ಶ್ರೀ ಕೃಷ್ಣವಿಠ್ಠಲಪದಗುಚ್ಛ 2
ಸುಪ್ರಭಾತ
1. ಸುಪ್ರಭಾತ ನಾಗಶಯನಗೆ ಸುಪ್ರಭಾತ ವೇಂಕಟರಮಣನಿಗೆ | || ಪ ||
ಮತ್ಸಮೂರುತಿ ಸತ್ಯವ ತೋರೋ |
ಸತ್ಯಮರ್ಮವನರಿತ ಕೂರ್ಮನೇ ಏಳೋ | || 1 ||
ವರಗಿರಿಗೊಲಿದ ಭೂವರಾಹನೇ |
ತರಳ ಪ್ರಲ್ಹಾದನ ಕಾಯ್ದ ನರಸಿಂಹನೇ ಏಳೋ | || 2 ||
ಬಲಿ ಉದ್ಧಾರಕ ವಾಮನನೇ |
ಕ್ಷತ್ರಿಯ ಕುಲಾಂತಕ ಪರಶುರಾಮನೇ ಏಳೋ | || 3 ||
ಅಹಲ್ಯೋದ್ಧಾರಕ ಸೀತಾರಾಮನೇ|
ಗೋವರ್ಧನ ಗಿರಿಧಾರಿಯೇ ಏಳೋ | || 4 ||
ಬೌದ್ಧಾವತಾರನೇ, ಕಲ್ಕ್ಯಾವತಾರನೇ
ಸೃಷ್ಟಿಕರ್ತ ಶ್ರೀಕೃಷ್ಣವಿಟ್ಠಲನೇ ಏಳೋ | || 5 ||
ಎಎಎ
2. ಏಳುಬೆಟ್ಟದೊಡೆಯನೇ ವೇಂಕಟರಮಣನೇ |
ವರಾಹನಿಂ ಪೊಷಿತನೇ ಕುಬೇರ ಕಟಾಕ್ಷನೇ ||
ಕಟಿಯಲಿ ಕರವಿಟ್ಟ ವರಪ್ರದನೇ |
ಭೂವೈಕುಂಠದಲಿ ನೆಲಸಿಹ ಪದ್ಮಾವತಿ ಪ್ರಿಯನೇ ||
ಅನವರತವೂ ಭಕ್ತರಿಂದೊಡಗೂಡಿದವನೇ |
ಹೃದಯದಿ ಇಂದಿರೆಯ ಧರಿಸಿದವನೇ ||
ಇಷ್ಟೆಲ್ಲಾ ಇದ್ದವಗೇನು ಸುಖವಿದೆ? ಸದಾನಿಂತವಗೇ | || 1 ||
ಎನ್ನ ಹತ್ತಿರ ಬಾರಯ್ಯಾ ಘಮಘಮಿಸುವ ಎಣ್ಣೆಪೂಸುವೆ |
ನವಿರಾಗಿ ಕಾಲನ್ನೊತ್ತಿ ಪಾದಪದ್ಮ ಪೂಜಿಸುವೆ ||
ಹಗುರಾಗಿ ಪಾದವನ್ನೆತ್ತಿ ಎನ್ನ ಹೃದಯದ ಮೇಲಿರಿಸುವೆ |
ಎನ್ನನ್ನೇ ನಿನಗರ್ಪಿಸಿಕೊಳ್ಳುವೆ ನಿತ್ಯದಿ ||
ನಿನ್ನ ಪಾದವನೆ ಸದಾ ನಂಬಿರುವೆ ದಯದಿ ಬಾರಾ |
ನನ್ನೊಡೆಯಾ ಶ್ರೀಕೃಷ್ಣವಿಟ್ಠ ಎನ್ನ ಬಿನ್ನಪ ಕಡೆಗೆಣಿಸದಿರಯ್ಯಾ | || 2 ||
ಊಊಊ
ಶ್ರೀ ವಿಜಯದಾಸರು
3. ಸತ್ಯವಂತನ ಸ್ಮರಿಸೆ ಸರ್ವೋತ್ತಮನ ದಯವಾಗುವುದು |
ದಾನವಂತ ಕನ ದಾಸನಾದರೆ ದಾರಿ ತೋರ್ಪ ತನ್ನ ಮಂದಿರಕೆ ||
ವಿಷಯ ಸುಖ ಬಿಟ್ಟು ವೇಂಕಟೇಶನ ಭಜಿಸಿ |
ಜನರ ಜರೆಯುದು ಬಿಟ್ಟು ಜಲಜಾಕ್ಷನ ಭಜಿಸಿ ||
ಯಮನ ಕೈಗೆ ಸಿಗದಿರಲು ಯಾದವನ ಭಜಿಸಿ |
ರಾಗದೊಳು ಸಿಲುಕದಿರಲು ರಾಮನಾಮ ಭಜಿಸಿ ||
ಯಶೋವಂತರಾಗಲು ಯಶೋದೆನಂದನ ಭಜಿಸಿ |
ರಮೆಯ ಒಲವು ಪಡೆಯಲು ಮನೋಹರನ ಭಜಿಸಿ ||
ಪಾಥೇಯವ ಕಟ್ಟಲು ಸದಾ ಪುಂಡರೀಕಾಕ್ಷನ ಭಜಿಸಿ |
ದಡ ಸೇರಲು ದಯಮಾಡುವ ದ್ವಾರಕಾನಾಥನ ಭಜಿಸಿ ||
ಭವಬಂಧನ ಬಿಡಿಸಲು ಪದುಮನಾಭನ ಭಜಿಸಿ |
ಜಿತೇಂದ್ರಿಯರಾಗಲು ಸ್ವತಂತ್ರನಾದ ಜಗದೀಶ್ವರನ ಭಜಿಸಿ ||
ಸಿಟ್ಟು ಮಾಡದೆ ಭಜಿಸೆ ಶ್ರೀಕೃಷ್ಣವಿಟ್ಠಲನ ಚರಣಪದ ದೊರೆವುದು ||
ಊಊಊ
ಶ್ರೀ ವಿಶ್ವೇಶತೀರ್ಥರು
4. ಇಂಥಾ ವಿಶ್ವಗುರುಗಳ ಎಲ್ಲೂ ಕಾಣೆ |
ಅರ್ಥಪೂರ್ಣ ವಚನ, ನಡೆ-ನುಡಿ ಒಂದೇ ||
ಮುಗ್ಧ ಮಗುವಿನ ನಗು, ಸಕಲಜೀವಿಗಳ |
ಹಿತ ಬಯಸುವ, ನಿಷ್ಕಲಂಕ ಚರಿತ ||
ಚಿಂತನ-ಮಂಥನದಿ ಸದಾ ನಿರುತ |
ಶಾಸ್ತ್ರ ಪ್ರವೀಣ, ಚುರುಕು ಬುದ್ಧಿ |
ಶ್ರೀಕೃಷ್ಣವಿಟ್ಠಲನ ಕಣ್ಮಣಿ ಕರುಣಾಪಾಂಗ |
ವೈರಾಗ್ಯ ಶಿಖಾಮಣಿ ಶ್ರೀವಿಶ್ವೇಶತೀರ್ಥರು-ಜಯ, ಜಯ ||
ಊಊಊ
ಶ್ರೀ ಸತ್ಯಾತ್ಮತೀರ್ಥರು
5. ವಂದಿಪೆ ಗುರು ಶ್ರೀಸತ್ಯಾತ್ಮತೀರ್ಥರಿಗೆ |
ಬಂದಿಹೆ ಗುರುಗಳ ಪಾದವ ನಂಬಿ | || ಪ ||
ಸಕಲ ಶಾಸ್ತ್ರ ಪಾರಂಗತರಾದ |
ಸಕಲ ಶಿಷ್ಯರ ಪ್ರೀತಿ ಗುರುವಾದ ||
ಸಕಲ ಜನರ ಮಾರ್ಗದರ್ಶಿಯಾದ || ಗುರುವಿಗೆ | || 1 ||
ಹಸನ್ಮುಖರಾದ ಪರಮವೈರಾಗಿ |
ಕ್ಲೇಶ ಕಳೆದು,ಸರ್ವರ ಹಿತ ಬಯಸುವ ||
ಶ್ರೀಸತ್ಯಪ್ರಮೋದರ ವಾತ್ಸಲ್ಯದ ಕಂದ || ಗುರುವಿಗೆ ||
ಭೇದವನಳಿಸಿ ಸಹೃದಯತೆ ಮೆರೆವ |
ಮೋದತೀರ್ಥರ ಮತವ ಪಸರಿಸುವ ||
ಒಂದೇ ಮನದಿ ಶ್ರೀಕೃಷ್ಣವಿಟ್ಠಲನ ಭಜಿಸುವ || ಗುರುವಿಗೆ ||
ಊಊಊ
ಶ್ರೀ ರಾಘವೇಂದ್ರತೀರ್ಥರು
6. ವೃಂದಾವನದಿ ಚೆಂದದಿ ಕುಳಿತ ಕರುಣಿ ಯತಿವರ್ಯರ್ಯಾರಮ್ಮಾ? |
ಮೋದ ತರುವ ಆಹ್ಲಾದ ಬೀರುವ ಯತಿಯಾರಮ್ಮಾ? ||
ಸುಂದರ ನದಿ ತುಂಗಾತಟಿ ಮಂತ್ರಾಲಯದಲ್ಲಿರುವರ್ಯಾರಮ್ಮಾ? |
ಬಂದ ಜನರ ಸೇವಾ ಕೈಂಕರ್ಯ ಸ್ವಿಕರಿಸುವ ಯತಿಯಾರಮ್ಮಾ? ||
ಉದಾರ ಮನದಿ ಉದ್ಧರಿಸಿ ಸಂತೈಸುವ ಯತಿಯಾರಮ್ಮಾ? |
ಭೇದವನೆಣಿಸದ ದೀನದು:ಖಿತರ ಸಲುಹುವರ್ಯಾರಮ್ಮಾ? ||
ಒಂದೇ ಕೂಗಿಗೆ ಬಂದು ಕಷ್ಟ ತಾರಿಸಿ ಓಲೈಸುವರ್ಯಾರಮ್ಮಾ? |
ಭದ್ರವಾಗಿ ನಂಬಿದ ಜನರೊದ್ಧಾರಕ ಯತಿವಂiÀರ್iರ್ಯಾರಮ್ಮಾ? ||
ಸುದಯದಿ ಪುಣ್ಯಹಂಚುವ ಸುಜೀವಿ ಯತಿಯಾರಮ್ಮಾ? |
ಮಧ್ವಮತ ಉದ್ಧರಿಸಲು ಬಂದ ದೈತ್ಯ ಅವತಾರಿಯಾರಮ್ಮಾ? ||
ಸುಧಾಕ್ಕೆ ಪರಿಮಳ ಬೆರೆಸಿದ ಸುಯತಿವಯ್ರ್ಯರ್ಯಾರಮ್ಮಾ? |
ರುದ್ರ ವೀಣೆ ಝೇಂಕಾರದಿ ತನ್ಮಯರಾದವರ್ಯಾರಮ್ಮಾ? ||
ಪದ್ಯವ "ಸಾಕ್ಷಿಹಯಾಸ್ಯ" ವೆಂದು ಪೂರ್ಣಗೊಳಿಸಿದವರ್ಯಾರಮ್ಮಾ? |
ಹೃದಯದಿ ಸದಾ ಶ್ರೀಕೃಷ್ಣವಿಟ್ಠಲನ ಪೂಜಿಪ ನಿಜ ಭಕ್ತ ||
ಮೃದುಮನಸ್ಸಿನ ಶ್ರೀರಾಘವೇಂದ್ರ ಗುರುರಾಯರಮ್ಮಾ |
ಇವರೇ ಶ್ರೀರಾಘವೇಂದ್ರ ರಾಯರಮ್ಮಾ ||
ಎಎಎ
7. ಮಂತ್ರಾಲಯ ಪ್ರಭುಗಳು ಇವರೇ ಗುರುರಾಯರು || ರಾಘವೇಂದ್ರರಾಯರು || ||ಪ||
ನಿರುತದಿ ಚರಣ ನೆನೆಯಿರಿ ಎಲ್ಲೆಡೆ ಬಂದು ಸಲಹುವರು || || ಅಪ ||
ಪರಮ ಕರುಣಾಳು ಸಾಂಶರೂಪದ ಪ್ರಹ್ಲಾದಾವತಾರಿ |
ವರವೀವರು ತಮ್ಮ ಇಷ್ಟಪುಣ್ಯದ ಬಲದಿ ||
ಪರಿಪಾಲಿಸುವರು ಭಕ್ತರ ಸದೀಚ್ಛೆಪೂರೈಸಿ |
ಸರ್ವರ ಅಭೀüಷ್ಟೆ ಪರಿಪೂರ್ಣಗೊಳಿಸುವರು || || 1 ||
ಕರೆದರೆ ಭಕ್ತಿಯಿಂದ ಕಾಮಧೇನುವೆಂಬುದುಸುಳ್ಳಲ್ಲ |
ವೈರಾಗ್ಯ ಶಿರೋಮಣಿ ಸಕಲ ಸಂಸಾರಿಗಳ ಕಷ್ಟಕಳೆವರು ||
ಆರುಮೆಲೊಂದುನೂರುವರ್ಷ ವೃಂದಾವನದಿ ಇದ್ದು ಹರಸುವರು |
ಪರಲೊಕದ ಸಾಧನೆ ಮಾರ್ಗತೋರುವರು ದಯದಿ || || 2 ||
ಕರುಣೆಯಿಂದ ವಿಸ್ತರಿಸಿ ಸುಧಾ ಪರಿಮಳ | (ಬೆರೆಸಿದರು)
ಸರ್ವಮಾನ್ಯ ಖಂಡಾರ್ಥ ದಶೋಪನಿಷದ್ಗೆ ಇತ್ತಿರುವರು ||
ಸೂತ್ರಾರ್ಥಗಳ ಸಾರವೆನಿಪ ಪ್ರಾತ: ಸಂಕಲ್ಪ ಗದ್ಯ ಸಹಿತ |
ಶಾಸ್ತ್ರಪಾರಂಗತ ಅನೇಕ ಗ್ರಂಥಗಳ ರಚಿಸಿರುವರು || || 3 ||
ಆರಾಧನೆಯ ಫಲ ಶೀಘ್ರದಿ ದಯಪಾಲಿಪ ನಿಸ್ಸೀಮ |
ಪ್ರಾರ್ಥಿಸಿ ಅನುಗ್ರಹಿಸು ಅಂತರ್ಯಾಮಿ ತೋರು ಎನಲು ||
ದರ್ಶನ ಮಾಡಿಸಿದ ಸ್ವಪ್ನದಿ ಮುಖ್ಯಪ್ರಾಣಮೂರುತಿ ಸಹಿತ |
ಶ್ರೀರಂಗಶಾಯಿ ಮತ್ತು ಶ್ರೀಕೃಷ್ಣವಿಟ್ಠಲ ಶಿಲಾಮೂಲ ರೂಪದಿ || || 4 ||
ಎಎಎ
8. ಶ್ರೀರಘು ನಂದನ ಅಂತರಂಗ ಭಕುತ |
ಶ್ರೀಗುರು ರಾಘವೇಂದ್ರರಾಯ || ಪ ||
ಶ್ರೀಮಧ್ವಮತ ಜಲಧಿ ಪೂರ್ಣೇಂದು |
ಪರಮಮಂಗಳ ಮೂರುತಿ ಶ್ರೀರಾಮ ಸೇವಕ || 1 ||
ಕರುಣಸಾಗರ ಪ್ರತೀತ ವ್ರತಸ್ಥ |
ಭಕ್ತರ ಅನುಗ್ರಹೀಪ ಘನ್ನ ಮಹಾಮಹಿಮ || 2 ||
ಸುಧಾಕ್ಕೆ ಪರಿಮಳ ರಚಿಸಿದ ವ್ಯಾಖ್ಯಾನಕಾರ |
ಶ್ರೀಕೃಷ್ಣವಿಟ್ಠಲನ ನಿರುತ ಸೇವಿಪನೇ || 3 ||
ಎಎಎ
9. ರಾಜೀವಲೋಚನಿಂ ಅನುಗ್ರಹೀತ ರಾಘವೇಂದ್ರನೇ |
ಘನ್ನಮಹಿಮ ಗುರುವೇ ದಯಾಲುವೇ ||
ವೇಂಕಟೇಶನ ನಿಜ ಭಕುತನೆ |
ದ್ರವಿಸೆನ್ನ ಮೇಲೆ ಕರುಣಿಯ ||
ಗುಣಪೂರ್ಣನ ಅಂತರಂಗವರಿತವನೇ |
ತವಅಂತರ್ಯಾಮಿ ಶ್ರೀಕೃಷ್ಣವಿಟ್ಠಲಗೆನ್ನ ಪೋಷಿಸಲು ಪೇಳಯ್ಯಾ ||