ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಶ್ರೀ ಕೃಷ್ಣವಿಠ್ಠಲಪದಗುಚ್ಛ 2

ವಾಯುಸ್ತುತಿ

28. ಶ್ರೀರಾಮಪ್ರಿಯ ಪರಮಮುಖ್ಯಪ್ರಾಣ |

ದೇಹದೊಳ ಹೊರಗೆ ನೆಲಸಿಹ ಪವಮಾನ ||

ವಾಯುನಿಂದಲೇ ಸಿಗುವುದು ಹರಿಕರುಣೆ |

ಸೀತಾಮಾತೆಗೆ ಅಂಗುಲೀಯನಿತ್ತವ ||

ಲಂಕೆಯನ್ನೆ ಸುಟ್ಟ ಧೀರ ಬಲವಂತ |

ಸೇತುವೆಯ ಕಟ್ಟಿ ರಾವಣನ ತರಿದ ||

ಮೆಚ್ಚಿ ಬ್ರಹ್ಮಪದವಿ ದಯಪಾಲಿಸಲು |

ನಿಜಭಕುತಿಯನೆ ಬೇಡಿದ ರಾಮದೂತ ||

ಅವನೇ ವೇದ ಶಾಸ್ತ್ರಸಾರವ ಧರಿಸಿದ |

ನಿಜ ಗುರು ಶ್ರೇಷ್ಠ ತ್ರೇತೆಯ ಹನುಮಂತ | || 1 ||

ಧರ್ಮಶಾಸ್ತ್ರಅರಿತ ಮಾರುತನೇ ದ್ವಾಪರದಲಿ |

ಧರ್ಮಜನ ಅನುಜನಾಗಿ ಪಾಂಡವನೆನಿಸಿದ ||

ಅವನೇ ರಕ್ಕಸರನು ತರಿದಟ್ಟಿದ ಬಲಭೀಮ |

ಉರಿವ ಅರಗಿನ ಮನೆಯಿಂದೆಲ್ಲರ ಪಾರುಗಾಣಿಸಿದ ವೃಕೋದರ ||

ದ್ರೌಪದಿಯ ಕರಪಿಡಿದು ಮನವನರಿತು ಕೀಚಕನ ಕೊಂದ |

ಕಿರ್ಮಿರಾದಿಗಳ ಮೆಟ್ಟಿ ಸೌಗಂಧಿಕವ ತಂದ ||

ಕೌರವ ಕುಲವ ನಿರ್ನಾಮಮಾಡಿದ ಹರಿಯಕೃಪೆಯಲಿ | || 2 ||

ಕುಜನರು ಕಲಿಯುಗದೊಳು ಕುಮತ ಪಸರಿಸಲು |

ಸುಜ್ಞಾನಿಯು ತಾ ಮಧ್ವನಾಗಿ ಅವತರಿಸಿ ||

ಸರ್ವವ್ಯಾಪಿ, ಸವೋತ್ತಮ, ವಿಶ್ವಸತ್ಯ |

ಭೂಮಿಯಲಿ ಸರ್ವ ಸುಜನರಿಗೆ ಬೋಧಿಸಿ ||

ಬದರಿಕಾಶ್ರಮಕೆ ಪುನರಪಿ ತೆರಳಿ |

ವ್ಯಾಸಮುನಿ ಪದಕೆರಗಿ ಸಕಲ ವೇದಾರ್ಥಗಳ ||

ಬ್ರಹ್ಮಪಿತನಿಂ ತಿಳಿದು ಜಗತ್ತಿಗೆ ಸಾರಿದ |

ಪೂರ್ಣಪ್ರಜ್ಞರಿಗೆ ಬಾರಿ ಬಾರಿಗೆ ವಂದಿಪೆನು | || 3 ||

ಹನುಮ, ಭೀಮ, ಮಧ್ವಾಂವತರಾತ್ಮಕ |

ಶ್ರೀಕೃಷ್ಣವಿಟ್ಠಲ ಸಕಲರಿಗೂ ಮುಕ್ತಿಪಾಲಿಪ ||

ಜಯ ಜಂಯ ಅವತಾರತ್ರಯ ಶ್ರೀರಾಮದೂತಗೆ ಜಯಜಯ ||

29. ಶರಣು ಮಾರುತಿಯೇ | ವರ ರಾಮದಾಸನೇ |

ಬುದ್ಧಿತಮ ಗರಿಷ್ಠನೇ | ಇಂದ್ರಿಯ ಜಯನೇ ||

ಭಾರತಿ ಪತಿ ಕಪಿಶ್ರೇಷ್ಠನೇ |

ಕರುಣಿಸು ಶ್ರೀಕೃಷ್ಣವಿಟ್ಠಲ ಭಕ್ತನೇ ನಮೋ ನಮಃ ||

30. ಯಂತ್ರೋದ್ಧಾರಕ ಹನುಮ ಮಂತ್ರದಿ ಬಂಧಿತನಾದ |

ಯತಿವರ್ಯ ಶ್ರೀವ್ಯಾಸರಿಂದ ಪ್ರತಿಷ್ಠಿತನಾದ(ಪೂಜಿತನಾದ) | || ||

ಚಕ್ರತೀರ್ಥದಿ ನೆಲಸಿಹ ಕೋದಂಡರಾಮ ಭಕುತ |

ಏಕಚಿತ್ತದಿ ಯೋಗಮುದ್ರೆಯಲಿ ಕುಳಿತಿಹನು | || 1 ||

ಚೆಂದದಿ ಪಂಚಖಾದ್ಯ ನೈವೇದ್ಯ ಸ್ವೀಕರಿಸುವ |

ಬಂದ ಭಕುತರಭೀಷ್ಟೆ ಪೂರೈಸುವ ಬಿಡದೆ | || 2 ||

ರಾಮಮಂತ್ರ ನಿರುತ ಜಪಿಸುವ ಜಪಮಾಲೆಪಿಡಿದು |

ಸಾಮಗಾನಪ್ರಿಯ ಶ್ರೀಕೃಷ್ಣವಿಟ್ಠಲನ ಸುತನಿವನು | || 3 ||

31. ಓರೆ ಮೋರೆಯ ಮಾರುತಿಯೇ ಕರೆ-ಕರೆ ಮಾಡದಿರು |

ಸರುವ ಜೀವ ಭಾರ ಪೊತ್ತಿರುವ ನಿನಗೆ ನಾ ಭಾರವೇ? | || ||

ಸೂರ್ಯನೆಡೆಗೆ ಹಾರಿದಾಗ ತಾಪ ತಾಕಲಿಲ್ಲವೆ? |

ಪರಿಹರಿಸಲಾರದಂತಹ ಎನ್ನಪಾಪ ಸುಡಲಾರೆಯಾ? ||

ತಾರಿಸಿ ಸಾಗರ ಲಂಕೆಗೆ ಪೋಗಿ ಸೀತೆಗೆ ಉಂಗುರವಿತ್ತೆ |

ಭರಿಸಿ ಎನ್ನ ಸಂಸಾರದಿಂ ಪಾರು ಮಾಡಲಾರೆಯಾ | || 1 ||

ಧೀರ, ಸಂಜೀವಿನಿ ಪರ್ವತ ತಂದು ಪ್ರಾಣ ಉಳುಹಿದೆ |

ಶ್ರೀರಾಮ-ಲಕ್ಷ್ಮಣರ ಹೆಗಲ ಮೇಲೆ ಪೊತ್ತೆ ||

ಧರೆಯಲಿ ದುರ್ಜನರಿಂದೆನ್ನ ಉಳಿಸಲಾರೆಯಾ |

ಗುರುವೆಂಬೆ ಎನ್ನ ಬಿಂಬಸ್ಥ ಹರಿಯ ತೋರೆಯಾ | || 2 ||

ಭೀಮನಾಗಿ ಸಕಲ ಅಸುರರ ಸದೆ ಬಡೆದೆ |

ಶ್ರೀಮಧ್ವನಾಗಿ ಅಂಜದೆ ದುರ್ಮತ ಖಂಡಿಸಿದೆ ||

ಸಮರಾರು ನಿನಗೆ, ಜೀವೋತ್ತಮನೇ ನೀನಹುದು |

ಸ್ವಾಮಿ ಶ್ರೀಕೃಷ್ಣವಿಟ್ಠಲನ ಆತ್ಮಾಲಿಂಗನ ಪಡೆದು ಧನ್ಯನಾದೆ | || 3 ||

32. ಪ್ರಾಣ, ಮುಖ್ಯಪ್ರಾಣ, ಹಂಸಮಂತ್ರ ಜಪಿತ || ಪ್ರಾಣ | || ||

ಜ್ಞಾನ, ಭಕ್ತಿ ಮೂರ್ತಿಮಂತ, ಸರ್ವಕಾರ್ಯಕಾರಕ | || ಅಪ ||

ಮಾರ್ಗ ಪ್ರದರ್ಶಕ ಶ್ರೀಹರಿಗೆ, ಜೀವ ದೇಹ ಪ್ರವೇಶದಿ |

ಮಂಗಳ ಸ್ವರೂಪನೇ ಅಂತರ್ಯಾಮಿಯಾದ ಆತ್ಮನಾಗಿರುವ ||

ಅಗಲದೆ ನಾಲ್ಕು ದೇಹದಿ, ಒಂದೊಂದು ರೂಪದಿ ಚೇಷ್ಟಾಪ್ರದ | (ಅನಿರುದ್ಧಾದಿ)

ಆಗಲೇ ಧರ್ಮನೆನಿಸಿ, ಚೇತನಾಚೇತನಾತ್ಮಕ ಜಗತ್ ಧರಿಪನು | || 1 ||

ಭಕ್ತ್ಯಾದಿ ಸಕಲ ಸದ್ಗುಣಗಳಿಗೂ ಇವನೇ ಪ್ರೇರಕ |

ಮೌಕ್ತಿಕ ಆನಂದಾನುಭವಕೂ ಇವನೇ ಕಾರಣ ||

ಮುಕ್ತಿಪ್ರದ ನವವಿಧ ಭಕ್ತಿಪ್ರದಾತನಿವ |

ಮೋಕ್ಷಪ್ರದ ವಿಷ್ಣು ಅಭಿನ್ನ ಶ್ರೀಕೃಷ್ಣವಿಟ್ಠಲನ ಅನುಜ್ಞೆಯಿಂದ | || 2 ||

33. ಆವನು ದೇಹದಲ್ಲಿರೆ ಇರುವ | ಆವನು ಹೊರಹೊಟರೆ ಹೊರಡುವ |

ಆವನು ಸದಾ ಹಂಸಮಂತ್ರ ಜಪಿತ | ಅವನನ್ನೇ ಸೃಷ್ಟಿಸಿದ ಶ್ರೀಕೃಷ್ಣವಿಟ್ಠಲ ||

34. ಧಾರಣಾಪ್ರದ ಧರ್ಮನಾಮಕ ವಾಯು |

ಸರ್ವಜೀವಿಗಳಿಗೆ ಚೇಷ್ಟಾಪ್ರದ ||

ಇರನು ಪ್ರಾಣ ಕ್ಷಣಮಾತ್ರ ಹರಿಇಲ್ಲದಿರೆ |

ಪರಿಸರ ಪದ್ಧತಿ ಎನಿಸಿದ ನಮ್ಮ ಶ್ರೀಕೃಷ್ಣವಿಟ್ಠಲ ||

(ದೇಹದೊಳಗೆ ಪ್ರವೇಶಿಸುವಾಗ ಶ್ರೀಹರಿ ಮುಂದೆ ಹೋಗುವ ಮುಖ್ಯಪ್ರಾಣ. ಅದಕ್ಕೆ ಪರಿಸರ ಪದ್ಧತಿ ಎನ್ನುವರು)

35. ಮಾರುತನ ಮೂರುತಿ ಅತಿ ಪರಾಕ್ರಮಿಯಯ್ಯಾ |

ಸಮುದ್ರವ ಲಂಘಿಸಿ ಲಂಕೆಯ ದಹಿಸಿದ ||

ಚಿಂತಾಮಣಿಯಿತ್ತು ಸೀತೆಯ ದುಃಖ ಕಳೆದನಯ್ಯಾ |

ಸೌಮಿತ್ರೆಯ ಪ್ರಾಣದಾತಾರ ಅಕ್ಷಯ ಪ್ರಾಣಹಂತಾರ ||

ಶ್ರೀರಾಮದೂತನಿವ ಸ್ವಾತ್ಮಪ್ರದಾನಿತನಯ್ಯಾ |

ವಾಯುಜೀವೋತ್ತಮ ಶ್ರೀಕೃಷ್ಣವಿಟ್ಠಲನ ನಿಜಭಕುತ ||

36. ಶ್ರೀಹರಿ ಪ್ರಿಯ ಪರಮ ಮುಖ್ಯಪ್ರಾಣ |

ದೇಹದೊಳ ಹೊರಗೆ ನೆಲಸಿಹ ಪವಮಾನ ||

ವಾಯುನಿಂದಲೇ ಸಿಗುವುದು ಹರಿಕರುಣೆ |

ಸೀತಾಮಾತೆಗೆ ಅಂಗುಲೀಯನಿತ್ತವ ||

ಲಂಕೆಯನ್ನೇ ಸುಟ್ಟ ಧೀರ ಬಲವಂತ |

ಸೇತುವೆಯ ಕಟ್ಟಿ ರಾವಣನ ನಡುಗಿಸಿದ ||

ಮೆಚ್ಚಿ ಬ್ರಹ್ಮ ಪದವಿ ದಯಪಾಲಿಸಲು |

ನಿಜ ಭಕುತಿಯನೆ ಬೇಡಿದ ರಾಮದೂತ ||

ಅವನೇ ವೇದ ಶಾಸ್ತ್ರಸಾರವ ಧರಿಸಿದ |

ನಿಜ ಗುರು ಶ್ರೇಷ್ಠ ತ್ರೇತೆಯ ಹನುಮಂತ | || 1 ||

ಧರ್ಮಶಾಸ್ತ್ರ ಮಾರುತನೆ ದ್ವಾಪರದಲಿ |

ಧರ್ಮಜನ ಅನುಜನಾಗಿ ಪಾಂಡವನೆನಿಸಿದ ||

ಅವನೇ ರಕ್ಕಸರನು ತರಿದಟ್ಟಿದ ಬಲಭೀಮ |

ಉರಿವ ಅರಗಿನ ಮನೆಯಿಂದೆಲ್ಲರ ಪಾರುಗಾಣಿಸಿದ ವೃಕೋದರ ||

ದ್ರೌಪದಿಯ ಕರ ಪಿಡಿದು ಮನವನರಿತು |

ಕಿರ್ಮಿರಾದಿಗಳ ಮೆಟ್ಟಿ ಸೌಗಂಧಿಕವ ತಂದ ||

ಕೌರವ ಕುಲ ನಿರ್ನಾಮ ಮಾಡಿದ ಹರಿಯ ಕೃಪೆಯಲಿ | || 2 ||

ಕುಜನರು ಕಲಿಯುಗದೊಳು ಕುಮತ ಪಸರಿಸಲು |

ಸುಜ್ಞಾನಿಯು ತಾ ಮಧ್ವನಾಗಿ ಅವತರಿಸಿ ||

ಸರ್ವವ್ಯಾಪಿ, ಸರ್ವೋತ್ತಮನೇ ವಿಶ್ವಸತ್ಯ |

ಭುವಿಯಲಿ ಸರ್ವ ಸುಜನರಿಗೆ ಬೋಧಿಸಿ ||

ಬದರಿಕಾಶ್ರಮಕೆ ಪುನರಪಿ ತೆರಳಿ |

ವ್ಯಾಸಮುನಿ ಪದಕೆರಗಿ ಸಕಲ ವೇದಾರ್ಥಗಳ ||

ಬ್ರಹ್ಮಪಿತನಿಂ ತಿಳಿದು ಜಗತ್ತಿಗೇ ಸಾರಿದ |

ಪೂರ್ಣಪ್ರಜ್ಞರಿಗೆ ಬಾರಿಬಾರಿಗೆ ವಂದಿಪೆನು | || 3 ||

ಹನುಮ, ಭೀಮ, ಮಧ್ವಾವತಾರಾಂತ್ಮಕ |

ಶ್ರೀಕೃಷ್ಣವಿಟ್ಠಲ ಸಕಲರಿಗೂ ಮುಕ್ತಿಪಾಲಿಪ ||

ತ್ರೈಅವತಾರಿ ಶ್ರೀರಾಮದೂತಗೆ ಜಯಾಜಯಾ | || 4 ||

37. ಹನುಮಂತ ಧೀಮಂತ, ಇವನ ಸಾಮಥ್ರ್ಯ ಪೇಳಲೇನಿದೆ | || ||

ಎಷ್ಟು ಪೇಳಿದರೂ ಸಾಲದು | || ಅಪ ||

ಇವ ಹೇಳಿದಂತೆ ಕೇಳ್ವರು ಸುರರೆಲ್ಲ |

ಇವನಿದ್ದರವರೆಲ್ಲರ ಸಕಲ ಕ್ರಿಯೆಗಳೆಲ್ಲ ||

ಇವನಿದ್ದರೆ ಜೀವಿಗಳ ಜೀವನ |

ಇವನೆದ್ದರೆ ಎಲ್ಲ ಅಮಂಗಳವೇ | || 1 ||

ಸೇವೆಯ ಪರಾಕಾಷ್ಠೆಯಲಿ ಆನಂದ ಪಡೆವ |

ತ್ರೈವತಾರವೆತ್ತಿ ಪರಮಾತ್ಮನ ಸೇವೆ ಮಾಡಿದವ ||

ಅವಿರತ ಶ್ರೀರಾಮ ನಾಮ ಜಪಿಸುವ |

ಸರ್ವ ಶ್ರೇಷ್ಠ ಸ್ವಾತ್ಮಾಲಿಂಗನ ಪಡೆದವ | || 2 ||

ಜೀವನ ಬಾಧೆ ತಪ್ಪಿಸುವ |

ಭವದ ಕಡಲು ಪಾರುಗೈವ ||

ಈವ ಜ್ಞಾನ ಭಕುತಿ ವೈರಾಗ್ಯ |

ಒಯ್ವ ಶ್ರೀಕೃಷ್ಣವಿಟ್ಠಲನ ಸನ್ನಿಧಿಗೆ || || 3 ||

38. ಸಂಜೀವಿನಿ ತಂದು ಪ್ರಾಣ ಉಳುಹಿದ |

ಒಜ್ಜೆಯಾದವನ ನುಜ್ಜುಗುಜ್ಜಾಗಿಸಿದ ||

ಜಜ್ಜಿಹಾಕಿ ಕೀಚಕನ ಸತಿಯನುಳುಹಿದ |

ದುರ್ಜನರ ಒರೆಸಿ ಸೌಗಂಧಿಕವ ತಂದ ||

ಅಜ್ಞಾನ ಕಳೆವ ತತ್ವಜ್ಞಾನ ನೀಡಿದ |

ಸಜ್ಜನರಿಗೆ ದಾರಿದೀಪವಾದ ಜೀವೋತ್ತಮ ||

ಪೂಜಿಸಿ ಶ್ರೀಕೃಷ್ಣವಿಟ್ಠಲನ ಅನುಗ್ರಹ ಬಲದಿ ||

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು