ಶ್ರೀ ಕೃಷ್ಣವಿಠ್ಠಲಪದಗುಚ್ಛ 2
ವೈರಾಗ್ಯ ಮತ್ತು ನೀತಿ ಪದಗಳು
341. ಬರಬೇಕು ಬರಬೇಕು ಜ್ಞಾನ, ಭಕ್ತಿ, ವೈರಾಗ್ಯ |
ಬರ-ಬೇಕು,ಬರ-ಬೇಕು ವಿಷಯ ಭೋಗಂಗಳಲಿ ||
ಸಂಭ್ರಮ, ಸವಿಯೋಗವು ಶ್ರೀಕೃಷ್ಣವಿಟ್ಠಲಪ್ರಿಯಗೆ |
ಸಂ-ಭ್ರಮ, ಸ-ವಿಯೊಗವು ಶ್ರೀಕೃಷ್ಣವಿಟ್ಠಲನ ಅಪ್ರಿಯಗೆ ||
ಎಎಎ
342. ಜ್ಞಾನ ಪಡೆಯಲು ಅನುಗ್ರಹ ಬೇಕು, || ಪರಮಾತ್ಮನ ||
ಅನುಗ್ರಹ ಪಡೆಯಲು ಜ್ಞಾನ ಬೇಕು || || ಪ ||
ಕೇಳಿ ತಿಳಿದಿದ್ದು ಆಳಕ್ಕಿಳಿಸಿ, ಉಳಿಸಿ, ಬೆಳಸಿ |
ಕಳೆದುಕೊಳ್ಳದೇ ಕೇಳಿದವರಿಗೆ ತಿಳಿಸಿ ಹೇಳಿ ||
ಪೊಳ್ಳುತನದ ಜೊಳ್ಳು, ಕಳೆದು ಗಟ್ಟಿ ಉಳಿಸಿ |
ಸುಳ್ಳುತನ ಬಿಟ್ಟು ಸತ್ಯವ ತಿಳಿದು ಅನುಸರಿಸಿ || || 1 ||
ತಿಳುವಳಿಕೆ ಹೆಚ್ಚಾಗಿ ತನ್ನ ಒಳ-ಹೊರ ಜ್ಞಾನದಿ |
ಬಾಳಿನ ಬೆಳಕಿನಡಿಯಲ್ಲಿ ಇಹ-ಪರದ ಅರ್ಥತಿಳಿದು ||
ಹಳಸದಂತಹ ಪರಮಾರ್ಥ ಜ್ಞಾನಗಳಿಸಿ ಉಳಿಸಿಕೊಳ್ಳಿ |
ತಳೆದು ಒಳ್ಳೇ ನಿರ್ಧಾರ ಬಾಳುವ ಕ್ರಮವರಿತು || || 2 ||
ಕಳೆಯದೇ ವ್ಯರ್ಥ ವೇಳೆ ಸದುಪಯೋಗ ಮಾಡಿಕೊಳ್ಳಿ |
ಆಲಸ್ಯತನ ಬಿಟ್ಟು ಅದಷ್ಟೂ ತಿಳಿವು ಪಡೆಯಿರಿ ||
ಅಲ್ಪಾಶೆ ಸುಳಿಗೆ ಸಿಲುಕಿ ಅಮೂಲ್ಯವಾದದ್ದು ಕಳೆದು ಕೊರಗಬೇಡಿ
ಬೀಳುವ ದೇಹದ ಅಭಿಮಾನ ತೊರೆದು ಸ್ಥಿರ ಭಕುತಿ ಮಾಡಿ || || 3 ||
ಕಳ್ಳನಂತೆ ಪರರ ಸ್ವತ್ತು ಅನುಭವಿಸಿ ಹೋಗುವುದು ಒಳಿತಲ್ಲ |
ಬೆಲೆಕಟ್ಟಲಾಗದ ಜ್ಞಾನ ಈಗಲ್ಲದೆ ಮತ್ತ್ಯಾವಾಗಲೋ ಗಳಿಸಲಾಗದು ||
ಗಳಿಸಲು ಪುಣ್ಯ ಪರಮಾತ್ಮ ಕೊಟ್ಟ ಸದಾವಕಾಶ ಬಿಡದಿರಿ |
ಒಳ್ಳೆಯದನ್ನೇ ಸದಾ ಬಯಸಿ ಶ್ರೀಕೃಷ್ಣವಿಟ್ಠಲ ಅನುಗ್ರಹಿಪ || || 4 ||
ಎಎಎ
ಮುದ್ದು ಮಗುವಿಗೆ ಆಶೀರ್ವಚನ
343. ಅಕ್ಕರೆಯ ಚೆಲುವಿನ ಸಕ್ಕರೆ ಗೊಂಬೆ ನೀ |
ನಕ್ಕಾಗ ಸಿಗುವುದು ಸಕಲರಿಗೆ ಸ್ವರ್ಗ ಸುಖ ||
ಪ್ರಕಾಶಿಸು ಅನುದಿನ ಸುನಡತೆಯಲಿ |
ಸುಕೀರ್ತಿ ಸುಗಂಧ ಹರಡಲಿ ಎಲ್ಲಡೆ ||
ರಕ್ಷಿಸಿದರೆ ಧರ್ಮವ ರಕ್ಷಿಪುದು ನಿನ್ನನು |
ಶ್ರೀಕೃಷ್ಣವಿಟ್ಠಲನ ಧ್ಯಾನ ನಿರುತನಾಗಿರು ಸದಾ ||
ಎಎಎ
344. ಕಡ ತಂದ ಕೊಡಪಾನದಂತೆ ಎರಡು ದಿನದ ಸಂಸಾರ |
ಗಡಿಬಿಡಿಲಿ ಒಡೆದರೆ ಹೋಯ್ತು ಮತ್ತೆ ಮರಳಿಬಾರದು || || ಪ ||
ಇದ್ದಾಗ ಜೋಪಾನದಿ ಉಪಯೋಗಿಸಿ ಸಾರ್ಥಕವಾಗಿಸಿ |
ಅರ್ಧ ತುಂಬಿದಾಗ ಹೊಯ್ದಾಟದಿ ಉರುಳುವ ಭಯ ||
ಶುದ್ಧ ಜಲದಿ ಪೂರ್ಣ ತುಂಬಿದರೆ ಶುಭಕಲಶ ಭಾವ |
ಮಾಡಿದಾಗ ಸ್ವಚ್ಛ, ಮಲ ಕಳೆದು ಥಳಥಳ ಹೊಳೆವುದು || || 1 ||
ಜಡ ಕೊಡಪಾನದಿ ಏನು ತುಂಬಿದರೂ ಎರಡು ಮಾತಿಲ್ಲ |
ಕಡೆಯ ತನಕ ಬಿಡದೆ ತುಂಬುತ್ತಲೇ ಇರಬೇಕು ||
ದೊಡ್ಡದಿರಲಿ ಚಿಕ್ಕದಿರಲಿ ಅಳತೆಯಷ್ಟೇ ಒಳಗೆ ಹಿಡಿವುದು |
ಅದು ತುಂಬಿದ ಬಳಿಕ ಎಷ್ಟು ತುಂಬಿದರೂ ಹೊರಗೆ ಹರಿವುದು || || 2 ||
ಶಬ್ದ ಬಾರದು ತುಂಬಿದ ನಂತರ ಗಾಂಭಿರ್ಯ ಭಾವ |
ಸುಂದರ ಸಂಗೀತ ಹೊರಡಿಸಬಹುದು ಹಿಡಿತ-ಮಿಡಿತದಿಂದ ||
ಕೊಡ ಖಾಲಿ ಇದ್ದಾಗ ಹಾಗೇ ಉರುಳುವುದೇ ಶೂನ್ಯತೆ ಲಕ್ಷಣ |
ಆದರೂ ಆಕಾಶ-ವಾಯು ಅದರಲ್ಲಿದ್ದೇ ಇರುವುದು || || 3 ||
ಇದ್ದಾಗ ಇದರ ಉಪಯೋಗ ಅತಿಶಯ ಬೆಲೆ ಕಟ್ಟಲಾಗದು |
ಒಡೆದರೆ ಹೋಯ್ತು ಎತ್ತಿ ಹೊರಗೆ ಎಸೆವರು ಕಾಸಿನ ಬೆಲೆಯಿಲ್ಲ ||
ಕದಿಯಲು ಕಾಯುವರು ಕಳ್ಳರೈವರು ಹೊಂಚಿಕೆಯಲಿ |
ಧೃಡಭಕುತಿ, ಏಕಚಿತ್ತದಿ ಜೋಪಾನಿಸಲು
ಶ್ರೀಕೃಷ್ಣವಿಟ್ಠಲನ ಧ್ಯಾನದಿ ಮಾತ್ರ ಸಾಧ್ಯ || || 4 ||
ಎಎಎ
345. ಕೊಡು ಎನಗೆ ಸಜ್ಜನರಲಿ ಸಂಗ |
ಕೊಡಬೇಡ ಎನಗೆ ದುರ್ಗುಣಗಳಲಿ ರತಿ ||
ಕೊಡು ಎನಗೆ ದೇವರಲಿ ಭಕ್ತಿ |
ಕೊಡಬೇಡ ಅನ್ಯ ವಿಷಯ ಆಸಕ್ತಿ ||
ಕೊಡು ಎನಗೆ ಸ್ವಂತದ ತಿಳುವಳಿಕೆ |
ಕೊಡಬೇಡ ಬೇರೆಯವರ ಕುಂದೆಣಿಸುವಿಕೆ ||
ಕೊಡು ಎನಗೆ ಯೋಗ್ಯ ಶಾಸ್ತ್ರಜ್ಞಾನ |
ಕೊಡಬೇಡ ನಾಸ್ತಿಕರ ದುಸ್ಸಂಗ ||
ಕೊಡು ಎನಗೆ ದುರ್ವಿಷಯದಿ ಅನಾಸ್ಥೆ |
ಕೊಡಬೇqಂ ಆಲಸ್ಯ ಪ್ರಮಾದ ||
ಕೊಡು ಎನಗೆ ನಿನ್ನ ಅವಿರತ ಧ್ಯಾನ |
ಕೊಡಬೇಡ ನಿನ್ನ ವಿಸ್ಮರಣೆ ||
ಕೊಡು ಎನಗೆ ಗುರುಭಕ್ತಿ, ವಾಕ್ಯ ನಿಷ್ಠಾ |
ಕೊಡಬೇಡ ಭಗತ್ಕಥಾ ವಿರಕ್ತಿ ||
ಕೊಡು ಎನಗೆ ಪಂಚಬೇಧ ಜ್ಞಾನ, ದಾಸ್ಯತ್ವ |
ಕೊಡಬೇಡ ಅಹಂ-ಮಮತೆಗಳು ||
ಕೊಡು ಎನಗೆ ನಿರ್ವಿಘ್ನ ಸಾಧನಾನಂದ |
ಕೊಡಬೇಡ ಅನ್ಯ ಬೇಡುವ ಬುದ್ಧಿ ||
ಕೊಡು ಎನಗೆ ಸುಗುಣ, ಸಂತೃಪ್ತಿ |
ಕೊಡಬೇಡ ದುರಾಸೆ ಕ್ರೋಧವ ||
ಕೊಡು ಎನಗೆ ಸಕಲ ವಿಘ್ನಗಳ ಪರಿಹಾರ |
ಕೊಡ ಬೇಡ ಅಪರೋಕ್ಷಕ್ಕೆ ಪ್ರತಿಬಂಧ ||
ಕೊಡು ಎನಗೆ ಸದಾ ಶ್ರೀಕೃಷ್ಣವಿಟ್ಠಲನ ಪದಾಶ್ರಯ |
ಕೊಡಬೇಡ ಸಂಸಾರ ಚಕ್ರಬವಣೆ ||
ಎಎಎ
346. ರೋಗ ಬಂದಿದೆ| ಎನಗೆ| ರೋಗ ಬಂದಿದೆ
ಹೋಗಲಾರದಂತಹ ದೊಡ್ಡ ರೋಗ ಬಂದಿದೆ || || ಪ ||
ಸಾಧು ಸಂಗವೆಂದರೆ ತಲೆ ಸುತ್ತು ಬರುವುದು |
ವಿಧಾತನ ಭಜನೆ ಎಂದರೆ ಹೊಟ್ಟೆಲಿ ತಳಮಳಿಸುವುದು ||
ಸದ್ವಿಚಾರವೆಂದರೆ ಜೋರು ಜ್ವರ ಬರುವುದು |
ಸುಧರ್ಮಪಾಲನೆ ಎಂದರೆ ಸಕಲೇಂದ್ರಿಯದಿ ಚಳಿ ಆಗುವುದು || || 1 ||
ತೀರ್ಥಯಾತ್ರೆ ಎಂದರೆ ಕಾಲುಗಳಲಿ ಶಕ್ತಿ ಉಡುಗುವುದು |
ತೀರ್ಥಪ್ರಾಶನ ಎಂದರೆ ವಿಷದಂತೆ ಕಹಿ ತೋರುವುದು ||
ತೀರ್ಥರ ಉಪನ್ಯಾಸವೆಂದರೆ ಕಿವಿ ಗಡಚಿಕ್ಕುವುದು |
ತತ್ತ್ವೇಷಪತಿ ಶ್ರೀಕೃಷ್ಣವಿಟ್ಠಲ, ಭವವೈದ್ಯನೇ,
ಗುಣಪಡಿಸೆಂದು ಪ್ರಾರ್ಥಿಸುವೆ || || 2 ||
ಎಎಎ
347. ಉದಯಾರಭ್ಯ ಅಸ್ತಮಾನ ಪರ್ಯಂತ ನಡೆದ ವಿಹಿತ ಕಾರ್ಯವೆಲ್ಲಾ |
ಸದೈವ ಪೂಜಾವಿಧಿ ಎಂದು ಭಾವಿಸು, ಚಿಂತಿಸು, ಅರ್ಪಿಸು || || ಪ ||
ಮನವಿದ್ದ ಮಾನವ ಜನುಮದಿ ಮಾತ್ರ ಸಾಧನೆ ಸಾಧ್ಯ |
ಕ್ಷಣ ಕಾಲವೂ ವ್ಯರ್ಥವಾಗಿಸದೆ ಕಾಲನಾಮಕನ ನಿರುತ ನೆನೆ ||
ಅನುದಿನ ಏಕಾಂತದಿ ಕುಳಿತು ಶ್ರೀಕಾಂತಗೆ ವಿನಮ್ರದಿ |
ಮನದಿ ಲೋಕಾಂತರ ಸುಖಕ್ಕಾಗಿ ಬಿಡದೆ ಪ್ರಾರ್ಥಿಸು || || 1 ||
ಬುದ್ಧಿ, ಮನೋ ಇಂದ್ರಿಯಗಳೇ ಸಾಧನ ಸಲಕರಣೆಗಳು |
ಇದರಿಂದ ಧ್ಯಾನಿಸಿ, ತತ್ವ ನಿಶ್ಚಯದಿ ಮಾಡಿದ ತತ್ತತ್ಕಾರ್ಯವೆಲ್ಲಾ ||
ತದಂತಸ್ಥ ಪರಮಾತ್ಮ ತಾನೇ ನಿಂತು ಮಾಡಿಸಿದ್ದಾನೆಂದು ಸರ್ಮಪಿಸು |
ಇದೇ ಉಪಾಸನೆ ಎಂಬರು ಜನ್ಮ ಸಾರ್ಥಕದ ಸರಳಹಾದಿ || || 2 ||
ಸ್ಥೂಲೋಪಾಸನೆಯಿಂದ ಅಂತಃಕರಣ ಶುದ್ಧಿಲಿ ಸಂಯಮಿಯಾಗಿ |
ಒಳಗಿದ್ದ ಆತ್ಮನ ಸೂಕ್ಷ್ಮೋಪಾಸನೆಯಿಂದ ಬಿಂಬದರ್ಶನ ಲಭಿಸುವುದೆಂದು||
ತಿಳಿದಾಗ ತನ್ನನ್ನು ತಾನೇ, ಉದ್ಧಾರ ಮಾಳ್ಪ ಹೃದ್ಗುಹಾವಾಸಿ |
ಅಳಿದು ಅನಾದಿ ಕುಕರ್ಮ, ಸಚ್ಚಿದಾನಂದಾತ್ಮ ಶ್ರೀಕೃಷ್ಣವಿಟ್ಠಲ ಪಾಲಿಪ ||3||
ಎಎಎ
348. ಎಂತು ಕೊಂಡಾಡಲಿ, ದೊರೆಯೇ, ನಿನ್ನ ಕರುಣೆಯ |
ಭ್ರಾಂತಿ ಹೋಯಿತು ನಿನ್ನ ವ್ಯಾಪಾರ ವೀಕ್ಷಿಸಿ || || ಪ ||
ಸ್ವತಂತ್ರ, ದೋಷದೂರ, ಜ್ಞೇಯ, ಗುಣಪೂರ್ಣ ನೀನು |
ಅತ್ಯಣು, ಪರಾಧೀನ, ಅಲ್ಪಜ್ಞ, ಬದ್ಧ ಉಪಜೀವಿನಾನು ||
ಕೊಟ್ಟ ಮೂರು ಅಮೂಲ್ಯ ಸಾಮಾನುಗಳ ಅರಿಯದಾದೆ || (ಬುದ್ಧಿ, ಮನ, ಇಂದ್ರಿಯ) || 1 ||
ತತ್ವ ನಿಶ್ಚಯಿಸಿ, ಧ್ಯಾನಿಸಿ, ಅದರಂತೆ ಕರ್ಮ ಮಾಡುವುದು |
ಬಿಟ್ಟು ಸ್ವಧರ್ಮದ ಉಪದೇಶಾರ್ಥವ ಮರೆತೆ ||
ನಿತ್ಯಧ್ಯಾನ, ಪರಿಶುದ್ಧ ಮನದಿ ಬಿಂಬೋಪಾಸಕರ ಸೇವೆಯ || || 2 ||
ನಿಂತಿದ್ದು, ಕುಳಿತಿದ್ದು, ಮಲಗಿದ್ದು, ಓಡಾಡಿದ್ದರಲ್ಲೇ |
ಚಿಂತಿಸಿಅಚಿಂತ್ಯಾದ್ಭುತನ ಮಹಿಮೆ, ಅರ್ಪಿಸು ||
ಸತತ ಒಳಹೊರಗಿನ ವ್ಯಾಪಾರ ನಡೆಸುವವಗೆ || || 3 ||
ಜೊತೆಗಾರನ ಗುಣ, ಲೀಲೆಗಳ ಚಿಂತನದಿ ಮುಳುಗಿರೆ |
ಅತ್ಯಂತ ಅಚ್ಚುಮೆಚ್ಚಿನ ಭಕ್ತನೆಂದು ಗ್ರಹಿಸಿ ||
ಚಿತ್ತ ಸ್ವಚ್ಛಗೈಸಿ ಅನುಗ್ರಹಿಪ ಸತ್ಯಮೂರ್ತಿ ಶ್ರೀಕೃಷ್ಣವಿಟ್ಠಲ | || 4 ||
ಎಎಎ
349. ಸುಜನರೆಂದರ್ಯಾರು? ಉದ್ಧಾರ ಮಾರ್ಗ ತೋರಿಪರ್ಯಾರು?
ಸೌಜನ್ಯದಿ ಗೋಜು ಬೀಳದೆ ಗುರುತಿಸಿ, ಗುರುಗಳುಪದೇಶ ಪಡೆಯಿರಿ ||
ಸುಜ್ಞಾನಿ, ಸದಾಚಾರಿ ನಮಗಿಂತ ಉತ್ತಮರೇ ಗುರುಗಳು |
ಪ್ರಾಜ್ಞರು, ಸದಾ ಪ್ರಸನ್ನ ಚಿತ್ತರು, ಕ್ರೋಧರಹಿತರೇ ಗುರುಗಳು ||
ತ್ಯಜಿಸಿ ಬಂಧು ಪ್ರೀತಿಭಾವ, ಸಹಿಸಿ ಬಿರುನುಡಿಗಳ ಹಸನ್ಮುಖರಾಗಿರುವರು |
ವರ್ಜಿಸಿ ದ್ವೇಷಾಸೂಯೆಗಳ, ಭಜಿಸುವರು ಸದಾ ಭಕ್ತಿಯಲಿ ಪರಮಾತ್ಮನ ||
ಕುಜನರ ಸೇರದೇ ಶ್ರುತಿ ನಿಂದೆಯ ಮಾಡದೇ,
ಸರ್ವಪ್ರಾಣಿಹಿತ ಬಯಸುವರು |
ಮುಂಜಾನೆಯಿಂದ ಸಂಜೆಯವರೆಗೆ ಇವರ
ಸೇವೆಯೇ ಆತ್ಮೋನ್ನತಿ ಮಾರ್ಗ ತಿಳಿ ||
ಹೆಜ್ಜೆ ನೀರಿನಲ್ಲಿ ಮೂಡದಂತಿರುವ ಸಾಧಕರಿವರು
ಬಿಡದೆ ಶ್ರೀಕೃಷ್ಣವಿಟ್ಠಲನ ದಯೆ ಪಡೆದವರು ||
ಎಎಎ
350. ದೇಹಾಭಿಮಾನ ಬಿಡುವುದ್ಹ್ಯಾಂಗೆ ಎನ್ನದಿರು ಎಲೈ, ಜೀವವೇ |
ದೇಹ ಬೇರೆ-ಜೀವ ಬೇರೆ ಸಿಹಿಯಾದ ಹನ್ನೆರಡು ಮಾರ್ಗಗಳಿವೆ ತಿಳಿದುಕೋ ||
ಕಡಿ -ಅರಿಷಡ್ವರ್ಗ, ಹೊಡಿ- ಲೋಭ, ಅಸೂಯೆ |
ಹಿಡಿ-ದಾಸ್ಯತ್ವ, ನುಡಿ-ಹರಿನಾಮ, ಪಡಿ-ಗುರುಕರುಣ ||
ನಡಿ-ವೈಕುಂಠಕೆ, ಓಡು-ಇದೇ ಪಥವü ಬಿಡದಿರು |
ತೊಳಕೋ-ಭವದ ಪಂಕ, ಕಳಕೋ ಸಂಚಿತಾಗಾಮಿ ||
ಅಳಕೋ - ಪೋದಾಯುಷ್ಯ, ತಿಳಕೋ-ಪಂಚಬೇಧ, ತಾರತಮ್ಯ |
ಶಳಕೋ-ದುರ್ವಿಷಯದಿ ಪೋದ ಇಂದ್ರಿಯಗಳ, ಬೆಳಕೋ-ಸುಕೃತ ಧ್ಯಾನ ||
ಪೆಳೆದರಿಕೊ ದ್ವಾದಶ ವಾಕ್ಯಗಳ ನಿರುತ ಅನುಷ್ಠಾನದಿ |
ದ್ವಾದಶಾಕ್ಷರ ಪ್ರತಿಪಾದ್ಯ ಮಾಯಾಪತಿ ಶ್ರೀವಾಸುದೇವಾಭಿನ್ನ ||
ಸುದೈವ ನಿತ್ಯ ಬಂಧು ಶ್ರೀಕೃಷ್ಣವಿಟ್ಠಲ ಅನುಗ್ರಹಿಪ ||
ಎಎಎ
351. ಮನಮೊದಲಾದ ಷೋಡಶಕಳೆಗಳ ಶರೀರಭಂಗವಾಗಲು |
ಅನುಗ್ರಹೋನ್ಮುಖರಾದವರ ಸಂಗವೇ ಉದ್ಧಾರ ಮಾರ್ಗ ||
ಪುಣ್ಯವೇ ಶಾಂತತೆ, ಪಾಪವೇ ಕ್ರೋಧ |
ಮಾನವ ಜನುಮದಿ ಕ್ರೋಧವಳಿದರೆ ಉಳಿಯುವುದೇ ಪುಣ್ಯ ||
ಜ್ಞಾನ ಮಾರ್ಗದಿ ನಡೆದವಗೆ ಜೊತೆವಾಹುದು ಭಕ್ತಿ, ವೈರಾಗ್ಯ |
ಧ್ಯಾನವಿಲ್ಲದೇ ಮುಕ್ತಿಯಿಲ್ಲ, ವ್ಯೆರಾಗ್ಯವಿಲ್ಲದೇ ಧ್ಯಾನ ಲಭಿಸದು ||
ಮನದ ಮಲ ತೊಳೆಯುವುದು ಧ್ಯಾನವೂಂದೇ |
ಅನುದಿನದ ಶ್ರವಣ, ಮನನಗಳೇ ಧ್ಯಾನದ ಮೆಟ್ಟಿಲು ||
ಕನಕ-ಮೃತ್ತಿಕ, ರತಿ ತೊರೆದು ಗುಣವಂತರೊಳಿಡುವ |
ಅನಾದಿ ಬಂಧು ನಮ್ಮ ಶ್ರೀಕೃಷ್ಣವಿಟ್ಠಲ ||
ಎಎಎ
ಮೃತ್ಯುವಿನಾಟ
352. ಮರಣ-ಜನನ ಸ್ವಇಚ್ಛೆಯಿಂದ ಇರದು, ಬಾರದು ಸಹ |
ಎರಡರ ಮಧ್ಯದ ಜೀವನದ ರೂವಾರಿ ಸ್ವತ: ಹೇಗೆ ಸಾಧ್ಯ? ||
ಪರಮಾತ್ಮನ ಪರ ಬಾಳಿದರೆ ಜೀವನ ಸಾರ್ಥಕವಾದಂತೆ ಕಾಣು |
ಬರಿದೇ ಬಾರಿಸದಿರು ಮತ್ತೆ ಬಾರದೀ ಮಾನವ ಜನುಮ ||
ಇರುವುದರತನಕ ಬಡೆದಾಟ, ನಾನು ನನ್ನದೆಂಬ ತುಡಿತ |
ಕರೆ ಬಂದೊಡೆ ಇರುವುದೆಲ್ಲವ ಬಿಟ್ಟು ನಿಲ್ಲುವುದು ಮಿಡಿತ ||
ಅರೆಕ್ಷಣ ಬಿಟ್ಟು ಬಾ ಎನ್ನ ಕರ್ತವ್ಯವಿದೆ ಎಂದರೆ ಕೇಳುವುದೇ? |
ಹಿರಿಯ ನಾನಲ್ಲ, ನನ್ನ ಸರತಿ ನಂತರ ಎಂದರೆ ಬಿಡುವುದೆ ||
ಸುರ-ನರ, ಚಕ್ರವರ್ತಿ-ಬಡವ-ಬಲ್ಲಿದನೆಂಬ ಭೇದವಿಲ್ಲದೇ |
ಸರ್ವರನೂ ಸಮನಾಗಿ ಒರೆಸಿ ಹಾಕುವುದೇ ಕಾಲದ ಧರ್ಮ ||
ಬರುವ ಮೊದಲೇ ಯಾವಾಗ, ಹೇಗೆ,ಎಲ್ಲಿ ಎಂದು ತಿಳಿದವರುಂಟೇ? |
ಬರದಿರುವ ಹಾಗೆ ಇನ್ನೂವರೆಗೆ ಇದರ ಹಿಡಿತ ಸಾಧಿಸಿದವರುಂಟೆ? ||
ಕರುಣೆ ತೋರದೆ, ಭೇದ-ಭಾವ ಮಾಡದೇ, ಯಾರಿಗೂ ಕಾಯದೇ |
ಹಾರಿ ಹೋಗುವುದು ಕ್ಷಣದಿ, ಕಣ್ಣಿಗೂ ಕಾಣದಂತೆ ಸೂಕ್ಷ್ಮರೂಪದಿ ||
ಯಾರು ಆ ಲೋಕ ನೋಡಿದವರು ಬಂದಿಲ್ಲ, ನಿಖರವಾಗಿ ಹೇಳಿಲ್ಲ |
ಸರ್ವ ಭೋಕ್ತಾ, ಭೋಜ್ಯ, ಭೋಜಕ, ಶ್ರೀಕೃಷ್ಣವಿಟ್ಠಲಗೆ ಸರಸದಾಟ ||
ಎಎಎ
353. ಅತೀ ಶಾಂತಿ ಜಗತ್ತಿನಲ್ಲೆಲ್ಲಿ ಅಡಗಿದೆ? |
ಯತ್ನದಿ ದೊರಕಲು ಸಾದ್ಯವಿದೆಯೇ? || || ಪ ||
ಸತಿಸುತರ ಸಂತೋಷದಲ್ಲಡಗಿದೆಯೇ? |
ವಸ್ತ್ರಕನಕಾಭರಣದಲ್ಲಡಗಿದೆಯೇ? ||
ಆಸ್ತಿ, ಹಣ, ಪ್ರಸಿದ್ಧಿ ಪಡೆವಲ್ಲಿ ಅಡಗಿದೆಯೇ? |
ಅರ್ಥ, ಕಾಮ, ಲೋಭದಲ್ಲಡಗಿದೆಯೇ? || || 1 ||
ಎತ್ತಿ ಕೊಡುವ-ಕೊಳ್ಳುವ ವ್ಯವಹಾರದಲ್ಲಡಗಿದೆಯೇ? |
ನಿತ್ಯಕರ್ಮಾಚರಣೆÂಯಲ್ಲಡಗಿದೆಯೆ? ||
ಮಾತಿಲ್ಲದೇ ಮಾಡುವ ತಪದಲ್ಲಡಗಿದೆಯೇ? |
ಮಿತ ಆಹಾರ-ವಿಹಾರದಲ್ಲಡಗಿದೆಯೇ? || || 2 ||
ಶಕ್ತ್ಯಾ ಮಾಡುವ ಧ್ಯಾನದಲ್ಲಡಗಿದೆಯೇ? |
ಹಿತ ಸುಖತರುವ ನಿದ್ರೆಯಲ್ಲಡಗಿದೆಯೇ? ||
ಪುಸ್ತಕ ಜ್ಞಾನ ಮಸ್ತಕದಲ್ಲಿಡುವಲ್ಲಡಗಿದೆಯೆ? |
ನೀತನಾಗಿ ಸರ್ವರಿಗೆ ತಲೆಬಾಗಿಸುವುದರಲ್ಲಡಗಿದೆಯೇ? || || 3 ||
ತೀರ್ಥಯಾತ್ರೆ ಪವಿತ್ರ ನದಿ ಸ್ನಾನದಲ್ಲಡಗಿದೆಯೆ? |
ತೀರ್ಥ-ಪ್ರಸಾದ ಭುಂಜಿಸುವುದರಲ್ಲಡಗಿದೆಯೇ? ||
ಪ್ರತಿಮೆಯ ಪರಮಾತ್ಮನ ದರುಶನದಲ್ಲಡಗಿದೆಯೇ? |
ಉತ್ತಮರ ಸಂಗದಿ ಕೀರ್ತಿಸುವುದರಲ್ಲಡಗಿದೆಯೇ? || || 4 ||
ಆತ್ಮ ಸಖನೇ ಕಾರ್ಯಕಾರಣ ಕರ್ತನೆಂದು ತಿಳಿದು |
ಪ್ರತಿಕ್ಷಣದಿ ಮರೆಯದವನ ಉಪಕಾರ ಸ್ಮರಿಸುತ ||
ಅಂತರ್ಯಾಮಿ ಅರಿಹಂತಕ ಶ್ರೀಕೃಷ್ಣವಿಟ್ಠಲನ |
ಹೃತ್ಕಮಲದಿ ಕಂಡು ಪಾಡಿ ಕುಣಿವುದರಲ್ಲೇ ಅಡಗಿದೆ || || 5 ||
ಎಎಎ
354. ದೊಡ್ಡ ವಿಶ್ವದಲ್ಲಿಯ ಸಣ್ಣ ಇರುವೆ ಇರುವೆ |
ಎಡಬಿಡದೆ ಓಡಾಡುವೆ ಗೊತ್ತು ಗುರಿಇಲ್ಲದೆ || || ಪ ||
ಓಡಾಡಿದರೂ ಸ್ವತಂತ್ರನಂತೆ ಬೇಕೆಂದೆಡೆಹೊಗಲಾರೆ |
ಅಡಿಯಲಿ ಸಿಕ್ಕರೆ ಬದುಕೆ ಮುಗಿವುದು || || ಅ.ಪ ||
ತಿಳಿಯದೇ ಓಡಾಡುತ್ತ ಆಹಾರ ಸಿಕ್ಕರೆ ತಿನ್ನುವೆ |
ಗಾಳಿ ಎರಗಿಸಿದೆಡೆ ಹಾರುತ್ತ ಬೇರೆಡೆ ಹೊಗುವೆ ||
ಜಲ ಹರಿದರೆ ಬೇಡಾದರೂ ಜೊತೆ ಹರಿಯುವೆ |
ಬಲ ಒಗ್ಗಟ್ಟಿರುವುದು ಗುಂಪಿನಲ್ಲಿದ್ದಾಗ ಮಾತ್ರವೇ || || 1 ||
ಕ್ಷಣಕಾಲ ಜೀವಿಸಿದರೂ ಕೆಚ್ಚೆದೆಯಲಿ ಮುನ್ನುಗ್ಗುವೆ |
ಒಣಪ್ರತಿಷ್ಠೆ, ಜಂಬಗಳಿಲ್ಲದೇ ಜೀವಿಸುವೇ ||
ಕಣಕಣಕೂಡಿಸಿ ಇರಲು ದೊಡ್ಡಹುತ್ತ ಕಟ್ಟಿದರೂ |
ಜಾಣ ಹಾವು ಸದಾ ವಾಸಿಪುದು ಅಲ್ಲಿ ಬಲಾತ್ಕಾರದಿ || || 2 ||
ಹೆಚ್ಚೇನೂ ಬಯಸದೇ ಪರೋಪಕಾರಿಯಾಗಿ |
ಕೆಚ್ಚೆದೆಯಲಿ ಶಿಸ್ತನ್ನು ಪಾಲಿಸುತ ನಾಲ್ಕುದಿನದಿ ||
ಕೊಚ್ಚಿ ಹೋದರೂ ಕಾಲನ ನಿಯಮನದಿ |
ತುಚ್ಛನಾದರೂ ಉಚ್ಚ ಶ್ರೀಕೃಷ್ಣವಿಟ್ಠಲನ ಭಜಿಸಲಿಚ್ಛಿಸುವೆ || || 3 ||
ಎಎಎ
355. ಹೇಳಲ್ಹೇಗೆ, ನಿನಗೆ ಹೇಗೆ ತಿಳಿಯಲ್ಹೇಳಲಿ |
ನಾನೇನು ಹೇಳಲಿ? ತಿಳಿಯದೇ ನಿನಗೆ? || || ಪ ||
ಸುಳಿಯೊಳಗೆ ಸಿಲುಕಿ ಹೊರ ಬರಲು ದಾರಿ ಕಾಣದಾಗಿದೆ |
ಸುಳಿ ಸುಳಿದಾಡುವ ಸರ್ವದಾ ಹಿತವನ್ನೇ ಬಯಸುವ ||
ಸೆಳೆದು ದುರ್ವಿಷಯಗಳಿಂದ ಒಲಿದು ಪಾಲಿಸು ಸರ್ವದಾ |
ಕಳೆದು ಪಾಪಗಳ, ತೊಳೆದು ಮನದ ಮಲ
ಶುದ್ದಳಾಗಿಸೆಂದು ಹೇಗೆ ಹೇಳಲಿ? || || 1 ||
ಒಳಿತಾಗಲೀ, ಕೆಡುಕಾಗಲೀ, ಸುಖವಾಗಲಿ, ದು:ಖವಾಗಲೀ |
ವೇಳೆ ವೇಳೆಗೆ ಕರ್ಮಾನುಸಾರ ಕಲೆಸಿ ಉಣಿಸುವವ ||
ಒಳಗೆ ಕುಳಿತು ಹೇಳುವವ-ಕೇಳುವವ ಎನ್ನಂತರ್ಯಾಮಿ |
ನೋಳ್ಪ, ಮಾಳ್ಪ ಸರ್ವವಿದಿತ ಶ್ರೀಕೃಷ್ಣವಿಟ್ಠಲ ನಿನಗೆ ಹೇಗೆ ಹೇಳಲಿ || 2 ||
ಎಎಎ
356. ಸರುವ ಭಾರ ನಾನೇ ಹೊತ್ತಿರುವನೆಂಬ ಗರುವವೇಕೆ? |
ಅರಿತು ನೋಡಲು ಮರ್ಮ ತಿಳಿವುದು || || ಪ ||
ತಿರುಗುವಾಗ, ಮಲಗಿದಾಗ, ಕುಳಿತಾಗ |
ಉರ್ವಿಯೇ ಭಾರಪೊತ್ತಿಲ್ಲವೇ? ಬೇಸರಿಸದೇ ||
ಶಿರದ ಭಾರ ದೇಹ, ದೇಹದ ಭಾರ ಕಾಲ್ಗಳು |
ಚರಣದ ಭಾರ ಭುಮಿಯೆ ಪೊತ್ತಿಲ್ಲವೇ? || || 1 ||
ಗರ್ಭಸ್ಥ ಶಿಶು ಭಾರ ಮಾತೆ ನವಮಾಸ ಧರಿಸಿದರೂ |
ಸಂರಕ್ಷಿಸುವಾ ಸಕಲರನು ಪರತರ ಉತ್ತಮದಿ ಸದಾ ||
ಪೊರೆಯುವ ತಾಯ್ತಂದೆಯರೇ ಮಕ್ಕಳಿಗೆ ಭಾರವೆನಿಪರು |
ಪುರುಷ ಆದಿಕಾರಣನೆಂತು ಜಗದ ಭಾರ ಸಹಿಸಿಹನು || || 2 ||
ಭಾರವೆನಿಪುದು ಕಾಲ ದುರ್ಭರ ಕ್ಷಣದಲಿ ಕಳೆಯಲು |
ಭಾರವೆನಿಪುದು ಜೀವಿಸುವ ಜೀವನ ನಿರಾಸೆಯಲಿ ||
ಮರೆಯದೆ ಸರುವ ಭಾರ ಪೊತ್ತಿರುವ ಗುಪ್ತದಿ ವ್ಯಾಪ್ತನಾಗಿ |
ಭಾರತೀಶಪ್ರಿಯ ಶ್ರೀಕೃಷ್ಣವಿಟ್ಠಲನ ಸ್ಮರಿಸೆ ಭಾರವೆಲ್ಲ ಹಾರಿಪೋಪುದು || 3 ||
ಎಎಎ
357. ಹುಟ್ಟನಿಂದ ಸಾವಿನ ತನಕ ಕಟ್ಟಿಕೊಂಡು ಬಂದಬುತ್ತಿ | (ಕರ್ಮ)
ಬಿಟ್ಟು ಬಿಡದೆ ಜೊತೆಯಲಿರುವುದು ಪ್ರತಿಯಾನದಲಿ ||
ಎಷ್ಟು ತಿಂದರೂ ಕರಗದೇ ಅಕ್ಷಯವಾಗುವುದು |
ಕೊಟ್ಟರೂ ಎರವರಿಗೆ ಕೊಡಮಾಡಲಾಗದು ಪೂರ್ಣ ||
ಇಷ್ಟ ಪಟ್ಟರೂ ಪಡದಿದ್ದರೂ ತಿನ್ನುತ್ತಲೇ ಇರಬೇಕು |
ಕೆಟ್ಟು ಹೋಗದಂತಹ ಸಿಹಿ-ಕಹಿ ಗ್ರಾಸ ಒಳಗಿರುವುದು ||
ಗಂಟು ಬಿಚ್ಚಿದ ಮೇಲೆ ಒಳಗೇನಿರುವುದು ಅರಿವಾವುದು | (ಸುಖ-ದು:ಖ)
ಒಟ್ಟಿನಲಿ ತಾನೇ ತಿಂದು ಮುಗಿಸಲೇಬೇಕಾದ ಸ್ಥಿತಿ ||
ಕಷ್ಟ ಪಟ್ಟು ಮೂರು ರೀತಿಯಲಿ ತಿಂದರೂ ತಾನೇ ಮುಗಿಯದು | (ತನು, ಮನ, ಬುದ್ದಿ)
ಸುಟ್ಟರೂ ಸುಡದಿರುವಂತಹ ಗಟ್ಟಿ ಪಾಕ ಹೋಗಲು ಒಂದೇ ದಾರಿ || (ಪ್ರಾರಬ್ಧ)
ಸೃಷ್ಟೀಶ ಸಂತುಷ್ಟ ಶ್ರೀಕೃಷ್ಣವಿಟ್ಠಲಗೇ ಸಮರ್ಪಿಸೆ ಕರಗುವುದು || ಬುತ್ತಿ ||
ಎಎಎ
358. ಈಗ ಇದ್ದದ್ದು ಈಗ ಇಲ್ಲ || ಪ್ರಾಣ ||
ಹೇಗೆ ಹೋಯಿತು? ಎಲ್ಲಿಗೆ ಹೋಯಿತು?ಕಾಣದಂತೆ || || ಪ ||
ಬಗೆ ಬಗೆಯಲಿ ಚಿಂತಿಸಿದರೂ ಹೊಳೆಯದಾಯ್ತು |
ಹಗರಣ ಇಲ್ಲದೆ ನಿ:ಶಬ್ದದಿ ತಾ ಸರಿದುಹೋಯ್ತು || || ಅಪ ||
ಹೊರಗ್ಹೋದ ಉಸಿರು ಹೊರಗೇ ಉಳಿಯಿತು|
ತೆರೆದ ಕಣ್ಣು ರೆಪ್ಪೆ ಮಿಟಿಕಿಸಲೇ ಇಲ್ಲ ||
ಬರಿದೇ ಶೂನ್ಯದಿ ನೆಟ್ಟಂತೆ ದೃಷ್ಟಿಯಾಯ್ತು |
ಸರಿದು ವಾಲಿತು ಸೋತಂತೆ ಕೊರಳು || || 1 ||
ಉಸಿರಿನ ಅವಧಿ ಮುಗಿಯಿತೋ |
ಕಸುವು ಮೈಯ್ಯಿಂದ ಅಳಿಯಿತೋ ||
ಹೆಸರಿಲ್ಲದೆ ಸಮಯ ಸರಿಯಿತೋ |
ಹೊಸ ಹಾಡಿನ ಸರದಿ ಬಂದಿತೋ || || 2 ||
ಎಂಥಾ ತೆಳ್ಳಗಿನ ಎಳೆ ಸಾವು-ಜೀವನ ನಡುವೆ |
ಮಿಥ್ಯ-ಸತ್ಯತೆಯ ನಡುವಿನ ಬಂಧನದಂತೆ ||
ವ್ಯರ್ಥಾಲಾಪ, ಗೋಳು ಕೇಳಿಸದಂತೆ ತನ್ನಷ್ಟಕ್ಕೆ |
ಪಥ ಹಿಡಿದು ಸಾಗಿತು ಹಿಂತಿರುಗಿ ಬರದಂತೆ || || 3 ||
ಬಂದ ತಕ್ಷಣ ಒಂದರಿಂದ ಅನೇಕವಾಗಿ ಹರಡಿ |
ಒಂದಿನ ಹೇಳ ಹೆಸರಿಲ್ಲದೆ ಮಾಯವಾಹುದು ||
ವಿಧಿಯಾಟವೋ, ಹಣೆಬರಹವೋ ತಿಳಿಯದು |
ತಂದದ್ದು ಇಲ್ಲ, ಜೊತೆ ಒಯ್ಯವುದು ಏನಿಲ್ಲಾ || || 4 ||
ಬಣ್ಣದ ಬದುಕಲಿ ಬಂಧುಬಾಂಧವರ ಓಲೈಸಲು |
ಒಣಪ್ರತಿಷ್ಠೆ, ಹಣಕ್ಕಾಗಿ ಹೋರಾಡಿ ನೊಂದು ಬೆಂದು ||
ಕ್ಷóಣ, ಕಾಲ ಸರಿಯುವುದ ತಿಳಿಯದೇ |
ಮಣ ಭಾರ ಹೊತ್ತಂತೆ ವ್ಯರ್ಥದಿ ಜೀವನಹೋಯಿತು || || 5 ||
ಸೂತ್ರಧಾರನ ಕೈಯ್ಯಲ್ಲಿಯ ಗೊಂಬೆಯಂತೆ |
ಪಾತ್ರ ಇದ್ದಾಗ ಬಂದು ಕುಣಿಸಿದಂತೆ ಕುಣಿದು ||
ಹೊತ್ತು ಹೋಗುವ ಮುನ್ನ ಶಕ್ತ್ಯಾನುಸಾರದಿ |
ಭಕ್ತವತ್ಸಲ ಶ್ರೀಕೃಷ್ಣವಿಟ್ಠಲನ ಒಲಿಸಿಕೋ || || 6 ||
ಎಎಎ
359. ಉತ್ತಮ ಲೋಕ ಪ್ರಾಪ್ತಿಗೆ ಉತ್ಕøಷ್ಟ ದಾನಮಾಡು |
ಉತ್ತಮೋತ್ತಮಾಂಗಾಯ ಒಲಿದು ಸಂಪ್ರೀತನಾಗುವ | || ಪ ||
ಸತ್ಪಾತ್ರರಿಗೆ ಕೊಡುವ ಪ್ರತಿ ದಾನವು |
ಸತ್ಫಲ ರೂಪದಿ ಕುಲ ಉದ್ಧರಿಸುವುದು ||
ಅತೀ ಪ್ರಿಯ ವಸ್ತುವನ್ನೇ ದಾನವಾಗಿಸು |
ವ್ಯರ್ಥವಾದ ವಸ್ತುದಾನದಿ ಕೇಡನ್ನೇ ಉಣ್ಣುವಿ || || 1 ||
ಕಾಟಾಚಾರಕ್ಕಾಗಿ ಬೈದು ಕೊಡಬೇಡ |
ಇಟ್ಟು ಒಳ್ಳೆಯ ಮನ ಸದ್ಭಾವನೆಯಲಿ ಕೊಡು ||
ಕೆಟ್ಟದ್ದುದ ಕೊಟ್ಟು ನೀ ಕೆಡಬೇಡ |
ಕೊಟ್ಟಮೇಲೆ ಅದಕ್ಕಾಗಿ ಪರಿತಪಿಸಬೇಡ || || 2 ||
ಬೇರೆಯವರಿಗೆ ಕೊಡಲೆಂದೇ ಬಂದ ವಿದ್ಯೆ, ಧನ, ಸಂತೋಷ |
ವರವಾಗಿಹುದು ನಿನಗೆ ಪೂರ್ವಜನ್ಮಕೃತ ಪುಣ್ಯವು ||
ಹೆರವರಿಗೆ ಕೊಡದಿದ್ದರೆ ಧರ್ಮದೃಷ್ಟಿಯಲಿ ಕಳ್ಳನಾಗುವಿ |
ಬರುವ ಜನ್ಮಾಂತರಗಳಲಿ ತಪ್ಪು ಕಾಣಿಕೆ ಕೊಡಲೇಬೇಕು || || 3 ||
ಕೊಟ್ಟರೊಮ್ಮೆ ದಾನ ಋಣ ಮುಗಿದಂತಲ್ಲಾ |
ಹುಟ್ಟಿನಿಂದಾ ಸಾಯುವರೆಗೂ ಕೊಡುತ್ತಲೇ ಇರು ||
ಮಾತೃ, ಗುರು, ಸಮಾಜ ಋಣ ತೀರದು ಎಂದಿಗೂ |
ಶ್ರೀಕೃಷ್ಣವಿಟ್ಠಲ ಇತ್ತಿದ್ದು ಅವನಿಗೆ ಕೊಟ್ಟು ವರವ ಪಡಿ || || 4 ||
ಎಎಎ
360. ಗುರುಗಳ ಸೇವೆಯಲಿ ದೊರೆಯುವುದು ಜ್ಞಾನಮಾರ್ಗ |
ಸರಿಯಾದ ಪಂಚಭೇದ, ತಾರತಮ್ಯ ಜ್ಞಾನ ||
ಪರಮಾತ್ಮನಲ್ಲಿ ಭಕ್ತಿ, ವಿಷಯ ವಿರಕ್ತಿ ಪುಟ್ಟುವುದು |
ದುರುಳಬುದ್ಧಿ ನಾಶವಾಗಿ ಮನ ನಿರ್ಮಲವಾಹುದು ||
ಬರುವುದೇ ಸುಬುದ್ಧಿ, ಮಾಡುವುದು ಕರ್ಮನಾಶ |
ಕರ್ಮಫಲಾರ್ಪಣೆ ನಿರ್ವಂಚನೆಯಲಿ ಮಾಡಿದಾಗ ||
ದೊರೆಯುವುದೇ ನಿತ್ಯ, ಸತ್ಯ, ಮೋಕ್ಷಫಲ |
ಅರ್ಪಿಸಿ ಏಕಾದಶೇಂದ್ರಿಯ ಕರ್ಮಗಳ, ತದಭಿಮಾನಿ ತತ್ತ್ವೇಶರ ||
ದ್ವಾರಾ ವಾಯ್ವಾಂತರ್ಗತ ಶ್ರೀಕೃಷ್ಣವಿಟ್ಠಲ ಸ್ವಾಮಿಗೆ |
ಸಾರವಿದೇ ಸಾಧನ ಜೀವಿಗಳ ಆಧ್ಯಾತ್ಮ ರಸರಂಜಿನಿ ಸಾರ ||
ಎಎಎ
361. ಜ್ಞಾನ ಬೇಕು, ವಿಶೇಷ ಸುಜ್ಞಾನ ಬೇಕು |
ಜೀವ ಪರಮಾತ್ಮರೊಳುಭೇದ | ಜೀವ ಜೀವಕೆ ಭೇದ ||
ಜೀವ ಜಡಕೆ ಭೇದ ಸಾರುವ ಜ್ಞಾನಬೇಕು |
ಕ್ಷರಾಕ್ಷರ ಭೇದ, ದ್ವೈತಾದ್ವೈತ ಭೇದ, ಜ್ಞಾನವರಿತು ||
ಮುಕ್ತಿಮಾರ್ಗದೆಡೆಗೆ ಸಾಗಲು ಜ್ಞಾನಬೇಕು |
ಎಲ್ಲಕ್ಕಿಂತ ಶ್ರೇಷ್ಠ ಪುರುಷೋತ್ತಮನೆಂಬ ಸಾರುವ ವೇದಗಳ ಜ್ಞಾನ ಬೇಕು ||
ಗುರುಮಧ್ವರಾಯರ ದಯದಿ ಜ್ಞಾನಬೇಕು |
ಶ್ರೀಕೃಷ್ಣವಿಟ್ಠಲ ಗುಣಮಹಿಮೆಗಳ ಜ್ಞಾನಬೇಕು ||
ಎಎಎ
362. ಬಿರುದೇಕೆ ಈ ಹೊಗಳಿಕೆ ಯಾತಕೆ, ಈಲೋಕದಲಿ | || ಪ ||
ಹೊಗಳುವ ಭಟ್ಟಂಗಿ ಕಂಡರೆ ಅಂಜಿಕೆ ಎನಗಯ್ಯಾ |
ಹೊಗಳಿದವರೇ ಮರುಕ್ಷಣ ತೆಗಳುವರಯ್ಯಾ ||
ಚಿತ್ತಚಂಚಲರಿಂದ ಸದಾ ಎನ್ನ ಕಾಪಾಡು |
ಚಿತ್ತಜನಕ ನಿನ್ನೊಲುಮೆ ಇದ್ದರೆ ಸಾಕು || || 1 ||
ನಶ್ವರಜಗತ್ತು, ನಶ್ವರದೇಹ |
ಶಾಶ್ವತ ಆತ್ಮಕ್ಕೆ ನಿನ್ನ ಸ್ಮರಣೆ ಸಾಕು ||
ಗುರುಗಳಾಶೀರ್ವಾದ ಬಲದಿಂದಲೇ |
ಮುಳ್ಳಿನ ಹಾದಿ ಹುಲ್ಲುಹಾಸಾದರೆ ಸಾಕು | || 2 ||
‘ನಾಹಂ ಕರ್ತಾ, ಹರಿ:ಕರ್ತಾ’ ಎಂದಂತೆ |
ಮನನಿನ್ನದು, ತನುನಿನ್ನದು ||
ನೀ ನಡೆಸಿದಂತೆ ನಡೆವ ಈಜೀವ |
ಶ್ರೀಕೃಷ್ಣವಿಟ್ಠಲ ಪ್ರೇರಣೆಯಾ ಪ್ರೀತ್ಯರ್ಥಂ ||
ಎಂದು ಮಾಡುವ ಕೆಲಸಕೆ | || 3 ||
ಎಎಎ
363. ನಮ್ಮ ಪ್ರಾರಬ್ಧಕರ್ಮ ಅನುಭವಿಸದೇ ತೀರದು |
ವಂಚನೆಯಿಂದ ದಾಟಲುಬಾರದು ಯಾರಿಗೂ | || ಪ ||