ಕಲ್ಯಾಣ

65. ನಿತ್ಯಾವಿಯೋಗಿ ಶ್ರೀಸೀತಾ-ರಾಮರ ಶುಭ ಕಲ್ಯಾಣ |

ನಿತ್ಯೋತ್ಸವ ಸುಜನರಿಗೆಲ್ಲಾ ಆನಂದದಾಯಕ, ಮಂಗಳದಾಯಕ || || ||

ಮಿಥಿಲೇಶ ಸಾರಿದ ತನ್ನ ಕುವರಿಯ ಸ್ವಯಂವರವ |

ಸ್ವತ: ತೆರಳಿ ವಿಶ್ವಾಮಿತ್ರ, ದಾಶರಥಿಯರಿಗಿತ್ತ ಆಹ್ವಾನವ ||

ಎತ್ತ ನೋಡಿದರೂ ಸಿಂಗಾರದಿ ಪುರ ನವವಧುವಿನಂತೆ ಕಂಗೊಳಿಸುತ್ತಿತ್ತು |

ಮತ್ತೆ ಆಗಮಿಸಿದರಿಲ್ಲಿ ಬ್ರಹ್ಮರ್ಷಿ, ರಾಮ- ಲಕ್ಷ್ಮಣರೊಡಗೂಡಿ || || 1 ||

ನೀಲವರ್ಣದ, ನೀಳಕಾಯದ, ಗಂಭಿರವದನ ಸುಂದರರಾಮನ |

ಎಲ್ಲ ನರ, ನಾರಿಯರು ಮನದಣಿಯ ನೋಡಿ ಆನಂದಿಸಿದರು ||

ಮೆಲ್ಲನೆ ಹೇಳಿದರು ನಲ್ಮೆಯ ಸೀತೆಗೆ ಸರಿಜೋಡಿಯೆಂದು |

ಬಲವಾದ ಶಿವಧನುಸ್ಸು ಬಾಲಕ ಎತ್ತಬಲ್ಲನೆ? ಎಂದೂ ಶಂಕಿಸಿದರು || ||2||

ಹಲವಾರು ಜನರು ಗಾಡೀಲಿ ಎಳೆತಂದರು ಧನಸ್ಸನು |

ಕೇಳಿ ಗುರುಗಳಪ್ಪಣೆ ಸುಧನ್ವರಾಮ ಅತ್ತ ನಡೆದನು ||

ಲೀಲಾಜಾಲವಾಗಿ ಎಡಗೈಲೆತ್ತಿ ಹೆದೆ ಏರಿಸಲು |

ಬಿಲ್ಲು ನಡುವೆಯೇ ತುಂಡಾಯಿತು ಸಿಡಿಲಿನಂತೆ || || 3 ||

ಮರೆಯಲ್ಲಿದ್ದ ಸೀತೆ ವರಮಾಲೆ ಪಿಡಿದು ಬಂದಳು |

ಓರೆ ನೋಟ ಬೀರಿ ನಾಚಿ ಸಂತೋಷ ಮನದಿ ನಿಂದಳು ||

ಶ್ರೀರಾಮನ ಕೊರಳಿಗೆ ಅರವಿಂದದ ಮಾಲೆಹಾಕಿದಳು |

ನೀರೆಯ ಕೈಪಿಡಿದು ಅರ್ಧಾಂಗಿಯಾಗಿ ಸ್ವೀಕರಿಸಿದ ದಯದಿ || || 4 ||

ಜಾನಕಿ ರಾಮನ ವಿವಾಹ ನಿತ್ಯನೂತನ ಹರುಷದಾಯಕ |

ಅನಿಮಿಷರೆಲ್ಲಾ ಆಕಾಶದಿ ನೆರೆದು ನೋಡಿ ಸಂತೋಷಿಸಿದರು ||

ಕಣ್ಮಣಿ ಅಯೋಧ್ಯಾಪತಿ ಪಾವನ ಪುರುಷೋತ್ತಮ |

ಚಿನ್ಮಯನಾದ ಶ್ರೀಕೃಷ್ಣವಿಟ್ಠಲನ ಅಭೇದರೂಪವೇ ಸರಿ || || 5 ||

ಜಯ ಜಯ ರಾಮ ಸೀತಾ ರಾಮ |

ಜಯ ಜಯ ರಾಮ ಕೃಷ್ಣ ಹರೇ ||

66. ಪರಮ ಪುರುಷೋತ್ತಮನಿವ ಶ್ರೀರಾಮಚಂದ್ರ | || ||

ಅಪಮಾನಕ್ಕಂಜಿ ಮಡದಿಯ ತೊರೆದ ಲೀಲೆಯಲಿ | || ಅಪ ||

ಪತಿತಳನುದ್ಧರಿಸಿದವ ಪತ್ನಿಯನ್ನೇ ಶಿಕ್ಷಿಸಿದ |

ಕ್ಷತ್ರಿಯರ ಸಂಹರಿಸಿದ ಬ್ರಾಹ್ಮಣನ ಗೆದ್ದ ಧೀರ || (ರಾವಣ)

ಪಿತೃವಾಕ್ಯಪರಿಪಾಲಕ, ಭ್ರಾತೃವಾತ್ಸಲ್ಯಮಯಿ |

ಏಕಪತ್ನಿವೃತಸ್ಥನೆಂಬ ಬಿರುದುಪೊತ್ತಮಹಿಮ ||

ವಾಲಿಯನಿಗ್ರಹಿಸಿದ, ಸುಗೀವನನುಗ್ರಹಿಸಿದ |

ವಿಭೀಷಣಗಾಶ್ರಯವಿತ್ತ ಹನುಮದ್ಸಖ ||

ಶ್ರೀಕೃಷ್ಣವಿಟ್ಠಲನ ಪಾದವನಂಬಿ |

ಭಜಿಸಿದವರಿಗೆ ಮುಕುತಿ ಕೊಡುವ ||

67. ಧನುರ್ಧರ ಚಾಪಧಾರಿ ತ್ರಿಗುಣತೀತ ಶ್ರೀರಾಮ |

ಕೌಸಲ್ಯಾ ನಂದನ ಮರ್ಯಾದಾ ಪುರುಷೋತ್ತಮ ||

ಅಸುರ ಸಂಹಾರಕ ಸುಜನರಕ್ಷಕ ಸದಾ |

ಏಕಪತ್ನಿ ವ್ರತಸ್ಥ ಮಾತೃವಾಕ್ಯ ಪರಿಪಾಲಕ ||

ಹನುಮಭೀಮ ಮಧ್ವಾಂತರ್ಗತ ಶ್ರೀರಾಮಾಭಿನ್ನ ಶ್ರೀಕೃಷ್ಣವಿಟ್ಠಲ ನಮೋ ನಮ: |

68. ಶ್ರೀರಾಮ ಜಯರಾಮ

ಶ್ರೀಶನ ನೆನೆವರನುದಿನ

ರಾರಾಜಿಸುವರು ಜಗದೊಳು ||

ಮರಣ-ಜನನ ಬಾಧೆ ತಪ್ಪುವುದು |

ಜಪ,ತಪ,ಧ್ಯಾನಕ್ಕೂ ಒಲಿಯದ ||

ಯಶೋದೆಕಂದ ಕಣ್ಣಿಗೆ ರೆಪ್ಪೆಯಂದಿ ಕಾಯ್ಪ ||

ರಾಗದಿ ಒಪ್ಪಿಸಿಕೂಂಬ ಅನುಕ್ಷಣದಿ |

ಮನಮೋಹಕ ಶ್ರೀಕೃಷ್ಣವಿಟ್ಠಲ ರಾಯಾ ||

69. ಶ್ರೀರಾಮ ಪದದಲ್ಲಡಗಿದೆ ಸರ್ವಸಾರ, ಜಪಿಸೇ |

ಪಾಪದಹಕ, ಪವನ ಪಾವಕ ಪೂಜನೀಯ ಪತಿತೋದ್ಧಾರಕ ||

ಸಿರಿ ಸಹಿತ ವಾಸಿಪ ಆನಂದವೀವ ಅಕ್ಷರಫಲದಾತ |

ಭಕ್ತವತ್ಸಲ ಸಂಸಾರತಾರಕ ಸುಲಭದಿ ಸರಳಭಕ್ತಿಗೊಲಿವ ಶ್ರೀಕೃಷ್ಣವಿಟ್ಠಲ ||

ಊಊಊ

ಶ್ರೀಕೃಷ್ಣ

70. ಎರಡು ತಾಯಂದಿರ ಮಗನಿವನೊಬ್ಬ |

ಧರ್ಮದಿ ನಡೆದು ಜ್ಞಾನವಬೋಧಿಸಿ ||

ತರಿದು ದುಷ್ಟರ ಶಿಷ್ಟರ ಸಲಹಿದ |

ಆರ್ತ ಕರೆ ಮನ್ನಿಸಿ ಕಾಯ್ದ ಆಪದ್ಬಾಂಧವ ||

ಸರಸ ಸಂಸಾರ ತೋರಿದ ಸಾವಿರಾರು ಪತ್ನಿಯರಲಿ |

ಮತ್ರ್ಯಲೋಕ ನಟನಿವ ಶ್ರೇಷ್ಠ ಶ್ರೀಕೃಷ್ಣವಿಟ್ಠಲ ||

71. ಎನ್ನ ಮನೆಯೊಳಗೆ ಬಾರೋ, ಕೃಷ್ಣಯ್ಯಾ, ಇಲ್ಲಾ |

ಎನ್ನ ಮನದೊಳಗೆ ತೋರೋ ಕೃಷ್ಣಯ್ಯಾ || || ||

ಮನೆಯಲಿ ಯಜ್ಞ, ಪೂಜಾದಿಗಳು ಒಂದಿನ ನಡೆಯಲಿಲ್ಲ |

ಜ್ಞಾನಿಗಳ ಸತ್ಸಂಗ, ಭಾಗವತಾದಿ ಪಾರಾಯಣವಾಗಲಿಲ್ಲ ||

ದೀನ, ದು:ಖಿತರ ಸೇವೆಯಂತೂ ಮಾಡಲೇ ಇಲ್ಲಾ |

ಅನ್ನದಾನ, ವಸ್ತ್ರದಾನ, ಜಲದಾನ ಎಂದು ಕೊಡಲಿಲ್ಲ || || 1 ||

ಮನ ಶುದ್ದೀಲಿ ಸತ್ಯ, ಅಹಿಂಸೆ,ಶೌಚ ಪಾಲಿಸಲಿಲ್ಲ |

ಜ್ಞಾನ ಸಂಪಾದನೆಗಾಗಿ ಎಂದು ಪ್ರಯತ್ನಿಸಲಿಲ್ಲ ||

ಮನ:ಪೂರ್ವಕ ಭಕ್ತಿಯ ದಾರಿಯಲಿ ನಡೆದಿಲ್ಲ |

ಘನ್ನ ಮಹಿಮನ್ನ ಯಾವ ರೀತಿಯಲ್ಲೂ ಒಲಿಸಲಿಲ್ಲ || || 2 ||

ಎನ್ನೊಳು ನಿಂತ ಸಕಲ ಕರ್ಮ, ಕಾರ್ಯಕಾರಣಕರ್ತನೇ ||

ನಾನು ಮಾಡುವೆನೆಂದರೆ ಎನ್ನ ಪ್ರಾರಬ್ಧ ಮಾಡಕೊಡದಯ್ಯಾ |

ಜನುಮ ಜನುಮದ ಸಖ ಎನ್ನ ಕೈ ಬಿಟ್ಟರೆ ಸಲಹುವರ್ಯಾರು ||

ಮನ್ನಿಸಿ ತಪ್ಪುಗಳ ಒಲಿದು ಬಾರೋ ಶ್ರೀಕೃಷ್ಣವಿಟ್ಠಲದಯದಿ || || 3 ||

72. ನೆನೆ ನೆನೆ ಮನವೆ ಶ್ರೀಕೃಷ್ಣ ಮೂರುತಿಯ |

ಕ್ಷಣಕಾಲವೂ ಬಿಡದೆ ನಿರುತ ನೆನೆ ಮನವೇ | || ||

ಸಕಲ ದೇಶದಿ ಸಕಲ ಕಾಲದಿ ಗುಣಗಳ ನೆನೆ |

ಸಕಲ ಅವಸ್ಥೆಯಲಿ ಸಕಲ ರೂಪಗಳ ನೆನೆ ||

ಸಕಲ ನಾಮಗಳ ವಿವಿಧ ಪುಷ್ಪಗಳೆಂಬಂತೆ |

ಶಂಕೆಯಿಲ್ಲದೆ ಸಮರ್ಪಿಸೆ ಒಲಿದು ತೋರುವ|| || 1 ||

ಅನ್ನದಲಿ, ಮಣ್ಣಿನಲಿ ಸರ್ವಮನುಜರಲಿ ನೆನೆ |

ಕಣ್ಣಿಂದ ಕಾಣುವ ಸರ್ವವಸ್ತುವಿನಲಿ ನೆನೆ ||

ಬಣ್ಣಿಸಿ ಸರ್ವಕ್ರಿಯೆಗಳ ಸಂತೋಷ ಪಡೆದು |

ವರ್ಣಾಭಿಮಾನಿ ಸರ್ವಶಕ್ತನ ಸಾಮಥ್ರ್ಯಅನುಭವಿಸು | || 2 ||

ಅಂತಾದರೂ ಇಂತಾದರೂ ಸರ್ವಾಂತರವಾಗಿ ನೆನೆ |

ಅಂತಕಾಲದಿ ನೆನೆದೊಡೆ ವಿಶೇಷ ಪ್ರಾಪ್ತಿಯಾಗಿ ||

ಅಂತರವಿಲ್ಲದೆ ವೈಕುಂಠಪತಿ ದರುಶನವಾಹುದು |

ಸಂತಪ್ರಿಯ ನಿಶ್ಚಿಂತ ಚಿನ್ಮೂಲ ಶ್ರೀಕೃಷ್ಣವಿಟ್ಠಲನ ನೆನೆ | || 3 ||

73. ವದನದಿ ಕೃಷ್ಣನಾಮ |

ಹೃದಂiÀiದಿ ಕೃಷ್ಣಧ್ಯಾನ ||

ಬುದ್ದಿಯಲಿ ಕೃಷ್ಣಮಂತ್ರ |

ಎದುರಲಿ ಕೃಷ್ಣಮೂರ್ತಿ ||

ಸದಾ ಇರುವಂತೆ ಅನುಗ್ರಹಿಸೋ |

ಹಿಂದೆ, ಮುಂದೆ ನಿಂದು ಕಾಯೋ ವಂದ್ಯ ಶ್ರೀಕೃಷ್ಣವಿಟ್ಠಲ ||

74. ಶ್ರೀಕೃಷ್ಣನೇ ಸರ್ವಕ್ಕಾಶ್ರಯ ಬ್ರಹ್ಮಾಂಡ-ಪಿಂಡಾಡದಿ |

ಶ್ರೀಕೃಷ್ಣನಿಂದಲೆ ಓತಪ್ರೋತವಾದ ಜಗ ನಿತ್ಯ ಸತ್ಯ ||

ಶ್ರೀಕೃಷ್ಣನ ಅಂಜಿಕೆಯಲಿ ಸರ್ವಭೂತ ಕ್ರಿಯೆ ನಡೆವುದು |

ಶ್ರೀಕೃಷ್ಣನಿಂದಲೇ ಇಚ್ಛಿತವಾಗಿ ಸರ್ವಕಾರ್ಯನಡೆವುದು ||

ಶ್ರೀಕೃಷ್ಣ ನಾಮವೇ ಸರ್ವಶತ್ರುಸಂಹಾರಕ, ಸಂಸಾರತಾರಕ |

ಶ್ರೀಕೃಷ್ಣನೇ ಆದಿಮೂಲ ಸರ್ವಕೂ ಕಾರಣ ಪುರುಷ ||

ಶ್ರೀಕೃಷ್ಣನೇ ಸಕಲ ವಸ್ತುಗಳಲಿ ಆಯಾಕಾರನಾಗಿರುವ |

ಶ್ರೀಕೃಷ್ಣನೇ ಸರ್ವ ಶಕ್ತಿಯ, ಶಕ್ತಿಯ ಮೂಲನಾಗಿರುವ ||

ಶ್ರೀಕೃಷ್ಣನ ಅಧೀನದಿ ಸರ್ವ ಜೀವಿಯ ಕರ್ಮ ನಡೆವುದು |

ಶ್ರೀಕೃಷ್ಣನೇ ಸೃಷ್ಟ್ಯಾದಿ ಅಷ್ಟಕರ್ತೃತ್ವ ಲೀಲೆಯಲಿ ಮಾಳ್ಪ ||

ಶ್ರೀಕೃಷ್ಣನೇ ಸತ್ಯಸ್ಯ ಸತ್ಯ, ಸರ್ವಸ್ಯ ಸರ್ವ, ಸರ್ವಕಾಲಿಕ (ಇಂತಹ) |

ಶ್ರೀಕೃಷ್ಣವಿಟ್ಠಲಗೇ ಶರಣಾಗಿ ಸರ್ವಸಮರ್ಪಿಸಿ ಧನ್ಯರಾಗಿ ||

ಭಕ್ತಿರಸ ಲೀಲೆ

75. ಮುರಳಿ ಅಧರ ತಾಕಲು ತಾನೆ |

ಹೊರಹೊಮ್ಮಿತು ಮೋಹಕ ಮಧುರ ಗಾನ || || ||

ತುರು-ಕರುಗಳು ಕಿವಿನಿಮಿರಿಸಿ ಚಂಗನೆ |

ಹಾರುತ್ತ, ಬಾಲ ಬೀಸುತ್ತ ಓಡಿ ಓಡಿ ಬಂದವು ||

ಕರುಗಳು ಕ್ಷೀರಪಾನ ಬಿಟ್ಟು ಶಿಲೆಯಂತೆ ನಿಂತವು |

ಕೊರಳು ತೂಗುತ್ತಾ ಹಸುಗಳು ತಮ್ಮನ್ನೇ ಮರೆತವು || || 1 ||

ತರುಲತೆಗಳು ಪಲ್ಲವಿಸಿ ಪುಷ್ಪಗಳರಳಿದವು |

ಪರಿಮಳ ಭರಿತ ಮರುತ ಮಂದವಾಗಿ ಬೀಸಿತ್ತು ||

ತೆರೆ ತೆರೆಯಾಗಿ ಯಮುನೆ ತಲೆ ತೂಗಿದಳು |

ನೀರಿನ ಜುಳು ಜುಳುನಾದ ವೇಣುವಿಗೆ ಜೊತೆಯಾಯ್ತು || || 2 ||

ಶರಬೀಸಿದ ಕಾಮ ಸಕಲರ ಮೋಹಮಾಡಲು |

ಮರಳು ಮಾಡಿತು ರಾಗ ನಿನಾದ ಪರಿಸರವ ||

ನೀರವ ಕತ್ತಲೆ ಸಕಲರ ಹೃದಯ ತಬ್ಟಿತ್ತು |

ಸುಶ್ರುತ ರಾಗದಿ ಆಕರ್ಷಿತರಾದರೆಲ್ಲರು || || 3 ||

ಕರೆ ಕೇಳಿ ಗೋಪಿಕೆಯರೆಲ್ಲಾ ಮಾಡುವ ಕೆಲಸ |

ಮರೆತು ಅದರ್üದಿ ನಿಲ್ಲಿಸಿ ಹೊರ ಹೊರಟರು ||

ವೈರಾಗ್ಯ ಸಾಧಕರು ಪತಿಸುತ ಗೃಹತೊರೆದು |

ಪರಮಾನುಗ್ರಹ ಪಡೆಯಲು ತ್ವರಿತದಿ ಧಾವಿಸಿದರು || || 4 ||

ಸುರಾಗ ಆಲಿಸಿ ದೇಹಭಾನ ಮರೆತು ಧನ್ಯತೆಯಲಿ |

ತೊರೆದು ಲಜ್ಜೆ ಆಪೇಕ್ಷಿಸಿದರು ತನು ಮನ ಸಂಗ ||

ನಿರಾಕರಿಸೇ ದೇಹ ತೊರೆವೆವು ಎಂದರು ಭಕ್ತಿಭಾವದಿ |

ಕರುಣೆಯಿಂದ "ತಥಾಸ್ತು" ಎಂದು ಮನಮಾಡಿದಮೋಹನ || || 5 ||

ಶರದೃತು ಪೌರ್ಣಿಮೆರಾತ್ರಿ ಪೂರ್ಣರಾಸಲೀಲೆ ಆಡಿದರು |

ಸ್ವರ್ಗವೇ ಧರೆ ಗಿಳಿದು ಬಂದು ಸೃಷ್ಟಿ ನಿರ್ಮಿಸಿತು ||

ಶ್ರೀಕೃಷ್ಣವಿಟ್ಠಲ ಅನೇಕರೂಪದಿ ಅನೇಕ ಭಾವದಿ ಬಾಲಕನಾಗಿ |

ನೀರೆ ಗೋಪಿಕೆ ಜೊತೆ ಲಾಸ್ಯದಿ ನಲಿದಾಡಿದನು || || 6 ||

ಜತೆ

ಸ್ಮರಿಸುತ್ತಾ ರಸ ಸಮಯ ಹರುಷದಿ ತೆರಳಿದರವರವರ ಮನೆಗಳಿಗೆ ||

ಸಂತೃಪ್ತಿ ಪರಿಪಾಲಿಸಿದ ಶ್ರೀಕೃಷ್ಣವಿಟ್ಠಲನ ಲೀಲೆ ಅಚಿಂತ್ಯಾದ್ಭುತ |

76. ಕೃಷ್ಣನ ರೂಪವೇ ಸುಂದರ ರೂಪ | || ||

ಕೃಷ್ಣನ ನಾಮವೆ ರಕ್ಷಾಕವಚ || || ಅಪ ||

ಕೃಷ್ಣನ ಲೀಲೆಯೇ ಅಪ್ಯಾಯಮಾನ |

ಕೃಷ್ಣನ ನುಡಿಯೇ ಚೇತೊಹಾರಿ ||

ಕೃಷ್ಣನ ನಡೆಯೇ ಆದರ್ಶಪ್ರಾಯ |

ಕೃಷ್ಣನ ನೆನೆಯೆ ಕಷ್ಟ ಪೋಪುದು || || 1 ||

ಕೃಷ್ಣನ ಕಥೆಯೇ ಅಮೃತಾನಂದ |

ಕೃಷ್ಣನ ಸ್ವರೂಪವೇ ಜ್ಞಾನಾನಂದ ||

ಕೃಷ್ಣನ ಕೃಪೆಯೇ ಜನುಮದ ಧ್ಯೇಯ |

ಶ್ರೀಕೃಷ್ಣವಿಟ್ಠಲನೇ ಸರ್ವರಸ್ವಾಮಿ || || 2 ||

ಶ್ರೀಕೃಷ್ಣವಿಟ್ಠಲ | ಹರಿ ಹರಿ | ಶ್ರೀಕೃಷ್ಣವಿಟ್ಠಲ || ಹರಿ ಹರಿ ವಿಟ್ಠಲ ||

77. ಮೋಹಕರೂಪ ಚಿನ್ಮಯ ರೂಪದ ಶಿಶುಕಾಣಿರೋ | || ||

ತಾನಾಗಿ ಒಲಿದು ದಯ ಮಾಡಿದ ರೂಪ ಯಶೋದಾನಂದನ | || ಅಪ ||

ಚತುರ್ಭುಜ ಶಂಖ ಚಕ್ರಧಾರಿ ಶ್ರೀವತ್ಸಾಂಕಿತ |

ಪೀತಾಂಬರಧಾರಿ ದೇವಕಿ ಗರ್ಭದಿ ಜನಿಸಲು ಸಾಧ್ಯವೇ ||

ಸರ್ವವ್ಯಾಪುತ ಸಚರಾಚರ ಗರ್ಭದಲಿ ಅಡಗುವನ್ಹೇಗೆ |

ಸರ್ವರಿಗೂ ಜನ್ಮಕೊಟ್ಟ ಶ್ರೀರಮಣ ಪುನ: ಜನಿಸುವನ್ಹೇಗೆ ||

ಪೂತನೆಯ ಕೊಂದವ, ನಳ-ಕೂಬರ ಶಾಪ ಪರಿಹರಿಸಿದವ |

ಗರ್ಭದಲಿ ಶಿಶುವ ಕಾಪಾಡಿದವ ಗರ್ಭದಿಂದ ||

ಜನಿಸಿದನೆಂಬುವುದು ಹಗೆತನದ ಮಾತು |

ಮಣ್ಣನೇಕೆಮೆದ್ದೆ ಎಂದ ತಾಯಿಗೆ ಬ್ರಹ್ಮಾಂಡತೋರಿದವ ಶಿಶುವಾಗುವುದ್ಹೇಗೆ || 1 ||

ಗುರುಪುತ್ರನ ಬದುಕಿಸಿದವ, ಹಿಡಿ ಅವಲಕ್ಕಿಗೆ |

ಮಹಾಸೌಭಾಗ್ಯ ಕರುಣಿಸಿದವ, ತಂಗಿಗೆ ಅಕ್ಷಯಾಂಬರವಿತ್ತವ ||

ಶಿಶುವೆಂದೆ ತಿಳಿದು ಬುಧರು ನುಡಿವರೇ |

ಶ್ರೀಕೃಷ್ಣವಿಟ್ಠಲಂ ವಂದೇಂ ಜಗದ್ಗುರುಂ || 2 ||

78. ನವನೀತಚೋರ ನಿವನ್ಯಾರಮ್ಮಾ ||

ನೀ ಪೇಳಮ್ಮಾ ನಂದಕುಮಾರನ್ಯಾರಮ್ಮಾ | || ||

ಪೂತನಿಯ ಕೊಂದವ, ಬಾಯೊಳು ಜಗವ ತೋರಿದವ |

ಬಂಡಿಯನ್ನೆ ಮುರಿದವ, ಬೆಟ್ಟವನ್ನೆ ಪೊತ್ತವ ||

ತಾಯಿಗೆ ಜಗವ ತೋರಿದವ, ಮಾವನನ್ನೇ ಸಂಹರಿಸಿದವ |

ಗೊಪಿಯರ ಸೀರೆ ಕದ್ದವ, ಮುರುಳಿಯನಾದದಿ ಮೈಮರೆಸಿದವನ್ಯಾರೆ | || 1 ||

ಕಾಳಿಂಗನ ಫಣೆÂಯಲಿ ಕುಣಿದಾಡಿದವ |

ಮೋಹಕ ರೂಪದಿ ಮನಸೆಳೆಯುವ ||

ನಿರುತ ಲೋಲಾಕ್ಷಿ ಸೇವೆ ಸೇವಿಪನ |

ಭಕ್ತ ಪರಾಧೀನ ನಮ್ಮ ಶ್ರೀಕೃಷ್ಣವಿಟ್ಠಲನಲ್ಲದೆ ಮತ್ತ್ಯಾರಮ್ಮಾ | || 2 ||

79. ಮುರಳಿಯ ಪಿಡಿದ ಪಿಳ್ಳಂಗೋವಿ ಚೆಲ್ವ |

ಮೋಡಿಯ ಮಾಡಿದ ಮೋಹಕರೂಪ | || ||

ಮಧುರ ಭಾವದಿ ಮುರಳಿಯ ನಾದದಿ |

ಮೈಮನ ಮರೆತೆ ಮುಕುಂದನ ಧ್ಯಾನದಿ ||

ತಾಳವ ಹಾಕುತಿದೆ ಕೈಗಳು, ಹೆಜ್ಜೆ ಕುಣಿಯುತಿರೆ |

ತೂಗುತಿದೆ ತಲೆ ನಿಜ ಆನಂದದಿ | || 1 ||

ಮುಡಿದ ಹೂಚೆಲ್ಲಾಡಿ ಮುಂಗುರುಳು ಹಾರಾಡಿ |

ಗೆಜ್ಜೆಯ ನಾದಕ್ಕೆ ಬಳೆಗಳ ಖಣಖಣ ಧ್ವನಿಯ ||

ಬಾಲಮುರಳಿಯ ಮೋಡಿಗೆ ಸಿಲುಕಿ |

ಶ್ರೀಕೃಷ್ಣವಿಟ್ಠಲನ ನೆನಪಿಲಿ ನಾ ಸೋತೆ | || 2 ||

80. ಮುರುಳಿಮನೋಹರ ಸರ್ವಜ್ಞ ಸರ್ವಪ್ರದ |

ಮಮಾತ್ಮನಾಂ ಶ್ರೀಕೃಷ್ಣವಿಟ್ಠಲಂ ತಮಾಶ್ರಯೇತ | || 1 ||

ಅಪರಾಧ ಸಹಸ್ರಾಣಾಂ ಕೃಪಯಾ ಕ್ಷಮಸ್ವ |

ಮಮಾತ್ಮನಾಂ ಶ್ರೀಕೃಷ್ಣವಿಟ್ಠಲಂ ತಮಾಶ್ರಯೇತ | || 2 ||

ಆನಂದ ಸ್ವರೂಪ ಅನಾದಿ ಪರಬ್ರಹ್ಮಣೇ |

ಮಮಾತ್ಮನಾಂ ಶ್ರೀಕೃಷ್ಣವಿಟ್ಠಲಂ ತಮಾಶ್ರಯೇತ | || 3 ||

ಘೊರಸಂಸಾರ ಭವತಾರಕ ಸ್ವಾಮಿನ್ |

ಮಮಾತ್ಮನಾಂ ಶ್ರೀಕೃಷ್ಣವಿಟ್ಠಲಂ ತಮಾಶ್ರಯೇತ | || 4 ||

ಸತ್ಯಸ್ಯ ಸತ್ಯ ಅನಂತಗುಣಪರಿಪೂರ್ಣ |

ಮಮಾತ್ಮನಾಂ ಶ್ರೀಕೃಷ್ಣವಿಟ್ಠಲಂ ತಮಾಶ್ರಯೇತ | || 5 ||

ತ್ರೀಭುವನ ಸುಂದರ ತ್ರಿವಿಕ್ರಮರೂಪ |

ಮಮಾತ್ಮನಾಂ ಶ್ರೀಕೃಷ್ಣವಿಟ್ಠಲ ತಮಾಶ್ರಯೇತ | || 6 ||

ಕಾಲಿಯಮರ್ದನ ನವನೀತ ಚೋರ |

ಮಮಾತ್ಮನಾಂ ಶ್ರೀಕೃಷ್ಣವಿಟ್ಠಲಂ ತಮಾಶ್ರಯೇತ | || 7 ||

ವಸ್ತ್ರಾಪಹಾರಿ ವಸ್ತ್ರಾಭಯಪ್ರದಾಯಕ |

ಮಮಾತ್ಮನಾಂ ಶ್ರೀಕೃಷ್ಣವಿಟ್ಠಲಂ ತಮಾಶ್ರಯೇತ | || 8 ||

ದೇವಕಿನಂದನ ಕಂಸಾರಿ ಬಲಭದ್ರ |

ಮಮಾತ್ಮನಾಂ ಶ್ರೀಕೃಷ್ಣವಿಟ್ಠಲಂ ತಮಾಶ್ರಯೇತ | || 9 ||

ಗೋಪಿವಲ್ಲಭ ಭಕ್ತಜನಪ್ರಿಯ ಪರಮಪವಿತ್ರ |

ಮಮಾತ್ಮನಾಂ ಶ್ರೀಕೃಷ್ಣವಿಟ್ಠಲಂ ತಮಾಶ್ರಯೇತ | || 10 ||

ಗೀತಾಭೋಧಕ ರುಕ್ಮಿಣಿಪ್ರಿಯ ಜ್ಞಾನ ಸ್ವರೂಪಕ |

ಮಮಾತ್ಮನಾಂ ಶ್ರೀಕೃಷ್ಣವಿಟ್ಠಲಂ ತಮಾಶ್ರಯೇತ | || 11 ||

ಸದಾ ಸರ್ವತ್ರ ಸರ್ವರಕ್ಷಕ ಸರ್ವವಂದ್ಯಂ |

ಮಮಾತ್ಮನಾಂ ಶ್ರೀಕೃಷ್ಣವಿಟ್ಠಲಂ ತಮಾಶ್ರಯೇತ | || 12 ||

81. ವಸುದೇವಸುತ ಶ್ರೀಕೃಷ್ಣಾವತಾರ |

ಅಸುರದಮನ ಶಿಷ್ಟಪರಿಪಾಲನ ||

ಲೋಕವಿಡಂಬನ ಲೋಕೋದ್ಧಾರಕ |

ಚಿನ್ಮಯಗಾಥಾ ಚಿತ್ತಾಪಹಾರಕ ||

ಅವಿರತ ಸ್ಮರಣ ಪುಣ್ಯಪ್ರದಾಯಕ |

ದಿವ್ಯಮನೋಹರ ನಿತ್ಯ ನವೀನ ||

ದೇವಕಿ ಪುತ್ರ ಯದುಕುಲನಂದನ |

ವಂದಿತ ಪಾದ ಚಂದನಚರ್ಚಿತ ||

ಗೋಕುಲಚಂದ್ರ ಯಶೋದಾನಂದ |

ಗೋಪಕುಮಾರ ಬಲರಾಮಾನುಜ ||

ಗೋಪಿಕಾಜನ ಚಿತ್ತವಲ್ಲಭ |

ಪೂತನಾ ಸಂಹಾರಕ ಅಭಯಪ್ರದಾಯಕ ||

ನವನೀತ ಚೋರ ಪಾಪಪರಿಹಾರಕ |

ನಳ ಕೂಬ ಗಂಧರ್ವ ಶಾಪವಿಮೋಚಕ ||

ಮೃದುಪದ ಸ್ಪರ್ಶಿತ ಶಕಟಾಸುರಹರ |

ಮುಕುಂದ ವದನೇ ಬ್ರಹ್ಮಾಂಡ ದರ್ಶನ ||

ಆಣೋರಣಿಯಾನ್ ಮಹಿತೋಮಹಿಯಾನ್ |

ಕಾಲೀಯಫಣೆ ನಾಟ್ಯಲೀಲಾವಿನೋದ ||

ಯಮುನಾ ಜಲ ವಿಷಾಪಹಾರಕ |

ಗೋಪಾಲಕ ಗೋವರ್ಧನಧಾರಿ ||

ಸಜ್ಜನರೋದ್ಧಾರಕ ರಾಧಾಪ್ರಿಯ |

ಗೋಪಿ ರಾಸಲೀಲಾ ಮೋದಕ ನಿರ್ಮೋಹಕ ||

ಆಶ್ರಯದಾತ ಸರ್ವಗೋಪಿ ಪ್ರಿಯ |

ಮೋಹನಾಂಗ ಅಂಗಸಂಗ ಪ್ರದಾತ ||

ಅಕ್ರೂರಪ್ರಿಯ ಮಥುರಾಗಮನ |

ಚಾಣೂರ ಮುಷ್ಟಿಕ ಕಂಸಾರಿ ||

ದೇವಕಿ ವಸುದೇವ ನಮಿಪ ಕಂದ |

ವಿದ್ಯಾಗುರು ಸಾಂದೀಪಿನಿ ಆಶ್ರಯೆ ||

ಗುರುದಕ್ಷಿಣಾರ್ಪಿತ ಗುರುಪುತ್ರ: ||

ಕೃಷ್ಣಪ್ರಿಯ ಸುದಾಮಸಖ |

ಕುಂತಿ ಆರಾಧಿತ ಪಾಂಡವ ಪರಿಪಾಲಕ ||

ಸರ್ವಶಾಸ್ತ್ರ ರಹಸ್ಯ ಬೋಧಕ ಅಕ್ಷರ |

ವಿಶ್ವರೂಪದರ್ಶನ ಸಜ್ಜನಾನ್ಮೋದಕ ||

ಭಗವದ್ಗೀತಾ ಬೋಧಕ ಮುಕ್ತಿದಾಯಕ ||

ಪಾರ್ಥಸಾರಥಿ ಶ್ರೀರುಕ್ಮಿಣಿ ನಾಥ |

ಸ್ಯಮಂತಕಮಣಿ ಪ್ರದಾತ ಸತ್ಯಭಾಮಾಪ್ರಿಯ ||

ಸದಾತುಲಸೀ ಸಾನ್ನಿಧ್ಯಸ್ಥ ಕಾಲೀಂದಿಪ್ರಿಯ |

ಷೋಡಶ ಸಹಸ್ರ ಪತ್ನಿಸ್ಥ ಸಮದರ್ಶಿ ||

ಉತ್ತಮ ಶ್ಲೋಕ ಆರ್ತಜನಾಶ್ರಯ |

ದುರ್ವಾಸ ಶಾಪಸ್ವೀಕಾರ ಯದುಕುಲನಾಶಕ |

ಉದ್ಧವ ಬೋಧಕ ಮಾನವ ಶರೀರತ್ಯಾಗ ||

ಲಕ್ಷ್ಮೀಸಹಿತ ವಿಷ್ಣುಲೋಕೇ ಚಿರಸ್ಥಾಯಿ |

ಸಿಂಧುಶಯನ ಅನಂತ ಗುಣಸಾಂದ್ರ ||

ಸದಾನಂದ ಸರ್ವೋತ್ತಮ ಸ್ಮರೇತ್ ಸದಾ |

ಸಂಸಾರ ಚಕ್ರ ವಿಮುಕ್ತಿ ಶ್ರೀಕೃಷ್ಣವಿಟ್ಠಲ ಸಾಮೀಪ್ಯ ಲಭೇತ್ ||

82. ಶೇಷ ಶಾಯಿಯಾಗಿ ಪವಡಿಸಿದ ಮನಮೋಹಕ ರಂಗನಾಥ |

ಶಾಲಿಗ್ರಾಮ ಕೃಷ್ಣವರ್ಣದ ರೂಪ ಅದ್ಭುತ, ಮಹಾದ್ಭುತ, ರಮ್ಯ | || ||

ಧನಕನಕವ ಅಳೆದು ಬಸವಳಿದು ಸೇರನೆ ತಲೆಯಡಿಇಟ್ಟು |

ತೋಳನೆ ದಿಂಬಾಗಿಸಿ ಸುಖವಾಗಿ ನಿದ್ರಿಸಿದ ಮುದ್ದು ರಂಗನಾಥ ||

ಅಗಲಮೋರೆ, ನೀಳನಾಸಿಕ, ಮಂದಹಾಸ ಬೀರುತ |

ನಿಮಿಲನೇತ್ರ, ಕಾಮಪಿತ, ಸುಂದರರೂಪ ರಂಗನಾಥ | || 1 ||

ಬೃಹತ್ ಕಿರೀಟ, ಮಕರಕುಂಡಲ, ಕಂಕಣಧರಿಸಿ |

ಹಾರ, ಕೇಯೂರ, ಪೀತಾಂಬರಧಾರಿ, ಭವ್ಯ ರೂಪದಸ್ವಾಮಿ ರಂಗನಾಥ ||

ಚಾಚಿದ ವಾಮಹಸ್ತ, ಬಲಮಗ್ಗಲಾಗಿ ಮಲಗಿದ |

ನೀಡಿದ ಕಾಲ್ಗಳ ದಿವ್ಯ ಪಾದಪದ್ಮ ದರುಶನವಿತ್ತ ಜೀಯಾ | || 2 ||

ನಾನೆಂದಿಗೂ ಮರೆಯಲಾರೆ ನಿನ್ನ ದಿವ್ಯರೂಪ |

ಲೋಕಪಾಲಕ ಕರುಣಾಮಯನೆ, ಎನ್ನಲಿ ಏನುಂಟೆಂದು ||

ದರುಶನ ಭಾಗ್ಯ ಕರುಣಿಸಿ ಎನ್ನ ಪಾವನಗೊಳಿಸಿದೆ ರಂಗನಾಥ |

ರಂಗನಾಥನೇ ನನ್ನಪ್ರಿಯ ಶ್ರೀಕೃಷ್ಣವಿಟ್ಠಲನೆಂಬಲ್ಲಿ ಸಂಶಯವಿಲ್ಲಾ || 3 ||

83. ನೀನೆ ನಿತ್ಯ ಶ್ರೀಕೃಷ್ಣ |

ನೀನೇ ಸತ್ಯ ಶ್ರೀಕೃಷ್ಣ ||

ನೀನೇ ಕರ್ತಾ ಶ್ರೀಕೃಷ್ಣ |

ನೀನೇ ಭರ್ತಾ ಶ್ರೀಕೃಷ್ಣ ||

ನೀನೇ ಹರ್ತಾ ಶ್ರೀಕೃಷ್ಣ |

ನೀನೇ ಆತ್ಮ ಶ್ರೀಕೃಷ್ಣಾ ||

ನೀನೇ ಸ್ವತಂತ್ರ ಶ್ರೀಕೃಷ್ಣ |

ನೀನೇ ಅಂತರ್ಬಹಿಶ್ಚ ಶ್ರೀಕೃಷ್ಣ ||

ಜ್ಞಾನಾನಂದರೂಪಿ ನಿರ್ದೋಷಿ ಶ್ರೀಕೃಷ್ಣ |

ಅನಂತಾನಂತ ಗುಣಪೂರ್ಣ ಶ್ರೀಕೃಷ್ಣ ||

ಮನದಿ ಅರ್ಚಿಸೆ ಧ್ಯಾನಕ್ಕೆ ಪೊಳೆವ ಶ್ರೀಕೃಷ್ಣ|

ಎನ್ನಸ್ವಾಮಿ ಸರ್ವಸ್ವಾಮಿ ಶ್ರೀಕೃಷ್ಣವಿಟ್ಠಲ ||

84. ಗೋಕುಲದಿ ಬೆಳೆದ ದೇವಕಿ ನಂದನ |

ಗೋವುಗಳ ಕಾಯ್ದ ಅನುದಿನ ಪ್ರೇಮದಿ ||

ಗೋಪಾಲರೂಡಗೂಡಿ ಓಡನಾಡಿದ |

ಗೋವರ್ಧನ ಗಿರಿಯನ್ನೆತ್ತಿ ಸಕಲರ ರಕ್ಷಿಸಿದ ||

ಗೋಪಿಯರೊಡನೆ ರಾಸಲೀಲೆ ರಚಿಸಿದ |

ಗೋವಿಂದ ಸತ್ಯದಿ ಅಸುರರ ಸದೆಬಡೆದ ||

ಗೋಜು ಸಂಸಾರದಿ ತಪ್ಪಿಸುವ ಶ್ರೀಕೃಷ್ಣವಿಟ್ಠಲನ ನಿತ್ಯ ನೆನೆವರ ||

85. ಅಷ್ಟಮ ಅವತಾರದಿ ಭಗವಂತ ಶ್ರೀಕೃಷ್ಣವಿಟ್ಠಲ |

ಅಷ್ಟವಸುವಿನ ಕಂದನಾಗಿ ಜನಿಸಿದ ಶ್ರೀಕೃಷ್ಣವಿಟ್ಠಲ ||

ಅಷ್ಟಮಿದಿನ ರೋಹಿಣಿ ನಕ್ಷತ್ರದಿ ಜನಿಸಿದ ಶ್ರೀಕೃಷ್ಣವಿಟ್ಠಲ |

ಅಷ್ಟರನ್ನೂ ಸಲಹುವ ಸಂಶಯವಿಲ್ಲದೆ ಶ್ರೀಕೃಷ್ಣವಿಟ್ಠಲ ||

ಅಷ್ಟಗಂಧ, ಬುಕ್ಕಿ ಟ್ಟುಗಳಿಂದ ಅರ್ಚಿಸೆ ನಲಿವ ಶ್ರೀಕೃಷ್ಣವಿಟ್ಠಲ |

ಅಷ್ಟಾಂಗ ಸಾದರ ಪ್ರಣಾಮಕ್ಕೆ ತನ್ನನ್ನೇ ಒಪ್ಪಿಸಿ ಕೂಳ್ಳುವ ಶ್ರೀಕೃಷ್ಣವಿಟ್ಠಲ ||

ಅಷ್ಟದಶದಿನ ಕುರುಕ್ಷೇತ್ರದಿ ಸಾರಥ್ಯನಡೆಸಿದ ಶ್ರೀಕೃಷ್ಣವಿಟ್ಠಲ |

ಅಷ್ಟಾದಶ ಅಕ್ಷೋಹಿಣಿ ಸೈನ್ಯದ ಮಧ್ಯೆ ರಾರಾಜಿಸಿದ ಶ್ರೀಕೃಷ್ಣವಿಟ್ಠಲ ||

ಅಷ್ಟಮಹಿಷಿರೊಡಗೂಡಿ ಅವತಾರಕ್ರಿಯೆ ನಡೆಸಿದ ಶ್ರೀಕೃಷ್ಣವಿಟ್ಠಲ |

ಅಷ್ಟಮದ ಅಡಗಿದಾಗ ಒಲಿವ ಶ್ರೀಕೃಷ್ಣವಿಟ್ಠಲ ||

ಎಂಟರ ನೆಂಟಿನ ಗಂಟು ಅರಿತವರಿಗೆ ಇಲ್ಲ ಸಂಸಾರದ ಕಗ್ಗಂಟು

ಬಂಟರಂತೆ ಸಂತತ ಸೇವಿಪರಿಗೆ ಬಲು ಸುಲಭನೋ ಶ್ರೀಕೃಷ್ಣವಿಟ್ಠಲ ||

86. ಅಡಿಯಿಂದ ಮುಡಿವರೆಗೆ ನಾನಾ ಒಡವೆ ಧರಿಸಿದ |

ಗದಾ ಶಂಖ ಪದ್ಮ ಚಕ್ರಧಾರಿ ಲಲಾಟದಿ ಮುಂಗುರುಳ ಹಾರುತ ||

ಸುಂದರ ಮೂರ್ತಿ ಪೀತಾಂಬರಧಾರಿ ನಸುನಗುತ |

ಕುಡಿನೋಟ ಬೀರುವ ಚೆಲುವ ಕಸ್ತೂರಿ ತಿಲಕಧಾರಿ ||

ಕುಂಡಲ ಕಿವಿಯೊಳು, ನವರತ್ನಕಿರೀಟ ಶಿರದಿ |

ಕಡಗ ಕಂಕಣ ಕೈಯೊಳು, ಬಾಜುಬಂದ ಬಾಹುದಿ ||

ನಡುವಿಗೊಡ್ಯಾಣ, ಕೌಸ್ತುಭ ಮುತ್ತಿನಹಾರ ಕಂಠದಿ |

ಅಂದುಗೆ ಗೆಜ್ಜೆ ಘಲ್ಲಘಲ್ಲೆಂದು ಕಾಲಲಿ ನೋಡೆ ||

ಎಡ ಬಲದಿ ರುಕ್ಮಿಣಿ ಸತ್ಯ ಭಾಮ ರೊಡಗೂಡಿದ |

ಒಡೆಯಾ ಶ್ರೀಕೃಷ್ಣವಿಟ್ಠಲನ ನೆನೆ ತನ್ನ ಪಾದಾಶ್ರಯ ನೀಡುವ ||

ಶ್ರೀ ಕೃಷ್ಣವಿಠ್ಠಲಪದಗುಚ್ಛ 3 ಅನುಕ್ರಮಣಿಕಾ

87. ಪುಟ್ಟ ಬಾಲಕನಿವ ಸಕಲರ ಮನ ಸೆಳೆವನೀತ |

ದಿಟ್ಟಿಸಲು ಇವನ ಜನುಮ ಕಡೆ ಹಾಯಿಸುವನೀತ | || ||

ಅಷ್ಟಮದಗಳ ತರಿದು ಬಿಸುಟುವವನೀತ |

ಸುಟ್ಟು ಪಾಪಕರ್ಮ ಶುದ್ಧ ಮಾಡುವವನೀತ | || ಅಪ ||

ರಜತ ಪೀಠದಿ ನಿಂತ ಬಾಲಕನ್ಯಾರುಗೊತ್ತೆ |

ವಿಜೃಂಭಣೆಯಿಂ ಸಕಲ ಕೈಂಕರ್ಯ ಕೈಗೊಳುವ ||

ಗೆಜ್ಜೆಕಾಲ್ಗಳ ಪುಟ್ಟಪಾದ ಕಂದನಿವ |

ಕಜ್ಜಾಯ ಪಂಚಖಾದ್ಯಗಳ ನೈವೇದ್ಯ ಸವಿಯುವ | || 1 ||

ಮಧ್ವಸರೋವರದಿ ಮಿಂದವಗೆ ಭಾಗ್ಯವೀವ |

ಮಂದರೋದ್ಧಾರಿ ಮಂದಸ್ಮಿತ ಮನಸೆಳೆವ ||

ಬಂದ ಭಕುತರ ಅಭೀಷ್ಟೆ ಪೂರೈಸುವವ |

ವಾದಿರಾಜರ ಇಚ್ಛೆಯಂತೆ ನಡೆದ ಪರ್ಯಾಯದ ಅಧಿದೈವ | || 2 ||

ಅಷ್ಟಮಠಾಧೀಶರೂಡೆಯ ನಿತ್ಯಪೂಜೆಗೊಳ್ಳುವ |

ಇಷ್ಟದೈವ ಸಕಲರ ಪೊರೆವನೆಂಬ ಬಿರುದಿನ ||

ದೃಷ್ಟಿಸಿ ಮೋಹದಿ ತಾರಿಸುವ ಸಂಸಾರ ಕಂಸಾರಿ |

ಮಾಟವಾದ ಮೈಮಾಟದ ಮಾಂತ್ರಿಕನಿವ | || 3 ||

ಕಡೆಗೋಲ ಬಲಕೈಯಲಿ ಧರಿಸಿರುವ |

ಪಿಡಿದು ನೇಣವ ಎಡೆಕೈಯಲ್ಲಿನಿಂತವ ||

ಹೊಡೆದೂಡಿಸುವ ಸಕಲ ದುಷ್ಟ ಶಕ್ತಿಯ |

ಒಡೆಯನಿವ ಹೃಷ್ಟರೂಪಿ ನಮ್ಮ ಶ್ರೀಕೃಷ್ಣವಿಟ್ಠಲ | || 4 ||

88. ಎನ್ನನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಟ್ಠಲಾ |

ಮನ್ನಿಸಿ ಸಕಲ ತಪ್ಪುಗಳ ಬಿಡದೆ ಕಾಯೋ ಶ್ರೀಕೃಷ್ಣವಿಟ್ಠಲಾ | || ||

ಚಂದನ ಚರ್ಚಿತ ಸುಂದರವದನ |

ಮಂದಸ್ಮಿತ ನಿಮಿಲನೇತ್ರ ಮುಕು ಟಧರನೇ ||

ಎನ್ನನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಟ್ಠಲ | || 1 ||

ನಡುವಿಗೊಡ್ಯಾಣ ಮಕರ ಕುಂಡಲಧಾರಿನ್ |

ಕಡಗಕಂಕಣ ನೂಪುರ ಘಿಲ್ಲೆನ್ನುತ ವರಾಭಯಪ್ರದ ||

ಎನ್ನನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಟ್ಠಲ | || 2 ||

ಬ್ರಹ್ಮಾಂಡ ಪಿಂಡಾಡ ಸರ್ವವ್ಯಾಪ್ತ ಸರ್ವೇಶ |

ಅಮರ ಸುರಗಣ ಸರ್ವವಂದ್ಯ ಸುಪೂಜಿತ ||

ಎನ್ನನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಟ್ಠಲ | || 3 ||

ಲೋಕೈಕನಾಥ ಸಮಸ್ತ ದೋಷದೂರ |

ಲಕ್ಷ್ಮೀಪತಿ ಶೇಷಶಾಯಿ ಯೋಗೇಶ್ವರ ||

ಎನ್ನನ್ನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಟ್ಠಲ | || 4 ||

ಜಗತ್ಪರಿಪಾಲಕ ಸತ್ಯಸ್ಯ ಸತ್ಯ |

ಸ್ವಗತ ಭೇದವಿವರ್ಜಿತ ಸ್ವತಂತ್ರ ರೂಪಿ ||

ಎನ್ನನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಟ್ಠಲ | || 5 ||

ದೇಶಕಾಲಗುಣತಃ ಸರ್ವ ಸಾಕ್ಷಿ, ಏಕೈಕ |

ನಾಶರಹಿತ ಸರ್ವಶಕ್ತಅನಂತ ಗುಣಿ ||

ಎನ್ನನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಟ್ಠಲ | || 6 ||

ಆನಂದ ವಿಮಲ ಜ್ಞಾನ ಸಾಗರ |

ಚಿನ್ಮಯ ರೂಪ ಸಂಸಾರ ಭವತಾರಕ ||

ಎನ್ನನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಟ್ಠಲ | || 7 ||

ಸ್ಮರಣತ್ ಸದಾವಂದ್ಯ ಪಾವನರೂಪ |

ಸ್ಪುರೇತ್ ಹೃದ್ಗುಹೇ ನಿಜ ಬಿಂಬರೂಪ ||

ಎನ್ನನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಟ್ಠಲ | || 8 ||

89. ಕಡೆಗೋಲ ನೇಣಪಿಡಿದ ಉಡುಪಿಕೃಷ್ಣ |

ಬಾಲಕನಾಗಿ ನಿಂತಿಹ ಗುರುವಾಯೂರಪ್ಪನಾಗಿ ||

ಎರಡು ಕೈ ಕಟಿಯಲ್ಲಿಟ್ಟು ಪಂಢರಿರಾಯ |

ಅಭಯ ಹಸ್ತದ ಕಂಚಿ ವರದರಾಜ ||

ವರದ ಹಸ್ತ ತೋರಿದ ಶೇಷಗಿರಿವಾಸ |

ಶೇಷ ಶಾಯಿಯಾದ ಶ್ರೀರಂಗನಾಥ ||

ಬದರಿಲಿ ಯೋಗಮುದ್ರೆ ಭಂಗಿಲಿ ಕುಳಿತ |

ಸರ್ವದೈವವೂ ಜಗನ್ನಾಥ ಶ್ರೀಕೃಷ್ಣವಿಟ್ಠಲನೇ ||

ಇದು ತ್ರಿಕಾಲಕೂ ಸತ್ಯಸ್ಯ ಸತ್ಯವೆಂದು ಎರಡೂ |

ಕೈಮೇಲೆತ್ತಿ ಪೇಳುವೆ ಶ್ರೀಕೃಷ್ಣ ವಿಟ್ಠಲನ ದಯದಿ ||

90. ಜಯಹರಿ ಶ್ರೀಹರಿ ಕೃಷ್ಣವಿಟ್ಠಲ |

ಜಯಹರಿ ಶ್ರೀರಾಮ ಶ್ರೀಕೃಷ್ಣವಿಟ್ಠಲ ||

ಜಯಹರಿ ಗೋವಿಂದ ಶ್ರೀಕೃಷ್ಣವಿಟ್ಠಲ |

ಜಯಹರಿ ಅಚ್ಯುತ ಶ್ರೀಕೃಷ್ಣವಿಟ್ಠಲ ||

ಜಯಹರಿ ಅನಂತ ಶ್ರೀಕೃಷ್ಣವಿಟ್ಠಲ |

ಜಯಹರಿ ಪಂಢರಿ ಶ್ರೀಕೃಷ್ಣವಿಟ್ಠಲ ||

ಜಯಹರಿ ಪಾಂಡುರಂಗ ಶ್ರೀಕೃಷ್ಣವಿಟ್ಠಲ |

ಜಯಹರಿ ರಂಗನಾಥ ಶ್ರೀಕೃಷ್ಣವಿಟ್ಠಲ ||

ಜಯಹರಿ ಶ್ರೀನಿವಾಸ ಶ್ರೀಕೃಷ್ಣವಿಟ್ಠಲ |

ಜಯಹರಿ ವೇಂಕಟೇಶ ಶ್ರೀಕೃಷ್ಣವಿಟ್ಠಲ ||

ಜಯಹರಿ ನಾರಾಯಣ ಶ್ರೀಕೃಷ್ಣವಿಟ್ಠಲ |

ಜಯಹರಿ ಮಧುಸೂದನ ಶ್ರೀಕೃಷ್ಣವಿಟ್ಠಲ ||

ಜಯಹರಿ ದ್ವಾರಕನಾಥ ಶ್ರೀಕೃಷ್ಣವಿಟ್ಠಲ |

ಜಯಹರಿ ಜಗನ್ನಾಥ ಶ್ರೀಕೃಷ್ಣವಿಟ್ಠಲ ||

ಜಯಹರಿ ನರಸಿಂಹ ಶ್ರೀಕೃಷ್ಣವಿಟ್ಠಲ |

ಜಯಹರಿ ತ್ರಿವಿಕ್ರಮ ಶ್ರೀಕೃಷ್ಣವಿಟ್ಠಲ ||

ಜಯಹರಿ ಜನಾರ್ದನ ಶ್ರೀಕೃಷ್ಣವಿಟ್ಠಲ |

ಜಯಹರಿ ದಾಮೋದರ ಶ್ರೀಕೃಷ್ಣವಿಟ್ಠಲ ||

ಜಯಹರಿ ಹೃಷಿಕೇಶ ಶ್ರೀಕೃಷ್ಣವಿಟ್ಠಲ |

ಜಯಹರಿ ಪದ್ಮನಾಭ ಶ್ರೀಕೃಷ್ಣವಿಟ್ಠಲ ||

ಜಯಹರಿ ಪರುಷೋತ್ತಮ ಶ್ರೀಕೃಷ್ಣವಿಟ್ಠಲ |

ಜಯಹರಿ ವಾಸುದೇವ ಶ್ರೀಕೃಷ್ಣವಿಟ್ಠಲ ||

ಜಯಹರಿ ಲಕ್ಷ್ಮೀಪತಿ ಶ್ರೀಕೃಷ್ಣವಿಟ್ಠಲ |

ಜಯಹರಿ ಮುಕುಂದ ಶ್ರೀಕೃಷ್ಣವಿಟ್ಠಲ ||

ಜಯಹರಿ ಮಾಧವ ಶ್ರೀಕೃಷ್ಣವಿಟ್ಠಲ |

ಜಯಹರಿ ಕೇಶವ ಶ್ರೀಕೃಷ್ಣವಿಟ್ಠಲ ||

ಜಯಹರಿ ಗೋಪಾಲ ಶ್ರೀಕೃಷ್ಣವಿಟ್ಠಲ |

ಜಯಹರಿ ಮುರಾರಿ ಶ್ರೀಕೃಷ್ಣವಿಟ್ಠಲ ||

ಜಯಹರಿ ಮುರಳಿಧರ ಶ್ರೀಕೃಷ್ಣವಿಟ್ಠಲ |

ಜಯಹರಿ ಗೋವರ್ಧನ ಶ್ರೀಕೃಷ್ಣವಿಟ್ಠಲ ||

ಜಯಹರಿ ಸರ್ವನಾಮಃ ಶ್ರೀಕೃಷ್ಣವಿಟ್ಠಲ |

ಜಯಹರಿ ಮುಕ್ತಿಪ್ರದಾಯಕ ಶ್ರೀಕೃಷ್ಣವಿಟ್ಠಲ ||

ವಿಟ್ಠಲವಿಟ್ಠಲ ಶ್ರೀಕೃಷ್ಣವಿಟ್ಠಲ |

ಜಯಹರಿವಿಟ್ಠಲ ಶ್ರೀಕೃಷ್ಣವಿಟ್ಠಲ ||

91. ಲೀಲೆಯ ಬಲ್ಲಿರಾ ಯದುಕುಲ ಲಲಾಮನ |

ನೀಲ ಮೇಘಶ್ಯಾಮನ ಅದ್ಭುತ ಲೀಲೆಯ ಬಲ್ಲಿರಾ | || ||

ಬಾಲಕ ಲಳಿ(ಬೆರಗು), ಚತುರ್ಭುಜ, ಪೀತಾಂಬರಧರ, ಕಿರೀಟಧಾರಿ |

ಶ್ರೀಲಕ್ಷ್ಮೀ ಲಾಂಛಿತ ಪ್ರಾದುರ್ಭವಿಸಿದ ದೇವಕಿಯ ಗರ್ಭದಿಂ ||

ಬೆಳೆದ ಗೋಕುಲದಿ ನಂದ-ಯಶೋದೆ ಕಂದನಾಗಿ |

ಬಾಲ್ಯವ ಕಳೆದ ಗೋಪಾಲಕ, ಗೋಪಿಯರೊಡಗೂಡಿ ಲಾಸ್ಯದಿ ||

ಕಳ್ಳತನದಿ ಬೆಣ್ಣೆ, ಮೊಸರು, ಹಾಲು ಕದ್ದು ಮೆದ್ದನೆಂಬರು | || 1 ||

ಲೀಲಾಜಾಲದಿ ಕೆಲವು ದುಷ್ಟ ಅಸುರ ಮರ್ದನಗೈದ ||

ಕಾಲಿಂದ ಫಣೆಯಲಿ ನರ್ತಿಸಿ ಯಮುನೆಯ ರಕ್ಷಿಸಿದ |

ಏಳು ವರ್ಷದ ಬಾಲಕ ಏಳುದಿನ ಸತತ ಮಳೆಯಲಿ ||

ಲೀಲೆಯಲಿ ಗೋವರ್ಧನ ಎತ್ತಿಪಿಡಿದು ಸಂರಕ್ಷಿಸಿದ ಸಕಲರ |

ಬಿಲ್ಲು ಹಬ್ಬದ ನೆಪದಿ ಲಟ್ಟ(ದುಷ್ಟ) ಮಾವ ಕಂಸನ ಕೊಂದ ಧೀರ || 2 ||

ಲೋಲ, ಲೋಕಮಾತೆ ಶ್ರೀರುಕ್ಮೀಣಿಯ ವರಿಸಿದ |

ಲಲನೆಯರ ಹದಿನಾರು ಸಾಸಿರನೂರೆಂಟು ಪತ್ನಿ ಯುಕ್ತನಾದ ||

ಒಲವಿಂದ ಯೋಗ ಜ್ಞಾನವಿತ್ತ ಯುದ್ಧದಿ ಪಾರ್ಥಸಾರಥಿ |

ಹಲವಾರು ಲೀಲೆಗೈದ ಲೀಲಾಮಾನುಷನ ಬಣ್ಣಿಸಲಾರೆ ||

ಎಲ್ಲ ಬಲ್ಲ ಶ್ರೀಕೃಷ್ಣವಿಟ್ಠಲನ ಪೊಗಳಲು ಶಬ್ದಸಾಲದು | || 3 ||

92. ಪುಟ್ಟಿಸಿದ ತಾಯ್ತಂದೆಯರ ಕಾರಾವಾಸದಲ್ಲಿ ಬಿಟ್ಟು |

ಬುಟ್ಟಿಯಲಿ ಕುಳಿತು ಗೋಕುಲಕೆ ಪೊದೆ ||

ಘಟವನೊಡೆದು ಹಾಲು ಬೆಣ್ಣೆ ಮೆದ್ದೆ |

ದಟ್ಟವಾದ ಕಾಡಲಿ ಗೊಪಾಲಕನಾದೆ ||

ಬೆಟ್ಟವನ್ನೆತ್ತಿ ಇಂದ್ರನ ಮದ ಮುರಿದೆ |

ಘಟ್ಯಾಗಿ ನಂಬಿಸಿ ಗೋಪಿಯರ ತೊರೆದೆ ||

ಮೆಟ್ಟಿದೆ ಮಾವ ಕಂಸನ ತರಿದು ಶಿರವ |

ಅಷ್ಟ ಮಹಿಷಿಯರ ವರಿಸಿ ಸುಕಾಂತನಾದೆ ||

ಚಟ್ಟನೆ ತಂಗಿಗೆ ವಸ್ತ್ರವಿತ್ತು ಮಾನಕಾಯ್ದೆ |

ನೆಟ್ಟೆ ಪಾರಿಜಾತ ಮಡದಿಯ ಪ್ರೀತಿಗಾಗಿ ||

ಕೊಟ್ಟ ಮಾತು ಉಳುಹಲು ಚಕ್ರವ ಪಿಡಿದೆ |

ಒಟ್ಟಿಲಿ ಪಾಂಡವರ ರಕ್ಷಿಸಿ ಕೌರವರ ಒರೆಸಿದೆ ||

ದುಷ್ಟರ ತರಿದು ಶಿಷ್ಟರ ಪಾಲಿಸಿದೆ |

ಇಷ್ಟೆಲ್ಲಾ ಮಾಡಿದ ಶ್ರೀಕೃಷ್ಣವಿಟ್ಠಲ ನಿನಗೆ ನಾ ಭಾರವೆ? ||

ದಿಟವಾಗಿ ನಿನ್ನ ಪಾದನಂಬಿರುವೆ ಕಡೆಗಾಣಿಸೋ ||

93. ಉಡುಪಿಕೃಷ್ಣನ ಪ್ರತಿಮೆ ಸೊರಗುವಿಕೆಗೆ ಕಾರಣವೇನು ?

ಚಿಣ್ಣ ಕೃಷ್ಣಯ್ಯಾ, ಬಾಲ ಕೃಷ್ಣಯ್ಯ ಏಕೆ ಸಣ್ಣಗಾಗಿರುವೆ || ಪೇಳು | || ||

ಮಣ್ಣ ಮೆದ್ದಬಾಯಿಗೆ ಬೆಣ್ಣೆ, ಹಾಲು, ನೈವೇದ್ಯ ಒಗ್ಗಲಿಲ್ಲವೇ? |

ಹಣ್ಣಿನ ಬುಟ್ಟಿಗೆ ಕೈಹಾಕಿ ತಿಂದವಗೆ ಎದುರಿಟ್ಟಿದ್ದು ಬೇಕಿಲ್ಲವೇ ||

ಒಣ ದ್ರಾಕ್ಷಿ, ಗೋಡಂಬಿ, ಉತ್ತತ್ತಿ ದೇಹಕ್ಕೆ ಪುಷ್ಟಿ ಕೊಡುತಿಲ್ಲವೇ? |

ಕಣ್ಣಿನಿಂದ ಸ್ವಾಖ್ಯರಸ ಸ್ವೀಕರಿಸುವಗೆ ಏನೂ ಬೇಡವಾಯಿತೇ | || 1 ||

ನೇಣು-ಕಡೆಗೋಲು ಪಿಡಿದು ಕೈ ಸೋತು ಹೋಯಿತೇ? |

ಕಣ-ಕಣದಲ್ಲಿರುವಗೆ ಒಂದೆಡೆಯೇ ನಿಂತು ಸಾಕಾಯಿತೆ? ||

ಕ್ಷಣ-ಕ್ಷಣಕೂ ಸೊರಗುತಿರುವುದು ಪಂಚಾಮೃತ ಮಜ್ಜನದಿಂದಲೇ? |

ಮಣಭಾರ ಉದರದಲ್ಲಿಟ್ಟವಗೆ ಜಠರ ಬೇನೆಯೇ | || 2 ||

ಉಣಿಸಿ ಔತಣ ಸಕಲರಿಗೆಅನ್ನಬ್ರಹ್ಮ ದಣಿದೆಯಾ? |

ಪಣದಿ ಸೋತವರ ಪಕ್ಷವಹಿಸಿ ಧರ್ಮವ ಉಳುಹಲು ಸೊರಗಿದೆಯಾ? ||

ಗಣಿತ ಅಗಣಿತ ಲೋಕಸ್ಥ ದೇವಾ ಕ್ರೀಡಿಸಿದ್ದೇ ಕಾರಣವಾ |

ವರ್ಣಾಭಿಮಾನಿ ಸಕಲ ಸುರವಂದ್ಯರ ಸಂತೈಸಿ ಸೋತೆಯಾ | || 3 ||

ಕಣ್ರೆಪ್ಪೆ ಬಡೆಯದೆ, ಭಾರಪೊತ್ತು, ಮೋರೆ ತಿರುವಿ |

ಸಣ್ಣ ಬಾಲಕಗೊಲಿದು, ತ್ರಿವಿಕ್ರಮನಾಗಿ, ಕಾಡಲಿ ಅಲಿದು ||

ಮಾತೆಯ ಶಿರ ಕಡಿದು, ಕಾಳಿಂಗನ ಫಣೆಮೇಲೆ ನರ್ತಿಸಿ |

ಗುಣಗಳ ಬಿಟ್ಟು ಬೋಧಿಸಿ ಅಧರ್ಮ, ಹಯವನೇರಿದ್ದು ಸೋತು ಸೊರಗಿದೆಯಾ || 4 ||

ಕಣ್ಮಣಿ, ನೀಲವರ್ಣಗೆ ಭಕ್ತರ ದೃಷ್ಟಿ ತಾಕಿದೆಯೇ |

ದಣಿವಾಗಿದೆಯೇ, ಅಷ್ಟಯತಿಗಳ ಭಕ್ತಿ ಕೈಂಕರ್ಯಕೊಂಡು ||

ಷಣ್ಮಹಿಷಿಯರ ವಿರಹ ವೇದನೆ ಸಹಿಸದಾಯಿತೇ? |

ಜಾಣ, ರುಕ್ಮಿಣಿಕರಾರ್ಚಿತ ಶ್ರೀಕೃಷ್ಣವಿಟ್ಠಲ ಕಾರಣವ ಪೇಳಯ್ಯಾ | || 5 ||

94. ಈತನು ವಾಸುದೇವನಲ್ಲದೆ ಮತ್ತ್ಯಾರೂ ಅಲ್ಲ | || ||

ಚಿತ್ತಚೋರ ಪೋರನೀವ ಬೇರ್ಯಾರೂ ಅಲ್ಲ | || ಅಪ ||

ತಾಯಿಗೆ ಬಾಯಲಿ ಜಗವತೋರಿ |

ಮಾಯೆಯಲಿ ದೇಹಭಾನ ಮರೆಸಿ |

ದಯದಿ ಮತ್ತೆ ಕುವರನಾಗಿ ಕಾಣಿಸಿದವ | || 1 ||

ಪುಟ್ಟಪಾದ ಕಾಳಿಂಗನ ಫಣಿಮೇಲೆ |

ಘಟ್ಟಿಯಾಗಿ ಇಟ್ಟು ನರ್ತಿಸಿದವ |

ಪಟ್ಟು ಬಿಡದೆ ಯಮುನೆ ಬಿಟ್ಟು ದೂರ ಕಳುಹಿದ | || 2 ||

ಏಳುದಿನ ಏಳುರಾತ್ರಿ ಕಿರುಬೆರಳಲೆತ್ತಿ ಗಿರಿ |

ಮಳೆಯಿಂದ ಸಕಲರ ಪ್ರಾಣ ಉಳುಹಿದ ||

ಕಳೆದು ಇಂದ್ರನ ಗರ್ವ ಸರ್ವೋತ್ತಮ ತಾನೆಂದು ಸಾರಿದವ | || 3 ||

ಪೌರ್ಣಿಮೆಯ ಮಧುರ ರಾತ್ರಿಯಲಿ |

ಮಣಿಸಿ ಗೋಪಿಯರ ರಾಸಲೀಲೆ ನೆಪದಿ ||

ದಣಿದು ಶರಣಾದವರ ಪ್ರೇಮಭಾವದಿ ತಣಿಸಿದವ | || 4 ||

ಹತ್ತು ವರುಷದ ಬಾಲಕ ಕುವಲಯಾಪೀಡ |

ಮತ್ತೆ ಚಾಣೂರ, ಮುಷ್ಟಿಕರ ಒರೆಸಿ ||

ಹತ್ತಿ ಕುಳಿತು ಎದೆ ಮೇಲೆ ಮಾವ ಕಂಸನ ಕೊಂದವ | || 5 ||

ಪಾಲು, ಬೆಣ್ಣೆ, ಮೊಸರು ಕದ್ದು ಮರಳುಮಾಡಿ |

ಲೀಲೆಯಲಿ ಊಲುಖವೆಳೆದು ಮರವ ಕೆಡುಹಿದ ||

ಪಾಲಿಸಿ ಗೋವುಳ ಗೋಪಾಲಕ ಶ್ರೀಕೃಷ್ಣವಿಟ್ಠಲನೆನಿಸಿದ | || 6 ||

95. ಸೆರೆಯಲಿ ಶ್ರೀಕೃಷ್ಣ ಜನಿಸಿದಾಗ

ಮೋಹಕರೂಪ ಚಿನ್ಮಯ ರೂಪದ ಶಿಶುವು ಕಾಣಿರೋ | || ||

ತಾನಾಗಿ ಒಲಿದು ದಯ ಮಾಡಿದ ರೂಪ ಯಶೋದಾನಂದನ | || ಅಪ ||

ಚತುರ್ಭುಜ ಶಂಖ ಚಕ್ರಧಾರಿ ಶ್ರೀವತ್ಸಾಂಕಿತ |

ಪೀತಾಂಬರಧಾರಿ ದೇವಕಿ ಗರ್ಭದಿ ಜನಿಸಲು ಸಾಧ್ಯವೇ ||

ಸರ್ವವ್ಯಾಪುತ, ಸಚರಾಚರ, ಗರ್ಭದಲಿ ಅಡಗುವನ್ಹೇಗೆ |

ಸರ್ವರಿಗೂ ಜನ್ಮಕೊಟ್ಟ ಶ್ರೀರಮಣ ಪುನಃ ಜನಿಸುವನ್ಹೇಗೆ | || 1 ||

ಪೂತನೆಯಕೊಂದವ, ನಳಕೂಬರ ಶಾಪ ಪರಿಹರಿಸಿದವ |

ಗರ್ಭದಲಿ ಶಿಶುವ ಕಾಪಾಡಿದವ ಗರ್ಭದಿಂದ ||

ಜನಿಸಿದನೆಂಬುದು ಹಗುರಾದ ಮಾತು |

ಮಣ್ಣನೇಕೆ ಮೆದ್ದೆ ಎಂಬ ತಾಯಿಗೆ ಬ್ರಹ್ಮಾಂಡ ತೋರಿದವ ಶಿಶುವಾಗುವುದ್ಹೇಗೆ | || 2 ||

ಹದಿನಾರು ಸಾವಿರ ಮೇಲೆಂಟು ಸ್ತ್ರೀಯರಲಿ |

ಹತ್ತು ಹತ್ತೇನಿಪ ಶಿಶುಗಳ ಪುಟ್ಟಿಸಿದವ ಶಿಶುವಾಗಬಲ್ಲನೇ ||

ಗುರುಪುತ್ರನ ಬದುಕಿಸಿದವ ತಂಗಿಗೆ ಅಕ್ಷಯಾಂಬರವಿತ್ತವ |

ಹಿಡಿ ಅವಲಕ್ಕಿಗೆ ಮಹಾ ಸೌಭಾಗ್ಯ ಕರುಣಿಸಿದವ ||

ಶ್ರೀಕೃಷ್ಣವಿಟ್ಠಲಂ ವಂದೇ ಜಗದ್ಗುರುಂ |

ಶಿಶುವೆಂದು ತಿಳಿದ ಬುಧರು ನುಡಿವರೆ | || 3 ||

96. ಲೋಕದಿ ಮನುಜರ ಮೆಚ್ಚಿಸಲರಿಯೇ,

ಎನ್ನಮಾಧವನ ಮನವ ಮೆಚ್ಚಿಸಬಹುದು |

ಪರಿಪರಿ ಸ್ತುತಿಸೆ ಪರರಿಂದ ಅಪವಾದ ತಪ್ಪದು,

ಆರ್ತದಿಂದೊಮ್ಮೆ ಕರೆಯೇ ಅನಿಕೇತನೊಲಿವಾ ||

ಪರರ ಆಪೇಕ್ಷೆಗೆ ಮಿತಿ ಇಲ್ಲಾ,

ಅವಿರತ ನೆನೆದೊಡೆ ಶ್ರೀಕೃಷ್ಣವಿಟ್ಠಲನ ಕಾರುಣ್ಯಗೆ ಎಣಿಯಿಲ್ಲಾ ||

97. ಅನವರತವೂ ನಿನ್ನ ಗುಣಗಳನ್ನೇ ಪಾಡುತ್ತಿರಲಿ ವದನ |

ನಿನ್ನ ನಾಮ ಸಂಕೀರ್ತನೆಯನ್ನೇ ಪೇಳಲಿ ಜಿಹ್ವೇ ||

ನಿನ್ನ ಹೆಸರನ್ನೇ ಜಪಿಸಲಿ ಶ್ವಾಸವು |

ನಿನ್ನ ಕಥೇಯನ್ನೇ ಕೇಳಲೀ ಕಿವಿಗಳು ||

ನಿನ್ನ ಬಗೆ ಬಗೆಯಲಿ ಚಿಂತಿಸಲಿ ಮನವು |

ಒಳ ಹೊರಗೂ ಸದಾ ನಿನ್ನನ್ನೇ ಕಾಣುವಂತಾಗಲಿ ಕಂಗಳು ||

ಯಾವಾಗಲೂ ನಿನ್ನ ಕೆಲಸವೇ ಮಾಡಲಿ ಕೈಗಳು |

ಎಲ್ಲಿ ಹೋದರೂ ನಿನ್ನ ಬಳಿಗೆ ನಡೆಯಲಿ ಕಾಲ್ಗಳು ||

ನಿಜ ಭಕುತರ ಸಂಗ ದೊರೆತು ನಿತ್ಯದಲಿ |

ಶ್ರೀಕೃಷ್ಣವಿಟ್ಠಲನಲಿ ಅನನ್ಯರತಿ, ಅನ್ಯರಲಿ ವಿರಕ್ತಿ ಆಗಲಿ ||

98. ನವನೀತ ಚೋರನಿವನ್ಯಾರಮ್ಮಾ | || ||

ನೀ ಪೇಳಮ್ಮಾ, ನಂದಕುಮಾರನ್ಯಾರಮ್ಮಾ | || ಅಪ ||

ಚತುರ್ಭುಜನಾಗಿ ಪುಟ್ಟಿ ಮಾತೆಗೆ ಉಪದೇಶಿಸಿದ |

ಪೂತನಿಯ ಕೊಂದವ, ಬಾಯೊಳು ಜಗವ ತೋರಿದವ ||

ಬಂಡಿಯನ್ನೆ ಮುರಿದವ, ಬೆಟ್ಟವನ್ನೆ ಪೊತ್ತವ |

ಗೋಪಿಯರ ಸೀರೆ ಕದ್ದವ, ಮುರಳಿಯ ನಾದದಿ ಮೈಮರೆಸಿದವನ್ಯಾರಮ್ಮಾ | || 1 ||

ಕಾಳಿಂಗನ ಫಣೆಯಲಿ ಕುಣಿದಾಡಿದವ |

ಮೋಹಕರೂಪದಿ ಮನ ಸೆಳೆಯುವ ||

ನಿರುತ ಲೋಲಾಕ್ಷಿ ಸೇವೆ ಸೇವಿಪನ |

ಭಕ್ತಪರಾಧೀನ ನಮ್ಮ ಶ್ರೀಕೃಷ್ಣವಿಟ್ಠಲನಲ್ಲದೆ ಮತ್ತ್ಯಾರಮ್ಮಾ | || 2 ||

99. ಎಲ್ಲಿ ಹುಡುಕಲಿ ಕೃಷ್ಣಯ್ಯಾ, ಹೇಗೆ ಹುಡುಕಲಿ | || ||

ಬಲ್ಲವರಾರೂ ಇಲ್ಲಿಲ್ಲ ಕೇಳುವುದ್ಯಾರಿಗೆ | || ಅಪ ||

ಸೆರೆಮನೆ-ಅರೆಮನೆ ಎಲ್ಲ ತಿರುಗಿದೆ |

ನೆರೆಮನೆ-ಕೆರೆಮನೆಯಲ್ಲೂ ಕೇಳಿದೆ ||

ತರು-ಲತೆಗಳಿಗೂ ದೈನ್ಯದಿ ಕೇಳಿದೆ |

ಭೋರಾಡಿ-ಗೋಳಾಡಿದರೂ ಸುಳಿವೇ ಇಲ್ಲ | || 1 ||

ವನ-ವನದಲ್ಲೂ ಮತ್ತೆ ಮತ್ತೆ ತಿರುಗಿದೆ |

ಕಾನನದ ಪಶು-ಪಕ್ಷಿಗಳಿಗೂ ಕೇಳಿದೆ ||

ವನಜನರಸನ ಬಲ್ಲಿರಾ? ತಿಳುಹಿರಿ ಎಂದೆ |

ಮನದರಸನ ಹುಡುಕಿ ಕೊಡಿ ಎಂದರೂ | || 2 ||

ನೀಲವರ್ಣದ ಸುಂದರಾಂಗನಿರುವ |

ನಲ್ಲನಿವ ಸಕಲ ಗೋಪಿಯರಿಗೆ ||

ಒಲ್ಲೆನೆಂದರೂ ಸರಸಕ್ಕೆಳಿಸುವನಿವ |

ನಲ್ಮೆಯ ಮಿತ್ರನಿವ ಗೋಪಾಲಕರಿಗೆ | || 3 ||

ಇಲ್ಲಿ ಸಲ್ಲುವರೂ ಯಾರು ಇವಗೆ ಬೇಕಿಲ್ಲಾ |

ಅಲ್ಲಿ ಸಲ್ಲುವರ ಅರೆಕ್ಷಣ ಬಿಟ್ಟರಲಾರ ||

ನಿಲ್ಲಲಾರರೂ ಯಾರು ಇವಗೆ ಸಮ |

ಮಲ್ಲನಿವ ಯದುಕುಲಚಂದ್ರ | || 4 ||

ಅರಿವು ಮೂಡಿಸುವರ್ಯಾರು ಇಲ್ಲಿಲ್ಲ |

ಅರಿಯದವರಿಗೆ ಕೇಳಿ ಏನುಪಯೋಗ ||

ಪರತಮನ ವರಾನುಗ್ರಹದಿ ಸಿಗಬೇಕಷ್ಟೇ |

ಕರೆದರೆ ಭಕ್ತಿಯಲಿ ಓಡೋಡಿ ತಾನೇ ಬರುವ ಶ್ರೀಕೃಷ್ಣವಿಟ್ಠಲ||ಕೃಷ್ಣಯ್ಯಾ ||5||

100. ದೇವಕಿ ಕಂಡು ಕಂದನ ಚತುರ್ಭುಜ ರೂಪ ಸ್ತುತಿಸಿದಳು |

ಅವ್ವೆ ಯಶೋದೆ ಆನಂದಿಸಿದಳು ಸಕಲ ಬಾಲಲೀಲೆಗಳ ||

ಭಾವೆ ರಾಧೆ ಅನುಭವಿಸಿದಳವನ ಪ್ರೀತಿಯ ಸೆಲೆಯ |

ಭಾವ ಭಕ್ತಿಯಲಿ ಮಿಂದರೆಲ್ಲಾ ಗೋಪಿಯರು ||

ತ್ರಿವಕ್ರಳು ಮೈಮರೆತಳವನ ಅಂಗ ಸುಖದಿ |

ಮಾವ ಕಂಸ ಕಂಡನವನಲಿ ತನ್ನ ಮರಣವ ||

ಸುವ್ರತ-ತಪದಿ ಋಷಿಗಳು ಧನ್ಯರಾದರವನ ಪಾದರತಿಯಲಿ |

ದೇವತೆಗಳೆಲ್ಲಾ ನತಮಸ್ತಕರಾಗಿ ಆರಾಧಿಸಿದರು ||

ನವನೀತ ಚೋರ ನವನವೀನ ರೀತಿಲಿ ತೋರಿದ |

ಸರ್ವರ ಇಚ್ಛೆಯ ಪೂರ್ತಿಗೊಳಿಸಿದ ||

ಆವಾವ ಭಾವಕ್ಕೆ ಆವಾವ ತೆರನಾಗಿ ಇದ್ದು |

ಕಾವ ಶ್ರೀಕೃಷ್ಣವಿಟ್ಠಲ ತನ್ನನ್ನೇ ನೆಚ್ಚಿದವರ ||

101. ಕಂಟಕಕಾರಿ ವಿಷದ ಗಾಳಿ ಸೋಂಕಲು |

ಬಂಟರಾದ ಗೋಪಾಲಕರೆಲ್ಲ ಮೂರ್ಛೆ ಹೋದರು ||

ದಿಟ್ಟ ಬಾಲಕ ಇದ ನೋಡಿ ಸಹಿಸದೆ |

ಸೊಂಟಕೆ ಕಟ್ಟಿದ ದಟ್ಟಿ ಬಿಗಿದು ಸುತ್ತಿದ ||

ಒಂಟಿಯಾದ ತಾಳೆಮರ ಹತ್ತಿ ಮಡುವಿಗೆ ಧುಮಿಕಿದ |

ಮೆಟ್ಟಿ ಮೆಟ್ಟಿ ಕಾಳಿಂಗನ ಫಣೆಮೇಲೆ ನರ್ತಿಸಿದ ||

ಪುಟ್ಟ ಪುಟ್ಟಪಾದ ಚಿಹ್ನೆ ಮೂಡಿಸಿದ ಹೆಡೆಮೇಲೆ |

ಪಟ ಪಟನೆ ರಕ್ತ ಕಾರಿದ ಸಕಲ ಮುಖದಿ ವಿಷವೆಲ್ಲ ||

ಚಟ ಚಟನೆ ಓಡಿಬಂದ ಲಲನೆಯರು ಪ್ರಾರ್ಥಿಸೆ |

ಬಿಟ್ಟು ಹೋಗು ರಮಣಕ ದ್ವೀಪಕೆ ಕಾಡಬೇಡ ಇನ್ನಿಲ್ಲಿ ಎಂದ ||

ಉಂಟಾದ ವಿಷಮಯ ವಾತಾವರಣ ನಿವಾರಿಸಿದ ಪರಿಸರಪ್ರೇಮಿ |

ಗಟ್ಟಿಯಾಗಿ ಶ್ರೀಕೃಷ್ಣವಿಟ್ಠಲನ ಪಾದ ಪಿಡಿದರೆಚ್ಚೆತ್ತ ಗೋಪಾಲಕರೆಲ್ಲ ||

102. ಆರಾಧಿಸೆ ವೃಂದಾವನದಿ ಸಕಲರೂ ಗೋವರ್ಧನನ |

ಇಂದ್ರ ಕುಪಿತಗೊಂಡು ಮುಸಲಧಾರೆಗೆರೆದ ||

ಸುರಿದ ಜಡಿ ಮಳೆ ರಭಸ ತಪ್ಪಿಸಲು |

ಗಿರಿಯ ಛತ್ರಿಯಾಗಿಸಿ ಪಿಡಿದ ಏಳುದಿನ ಸತತ ||

ಕಿರು ಬೆರಳ ತುದಿಯಲ್ಲೆತ್ತಿ ಅಲುಗಾಡದೆ |

ಕರೆದ ಸಕಲ ಜನರ ಗೋವಳ ಸಹಿತ ||

ಪೋರ ದಿಟ್ಟತನದಿ ಆಶ್ರಯವಿತ್ತ |

ಪೂರ್ಣನಂಬದೇ ಬಾಲಕನ ಶಕ್ತಿಯ ||

ಊರುಗೋಲಾಗಿ ಕೋಲನು ಆನಿಸಿ ಹಿಡಿದರು ಭಯದಿ |

ಇಂದ್ರ ತಿಳಿದು ತನ್ನ ತಪ್ಪಿಗೆ ನಾಚಿ ನೀರಾದ ||

ಬೇರಾರಲ್ಲ ಸರ್ವಾಧಿಪತಿ ಶ್ರೀಕೃಷ್ಣವಿಟ್ಠಲನೇ ಬಾಲಕನೆಂದರಿತ ||

103. ಸುಂದರನ ಅತೀ ಸುಂದರನಿವ | ಯದುಕುಲ ತಿಲಕಚಂದ್ರ ಲಲಾಮ || ||

ಮುಗ್ಧಮುಖದ ಮಂದಸ್ಮಿತ |

ಸ್ನಿಗ್ಥ ಶೀತಲಕಾಂತಿ ಚೆಲುವ ||

ದುಗ್ಧಸಾಗರ ಶೇಷಶಾಯಿ |

ಸ್ತಬ್ಧನಾಗಿಸುವ ನೋಡುವವರ | || 1 ||

ಅಂದ-ಚೆಂದಗಳೆಲ್ಲಾ ನೋಡುವರ ಕಣ್ಣಲ್ಲಿದೆ |

ಸಂದಣಿಸುವ ಸೇವೆ ಕಂತುಪಿತನಿಗಿರಲಿ ||

ಕುಂದುಕೊರತೆ ನೀಗಿಸಿ ಮೋದವೀಯಲಿ |

ಬಂಧನ ಮೋಚಕ ಶಕ್ತಿ ಇವನಿಗೇ ಇದೆ | || 2 ||

ಎಷ್ಟು ಅಂದನೋ ನನ್ನ ಕೃಷ್ಣಯ್ಯ |

ಎಷ್ಟು ಚೆಂದನೋ ನನ್ನ ಕೃಷ್ಣಯ್ಯ ||

ದೃಷ್ಟಿಯಾದಿತು ನನ್ನ ಕೃಷ್ಣಯ್ಯಗೆ |

ಸೃಷ್ಟಿಗೊಡೆಯಾ ನನ್ನ ಶ್ರೀಕೃಷ್ಣವಿಟ್ಠಲ | || 3 ||

104. ಜಾಣನ ಪಾಣಿಯ ನೋಡಿರೈ ಜಾಣರೆಲ್ಲ | || ||

ಕಣ ಕಣದಲ್ಲಿದೆ ಅಮೃತಧಾರೆ || ಸತತ | || ಅಪ ||

ಚಕ್ರವ ಪಿಡಿದ ಪಾಣಿ |

ನಕ್ರನ ತರಿದ ಪಾಣಿ ||

ವಕ್ರಳ ಸರಳಿಸಿದ ಪಾಣಿ |

ಶಕ್ರನ ಗರ್ವಮುರಿದ ಪಾಣಿ | || 1 ||

ಮೊಲೆ ಪಿಡಿದು ಅಸುವೆಳೆದ ಪಾಣಿ |

ಊಲುಖವೆಳೆದು ಶಾಪ ಕಳೆದ ಪಾಣಿ ||

ಬಾಲೆಯರ ಸೀರೆ ಕದ್ದ ಪಾಣಿ |

ನಲ್ಮೆಯ ಗೋಪಾಲರ ಕಾಯ್ದ ಪಾಣಿ | || 2 ||

ಕಂಸಮಾವನ ಕೊಂದ ಪಾಣಿ |

ಕೂಸನ್ನೇ ಗುರುದಕ್ಷಿಣೆಯಾಗಿತ್ತ ಪಾಣಿ ||

ಅಸುರರ ನಿಗ್ರಹಿಸಿದ ಪಾಣಿ |

ಹಸನಾದ ಬಾಳು ಇವ ಪಾಣಿ | || 3 ||

ಅಧರದಿ ವೇಣುವಿಟ್ಟ ಪಾಣಿ |

ಸಾದರದಿ ಗೋವಳ ಕಾಯ್ದ ಪಾಣಿ ||

ಬೆದರದೆ ಬೆಣ್ಣೆಯ ಕದ್ದ ಪಾಣಿ |

ಕಾದಿಹ ಗೋಪಿಯರ ತಣಿಸಿದ ಪಾಣಿ | || 4 ||

ಸಭೆಯಲಿ ಶಿರ ತರಿದ ಪಾಣಿ |

ಗರ್ಭದಿ ಶಿಶುವ ರಕ್ಷಿಸಿದ ಪಾಣಿ ||

ಅಭಯದಿ ವಸ್ತ್ರವಿತ್ತ ಪಾಣಿ |

ನಿರ್ಭಯದಿ ಭೈಷ್ಮಿಯ ಪಿಡಿದ ಪಾಣಿ | || 5 ||

ಪಾಂಡವರನೇ ಕಾಯ್ದ ಪಾಣಿ |

ಒಡನೆ ಜಗ ನುಂಗುವ ಪಾಣಿ ||

ನಡುವನೆ ಬಳಸಿದ ಪಾಣಿ |

ಒಡೆಯಾ ಶ್ರೀಕೃಷ್ಣವಿಟ್ಠಲನ ಪದ್ಮಪಾಣಿ | || 6 ||

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು