ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಶ್ರೀ ಕೃಷ್ಣವಿಠ್ಠಲಪದಗುಚ್ಛ 3.6

ಕೋರೆಗಾಡಿ ಹಿಂಸ್ರಪಶು, ಸರಿಸೃಪ, ಭೂತಪ್ರೇತ ಭಯನಿವಾರಿಸಲಿ ||23|||

ಸರ್ವಕ್ಕೂ ದಿವ್ಯೌಷಧವಾದ ಭಗವನ್ನಾಮರೂಪ ಅಸ್ತ್ರವೆಂಬ ಮಂತ್ರ |

ಕೀರ್ತಿಶ್ರೇಯಸ್ಸಿಗೆ ವಿಘ್ನತರುವ ಭಯವನ್ನು ನೀಗಿಸಲಿ ||24||

ಗರುಡರೂಢಿಯ ಸ್ತುತಿಸುವ ಬೃಹತ್ ರಥಂತರ ಸಾಮವೇದ |

ಗರುಡ ವಿಷ್ವಕ್ಸೇನ ಪ್ರಭುನಾಮವು ಉಳಿದೆಲ್ಲ ರೀತಿಯಲಿ ರಕ್ಷಿಸಲಿ ||25||

ಹರಿಯ ನಾಮ ರೂಪ, ನಾನಾ ಆಯುಧ, ಶ್ರೇಷ್ಠ ಪಾರ್ಷದರೆಲ್ಲ |

ಇಂದ್ರಿಯ, ಬುದ್ಧಿ, ಮನ-ಪ್ರಾಣಸಹಿತ ಕಾಪಾಡಲಿ ||26||

ಕಾರ್ಯ, ಕಾರಣರೂಪದ ಈ ಜಗತ್ತು ಭಗವಂತನೇ ಆಗಿರುವನೆಂದು |

ಅರಿತರೆ ಸತ್ಯ ಆಗುವುದು ಉಪದ್ರವಗಳ ನಾಶ ||27||

ಸ್ವರೂಪದಿ ವಿಕಲ್ಪರಹಿತ ಭಗವಂತ ಮಾಯಾ ಸ್ವ-ಶಕ್ತಿಯಲಿ |

ಧರಿಸಿರುವ ಸತ್ಯದಿ ಆಯುಧ, ರೂಪ, ನಾಮವ ||28||

ಸರ್ವಜ್ಞ ಭಗವಾನ್ ಹರಿಯೊಬ್ಬನೇ ಸರ್ವಸತ್ಯ |

ಸರ್ವದಾ ಸ್ವರೂಪದಿಂದ ಸರ್ವತ್ರ ರಕ್ಷಿಸಲಿ ||29||

ಯಾರ ಅಟ್ಟ

336 ಕಾಲವೇ ಕಾರಣ ಜಯಾ-ಪರಾಜಯಕೆ |

ಕಾಲವೇ ಕಾರಣ ಮನೋಬಲ-ಇಂದ್ರಿಯ ಬಲಕೆ ||

ಕಾಲವೇ ಕಾರಣ ದೇಹಬಲ-ಪ್ರಾಣಗಳಿಗೆ |

ಕಾಲವೇ ಕಾರಣ ಜೀವನ-ಮೃತ್ಯುವಿಗೆ ||

ಕಾಲ ಅನುಕೂಲವಿದ್ದರೆ ಬಯಸದೇ ಬರುವುದು ಭಾಗ್ಯ |

ಕಾಲ ಅನುಕೂಲವಿದ್ದರೆ ಬಯಸದೇ ಬರುವುದು ಸಂಪತ್ತು, ಕೀರ್ತಿ ||

ಕಾಲ ವಿರುದ್ಧವಿದ್ದರೆ ದು:ಖ-ಅಪಕೀರ್ತಿ ಸಿದ್ಧ |

ಕಾಲಾತೀತ, ಕಾಲ ನಿಯಾಮಕ ಕಾಲನ ಇಚ್ಛೆ ||

ಕಾಲಕಾಲಕೆ ಶ್ರೀಕೃಷ್ಣವಿಠ್ಠಲ ಉಣಿಸುವ ಸಕಲಭೋಗ ||

337. ಸರ್ವದೋಷವಳಿಸಿ | ಸರ್ವಪಾಪ ಕಳೆದು ||

ಸರ್ವಪುಣ್ಯ ಉಳಿಸಿ | ಸರ್ವದಾ ಸರ್ವೇಶ ಶ್ರೀಕೃಷ್ಣವಿಠ್ಠಲ ಶುಭ ತೋರೋ ||

338. ಕೇಶವಾದಿ ನಾಮಗಳು

ಸಂಶಯ ಕಳೆದು ನಿರ್ಮಲ ನಿಶ್ಚಲ ಭಕುತಿ ಕೊಡು |

ವಿಷಯ ಸುಖ ದೂರಮಾಡು ಕೌಸ್ತುಭಧಾರಿ ಶ್ರೀಕೇಶವ ||1||

ನಿರ್ಮಾಲ್ಯ ಶಿರದಿ ಧರಿಸಿ ನೈವೇದ್ಯ ಭುಂಜಿಸುವಂತೆ |

ಮಾನವಜನ್ಮ ಸಾರ್ಥಕವಾಗಿಸೋ ಪಾಲಶಾಯಿ ಶ್ರೀನಾರಾಯಣ ||2||

ಅಧಮರೊಡನೆ ಕೂಡದಂತೆ, ಧನದಾಹಿಯಾಗದಂತೆ |

ಸುಧರ್ಮದಿ ಜೀವಿಸುಂತಾಗಲೀ ಅಣುಮಹದ್ಗತ ಶ್ರೀಮಾಧವ ||3||

ಬುಧರೊಡನೆ ಬೆರೆತು ಸಮಯ ವ್ಯರ್ಥವಾಗಿಸದೆ |

ಒಂದೇ ಮನದಿ ಭಜಿಸುವಂತಾಗಲಿ ಪದ್ಮಾಪತಿ ಶ್ರೀಗೋವಿಂದ ||4||

ಉಷ್ಣ, ಶೀತಬಾಧೆಸಹಿತ ವೈಷ್ಣವ ಸಂಗದಿಂದ್ದು |

ಇಷ್ಟಪಡುವ ಸತ್ಸಂಗ ದೊರಕಿಸು ಸತ್ಯಸಂಕಲ್ಪ ಶ್ರೀವಿಷ್ಣು ||5||

ಬಂಧುಬಾಂಧವರಿಂದ ದೂರವಿರಿಸಿ ಏಕಾಂತದಿ |

ಸುಂದರಮೂರುತಿ ಮನದಿ ನಿಲ್ಲಿಸೋ ಸಮದರ್ಶಿ ಶ್ರೀಮಧುಸೂದನ ||6||

ತ್ರಿವಿಧ ತಾಪ ಕಳೆದು ತ್ರಿಕಾಲದಿ ಸ್ಮರಣೆಯಿತ್ತು |

ತ್ರಿಗುಣಾತೀತ ಸದಾ ಸಲಹೋ ತ್ರೀಧಾಮಗ ಶ್ರೀತ್ರಿವಿಕ್ರಮ || 7||

ಮನದ ಅಹಂಕಾರವಳಿದು ಕೊನೆ ಉಸಿರಿನತನಕ |

ಮಾನಸದೀ ಪೂಜಿಸುವಂತಾಗಲಿ ವಿಧಾತಾ ಶ್ರೀವಾಮನ ||8||

ಧರಣಿಯಂತೆ ಸಹನೆ ಇತ್ತು ಕರುಣೆಯ ಕಂದನೆಂದು |

ತಾರಿಸು ಭವದ ಕಡಲ ಶ್ರೀವತ್ಸಾಂಕ ಶ್ರೀಧರ ||9||

ಆಶಾಪಾಶ ಕಡಿದು ಭವಪಾಶ ನೀಗಿಸಿ ಪಾಪದ |

ಶೇಷ ಉಳಿಯದಂತೆ ತೊಳೆ ವೇದವೇದ್ಯ ಶ್ರೀಹೃಷಿಕೇಶನೇ ||10||

ಹೃದಯ ಕಮಲದಿ ಶಾಶ್ವತದಿ ಚಿದ್ರೂಪ ನಿಲಿಸಿ |

ಬುದ್ಧಿ ಶುದ್ಧವಾಗಿಸೋ ಶುದ್ಧಾತ್ಮ ಸರ್ವವ್ಯಾಪ್ತ ಶ್ರೀಪದ್ಮನಾಭ ||11||

ಅಮೋದ-ಪ್ರಮೋದದ ಆಸೆ ನೀಗಿಸಿ ಚೆಂದದಿ |

ಸನ್ಮೋದದಿ ಸುಮತಿ ಪಾಲಿಸು ನಿರ್ದೋಷ ಶ್ರೀದಾಮೋದರ ||12||

ಆಕರ್ಷಣೆಯಲಿ ಮುಳುಗಿಸದೆ ಮೇಲೆತ್ತಿ ಎನ್ನ |

ಸಂಕಲ್ಪ-ವಿಕಲ್ಪ ತೊರೆ ಬಿಡಿಸು ಶೇಷಶಾಯಿ ಶ್ರೀಸಂಕರ್ಷಣ ||13||

ಆಸೆಯಿಂದ ಸ್ಮರಸುವೆ ಜೀವನ ಹಾಸುಹೊಕ್ಕಾಗಲಿ ನಾಮ |

ಅಶನ-ವಸನ ಚಿಂತೆ ಬಿಡಿಸು ಪ್ರಾಣಪತಿ ಶ್ರೀವಾಸುದೇವ ||14||

ಗದ್ಯದಲಿ ಪದ್ಯದಲಿ ಪ್ರತಿಪದದಿ ನಾಮನುಡಿಸಿ |

ಪಾದಪದ್ಮದಲ್ಲಿರಿಸು ಅನುಗಾಲ ಗುಣಪೂರ್ಣಶ್ರೀಪ್ರದ್ಯುಮ್ನ ||15||

ನುಸರಿಸಿ ಭಕ್ತಿಪಥ ಅನುದಿನ ಆಚರಿಸು ಬಿಡದೆ |

ಸಾನುರಾಗದಿ ಗುಣ ಪಾಡುವಂತೆ ಮಾಡು ಅನಿಂದ್ಯ ಶ್ರೀಅನಿರುದ್ಧ ||16||

ಹರುಷದಿ ಪ್ರತಿಕ್ಷಣ ತನುಮನ ಓಲ್ಯಾಡಿ |

ವರ್ಷಿಸಿ ಸಂಕೀರ್ತನ ದರ್ಶನವೀಯೋಹೃದ್ಗತ ಶ್ರೀಪುರುಷೋತ್ತಮ ||17||

ಅಧೋಗತಿಗಿಳಿಯದಂತೆ, ಊರ್ಧ್ವಗತಿ ಪೊಂದುವಂತೆ |

ಬಂಧುವಾಗಿ ಚಿರಕಾಲದಿ ನಿಲ್ಲು ಅದ್ಭುತ ಶ್ರೀಅಧೋಕ್ಷಜ ||18||

ಹೆರವರಿಗೆ ಕೈ ಚಾಚದಂತೆ, ಸೆರೆವಾಸ ಬಿಡಿಸಿ |

ನರಕ ದರುಶನವಾಗದಂತೆ ನೆರವಾಗೋ ಸುರಾಸುರವಂದ್ಯ ಶ್ರೀ ನರಸಿಂಹ ||19||

ಮುಚ್ಚಿದ ಕಣ್ತೆರೆದೊಮ್ಮೆ ಮೆಚ್ಚಿ ಅನುಗ್ರಹಿಸೆನ್ನ |

ಸಚ್ಚಿದಾನಂದಾತ್ಮ ಎನ್ನಲಿ ನಿಲಸೋ ಅಚಿಂತ್ಯ ಶ್ರೀ ಅಚ್ಯುತ ||20||

ಜನನ-ಮರಣ ಚಕ್ರ ತರಿದು ಸುಸ್ಥಿತಿಕೊಡು |

ಜನ್ಮರಹಿತ, ಎನ್ನ ಜನಕ ಜಗದೀಶ ಶ್ರೀಜನಾರ್ಧನ ||21||

ಸೊಂಪಾದ ಸುವಿದ್ಯೆಯಿತ್ತು ಇಹ-ಪರದಿ ನಿತ್ಯದಿ |

ಆಪತ್ತು ಕಳೆ ಇಂದ್ರಿಯಪ್ರೇರಕ ಉದ್ಗೀಥ ಶ್ರೀಉಪೇಂದ್ರ ||22||

ಹರಿಗೊಲಿಲ್ಲದ ನಾವೆಯಂತೆ ಸದಾ ಚಲಿಸುತಿರುವೆ |

ಗುರಿ ತಲುಪುವಂತೆ ಮಾಡೋ ಆಪದ್ಬಾಂಧವ ಶ್ರೀಹರಿ ||23||

ಕಷ್ಟದಿಂದ ನಿನ್ನಲಿ ಭಕ್ತಿಮಾಡಲು ಅರಿತಿರುವೆ |

ಇಷ್ಟದಿಂದ ಬೇಗ ಸಲಹೆನ್ನ ಕೃಪಾಂಬುಧಿ ಶ್ರೀಕೃಷ್ಣ ||24||

ಇಪ್ಪತ್ನಾಲ್ಕು ಕೇಶವಾದಿ ನಾಮಗಳ ನಿತ್ಯ ನೆನಯೆ |

ಆಪ್ತ ಪರಮಪ್ರಿಯ ಶ್ರೀಕೃಷ್ಣವಿಠ್ಠಲ ಬಿಡದೆ ಕಾಯ್ವನು ||25||

ದೇವನ ಅನಂತ ನಾಮಗಳಲಿ ಮನವಿಟ್ಟು |

ದಿವ್ಯ ಇಪ್ಪತ್ನಾಲ್ಕು ನಾಮ ಜಪಿಸಲು ಕರೆದು ಮುಕ್ತಿಕೊಡುವ ||26||

339. ಪುಣ್ಯಪಾಪದ ಲೆಕ್ಕ ಎನಗಂತು ಗೊತ್ತಿಲ್ಲ |

ಎಣಿಕೆಗೆ ಬಾರದು, ಅಂಕೆಗೆ ಸಿಗದು ||

ಸಣ್ಣಗೆ ಪಾಪಗಳು ಗೊತ್ತಿಲ್ಲದೆ ಸೇರಿದ್ದೆಷ್ಟೋ |

ನುಣ್ಣಗೆ ಪುಣ್ಯಗಳು ನವಿರಾಗಿ ಕಳೆದಿದ್ದಿಷ್ಟೋ ||

ಕಣ ಕಣವಾಗಿ ಕೂಡಿಸಿದ್ದು ಕರಗಿದ್ದ್ಯಾವಾಗೋ |

ಅಣುವಾಗಿ ಕಂಡಿದ್ದು ಗುಣಾಕಾರದಿ ಬೃಹತ್ ಆಗಿದೆ ||

ಬಣವಿಯಂತೆ ಒಟ್ಟಿದ್ದು ಆಯಸ್ಸಿನಿಂದ ಭಾಗಿಸಿದರೂ |

ದಣಿಸಿದ ಲೆಕ್ಕ ಮುಗಿಯಲೇ ಇಲ್ಲ ||

ಕಣ್ಣಿಗೆ ಕಾಣದಂತೆ ಶೇಷರೂಪದಿ ಉಳಿದಿದ್ದು |

ಚಣ ಚಣಕೆ ಬಡ್ಡಿಸೇರಿ ಚಕ್ರಾಕಾರವಾಗಿದ್ದು ||

ಗಾಣಿಗರ ಎತ್ತಿನಂತೆ ತಿರುಗುತ್ತಲೇ ಇರುವೆ |

ಗುಣಪೂರ್ಣ ಶ್ರೀಕೃಷ್ಣವಿಠ್ಠಲಗೇ ಗೊತ್ತು ಇರದ ಅಂತ ||

340. ಅಸ್ವತಂತ್ರ, ಅಸ್ವತಂತ್ರದ ಪರಮಾವಧಿ ||ಪ||

ಅಸ್ವತಂತ್ರದಿ ಸ್ವತಂತ್ರದ ಈ ಜೀವ ಪರತಂತ್ರ ||ಅಪ||

ಕಣ್ಣುರೆಪ್ಪೆ ಬಿಡದೆ ಬಡೆವಲ್ಲಿ | ಸಣ್ಣಗೆ ನಿಯಮಿತ ಉಸಿರಾಟದಲ್ಲಿ ||

ಕರ್ಣಗಳ ಕೇಳುವಿಕೆಯಲಿ | ವರ್ಣಗಳ ಸ್ಪಷ್ಟ ಉಚ್ಚಾರದಲಿ ||1||

ಆಹಾರದ ಸೂಕ್ಷ್ಮತೆ ವಿಭಾಗದಲಿ | ದೇಹದ ಸರ್ವಕ್ರಿಯೆಯಲ್ಲಿ |

ವಿದ್ಯೆ ಸಂಪತ್ತು ಪಡೆವಲ್ಲಿ | ಬದುಕಿನಲಿ ಮುಂದೇನು ಎಂಬಲ್ಲಿ ||2||

ನಿದ್ರೆ-ಎಚ್ಚರಿಕೆಯಲಿ | ಗುದ್ದಾಡುವ ಭದ್ರಜೀವನದಿ ||

ಹಸಿವು-ನೀರಡಿಕೆಯಲಿ | ಬಸಿರಾಗಿ ಹಡೆಯುವಲ್ಲಿ ||3||

ಹೂಸು-ತೇಗುವಲ್ಲಿ | ಹಸನಾದ ಬಾಳು ಪಡೆವಲ್ಲಿ |

ವಿಹಾರ-ವಿನೋದ ಪಡೆವಲ್ಲಿ | ಸಹಾಯ-ದಾನ ಕೊಡುವಲ್ಲಿ ||4||

ಕನಸು ಬೀಳುವ ಪ್ರಕ್ರಿಯೆಯಲಿ | ಮನದಿ ಬರುವ ವಿಚಾರದಲಿ ||

ಜನನ-ಮರಣದ ವಿಷಯದಿ | ಪ್ರಾಣದ ಸ್ಥಿರತೆಯಲಿ ||5||

ಕಾಲವನ್ನು ತಡೆವಲ್ಲಿ | ಬಾಲ್ಯ-ಯೌವ್ವನಾದಿ ಕಳೆವಲ್ಲಿ ||

ಕಳೆದಿದ್ದು ಸಿಗುವುದರಲಿ | ಬಲ್ಲಿದ್ದೂ ಆಶೆ ಮಾಡುವಲ್ಲಿ ||6||

ಸ್ವತಂ,ತ್ರ ಬುದ್ಧಿಲಿ ಪೇಳುವೆ | ತಂತ್ರಸಾರೋಕ್ತ ಪುರುಷೋತ್ತಮ |

ಮತ್ತ್ಯಾರೂ ಅನ್ಯರಿಲ್ಲ | ಕರ್ತೃ ಶ್ರೀಕೃಷ್ಣವಿಠ್ಠಲನೊಬ್ಬನೇ ಸರ್ವಸ್ವತಂತ್ರ ||7|||

341. ಭೂಷಣಕೆ ಭೂಷಣ |

ಗಾನ ಶ್ರವಣಕೆ ಭೂಷಣ ||

ಸ್ನಾನ ದೇಹಕೆ ಭೂಷಣ |

ಧ್ಯಾನ ಮನಕೆ ಭೂಷಣ ||

ಜ್ಞಾನ ಬುದ್ಧಿಗೆ ಭೂಷಣ |

ಮೌನ ಮಾತಿಗೆ ಭೂಷಣ ||

ದಾನ ಜೀವನಕೆ ಭೂಷಣ |

ಮಾನ ಮಾನವಗೆ ಭೂಷಣ ||

ಮಾನ್ಯ ಶ್ರೀಕೃಷ್ಣವಿಠ್ಠಲ ಸಕಲಕೂ ಭೂಷಣ ||

342. ಜಗದೀ ಯಾರಿಗೆ ತನ್ನವರಿಲ್ಲವೋ |

ಭಗವಂತನೆ ಸ್ವಯಂ ಅವರಿಗಿರುವ ||ಪ||

ಜಗನ್ನಾಥ, ಅನಾಥೋ ದೀನ ರಕ್ಷಕ ||ಅಪ||

ಗರ್ಭದಿ ಯಾರು ಸಂರಕ್ಷಿಸುವರೋ |

ಹೊರಬರಲು ಯಾರು ಉಸಿರು ಹಾಕುವರೋ ||

ಪ್ರೇರಕನಾಗಿ ನಿಂದು ಸರ್ವಚೇಷ್ಟೇ ಮಾಳ್ಪನೋ |

ಪರಮಾತ್ಮನವನೇ ಸರ್ವತ್ರ ಕಾಯ್ವ ||1||

ಭುವಿಗೆ ಬರುವ ಮೊದಲು ಎಲ್ಲಿದ್ದ |

ಸಾವಿನ ನಂತರ ಎಲ್ಲಿಗೆ ಹೋಗುವ ||

ಅವಿರತ ಬಿಡದೆ ಜೊತೆಯಲ್ಲಿರುವ |

ಅವಿನಾಶಿ ಯಾರು ಕೈಬಿಟ್ಟರೂ ತಾ ಕೈಬಿಡ ||2||

ಪ್ರತಿ ಕ್ಷಣದಿ ಸರ್ವ ಪ್ರಚೋದಕನಾಗಿ |

ಪ್ರತಿಕಾರ್ಯ, ಕಾರಣ, ಕರ್ತನಾಗಿ ||

ಪ್ರತಿ ಫಲಾಕ್ಷೆ ಇಲ್ಲದ ನಿರ್ವಿಕಾರಿ |

ಪೂತಾತ್ಮ ಪರಾತ್ಪರ ಶ್ರೀಕೃಷ್ಣವಿಠ್ಠಲ ಸರ್ವಬಂಧು ||3||

343. ವಿಜಯವಿಠ್ಠಲ ಪ್ರಿಯದಾಸ |

ವಿಜಯ ಗುರುರಾಯ ಶಿಷ್ಯವತ್ಸಲ ||ಪ||

ಸುಜೀವಿ ಉದ್ಧಾರಕ ಹರಿದಾಸಶ್ರೇಷ್ಠ ||ಅಪ||

ಉದರಶೂಲೆ ಎಂದರೆ ಬರುವಂತೆ ಮಾಡಿ |

ಅಧ್ಯಾತ್ಮವಿದ್ಯೆ ಜೊತೆ ಆಯಸ್ಸು ಕೊಡಿಸಿದೆ ||

ಸಾಧನೆ ಮಾರ್ಗದಿ ನಿಲಿಸಿ ಪರಮೋಪಕಾರ ಗೈದೆ |

ಬದುಕು ಸಾರ್ಥಕತೆ ಉಪಾಯ ಸೂಚಿಸಿದ ||1||

ಅಪೂಪ ಸೀಕರಣೆಯಲಿ ಮುಳುಗಿ ಗತಿಸಿದ |

ಅಪರೂಪದ ಬಾಲಕಗೆ ಜೀವ ದಾನಿಸಿದೆ ||

ವಿಪರೀತ ಅನಾರೋಗ್ಯದ ಕೂಸಿಗೆ ಆರೋಗ್ಯವಿತ್ತು |

ತಾಪ ಕಳೆದು “ಚಿರಂಜೀವಿಯಾಗೆಲೋ ಚಿಣ್ಣ” ಎಂದು ಹರಸಿದ ||2||

ನೂರಾರು ಪದದಿ ಜ್ಞಾನಬೋಧಿಸಿದವಗೆ |

ಗುರುವೆಂದು ತಿಳಿದು ಶರಣಾಗಿ ಬಂದಿರುವೆ ||

ಕರಪಿಡಿದು ಮುಕ್ತಿಪಥದಿ ಮುನ್ನಡೆಸಿ |

ಶ್ರೀಕೃಷ್ಣವಿಠ್ಠಲನ ತೋರೋ ನಿಜಭಕುತ ||3||

344. ಎಲ್ಲಿ ಅಡಿಗುರುವೆ ಕೃಷ್ಣಯ್ಯಾ ಹುಡುಕಲೆಲ್ಲಿ ? |

ಬಲ್ಲೆ ನೀನಿರುವೆ ಎಂದು ಕಾಣಿಸಲೊಲ್ಲೇಕೆ ||ಪ||

ಎಲ್ಲ ಕಡೆ ಇದ್ದರೂ ಹುಡುಕಿದರೇಕೆ ಕಾಣಿಸಲೊಲ್ಲೆ ||ಅಪ||

ಒಳ-ಹೊರಗೆ ಇರುವಿ ಎಂದು ಪ್ರಖ್ಯಾತಿ |

ಒಳಗೂ ಕಾಣಿಸಲೊಲ್ಲಿ ಹೊರಗೂ ಕಾಣಿಸಲೊಲ್ಲಿ ||

ಗೋಳಾಕಾರದ ಧ್ಯಾನಕ್ಕೂ ಕಾಣಿಸಲೊಲ್ಲಿ |

ಗೆಳೆಯ, ಎಡೆಬಿಡದೆ ಜೊತೆಗಿರುವಿಯಂತೆ ||1||

ಎನ್ನ ಅಪರಾಧವಾದರೂ ಏನೆಂದು ತಿಳಿಸು |

ಮನ್ನಿಸಿ ಕ್ಷಮಿಸು ಸುಹೃತ ನೀನಲ್ಲವೆ ? ||

ಮುನಿಸಿದ್ದರೆ ಒದ್ದು, ತಿದ್ದಿ, ಬುದ್ಧಿ ಕಲಿಸು |

ಮನೋಹರಮೂರ್ತಿ ಒಮ್ಮೆಯಾದರೂ ಕಾಣಿಸು ||2||

ಎಂದೂ ಕಾಣಿಸದವನು ಇರುವನ್ಹಾಂಗೆನ್ನಲಿ |

ಬಂಧು-ಬಳಗ ನೀನೇ ಎಲ್ಲ ಕೈ ಬಿಡುವಿ ಹೆಂಗೆ ||

ಒಂದೂ ಸಲವಾದರೂ ಕಾಣಿಸದವನ ನಂಬುವುದ್ಹೆಂಗೆ |

ಎಂದಿಗೂ ಕಣ್ಣಿಗೆ ರೆಪ್ಪೆ ಕಾಣದಂತೆ ನೀನಿರುವುದ್ಯಾಕೆ ||3||

ವಚನಕೂ ನಿಲುಕದವ, ಮನದಿ ನಿಲ್ಲದವ |

ಉಚ್ಚಸ್ವರದಿ ಕೂಗಿದರೂ ‘ಓ ’ಗೊಡದವ ||

ಹೆಚ್ಚು ಓದಿದರೂ ಅನುಭವಕೆ ಬಾರದವ |

ಹುಚ್ಚು ಹಿಡಿಸುವೆಯಲ್ಲ ಶ್ರೀಕೃಷ್ಣವಿಠ್ಠಲ ಅನುಗ್ರಹಿಸೊ ||4||

345. ವಜ್ರದಿಂದ ಕಿರಣ ಬೇರಾಗದಂತೆ |

ಸೂರ್ಯನಿಂದ ಬೆಳಕು ಬೇರಾಗದಂತೆ ||

ಕ್ಷೀರದಿಂದ ಬಿಳುಪು ಬೇರಾಗದಂತೆ |

ಶ್ರೀಕೃಷ್ಣವಿಠ್ಠಲ ನಿನ್ನ ಚರಣದಲ್ಲೆನ್ನ ಭಕ್ತಿ ಇರಿಸೋ ||

346. ಶರೀರದಿಂದ ಛಾಯೆ ಭಿನ್ನ ತೆರದಿ |

ಪರಮಾತ್ಮನಿಂದ ಆತ್ಮಭಿನ್ನ ತೆರದಿ ||

ಸರ್ಪದಂತೆ ತೋರುವ ರಜ್ಜು ಭಿನ್ನ ತೆರದಿ |

ಶ್ರೀಕೃಷ್ಣವಿಠ್ಠಲ ದುರ್ವಿಷಯಗಳಿಂದ ಭಿನ್ನವಾಗಿಸೆನ್ನ ||

347. ಜಗದೊಡೆಯ ದ್ವಾರ ಪಾಲಕನಂತೆ | (ವಾಮನ)

ಜಗನ್ನಿವಾಸ ಕಂಬದಿಂದ ಬಂದಂತೆ || (ನರಸಿಂಹ)

ಜಗದೀಶ ಕಾಡು-ಮೇಡು ಅಲೆದಂತೆ | (ಶ್ರೀರಾಮ)

ಖಗವಾಹನ ನರನ ಸಾರಥಿಯಂತೆ || (ಶ್ರೀಕೃಷ್ಣ)

ಭಗವಂತ ಭಕುತಿಗಾಗಿ ಇಟ್ಟಿಗೆ ಮೇಲೆ ನಿಂತಂತೆ | (ವಿಠ್ಠಲ)

ಬಗೆ ಬಗೆ ಲೀಲೆ ತೋರುವ ಶ್ರೀಕೃಷ್ಣವಿಠ್ಠಲ ಎನಗಾಗೇನಿದೆ ? ||

348. ಮೆಟ್ಟಿ ಕಷ್ಟವ ಕೊಟ್ಟು ದೊಡ್ಡವನಾಗು |

ಇಟ್ಟುಕೊಂಡು ದುಷ್ಟತನ ತೋರದಿರು ||

ಇಷ್ಟದಿಂದ ಕೊಡದಿದ್ದರೆ ಕಸಿದು ಕೊಡುವ |

ಗಟ್ಟಿಯಾಗಿ ಮನಮುಟ್ಟಿ ಭಜಿಸು ಶ್ರೀಕೃಷ್ಣವಿಠ್ಠಲನ ||

ಸ್ಪಷ್ಟವಾಗಿ ಇಹ-ಪರದಿ ಸುಖದಲ್ಲಿಡುವ ಸಂಶಯವಿಲ್ಲ ||

...

349. ಬರುವುದು ದೇಹ ತಾಯ್ತಂದೆಯರಿಂದ |

ಬರುವದು ವಿದ್ಯೆ ಗುರುಗಳಿಂದ ||

ಬರುವುದು ಧನ ಪೂರ್ವಜನ್ಮ ಪುಣ್ಯದಿ |

ಬರುವುದು ಆದಿ-ವ್ಯಾಧಿ ಪುರ್ವಜನ್ಮಕೃತ ಪಾಪದಿ ||

ಬರುವುದು ಘಟನೆಗಳು ಪೂರ್ವನಿರ್ಧಾರಿತದಿ |

ಬರುವುದು ಗುಣ ಬದಲಾಗದ ಸ್ವರೂಪದಿ ||

ಬರುವುದು ಭಾಗ್ಯ ಶ್ರೀಕೃಷ್ಣವಿಠ್ಠಲನಿಂದ |

ಪರತಂತ್ರ ಜೀವ ಯಾವುದರಲಿ ಸ್ವತಂತ್ರ ||

350. ವಿದ್ಯೆಯಾಗಲಿ, ಧನ-ಕನಕವಾಗಲಿ |

ಬಂದಿದ್ದು ಸದ್ಬುದ್ಧಿಯಲಿ ಹಂಚಲೆಂದು ||

ಬೇಡಿದವರಿಗೆ ಸ್ವಾರ್ಥಿಯಾಗದೆ ನೀಡಿದರೆ |

ಮುಂದಿನ ಜನುಮದಿ ಹೆಚ್ಚೆಚ್ಚು ಕೊಡುವ ||

ಒಡೆಯಾ ಶ್ರೀಕೃಷ್ಣವಿಠ್ಠಲ ತಾ ಒಲಿದು ಮೆಚ್ಚುವ ||

351. ಎಲ್ಲರೂ ಸುಖವಾಗಿರಲೆಂದು ಹೃತ್ಪೂರ್ವಕ ಬಯಸು |

ಎಲ್ಲರ ಸುಖದಲ್ಲಡಗಿದೆ ತನ್ನ ಸುಖ ಎಂದು ತಿಳಿ ||ಪ||

ಬೆಳಕಿನಿಂದಲೇ ವಜ್ರ ಹೊಳೆವುದು ಸರ್ವದಾ ||ಅಪ||

ಬೆಲ್ಲ-ಬೇವಿನಂತೆ ಈ ಸಂಸಾರವಿದೆ |

ಎಲ್ಲರೊಡನೆ ಹಂಚಿಕೊಂಡಿರುವುದೇ ಜೀವನ ||

ಎಲ್ಲರಿಂದ ಪಡೆದಾಗಲೇ ಬದುಕಲು ಸಾದ್ಯ |

ಬಲ್ಲವರೂ ಎಲ್ಲರಿಗೂ ಕೊಟ್ಟೇ ಹೋಗುವರು ||1||

ಗಳಿಸಿದ್ದರಲ್ಲಿ ತಾನು ಅನುಭವಿಸುವುದು ಸ್ವಲ್ಪ |

ಬೆಳೆಸಿದ್ದರೂ ಬೇರೆಯವರದ್ದೇ ಸಿಂಹಪಾಲು ||

ಉಳಿಸಿದ್ದು ಪೂರ್ಣ ಅನ್ಯರಿಗೆ ಬಿಟ್ಟುಹೋಗುವುದು |

ಕಳೆದು ಋಣಮುಕ್ತನಾಗಿ ಹೊಗುವುದು ಖಚಿತ ||2||

ಇದ್ದವರು ಇಲ್ಲದವರಿಗೆ ಇತ್ತರೆ ಜನ್ಮ ಧನ್ಯ |

ಇದ್ದದ್ದು- ಬಂದಿದ್ದೆಲ್ಲ ಪೂರ್ವಕೃತಕರ್ಮದಿಂದ ||

ಆದ ಈಗ ಕೊಡದಿದ್ದರೆ ಕಳ್ಳತನದಂತೆ |

ಮುಂದಿನ ಜನುಮದಲಿ ಏನೂ ಸಿಗದು ||3||

ಅರಿತು ಇದರ ಮರ್ಮ ನಡೆದರೆ ಕ್ಷೇಮ |

ಸ್ವಾರ್ಥ ತೊರೆದು ಪರೋಪಕಾರಿಯಾದರೆ ಚೆನ್ನ ||

ಪರರ ಸೊತ್ತು ಪರರಿಗೆ ಒಪ್ಪಿಸಿದರೆ ಸಾರ್ಥಕ |

ಪರರಿಗೆ ಕೊಡಲೆಂದೇ ಶ್ರೀಕೃಷ್ಣವಿಠ್ಠಲ ದಯದಿ ಇತ್ತಿದ್ದು ||4||

352. ಸುಂದರ ಪುರುಷ ಮಾಡಿದ ಲೋಕ ಅತೀ ಸುಂದರ |

ಸುಂದರತೆ ಸವಿವರು ಪಾಪವೇಕೆ ಮಾಡುವರು ||ಪ||

ಸುಂದರತೆ ಮೂರ್ತಿಮಂತವಿದ್ದಲ್ಲಿ ಹುಳುಕು ಇರುವುದ್ಹೇಂಗೆ ? ||ಅಪ||

ಸುಂದರ ಅರಳುವ ಪುಷ್ಟ, ಬೀಸುವ ತಂಗಾಳಿ |

ಸುಂದರ ಉದಯಿಸುವ ಸೂರ್ಯ, ಚಂದ್ರನ ಶೀತಲ ||

ಸುಂದರ ಹರಿಯುವ ನದಿ, ಸರೋರುಹ ಸರೋವರ |

ಸುಂದರ ಹಸಿರು ವನ, ಗಿರಿಗಳ ಸಾಲು ||1|||

ಸುಂದರ ಮಗುವಿನ ಮುಗ್ಧ ನಗೆ |

ಸುಂದರ ವಿವಿಧ ಬಣ್ಣಗಳ ಇಂದ್ರಧನು ||

ಸುಂದರ ಪದವುಳ್ಳ ಸಾಮವೇದ

ಸುಂದರ ಅತೀಪ್ರಶಾಂತ ಪರಿಸರ ||2||

ಸುಂದರ ಜೀವನದ ಸುಂದರ ಕ್ಷಣಗಳ |

ಸುಂದರವಾಗಿ ಕಳೆಯದೆ ಕ್ಲೇಶ ಪಡುವುದೇಕೆ ? ||

ಸುಂದರ ಆಲೋಚನೆ ಮಾಡಿ ಅಹ್ಲಾದದಿ |

ಸುಂದರ ಅದೃಷ್ಠವ ಒಲಿಸಿಕೊಳ್ಳಿ ||3||

ಸುಂದರ ಸ್ವಸ್ಥ ದೇಹ-ಮನ |

ಸುಂದರವು ವೈರಾಗ್ಯ ಬುದ್ಧಿ ||

ಸುಂದರತೆಯೇ ಭಕ್ತಿ-ಸತ್ಸಂಗ |

ಸುಂದರಾತಿ ಸುಂದರ ಶ್ರೀಕೃಷ್ಣವಿಠ್ಠಲನ ಜ್ಞಾನ ||4||

353. ಭಕ್ತಿಯ ಉತ್ತುಂಗ ನಾನಾಗಿದ್ದರೆ ಭಕುತಿ ಬೇಡಲೇಕೆ ? |

ಅತ್ಯುನ್ನತ ಜ್ಞಾನ ಎನಗಿದ್ದರೆ ಜ್ಞಾನ ಬೇಡಲೇಕೆ ? ||

ಸತ್ಯವಾದ ವೈರಾಗ್ಯ ಎನಗಿದ್ದರೆ ವೈರಾಗ್ಯ ಬೇಡಲೇಕೆ ? |

ಅತೀ ಮೋಹದ ಭಕುತಿ ಇಲ್ಲದ ಅಜ್ಞಾನಿ ನಾನೆಂದೇ ||

ನಿತ್ಯದಿ ಉದ್ಧರಿಸಿ ಚರಣದಲ್ಲಿರಿಸಿಕೋ ಎಂದು ಬೇಡುವೆ |

ಆತ್ಮೋದ್ಧಾರಕ ಶ್ರೀಕೃಷ್ಣವಿಠ್ಠಲ ದಯಾನಿಧೇ ನೀನಲ್ಲದಿದ್ದರೆ ನಿನ್ನನೇಕೆ ಬೇಡಲಿ ||

=

354. ಬೇಡುವೆ ಕಾಡುವೆ, ಅಂಗಾಲಾಚಿಸುವೆ |

ಒಡೆಯಾ ಬಿಡದೆ ಅನುಗ್ರಹಿಸೆಂದು ||ಪ||

ನೋಡಯ್ಯಾ, ಎನ್ನ ಪುಣ್ಯವಿದ್ದರೆ ನಿನ್ನನ್ನೇಕೆ ಬೇಡಲಿ ||ಅಪ|||

ನಚಿಕೇತ ಚಿಣ್ಣನೆಂದು ಎಣಿಸದೆ ಜ್ಞಾನವಿತ್ತೆ |

ಹೆಚ್ಚು ಪಾಪಿಷ್ಠನಾದರೂ ಅಜಮಿಳನ ಪೊರೆದೆ ||

ಅಚ್ಚುಮೆಚ್ಚಿನವಳೆಂದು ದ್ರೌಪದಿಯ ರಕ್ಷಿಸಿದೆ |

ಇಚ್ಛಿಸಿ ತ್ರಿವಕ್ರೆಯ ದೃಷ್ಟಿಸಿದಂತೆ ಉದ್ಧರಿಸೆನ್ನ ||1||

ಕಡೆದರೆ ಮೊಸರು ಬೆಣ್ಣೆ ಬರುವಂತೆ |

ಕಡೆಗೋಲು ನೀನೆ ಕಡೆಯುವವನೂ ನೀನೇ ||

ಹಡೆದವರು ಮಕ್ಕಳ ಕಡೆಗೆಣಿಸುವರೇ ? |

ಸಡಗರದ ದೈವ ಬಿಡದೆ ಪರಿಪಾಲಿಸೆನ್ನ ||2||

ನಿನ್ನ ಸದಾ ನೆನಸಿ ಮಾರ್ದವವಾಗುವ ಮನವಿಲ್ಲ |

ನಿನ್ನ ಪಾಡಿಕೊಂಡಾಡುಷ್ಟು ಭಕ್ತಿ ಎನಗಿಲ್ಲ ||

ನಿನ್ನ ಒಲಿಸಿಕೊಳ್ಳುವಷ್ಟು ಜ್ಞಾನ ಮೊದಲಿಲ್ಲ |

ಏನು ಇಲ್ಲದ್ದಕ್ಕೆ ನಿನ್ನನ್ನೇ ಬೇಡುವೆ) ಶ್ರೀಕೃಷ್ಣವಿಠ್ಠಲ ||3||

355. ಸರ್ವಗುಣ ಪರಿಪೂರ್ಣ ನೀನೆಂದು ಬುಧರು ಪೇಳ್ವರು |

ಪೂರ್ಣಜ್ಞಾನ_ಭಕ್ತಿ_ವೈರಾಗ್ಯ ಎನ್ನಲ್ಲಿ ಇಲ್ಲದ್ದಕ್ಕೆ ||

ಪೂರ್ವಕೃತ-ಇಂದು-ಮುಂದಿನ ಕರ್ಮಫಲ ಕಡೆಗಣಿಸಿ |

ಕುಕೃತ್ಯ-ಪಾಪಗಳ ಲಕ್ಷಿಸದೆ ಕರುಣಾಸಾಗರ ಉದ್ಧರಿಸೆನ್ನ ||

ಶ್ರೀಕೃಷ್ಣವಿಠ್ಠಲ ನಿನ್ನ ಸೇವಕ ನಾನೆಂದು ದಯದಿ ಸ್ವೀಕರಿಸು ||

356. ಎಷ್ಟು ಹೇಳಲಿ, ಎಷ್ಟು ಬೇಡಲಿ ಕೊನೆ ಇಲ್ಲವೆ ? |

ಕುಟ್ಟಿ ಕುಟ್ಟಿ ತಟ್ಟಿ ತಟ್ಟಿ ಕೇಳಾಯ್ತು-ಹೇಳಾಯ್ತು ||

ಇಷ್ಟೆಲ್ಲಾ ಕೇಳಿ ಕೇಳಿ ನಿನಗೆ ಬೇಸರವಿಲ್ಲವೆ ? |

ಇಷ್ಟದಿಂದಾಗಿ, ಬೇಸರದಿಂದಾಗಲಿ ಕೊಟ್ಟುಬಿಡು ||

ಘಟ್ಯಾಗಿ ಹಿಡಿದುಕೋ ಎಂದೆಂದಿಗೂ ಬಿಡದಂತೆ |

ಒಟ್ಟಿನಲಿ ನಿನ್ನ ಚರಣದಲ್ಲೇ ಬಿದ್ದಿರುವಂತೆ ಮಾಡು ||

ಕಟ್ಟಕಡೆಗೆನ್ನ ವೈಕುಂಠದಲ್ಲಿರಿಸೋ ಶ್ರೀಕೃಷ್ಣವಿಠ್ಠಲ ||

357. ಕಾಣುವ ಜ್ಞಾನವೃದ್ಧಿಯ ಪಿಪಾಸೆ ಮೇಲು ||

ಕಾಣುವ ವಿಷಯದಿ ವೈರಾಗ್ಯ ಮೇಲು |

ಕಾಣದ ಮುಕ್ತಿಗಾಗಿ ಹಾತೊರೆವುದಕ್ಕಿಂತ |

ಕಾಣದ ದೈವ ಶ್ರೀಕೃಷ್ಣವಿಠ್ಠಲನಲಿ ಧೃಡ ಭಕುತಿ ಇನ್ನೂ ಮೇಲು ||

358. ತಂದೆ, ತಂದೆ ನೀನು | ಬಂಧು ಬಳಗ ನೀನು |

ಚೆಂದದ ಜನುಮವಿತ್ತು | ಕುಂದುಗಳ ಎಣಿಸುವರೇ ||

ಎಂದಿಗೂ ಆಗುಹೋಗುಗಳ ಹೊಣೆಗಾರ | ನೊಂದಿಸಿ ನಂದಿಸದಿರು |

ಒಂದು ಕ್ಷಣದ ಜೀವನದಿ ಬಂದಾಗ | ನಿಂದು ಉಣಿಸಿದೆ ಸುಖ-ದು:ಖಫಲ ||

ಬೆಂದ ಜೀವಕೆ ತಂಪೆರೆದು | ಸದಾ ನಿರ್ಮಲ ಭಕುತಿ ಬೇಡುವೆ |

ಬಂಧನವ ಬಿಡಿಸಿ ಪಾಲಿಸಯ್ಯಾ | ಪಾದಪದುಮದಲ್ಲಿರಿಸು ಒಡೆಯಾ ಶ್ರೀಕೃಷ್ಣವಿಠ್ಠಲ ||

359. ಚಿಂತೆ ಚಿತೆವರೆಗೆ ಇರವುದು ಸಹಜ |

ಚಿಂತೆ ಚಿಂತನೆಯಾಗಿಸೋ ಪ್ರಯತ್ನದಿ | ಹೇ | ಮನುಜ ||ಪ||

`ಚಿಂತೆ ತೊರೆಯುವುದ್ಹೇಗೆಂದು ಚಿಂತಿಸದಿರು ||ಅಪ||

ಚಿಂತೆಯಲಿ ಮನ ಕಸದ ಗೂಡಾಗುವುದು |

ಚಿಂತೆಯಲಿ ಆಹಾರ ವಿಷವಾಗುವುದು ||

ಚಿಂತೆಯಲಿ ನಿದ್ರೆ ಮಾರು ದೂರಾಗುವುದು |

ಚಿಂತೆ ಅಗ್ನಿಯಂತೆ ಜೀವಂತ ಸುಡುವುದು ||1||

ಚಿಂತೆ ಶೂರ್ಪನಖಗೆ ಅಗ್ನಿಹೊತ್ತಿಸಿತು |

ಚಿಂತೆ ದಶಮುಖನ ಚಿತೆಯಾಗಿಸಿತು ||

ಚಿಂತೆ ಚಿಂತನೆಯ ಮಾಡಿ ಧ್ರುವ ಪದವಿ ಪಡೆದ |

ಚಿಂತೆ ಚಿಂತನೆಯಾಗಿಸಿ ನಚಿಕೇತ ವಿಜ್ಞಾನಿಯಾದ ||2||

ಚಿಂತನೆಯಲಿ ಶಬರಿ ಸ್ವಾಮಿ9 ಸೇವಿಸಿದಳು |

ಚಿಂತನೆಯಲಿ ಹನುಮ ಸ್ವಾತ್ಮಸುಖಿಯಾದ ||

ಚಿಂತನೆಯಲಿ ಗೋಪಿ ಹೃದಯದಿ ದರ್ಶಿಸಿದಳು |

ಚಿಂತನೆಯು ಚಿನ್ಮಯನೊಲಿಮೆ ಗಳಿಸುವುದು ||3||

ಚಿಂತೆ ಚಿಂತನೆಯಾಗುವುದು ನಿಶ್ಚಿಂತ ಮನದಿಂದ |

ಚಿಂತೆ ಹೋಗುವುದು ಶಬ್ದ-ನಿಶಬ್ದವಾದಾಗ ||

ಚಿಂತೆ ಸರಿಯುವುದು ಅನ್ಯವಿಷಯ ಬಿಟ್ಠಾಗ |

ಚಿಂತನೆಯಾಗುವುದು ಶಾಶ್ವತನ ತನ್ಮಯತೆಯಲಿ ||4||

ಚಿಂತೆ ನಿವಾರಣೆ ಬಗೆ ತಿಳಿದಾಗ |

ಚಿಂತೆ ಚಿಂತೆಯಾಗದೆ ಚಿಂತನೆಯಾಗಿರಿಸಿ ||

ಚಿತ್ತದಿ ಚಿತ್ತದೊಲ್ಲಭ ಯೋಗಕ್ಷೇಮ ವಹಿಸುವ |

ಚಿಂತೆ ಚಿಂತನೆಯಾದರೆ ಶ್ರೀಕೃಷ್ಣವಿಠ್ಠಲನೇ ಸಿಗುವ ||5||

360. ಮನಶುದ್ಧಿ ಇಲ್ಲ, ತನು ಶುದ್ಧಿ ಇಲ್ಲ |

ವಾಣಿ ಶುದ್ಧಿ ಮೊದಲೇ ಇಲ್ಲ | ನಡೆ ಶುದ್ಧಿ ಇಲ್ಲ ||

ಇನ್ನೂ ಶುದ್ಧಿಯಾಗಿ ಶುದ್ಧವಾಗುವುದ್ಹೇಂಗೆ ||ಅಪ||

ಸದಾ ಎಂಜಲು ತಿನ್ನು, ಪರರ ಎಂಜಲಲ್ಲ | (ನೈವೇದ್ಯ-ಪಂಚಾಮೃತ)

ಸದಾ ತ್ಯಜಿಸಿದ ವಸ್ತ್ರ ಧರಿಸು, ಪರರು ಧರಿಸಿದ್ದಲ್ಲ || (ನಿವೇದಿತವಸ್ತ್ರ)

ಸದಾ ಸಂಗಿಯಾಗಿರು, ಜನರಜೊತೆ ಇರಬೇಡ | (ಪರಮಾತ್ಮನ ಸಂಗ)

ಸದಾ ನೆನಪಿನಲ್ಲಿಡು, ಎಲ್ಲ ಮರೆತಿರಬೇಕು ||1|| (ಅಧ್ಯಾತ್ಮವಿದ್ಯೆ)

ಸದಾ ನಿಂದಿಸುತಿರು, ಬಿಡದೆ ಸ್ತುತಿಸುತಿರು | (ದುರ್ಗುಣಗಳು)

ಸದಾ ಆನಂದಿಸು, ನೆನೆನೆನೆದು ದು:ಖಿಸು || (ಪರಮಾತ್ಮ ವಿಸ್ಮರಣೆ)

ಸದಾ ಬೇಡುತಿರು, ಎಂದೂ ಬೇಡದಿರು | (ಭೇಡದಂತೆ ಪರಮಾತ್ಮನ ಬೇಡು)

ಸದಾ ಸೌಭಾಗ್ಯಶಾಲಿಯಾಗು, ದೌರ್ಭಾಗ್ಯ ಹಳಿಯುತಿರು ||2|| (ಪರಮಾತ್ಮನ ಕಾಣದ್ದು)

ಸದಾಮಲ ಜ್ಞಾನ ಇರಲಿ, ಅಜ್ಞಾನಿಯಾಗಿರು | (ಜ್ಞಾನ ಪ್ರದರ್ಶನ)

ಸದ್ಭಕ್ತಿ ಭಾವ ಇರಲಿ, ಭಕ್ತಿಮಾಡಬೇಡ || (ಢೋಂಗಿ ಭಕ್ತಿ)

ಸದ್ಬುದ್ಧಿ ವೈರಾಗ್ಯವಿರಲಿ, ವೈರಾಗ್ಯವಂತನಾಗಬೇಡ | (ಅಭಾವ ವೈರಾಗ್ಯ)

ಸದ್ಬ್ರಹ್ಮ ಶುದ್ಧಾತ್ಮ ಶ್ರೀಕೃಷ್ಣವಿಠ್ಠಲನೊಬ್ಬನೇ ಪರದೈವ ನಂಬು ||3||

361. ನಿಜ ಸುಖದ ಮರ್ಮತಿಳಿದು ಬದುಕುವುದು ಲೇಸು |

ರಾಜನ ಸುಖ ಪ್ರಜೆಗಳ ಸುಖದಲ್ಲಿದ್ದ ತೆರದಿ ||

ಯಜಮಾನನ ಸುಖ ಮನೆ ಮಂದಿ ಸುಖದಲ್ಲಿದೆ |

ಸುಜನ ನೀಡುವಾ, ಸುಖ ಸರ್ವರಿಗೂ ಭೇದವಿಲ್ಲದೆ ||

ಅಂಜದೆ ಕಷ್ಟ-ದು:ಖ ನಗುತ್ತಾ ಸಹಿದುವುದು |

ಭಂಜಸಿ ಸುಖದಿ ಬಂದಿದ್ದರಲ್ಲೇ ತೃಪ್ತಿ ಪಡೆವುದು ||

ಪೂಜಿಸಿ ದ್ವಿಜ-ಗೋ-ಪರರ ಹಿತವನ್ನೇ ಬಯಸುವುದು |

ಪೂಜ್ಯ ಗುರು-ಹಿರಿಯರ ಸುವಾಕ್ಯ ಪರಿಪಾಲನೆ ||

ಸಂಜೆಯಿಂದ ಬೆಳಗಿನವರೆಗೆ, ಬೆಳಗಿನಿಂದ ಸಂಜೆ ತನಕ |

ಕಂಜನಾಭಗರ್ಪಿಸಿ ಮಾಡಿದ ಸಕಲ ಕರ್ಮಸಂತೋಷದಿ ||

ಧ್ವಜಾಂಕುಶ ಗದಾ-ಪದ್ಮ ಚಿಹ್ನಾಂಕಿತ ಚರಣ ಸ್ಮರಿಸಿ |

ಭಜಿಸಿದರೆ ಶ್ರೀಕೃಷ್ಣವಿಠ್ಠಲನ, ಆತ್ಮಸುಖವೇ ಅಡಗಿದೆ ||

362. ಕಂಗಳಲಿ ಪ್ರೀತಿಸೂಸುತಾ | ಬಂಗಾರ ವರ್ಣಾಂಬರಧಾರಿ ||

ಅಂಗನೆಯರೊಡಗೂಡಿ ನಲಿದು | ಸ್ವರ್ಗಸುಖವಿತ್ತು ಓಲೈಸಿದ ||

ಭಂಗ ಬರದ ಭಕ್ತಿ ಪಡೆದು | ಅಗಲದ, ನಿಜ ಸ್ಥಾನವಿತ್ತ ||

ಖಗವಾಹನ ಶ್ರೀಕೃಷ್ಣವಿಠ್ಠಲನೇ | ಸಂಗ ಬಿಡದೆನ್ನ ಪರಿಪಾಲಿಸು ||

ಶ್ರೀ ಕೃಷ್ಣವಿಠ್ಠಲಪದಗುಚ್ಛ 3 ಅನುಕ್ರಮಣಿಕಾ

363. ಸರ್ವಜ್ಞ, ಸರ್ವೇಶ, ಸರ್ವಪ್ರದ |

ಸರ್ವರ ಅಕ್ಷಮ್ಯಪರಾಧ ಕ್ಷಮಿಸಿ ||

ಸರ್ವರ ಮತಿ ಸುಸ್ಥಿತಿಯಲ್ಲಿರಿಸು |

ಸರ್ವ ಆತ್ಮಸ್ಥ ಶ್ರೀಕೃಷ್ಣವಿಠ್ಠಲ ಧಯಾನಿಧೇ ||

364. ಪರಮೈಶ್ವರ್ಯಶಾಲಿ ಪರಮಾತ್ಮ |

ಸರ್ವಕೂ ಮೂಲ, ಸತ್ಯ ಸ್ವರೂಪ ಶರಣು,ಶರಣು ||

ಪರಮಾತ್ಮ ಕಾರಣ ಸಂಸಾರವೆಂಬುದು ಸನಾತನವೃಕ್ಷ |

ಆಶ್ರಯವಿದಕೆ ಒಂದೇ ಮೂಲಪ್ರಕೃತಿ ||

ಎರಡು ಫಲಗಳಿದಕೆ ಸುಖ-ದು:ಖ |

ಬೇರುಗಳು ಮೂರು, ಸತ್ತ್ವ-ರಜ-ತಮ ||

ಧರ್ಮ, ಅರ್ಥ, ಕಾಮ, ಮೋಕ್ಷಗಳೆ ನಾಲ್ಕು ವಿಧರಸ |

ಚರ್ಮ, ಕಣ್ಣು, ಕಿವಿ, ನಾಲಿಗೆ, ಮೂಗೇ ತಿಳಿವ ಕರಣಗಳು ||

ಹುಟ್ಟು-ಇರುವು, ಬೆಳೆ-ಬದಲು, ಕುಗ್ಗು-ನಾಶ ಆರು ಸ್ವಭಾವವಿದಕೆ |

ಒಟ್ಟು ಏಳು ತೊಗಟೆಗಳು ರಸ, ರುಧಿರ, ಮಾಂಸ, ಮೇದಸ್ಸು, ಮೂಳೆ, ಮಜ್ಜೆ, ಶುಕ್ರ ||

ಎಂಟು ರೆಂಬೆಗಳೇ ಪಂಚಮಹಾಭೂತ, ಮನ, ಬುದ್ಧಿ, ಅಹಂಕಾರವು |

ಪೊಟರೆಗಳಿವೆ ಅದೇ ಶರೀರದ ನವದ್ವಾರಗಳು ||

ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ ಅಲ್ಲದೆ |

ಧನಂಜಯ, ದೇವದತ್ತ, ನಾಗ, ಕೂರ್ಮ ಕೃಕಲದ ದಶಪ್ರಾಣಗಳೇ ಎಲೆಗಳು ||

ಅದ್ಭುತ ಸಂಸಾರ ವೃಕ್ಷದಲಿ ಜೀವೇಶ್ವರರೇ ಎರಡು ಪಕ್ಷಿಗಳು |

ಇದರ ಉತ್ಪತ್ತಿ-ಆಧಾರಕೆ ಶ್ರೀಕೃಷ್ಣವಿಠ್ಠಲನೊಬ್ಬನೇ ಇರುವ ||

ಬಿಂದು ಸಿಂಧುವಿನಲ್ಲಿರುವಂತೆ ಪ್ರಳಯವೂ ಇವನಲ್ಲೇ ನಿರುತ |

ಸಿದ್ಧಜ್ಞಾನ ತಿಳಿದ ಬುಧರು ಸಕಲದಲ್ಲಿ ಶ್ರೀಕೃಷ್ಣವಿಠ್ಠಲನನ್ನೇ ದರ್ಶಿಸುವರು ||

365. ಹೊಟ್ಟೆಗಾಗಿ ಏನೆಲ್ಲ ಮಾಡುವುದು |

ಕೆಟ್ಟು ಹೊಗುವುದು ಹೊಟ್ಟಿಯಿಂದಲೇ ||

ಒಟ್ಟು ಆರೋಗ್ಯವೂ ಹೊಟ್ಟೆಯಿಂದಲೇ |

ಹೊಟ್ಟೆ ಹಸಿದರೆ ಹಾದಿ ತಪ್ಪಿಸುವುದು ||

ಹೊಟ್ಟೆ ಬಿರಿಯ ತಿಂದರೆ ಅನಾರೊಗ್ಯ |

ಹೊಟ್ಟೆ ಇಲ್ಲದಿರೆ ಜಗಚ್ಚಕ್ರವೇ ನಿಲ್ಲುವುದು ||

ಹೊಟ್ಟೆಯಿಂದಲೇ ಜನನ, ಹೊಟ್ಟೆಯಲ್ಲೇ ಲಯ |

ಪುಟ್ಟ ಬಾಲಕ ಶ್ರೀಕೃಷ್ಣವಿಠ್ಠಲನ ಹೊಟ್ಟೆಯೇ ಸರ್ವಾಶ್ರಯ ||

366. ಅನರ್ಘ ಅನವದ್ಯ, ಅಚಿಂತ್ಯನೇ |

ಅನುದಿನದಿ ಅನುರಾಗವಿತ್ತು ಅನಿಕೇತನ ||

ಅನುಕ್ತ ಅನುಚಿತ ಅಣುಜೀವಿಯ |

ಅನುಭವಿಸದಂತೆ ಅನುದಿನದ ಭವತಾಪ ||

ಅನುಷ್ಠಾನದಿ ಅನುವರ್ತಿಸಿ ಅನುವಾಗಿಸೋ |

ಅನುಭಾವಿ ಶ್ರೀಕೃಷ್ಣವಿಠ್ಠಲ ಅನುಗ್ರಹಿಸೋ ||

367. ಗೋಪಾಲಕರೊಡಗೂಡಿ ಮೊಸರನ್ನ ಸವಿದು ಸಹಭೋಜನವಿತ್ತೆ |

ಗೋಪಾಲಕರೊಡನೆ ಗೋವತ್ಸ ಕಾಯ್ದು ಗೋವೃಂದಕೆ ಸಾಮೀಪ್ಯವಿತ್ತೆ ||

ಗೋಪಿಕೆರೊಡಗೂಡಿ ರಾಸವಾಡಿ ಪ್ರಿಯ ಸಾನಿಧ್ಯವಿತ್ತೆ |

ಗೋಪಿಪತಿಯ ಸಖನಾಗಿ ಸಾರಥ್ಯಮಾಡಿ ಸಾಯುಜ್ಯವಿತ್ತೆ ||

ಗೋಪಿಜನಪ್ರಿಯನಾಗಿ ನಿನ್ನ ಸೇವಿಪ ಸುಜನರಿಗೆ ಸಾಲೋಕ್ಯವಿತ್ತೆ |

ಗುಂಪು ನಕ್ರತ್ರಗಳ ನಡುವೆ ಶೋಭಿಪ ಉಡುಪನಂತಿರುವನೇ ||

ಗುಪ್ತವೇದ ವಿದಿತ ಶ್ರೀಕೃಷ್ಣವಿಠ್ಠಲ ಎನ್ನನಿತ್ತ ಎನಗೇನೀಯುವಿ ? ||

368. ಶ್ರೀ ರಾಘವೇಂದ್ರನಮ: ಎನಲು ಸಲಹುವ |

ಶ್ರೀ ನಾಥನ ಒಂದೇ ಮನದಿ ಪೂಜಿಸಲು ||

ರಾರಾಜಿಸುವ ವಿಷ್ಣು ಲೋಕದಿ |

ಸಣೆ (ಚಿಂತೆ) ಕಳೆದು ಘನತೆವೆತ್ತಿ ||

ವೇಂಕಟಪತಿ ಶ್ರೀಕೃಷ್ಣವಿಠ್ಠಲನ ದಯದಿ |

ದ್ರವಣ (ಸಾಮರ್ಥ್ಯ / ಸಂಪತ್ತು) ಪಡೆದು ಸುಖಿಸುವ ||

ಮಸಲು ಬಿಡದೆ ಬಾರಿ ಬಾರಿಗೂ |

ರೆಯದೆ ಸಕಲರ ಪೊರೆದು ||

ರುಷದಿ ಜನ್ಮ ಸಾರ್ಥಕವಾಗಿಸುವ ||

369. ಬೇಕು ಪ್ರತಿಕಾರ್ಯದಲಿ ಜ್ಞಾನ | ಬೇಕು ಪ್ರತಿ ಕಾರ್ಯದಿ ಇಚ್ಛೆ |

ಬೇಕು ಪ್ರತಿ ಕಾರ್ಯಕೆ ಸಮಯ | ಬೇಕು ಸಕಲಕೂ ಮುಂಚೆ ಶ್ರೀಕೃಷ್ಣವಿಠ್ಠಲನ ಅನುಗ್ರಹ ||

370. ಸುಲಭ ಸಾಧನವಿದು ಅನಂತ ಪಾಪ ನಾಶಕೆ ||ಪ||

ಗೆಲ್ಲಬಹುದು ಅಕಾಲಮೃತ್ಯು ಪರಿಹಾರಕ ತೀರ್ಥಪ್ರಾಶನದಿ ||ಅಪ||

ಪಾಪ ನಿವೃತ್ತಿಗೆ ಪರಮಾತ್ಮನಿಗೆ ಚಾಮೃತಭಿಷೇಕ |

ರೂಪ ಭಗವಂತನ ನೆನೆಯಿರಿ ಜಡ ವಸ್ತುವಿನಲಿ ||1||

ನೆನೆಸೆ ನಾರಾಯಣನ ಜಲಾಭಿಷೇಕದಿ ದಶಾಪರಾಧ ನಾಶ |

ನೆನೆಸೆ ಗೋವಿಂದನ ಕ್ಷೀರಾಭಿಷೇಕದಿ ಶತಾಪರಾಧ ನಾಶ ||2||

ನೆನೆಸೆ ವಾಮನನ ದಧಿ ಅಭೀಷೆಕದಿ ಸಹಸ್ರಾಪರಾಧ ನಾಶ |

ನೆನೆಸೆ ವಿಷ್ಣುನ ಘೃತಾಭಿಷೇಕದಿ ದಶ ಸಹಸ್ರಾಪರಾಧ ನಾಶ ||3||

ನೆನೆಸೆ ಮಧುಸೂಧನ ಮಧು ಅಭಿಷೇಕದಿ ಲಕ್ಷಾಪರಾಧ ನಾಶ |

ನೆನಸೆ ಅಚ್ಯುತನ ಇಕ್ಷು (ಶರ್ಕರ) ಅಭಿಷೇಕದಿ ದಶಲಕ್ಷಾಪರಾಧ ನಾಶ ||4||

ಸುರಿಯೆ ಎಳೆನೀರ ಕೋಟಿ ಪಾಪ ನಾಶ |

ಹರಿಸಲು ಗಂಧೋದಕ ಸ್ನಾನ ಅನಂತ ಪಾಪ ನಾಶ ||5||

ಅಕ್ಷಯ ಫಲದಾತ ನಿಷ್ಕಾಮ ಕರ್ಮಕೆ ಹರಿಲೋಕ ಕೊಡುವ |

ಶ್ರೀಕೃಷ್ಣವಿಠ್ಠಲನ ಅಂತರಂಗದಿ ಇಂತು ಧ್ಯಾನಿಸಿ ಪೂಜಿಸಲು ||6||

371. ಆರಾಧಿಸೇ ವೃಂದಾವನದಿ ಸಕಲರೂ ಗೋವರ್ಧನನ |

ಇಂದ್ರ ಕುಪಿತಗೊಂಡು ಮುಸಲಧಾರೆ ಎರೆದ ||

ಸುರಿದ ಜಡಿ ಮಳೆ ರಭಸ ತಪ್ಪಿಸಲು |

ಕಿರು ಬೆರಳು ತುದಿಯಲ್ಲೆತ್ತಿ ಅಲುಗಾಡದೆ ||

ಗಿರಿಯ ಛತ್ರಿಯಾಗಿಸಿ ಪಿಡಿದ ಏಳುದಿನ ಸತತ |

ಕರೆದ ಸಕಲ ಜನರ ಗೋವಳಸಹಿತ ||

ಪೋರ ದಿಟ್ಟತನದಿ ಆಶ್ರಯವಿತ್ತ |

ಪೂರ್ಣನಂಬದೇ ಬಾಲಕನ ಶಕ್ತಿಯ ||

ಊರುಗೋಲಾಗಿ ಕೋಲನು ಆನಿಸಿ ಹಿಡಿದರು ಭಯದಿ |

ಇಂದ್ರ ತಿಳಿದು ತನ್ನ ತಪ್ಪಿಗೆ ನಾಚಿ ನೀರಾದ ||

ಬೇರಾರಲ್ಲ ಸರ್ವಾಧಿಪತಿ ಶ್ರೀಕೃಷ್ಣವಿಠ್ಠಲನೇ ಈ ಬಾಲಕನೆಂದರಿತ ||

372. ಎಷ್ಟು ಪೊಗಳಿದರೂ ಮನ ತುಂಬದು |

ಇಷ್ಟ ದೈವನ ಇಷ್ಟೂ ಪಾಡಿದರೂ ತೃಪ್ತಿಯಾಗದು ||

ತುಷ್ಟಿಯಾಗದು ಬರೀ ನಾಮಾಮೃತ ಜಪದಿ |

ಕಷ್ಟ ಕಾಲದಿ ಕಾಯುವವನೊಬ್ಬನೇ ||

ದೃಷ್ಟಿಸುವ ಆಸೆ ಪ್ರತ್ಯಕ್ಷದಿ ಪೂರೈಸೆಯಾ |

ಸೃಷ್ಟಿ ಕರ್ತ ಶ್ರೀಕೃಷ್ಣವಿಠ್ಠಲ ನಿನ್ನಾಕರ್ಷಣೆ ಉತ್ತುಂಗ ||

373. ವಸುವಿನಿಂದ ಜನಿಸಿ, ವಸುವನು ಪಾಲಿಸಿದ |

ವಸುಧೀಶ ಶ್ರೀಕೃಷ್ಣವಿಠ್ಠಲ ವಾಸಿಸೆನ್ನ ಹೃನ್ಮಂದಿರದಿ ||

374. ವಾರಿಧಿ ಶಯನ ವಾರಿಜಳ ವರಿಸಿ |

ವರಾಭಯದಿ ಪೊರೆವ ವರಾಂವರ ||

ವರವೀವ ಕಪಿವರ ಅಂತರ್ಯಾಮಿ |

ವಾರಾಂಗನೆಯ ಉದ್ಧರಿಸಿದ ಪರಮವರ ||

ವೀರ-ಸುವೀರ ಶ್ರೀಕೃಷ್ಣವಿಠ್ಠಲ ವರಿಸೆನ್ನ ||

375. ಸತ್ಕವಿಗಳ ಸತ್ಸಂಗವೇ ಸದ್ಗತಿಗೆ ದಾರಿ |

ಸುಕಥಾ ಶ್ರವಣ ಹೃತ್ಕರ್ಣ ರಸಾಯನ ವಾಹುದು ||

ಭಕ್ತಿ-ಶ್ರದ್ಧೆಯನ್ನನುಸರಿಸಿ ಸಿಗುವುದು ಮುಕ್ತಿ |

ಹೃತ್ಕಮಲಸ್ಥ ಶ್ರೀಕೃಷ್ಣವಿಠ್ಠಲನ ಅಪರೋಕ್ಷಾನಂತರ ||

ತತ್ವಸುವ್ವಾಲಿ

376. ಎಲ್ಲಿ ಹರಿಯೋ ಮತ್ತಲ್ಲಿ ಪ್ರಾಣನಿರುವ || ಪ್ರಾಣನಿರುವ ||

ಶ್ರೀಕೃಷ್ಣವಿಠ್ಠಲನ ನಿರುತ ಸೇವಿಸುತ ||1||

ದೇಹದೊಳು ಪ್ರಾಣನಿರುವ ತತ್ವ್ತೇಶರೊಡಗೂಡಿ ಪ್ರೇರ್ಯ ಪ್ರೇರಕನಾಗಿ |

“ಪ್ರೇರ್ಯ ಪ್ರೇರಕ” ನಾಗಿರುವ || ಶ್ರೀಕೃಷ್ಣವಿಠ್ಠಲನ ಅಣತಿಯಿಂದ ||2||

ಸಕಲ ಕಾರ್ಯಗಳನು ಬಿಡದೆ ಮುಖ್ಯಪ್ರಾಣಾಂತರ್ಗತ ಸಪರ್ಪಿಸಿದರೆ |

ಸಮರ್ಪಿಸಿದರೆ || ಸದೈವ ಶ್ರೀಕೃಷ್ಣವಿಠ್ಠಲನೊಲಿವ ||3||

ಒಂದು ರೂಪದಿಂ ಚತುರರೂಪ ತಳೆದು || ಚತುರರೂಪ ತಳೆದು ||

ಸಹಸ್ರಾರು ರೂಪದಿಂ ಸಹಜದಿ ಜಗವ ಸಲಹುವ ಶ್ರೀಕೃಷ್ಣವಿಠ್ಠಲ ||4||

ಬ್ರಹ್ಮಾಂಡ-ಪಿಂಡಾಂಡದಿ ಬಹಿರಂತರ್ಗನಾಗಿ || ಬಹಿರಂತರ್ಗತನಾಗಿ ||

ತನ್ನಾಮ, ತದ್ರೂಪ, ತತ್ತದಾಕಾರನಾಗಿ ಶ್ರೀಕೃಷ್ಣವಿಠ್ಠಲ ವ್ಯಾಪ್ತನು ಎಂದುತಿಳಿ ||5||

ಒಂದು ರೂಪದಿ ಅನಂತರೂಪಗಳು || ಅನಂತ ರೂಪಗಳು ||

ಅನಂತ ಗುಣಗಣ ಸಹಿತದಿ ಇರುವ ಶ್ರೀಕೃಷ್ಣವಿಠ್ಠಲಗೆ ಸರಿ-ಮಿಗಿಲಾರಿಲ್ಲ ||6||

ಪರ-ಅಪರ ತತ್ತ್ವಗಿಂತ ಪರಲೋಕ ವೈಕುಂಠಾಧಿಪತಿ || ವೈಕುಂಠಾಧಿಪತಿ ||

ಶ್ರೀಕೃಷ್ಣವಿಠ್ಠಲನೇ ಪರತಮ ಪರತತ್ವ ||7||

377. ಈರ್ವರೂ ನಾರಾಯಣನ ಅಂತರಂಗವರಿತವರು ||ಪ||

ಸ್ವರೂಪದಿ ಸಾತ್ತ್ವಿಕರು ಸದಾ ಹರಿ ಸಮೀಪವಿದ್ದರೂ ಶಾಪಗ್ರಸ್ತರಾದರು ||ಅಪ||

ಮೂರು ಅಸುರ ಜನುಮವೆತ್ತಿದರು ಈ ಭುವಿಯಲಿ |

ಧರ್ಮಬೋಧಕರು ಸನೀಹದಿ ಪ್ರತಿ ಜನುಪದಿ ಇದ್ದರೂ ||

ಪ್ರಾರಬ್ಧ ಕರ್ಮ ತೀರದು ಅನುಭವಿಸುವ ತನಕ |

ಯಾರನ್ನೂ ಬಿಡದು ದೇವ-ಮಾನವರ ಸಹಿತ ||1||

ಹಿರಣ್ಯ ಕಶ್ಯಪನಿಗೆ ಸುತಪ್ರಲ್ಹಾದನಿದ್ದ ಹಿತೋಪದೇಶಕೆ |

ಎರಡನೇ ಜನುಮ ರಾವಣ-ಕುಂಭಕರ್ಣರಿಗೆ ವಿಭೀಷಣನಿದ್ದ ||

ಮೂರನೇ ಜನುಮ ಶಿಶುಪಾಲ-ದಂತವಕ್ತ್ರರಿಗೆ ಉಪದೇಶಿಸಲು |

ಶ್ರೀಕೃಷ್ಣವಿಠ್ಠಲನೇ ಸ್ವಯಂ ಎದುರಲಿ ನಿಂತು ಪೇಳಿದರೂ ಕೇಳಲಿಲ್ಲ ||2||

378. ಸರ್ವಜೀವಿಗಳಿಗೆ ಸತ್ತಾಪ್ರದ ವಾಯು ಧಾರಣಾಪ್ರದ |

ಸರ್ವೇಂದ್ರಿಯಾಭಿಮಾನಿ ನಿಯಾಮಕ ಮುಖ್ಯಪ್ರಾಣ ||

ಇವನಿಗೂ ಪ್ರೇರಕಳು ರಮಾ ಭಕ್ತಿ ಪ್ರದಾಯಕಳು |

ಸರ್ವರಿಗೂ ಮುಕ್ತಿ ಪ್ರದಾಯಕ ನಮ್ಮ ಶ್ರೀಕೃಷ್ಣವಿಠ್ಠಲ ||

ಉಡುಪಿಕೃಷ್ಣನ ಸೊರಗುವಿಕೆಗೆ ಕಠಾರಣವೇನು ?

379. ಚಿಣ್ಣ ಕೃಷ್ಣಯ್ಯಾ, ಬಾಲ ಕೃಷ್ಣಯ್ಯಾ ಏಕೆ ಸಣ್ಣಗಾಗಿರುವೆ ||ಪೇಳು ||ಪ ||

ಮಣ್ಣ ಮೆದ್ದ ಬಾಯಿಗೆ ಬೆಣ್ಣೆ, ಹಾಲು ನೈವೇದ್ಯ ಒಗ್ಗಲಿಲ್ಲವೇ ? |

ಹಣ್ಣಿನ ಬುಟ್ಟಿಗೆ ಕೈಹಾಕಿ ತಿಂದವಗೆ ಎದುರಿಟ್ಟಿದ್ದು ಬೇಕಿಲ್ಲವೇ ? ||

ಒಣದ್ರಾಕ್ಷಿ, ಗೋಡಂಬಿ ಉತ್ತತ್ತಿ ದೇಹಕೆ ಪುಷ್ಟಿ ಕೊಡುತಿಲ್ಲವೇ ? |

ಕಣ್ಣಿನಿಂದ ಸ್ವಾಖ್ಯರಸ ಸ್ವೀಕರಿಸುವಗೆ ಏನೂ ಬೇಡವಾಯಿತೇ ? ||1||

ನೇಣು-ಕಡೆಗೋಲು ಪಿಡಿದು ಕೈ ಸೋತು ಹೋಯಿತೇ ? |

ಕಣ-ಕಣದಲ್ಲಿರುವಗೆ ಒಂದೆಡೆಯೇ ನಿಂತು ಸಾಕಾಯಿತೇ ? ||

ಕ್ಷಣ-ಕ್ಷಣಕೂ ಸೊರಗುತಿರುವುದು ಪಂಚಾಮೃತ ಮಜ್ಜನದಿಂದಲೇ |

ಮಣಭಾರ ಉದರದಲ್ಲಿಟ್ಟವಗೆ ಜಠರ ಬೇನೆಯೇ ||2||

ಉಣಿಸಿ ಔತಣ ಸಕಲರಿಗೆ ಅನ್ನಬ್ರಹ್ಮ ದಣಿದೆಯಾ ? |

ಪಣದಿ ಸೋತವರ ಪಕ್ಷವಹಿಸಿ ಧರ್ಮ ಉಳುಹಲು ಸೊರಗಿದೆಯಾ ? ||

ಗಣಿತ ಅಗಣಿತ ಲೋಕಸ್ಥ ದೇವಾ ಕ್ರೀಡಿಸಿದ್ದೇ ಕಾರಣವಾ |

ವರ್ಣಾಭೀಮಾನಿ ಸಕಲ ಸುರವಂದ್ಯರ ಸಂತೈಸಿ ಸೋತೆಯಾ ||3||

ಕಣ್ರೇಪ್ಪೆ ಬಡೆಯದೆ, ಭಾರಪೊತ್ತು, ಮೋರೆ ತಿರುವಿ |

ಸಣ್ಣ ಬಾಲಕಗೊಲಿದು, ತ್ರಿವಿಕ್ರಮನಾಗಿ, ಕಾಡಲಿ ಅಲೆದು ||

ಅಣ್ಣಂದಿರ ಶಿರ ಕಡಿದು, ಕಾಳಿಂಗನ ಫಣೆಮೇಲೆ ನರ್ತಿಸಿ |

ಗುಣಗಳ ಬಿಟ್ಟು ಬೋಧಿಸಿ (ಅಧರ್ಮ), ಹಯವನೇರಿದ್ದಕೆ ಸೋತು ಸೊರಗಿದೆಯಾ ||4||

ಕಣ್ಮಣಿ, ನೀಲವರ್ಣಗೆ ಭಕ್ತರ ದೃಷ್ಟಿ ತಾಕಿದೆಯೇ |

ದಣಿವಾಗಿದೆಯೇ ಅಷ್ಟಯತಿಗಳ ಭಕ್ತಿ ಸೇವೆಯಲಿ ||

ಷಣ್ಮಹಿಷಿಯರ ವಿರಹ ವೇದನೆ ಸಹಿಸದಾಯಿತೇ ? |

ಜಾಣ, ರುಕ್ಮಿಣಿ ಕರಾರ್ಚಿತ ಶ್ರೀಕೃಷ್ಣವಿಠ್ಠಲ ಕಾರಣವ ಪೇಳಯ್ಯಾ ||5||

380. ಹರಿಯ ತತ್ವವೇ ಹರಿಯ ಮತ |

ಹರಿ (ಮನ) ಹರಿ (ತೀವ್ರದಿ) ಹರಿಯೆಡೆ (ವಿಷ್ಣು() ಹರಿಕಾರ (ಮುಂದಾಳು) ಹರಿಸಿ ||

ಹರಿಪದದಿ ಹರಗು (ಚೆಲ್ಲು) ಹರಣಕೂ ಮುನ್ನ |

ಹರಿ ಕಥೆಯಲಿ ಹರವಸ (ಪರವಶ) ಳನ್ನಾಗಿಸಿ ಹರಿಯದಂತೆ ಬೇರೆಡೆ ||

ಹರಿ ಅಭಿನ್ನ ಶ್ರೀಕೃಷ್ಣವಿಠ್ಠಲನಲಿ ಹರುಷದಿ ಹರಿಸು |

ಹರಿಯೇಪ್ರಾಣ, ಹರಿಯೇ ಪರದೈವ ಎಂದೆಂದಿಗೂ ||

381. ದು:ಖಭಂಜಕ , ಸುಝ ಪ್ರದಾಯಕ, ಅಖಿಲ ಜಗತ್ರಾತ |

ಖಗವಾಹನ, ಸಖ ಶ್ರೀಕೃಷ್ಣವಿಠ್ಠಲ ವಿಶ್ವಬಂಧು: ||

382.ನನ್ನ ಕರ್ಮದ ಗಂಟೀ ಹೊರೆಯಾಗಿರಲು | ನೀನೇನು ಮಾಡುವಿ ಒಳಹೊರಗಿದ್ದು ||

ನಿನ್ನ ಮನಸಿಗೆ ಬಂದಂತೆ ಉಣಿಸುವಿ | ಎನಗೇಕೆ ಹೊಗಳಿಕೆ- ತೆಗಳಿಕೆ ಚೆನ್ನಿಗರಾಯ ಶ್ರೀಕೃಷ್ಣವಿಠ್ಠಲ ||

383. ಲಕ್ಷ ಕೊಡುವವ ನೀನೇ | ಭಿಕ್ಷೆ ಬೇಡಿಸುವವ ನೀನೇ ||

ಲಕ್ಷಣದಿ ಪೀತಾಂಬರ ಉಡಿಸುವ ನೀನೇ | ತಕ್ಷಣದಿ ಹರಕು ಉಡಿಸುವವ ನೀನೇ ||

ಭಕ್ಷ್ಯ ತಿಸಿಸುವವ ನೀನೇ | ಲಕ್ಷಿಸದೆ ಉಪವಾಸ ಬೀಳಿಸುವವ ನೀನೇ ||

ಕುಕ್ಷಿಯೊಳಗೆ ಸಕಲ ಜಗತ್ ಧರಿಪೆ | ಸಾಕ್ಷಿಯಾಗಿ ಇರುವೆ ಶ್ರೀಕೃಷ್ಣವಿಠ್ಠಲ ||

384. ಸೇವೆಯ ಪರಿ ತಿಳಿಯೆನೋ ದೇವಾ |

ವಿವಿಧ ಸೇವೆಯಲಿ ಯಾವ ಸೇವೆ ಮಾಡಲಿ ||ಪ||

ತಪ, ಯಜ್ಞ ಮಾಡಲರಿಯೆ |

ಕೊ, ಕಾಮಗಳ ಬಿಡಲರಿಯೆ ||

ಪಾಪ, ಪುಣ್ಯಗಳ ಲೆಕ್ಕ ತಿಳಿಯದು |

ಪೋಪುತಿದೆ ಬರಿದೇ ಆಯುಷ್ಯ ||1||

ಅನ್ನ, ವಸ್ತ್ರ, ಭೂಮಿದಾನ |

ಧನ, ಕನಕ, ಗೋದಾನವೇ ||

ದೀನ, ದೂನ, ಅನಾಥರ ಸೇವೆಯೇ |

ದಾನದಿ ಶ್ರೇಷ್ಠವಾದ ದಾನ ಯಾವುದು ? ||2||

ವ್ರತ, ನಿಯಮಗಳ ಗೋಜಲು ತಿಳಿಯದು |

ಸತತ ಮಾನಸ್ಮರಣೆ ಮನದಿ ಇರದು ||

ತೀರ್ಥ ಯಾತ್ರೆಯಲಿ ತನು ಸಹಕರಿಸದು |

ಸಾರ್ಥಕತೆಗೆ ಸೇವೆ ಯಾವುದು ? ||3||

ವರ್ಣ ಪ್ರತಿಪಾದ್ಯ ಸುವರ್ಣನಾಮಕ |

ವಾಣಿ ಪತೀಶನೇ ತೋರಿದ ಸೇವೆಯೆಂದು ||

ಬಣ್ಣಿಸಿ ಬರೆದ ಲೀಲೇ ಗುಣ ಪದಗಳನು |

ಗುಣಾರ್ಣವ ಶ್ರೀಕೃಷ್ಣವಿಠ್ಠಲನಿಗೆ ಸಮರ್ಪಿಸುವೆ ಸ್ವೀಕರಿಸೋ ||4||

385. ಓಂಕಾರ ಸ್ವರೂಪ ಶಾಂತ ಸ್ವಭಾವ |

ಲೋಕೈಕ ಸುಂದರ ಮೂಲ ಪುರುಷೋತ್ತಮ ||

ಭಕ್ತ ಜನರೋದ್ಧಾರಕ ಸತ್ಯವಚನಪರಿಪಾಲಕ |

ಶ್ರೀಕೃಷ್ಣವಿಠ್ಠಲನೇ ಸರ್ವಕಾರ್ಯ ಕಾರಣಕರ್ತ ||

386. ಭಕ್ತಿರಸ ಲೀಲೆ

ಮುರುಳಿ ಅಧರ ತಾಕಲು ತಾನೇ |

ಹೊರಹೊಮ್ಮಿತು ಮೋಹಕ ಮಧುರ ಗಾನ ||ಪ||

ತುರು-ಕರುಗಳು ಕಿವಿ ನಿಮಿರಿಸಿ ಚಂಗನೆ |

ಹಾರುತ್ತಾ- ಬಾಲ ಬೀಸುತ್ತ ಓಡಿ ಓಡಿ ಬಂದವು ||

ಕರುಗಳು ಕ್ಷೀರಪಾನ ಬಿಟ್ಟು ಶಿಲೆಯಂತೆ ನಿಂತವು |

ಕೊರಳು ತೂಗುತ್ತಾ ಹಸುಗಳು ತಮ್ಮನ್ನೇ ಮರೆತವು ||1||

ತರುಲತೆಗಳು ಪಲ್ಲವಿಸಿ ಪುಷ್ಪಗಳರಳಿದವು |

ಪರಿಮಳ ಭರಿತ ಮರುತ ಮಂದನಾಗಿ ಬೀಸಿತ್ತು ||

ತೆರೆ ತೆರೆಯಾಗಿ ಯಮುನೆ ತಲೆ ತೂಗಿದಳು |

ನೀರಿನ ಜುಳು ಜುಳುನಾದ ವೇಣುವಿಗೆ ಜೊತೆಯಾಯ್ತು ||2||

ಶರ ಬೀಸಿದ ಕಾಮ ಸಕಲರ ಮೋಹಮಾಡಲು |

ಮರಳು ಮಾಡಿತು ರಾಗ ನಿನಾದ ಪರಿಸರವ ||

ನೀರವ ಕತ್ತಲೆ ಸಕಲರ ಹೃದಯ ತಟ್ಟಿತ್ತು |

ಸುಶ್ರುತ ರಾಗದಿ ಆಕರ್ಷಿತರಾದರೆಲ್ಲರು ||3||

ಕರೆ ಕೇಳಿ ಗೋಪಿಕೆಯರೆಲ್ಲಾ ಮಾಡುವ ಕೆಲಸ |

ಮರೆತು ಅರ್ಧದಿ ನಿಲ್ಲಿಸಿ ಹೊರ ಹೊರಟರು ||

ವೈರಾಗ್ಯ ಸಾಧಕರು ಪತಿ-ಸುತ ಗೃಹ ತೊರೆದು |

ಪರಮಾನುಗ್ರಹ ಪಡೆಯಲು ತ್ವರಿತದಿ ಧಾವಿಸಿದರು ||4||

ಸುರಾಗ ಆಲಿಸಿ ದೇಹಭಾನ ಮರೆತು ಧನ್ಯತೆಯಲಿ |

ತೊರೆದು ಲಜ್ಜೆ ಆಪೇಕ್ಷಿಸಿದರು ತನು-ಮನಸಂಗ ||

ನಿರಾಕರಿಸೆ ದೇಹ ತೊರೆವೆವು ಎಂದರು ಭಕ್ತಿ ಭಾವದಿ |

ಕರುಣೆಯಿಂದ “ತಥಾಸ್ತು” ಎಂದು ಮನ ಮಾಡಿದ ಮೋಹನ ||5||

ಶರದೃತು ಪೌರ್ಣಿಮೆರಾತ್ರಿಪೂರ್ಣ ರಾಸಲೀಲೆ ಆಡಿದರು |

ಸ್ವರ್ಗವೇ ಧರೆಗಿಳಿದು ಬಂದು ಸೃಷ್ಟಿ ನಿರ್ಮಿಸಿತ್ತು ||

ಶ್ರೀಕೃಷ್ಣವಿಠ್ಠಲ ಅನೇಕರೂಪದಿ ಅನೇಕ ಭಾವದಿ ಬಾಲಕನಾಗಿ |

ನೀರೆ ಗೋಪಿಕೆ ಜೊತೆ ಲಾಸ್ಯದಿ ನಲಿದಾಡಿದನು ||6||

ಜೊತೆ

ಸಂತೃಪ್ತಿ ಪರಿಪಾಲಿಸಿ ಸಂತೈಸಿದ ಲೀಲೆ ಅಚಿಂತ್ಯಾದ್ಭುತ |

ಸ್ಮರಿಸುತ್ತಾ ರಸ ಸಮಯ ಹರುಷದಿ ತೆರಳಿದವರವರ ಮನೆಗೆ ||

387. ಓಡೋಡಿ ಬರುವ ಭಕ್ತವತ್ಸಲ ಸಕಲರನುದ್ಧರಿಸಲು ||ಪ||

ನೋಡದೆ ಸಮಯ ತ್ವರಿತದಿ ಧಾವಿಸಿ ಬರುವ ದೇವ ||ಅಪ||

ಪುಟ್ಟ ಬಾಲಕನಿರಲಿ, ದೀನಾರ್ತಪ್ರಾಣಿ ಇರಲಿ | (ಧ್ರುವ, ಆನೆ)

ಕಷ್ಟದಲ್ಲಿರಲಿ, ಶಾಪಿತಳಾಗಿರಲಿ || (ದ್ರೌಪದಿ, ಅಹಲ್ಯ)

ಇಷ್ಟದಿ ಭಕ್ತಿಯಿಂದ ದಾರಿ ಕಾಯ್ದಿರಲಿ ||1|| (ಶಬರಿ)

ಬಡವನಿರಲಿ, ಸಖ-ಸಖಿಯರಿರಲಿ | (ಸುಧಾಮ, ಅರ್ಜುನ, ಗೋಪಿಕೆ)

ಭಂಡ ಬಲ್ಲಿದವನಿರಲಿ, ಅಸುರನಿರಲಿ || (ಪ್ರಹ್ಮಾಲ, ಬಲಿ)

ಬಿಡದೆ ಸಲಹುವ ಅವರಿದ್ದಲ್ಲಿಗೇ ಪೋಗಿ ||2||

ತ್ರಿವಕ್ರಳಿರಲಿ, ಜ್ಞಾನಾರ್ತಿ ಇರಲಿ | (ಉದ್ಧವ)

ಈವ ಅಭವ ದು:ಖ ಭಂಜಕ ||

ಕಾವ ಸರ್ವದಾ ನಮ್ಮ ಶ್ರೀಕೃಷ್ಣವಿಠ್ಠಲ ಭೇದವೆಣಿಸದೆ ||3||

388. ಒಂದು ರೂಪದಿ ವಿಶ್ವ ಒಳ-ಹೊರ ವ್ಯಾಪಿಸಿ |

ಭೇದವಿಲ್ಲದೆ ಅನೇಕ ರೂಪ ತಳೆದವಗೆ ನಮೋ ನಮ: ||

ಅಂಶ-ಪೂರ್ಣಾವತಾರವೆಂಬೆರಡು ರೀತಿಯಲಿ ತಾ |

ಈಶ- ರಮಾದಿರೊಳಗಿದ್ದು ಜಗದ್ರಕ್ಷಕನಾದವಗೆ ನಮೋನಮ: ||

ಮೂರು ರೂಪದಿ ಜಾಗ್ರತ-ಸ್ವಪ್ನ-ಸುಷುಪ್ತಿ ನೀಡುವ |

ಮೂರು ರೂಪದಿ ಹೃದಯದಿ ನೆಲಸಿ ಸಂಚರಿಪಗೆ ನಮೋನಮ: ||

ಮೂರು ನಾಮದಿ ಪಾಪ-ಸಂಹಾರಕನೆನಿಸಿದ ಸರ್ವೋದ್ಧಾರಕ |

ಕರ್ಮಲೋಪ-ದೋಷಗಳ ಸ್ವೀಕರಿಸುವಗೆ ನಮೋನಮ: ||

ವಿಚಿತ್ರ ಸೃಷ್ಟ್ಯಾದಿ ಕರ್ತ, ನಿಯಾಮಕ ನಾಲ್ಕು ರೂಪದಿ ಭರಿಸಿ |

ಪಂಚರೂಪದಿ ದೇಹವ್ಯಾಪಿಸಿ ಕರ್ಮವೈದಿಸುವಗೆ ನಮೋನಮ: ||

ಅಜಾದಿ ಐವತ್ತೊಂದು ಶಬ್ದ, ರೂಪದಿ ಸೇವಿಸಲ್ಪಡುವವನೇ |

ನಿಜದಿ ಶತ ಸಹಸ್ರ ನಾಮಾವಳಿಂದ ಪೊಗಳಲ್ಪಡುವನೇ ನಮೋನಮ: ||

ಬಾಲರೂಪದಿ ಜಲದಿ ಆಲದೆಲೆ ಮೇಲೆ ಪವಡಿಸಿ |

ಲೀಲೆಯಲಿ ಕ್ರೀಡಿಸುವ ಯುಗಪ್ರವರ್ತಕಗೆ ನಮೋನಮ: ||

ಅಗಣಿತ ರೂಪ ಅಗಣಿತ ನಾಮದಿ ಪೂರ್ಣತಿಳಿಯಲಾಗದ |

ಖಗಪತಿ ಶ್ರೀಕೃಷ್ಣವಿಠ್ಠಲ ಸ್ವಯಂ ವ್ಯಕ್ತಾ ವ್ಯಕ್ತಗೆ ನಮೋನಮ: ||

389. ಅತ್ತ, ಇತ್ತ, ಸುತ, ಮುತ್ತ, ಎತ್ತಲೂ ಪ್ರತೀ ಜನುಮದೀ |

ಕರ್ತೃ ಪ್ರೇರಕ ಶ್ರೀಕೃಷ್ಣವಿಠ್ಠಲನೇ ಕಾಣಲಿ ದಯದಿ ||

390. ಹೇಳಲ್ಹೇಗೆ ನಿನಗೆ ಹೇಗೆ ತಿಳಿಯಲ್ಹೇಳಲಿ || ನಾನೇನು ಹೇಳಲಿ ? ತಿಳಿಯದೆ ನಿನಗೆ ||ಪ||

ಸುಳಿಯೊಳಗೆ ಸಿಲುಕಿ ಹೊರ ಬರಲು ದಾರಿ ಕಾಣದಾಗದೆ |

ಸುಳಿಸುಳಿದಾಡುವ ಸರ್ವದಾ ಹಿತವನ್ನೇ ಬಯಸುವ ||

ಸೆಳೆದು ವಿಷಯಗಳಿಂದ ಒಲಿದು ಪಾಲಿಸು ಸರ್ವದಾ |

ಕಳೆದು ಪಾಪಗಳ ತೊಳೆದು ಮನದ ಮಲ ಶುದ್ಧಳಾಗಿಸೆಂದು ಹೇಗೆ ಹೇಳಲಿ ||1||

ಒಳಿತಾಗಲೀ ಕೆಡುಕಾಗಲೀ, ಸುಖವಾಗಲಿ, ದು:ಖವಾಗಲೀ |

ವೇಳೆವೇಳೆಗೆ ಕರ್ಮಾನುಸಾರ ಕಲೆಸಿ ಉಣಿಸುವವ ||

ಒಳಗೆ ಕುಳಿತು ಹೇಳುವವ ಕೇಳುವವ ಎನ್ನಂತರ್ಯಾಮಿ |

ನೋಳ್ಪ ಮಾಳ್ಪ ಸರ್ವವಿದಿತ ಶ್ರೀಕೃಷ್ಣವಿಠ್ಠಲ ನಿನಗೆ ಹೇಗೆ ಹೇಳಲಿ ||

391. ಪ್ರದ್ಯುಮ್ನನೇ ಹಿಂಕಾರ ನಾಮಕನಾಗಿ ಪ್ರಾಣನಲಿ |

ಉದ್ಗೀಥ ನಾಮಕ ನಾರಾಯಣ ಚಕ್ಷುವಿನಲಿ ||

ವಾಗೀಂದ್ರಿಯಲಿ ಪ್ರಸ್ತಾವ ನಾಮಕ ವಾಸುದೇವ |

ಶ್ರೋತೇಂದ್ರಿಯಲಿ ಪ್ರತಿಹಾರ ನಾಮಕ ಅನಿರುದ್ಧ ||

ನಿಧನ ನಾಮಕ ಸಂಕರ್ಷಣನು ಮನದಿ |

ಐದು ಇಂದ್ರಿಯಗಳಲಿ ಪಂಚರೂಪಿ ಪರಮಾತ್ಮನ ಉಪಾಸಿಸಿ ||

ಪರೋವರೀಯ ಶ್ರೀಕೃಷ್ಣವಿಠ್ಠಲ ಮಾಡುವ ಉಪಕಾರವ |

ಪ್ರತಿಕ್ಷಣದಿ ನೆನೆ ನೆನೆದು ಧನ್ಯರಾಗಿರಿ ||

392. ಹರಿರೂಪದಿ ಗರುಡನ ಮೇಲೇರಿ ಭರ ಭರ್ರನೆ |

ಸರೋವರಕೆ ತೀವ್ರವೇ ಬಂದು ಚಕ್ರದಿಂದ ||

ನಕ್ರನ ಕೊರಳು ಸರಸರ್ರನೇ ಕತ್ತರಿಸಿ |

ಕರಿರಾಜನ ಪಾಪಗಳ ಕರ ಕರ್ರನೇ ತರಿದು ||

ಶ್ರೀಕೃಷ್ಣವಿಠ್ಠಲ ತನ್ನ ಚರಣದಲ್ಲಿಟ್ಟವನೇ |

ಹರಿದು ಎನ್ನ ಪಾಪವ ಪರಪರ್ರನೇ ಸಂಸಾರದಿಂ ತಾರಿಸು ಕರುಣಾನಿಧಿಯೇ ||

393.. ಒಂದೇ ಮನದಿ ಬೇಡುವೆ ನಿರ್ಮಲ, ನಿಚ್ಚಳ, ನಿರವಧಿಕ, ನಿರಂತರ |

ನಿತ್ಯನಿಜ ಭಕುತಿ ನಿನ್ನ ಪದತಲದಿ ||

ಇದೇ ಜ್ಞಾನ ಇರಲಿ ಸಾಕು ಪ್ರತಿ ಜನುಮದಿ ಇದನ್ನೇ ದಯಪಾಲಿಸು ಶ್ರೀಕೃಷ್ಣವಿಠ್ಠಲ ||

394. ಅಧಿಕರಾರೈ ಸಮರಾರೈ ದೇವಾ ನಿನಗಧಿಕ ರಾರೈ ಸಮರಾರೈ |

ಭೇದ ವಿವರ್ಜಿತನ ಮಹಿಮೆಗಳೇ ಅಧಿಕ ನಿನ್ನ ಗುಣಗಳೇ ಸಮ ನಿನಗೆ ||

ಸುಂದರರಾರೈ ಸರ್ವಶಕ್ತರಾರೈ ನಿನಗಿಂತ ಸುಂದರರಾರೈ ಸರ್ವಶಕ್ತರಾರೈ |

ಸುಂದರಾತಿ ಸುಂದರ ಸಕಲಾವತಾರಗಳು, ಸರ್ವಶಕ್ತ ನೀನೇ ಶ್ರೀಕೃಷ್ಣವಿಠ್ಠಲ ಸರ್ವದಾ ||

395. ಬಾಧಕಗಳೆಲ್ಲಾ ಸಾಧಕವಾಗಲಿ ಅನುದಿನ ಸಾಧನೆ ಹೆಚ್ಚಲಿ |

ಬಂಧಕ ವಿಷಯದಿಂದ ವಿಮುಖವಾಗಲಿ ಇಂದ್ರಿಯ ||

ದುರ್ದಿನಗಳೆಲ್ಲಾ ಸುದಿನವಾಗಿ ಸಂತೈಸಲಿ ನಿತ್ಯ |

ಬಂಧು-ಬಾಂಧವರ ಸಂಗ ತೊರೆದು ಏಕಾಂತವಾಗಲಿ ಮನ ||

ಬಿದ್ದು ಹೋಗುವ ಮುನ್ನ ತೀರಲಿ ಪ್ರಾರಬ್ಧವೆಲ್ಲಾ |

ವೃಂದಾವನಸ್ಥ ವರದೇಶ ವರಪ್ರದ ಶ್ರೀಕೃಷ್ಣವಿಠ್ಠಲನ ದಯದಿ ||

ಶ್ರೀಸೀತಾರಾಮಕಲ್ಯಾಣ

396. ನಿತ್ಯಾವಿಯೋಗಿ ಶ್ರೀಸೀತಾರಾಮರ ಕಲ್ಯಾಣ |

ನಿತ್ಯೋತ್ಸವ ಸುಜನರಿಗೆಲ್ಲಾ ಆನಂದದಾಯಕ, ಮಂಗಳದಾಯಕ ||ಪ|||

ಮಿಥಿಲೇಶ ಸಾರಿದ ತನ್ನ ಕುವರಿಯ ಸ್ವಯಂವರವ |

ಸ್ವತ: ತೆರಳಿ ವಿಶ್ವಾಮಿತ್ರ ದಾಶರಥೇಯರಿಗಿತ್ತ ಅ|ಹ್ವಾನವ ||

ಎತ್ತ ನೋಡಿದರೂ ಸಿಂಗಾರದಿ ಪುರ ನವವಧುವಿನಂತೆ ಕಂಗೊಳಿಸುತ್ತಿತ್ತು |

ಮತ್ತೆ ಆಗಮಿಸಿದರಿಲ್ಲಿ ಬ್ರಹ್ಮರ್ಷಿ ರಾಮ-ಲಕ್ಷ್ಮಣರೊಡಗೂಡಿ ||1||

ನೀಲವರ್ಣದ ನೀಳಕಾಯದ ಗಂಭೀರ ವದನ ಸುಂದರರಾಮನ |

ಎಲ್ಲ ನರನಾರಿಯರು ಮನದದಣಿಯ ನೋಡಿ ಆನಂದಿಸಿದರು ||

ಮೆಲ್ಲನೆ ಹೇಳಿದರು ನಲ್ಮೆಯ ಸೀತೆಗೆ ಸರಿ ಜೋಡಿಯೆಂದು |

ಬಲವಾದ ಶಿವಧನಸ್ಸು ಈ ಬಾಲಕ ಎತ್ತ ಬಲ್ಲನೆ ? ಎಂದು ಶಂಕಿಸಿದರು ||2||

ಹಲವಾರು ಜನರು ಗಾಡೀಲಿ ಎಳೆತಂದರು ಧನಸ್ಸನು |

ಕೇಳಿ ಗುರುಗಳಪ್ಪಣೆ ಸುಧನ್ವರಾಮ ಅತ್ತ ನಡೆದನು ||

ಲೀಲಾಜಾಲವಾಗಿ ಎಡಗೈಲೆತ್ತಿ ಹೆದೆ ಏರಿಸಲು |

ಬಿಲ್ಲು ನಡುವೆಯೇ ತುಂಡಾಯಿತು ಸಿಡಿಲ ಶಬ್ದದಿ ||3||

ಮರೆಯಲ್ಲಿದ್ದ ಸೀತೆ ವರಮಾಲೆ ಪಿಡಿದು ಬಂದಳು |

ಒರೆ ನೋಟ ಬೀರಿ ನಾಚಿ ಸಂತೋಷ ಮನದಿ ನಿಂದಳು ||

ಶ್ರೀರಾಮನ ಕೊರಳಿಗೆ ಅರವಿಂದದ ಮಾಲೆ ಹಾಕಿದಳು |

ನೀರೆಯ ಕೈಪಿಡಿದು ಅರ್ಧಾಂಗಿಯಾಗಿ ಸ್ವೀಕರಿಸಿದ ದಯದಿ ||4||

ಜಾನಕಿರಾಮರ ವಿವಾಹ ನಿತ್ಯನೂತನ ಹರುಷದಾಯಕ |

ಅನಿಮಿಷರೆಲ್ಲಾ ಆಕಾಶದಿ ನೆರೆದು ನೋಡಿ ಸಂತೋಷಿಸಿದರು ||

ಕಣ್ಮಣಿ ಆಯೋಧ್ಯಾಪತಿ ಮರ್ಯಾದಾ ಪುರುಷೋತ್ತಮ |

ಚಿನ್ಮಯನಾದ ಶ್ರೀಕೃಷ್ಣವಿಠ್ಠಲನ ಅಭೇದ ರೂಪವೇ ಸರಿ ||5||

397. ಮುಂದೆ ನರಸಿಂಹ ರಕ್ಷಿಸೆ ಹಿಂದೆ ನಂದನಕಂದ |

ಎಡ ಬಲದಲಿ ಧನುರ್ಧಾರಿ ಶ್ರೀರಾಮ-ಲಕ್ಷಣರಿರೆ ||

ಇಂದಿರಾರಮಣ ಎನಗೇತರ ಭಯವೋ |

ಸದಾ ಎನ್ನ ನಡೆ-ನುಡಿ ಕಾಯ್ವ ಶ್ರೀಕೃಷ್ಣವಿಠ್ಠಲ ||

398. ಎಂತು ಕೊಂಡಾಡಲಿ ದೊರೆಯೇ, ನಿನ್ನ ಕರುಣೆಯ |

ಭ್ರಾಂತಿ ಹೊಯಿತು ನಿನ್ನ ವ್ಯಾಪಾರ ವೀಕ್ಷಿಸಿ ||ಪ||

ಸ್ವತಂತ್ರ, ದೋಷದೂರ, ಜ್ಞೇಯ, ಗುಣಪೂರ್ಣ ನೀನು |

ಅತ್ಯಣು, ಪರಾಧೀನ, ಅಲ್ಪಜ್ಞ, ಬದ್ಧ, ಉಪ ಜೀವ್ಯನಾನು ||

ಕೊಟ್ಟ ಮೂರು ಅಮೂಲ್ಯ ಸಾಮಾನುಗಳ ಅರಿಯದಾದೆ | (ಬುದ್ದಿ, ಮನ, ಇಂದ್ರಿಯ)

ಬಿಟ್ಟು ಸ್ವಧರ್ಮದ ಉಪದೇಶಾರ್ಥವ ಮರೆತು ||1||

ತತ್ವ ನಿಶ್ಚಯಿಸಿ, ಧ್ಯಾನಿಸಿ, ಅದರಂತೆ ಕರ್ಮ ಮಾಡುವುದು |

ನಿತ್ಯಧ್ಯಾನ, ಪರಿಶುದ್ಧ ಮನದಿ ಬಿಂಭೋಪಾಸಕರ ಸೇವೆಯ ||

ನಿಂತಿದ್ದು, ಕುಳಿತಿದ್ದು, ಮಲಗಿದ್ದು, ಓಡಾಡಿದ್ದರಲ್ಲೇ |

ಚಿಂತಿಸಿ ಅಚಿಂತ್ಯಾದ್ಭುತನ ಮಹಿಮೆ, ಅರ್ಪಿಸು ||2||

ಸತತ ಒಳಹೊರಗಿನ ವ್ಯಾಪಾರ ನಡೆಸುವವನ |

ಜೊತೆಗಾರನ ಗುಣ ಚಿಂತನದಿ ಮುಳುಗಿರೆ ||

ಅತ್ಯಂತ ಅಚ್ಚುಮೆಚ್ಚಿನ ಭಕ್ತನೆಂದು ಗ್ರಹಿಸಿ |

ಚಿತ್ತ ಸ್ವಚ್ಛಗೈಸಿ ಅನುಗ್ರಹೀಪ ಸತ್ಯಮೂರ್ತಿ ಶ್ರೀಕೃಷ್ಣವಿಠ್ಠಲ ||3||

399. ಏನು ಕರುಣೆಯೋ ಕಾರುಣ್ಯನಿಧಿಯೇ ಎಷ್ಟೆಂದು ಪೇಳಲಿ |

ಸ್ವಾನುಭವದ ಮಾತಿದು ಉತ್ಪ್ರೇಕ್ಷೆ ಸ್ವಲ್ಪವೂ ಇಲ್ಲ ||

ಪ್ರಾರಬ್ಧ ತಪ್ಪದು ಆದರೆ ಗುಡ್ಡದಷ್ಟಿರುವ ಕಷ್ಟ ಕಡ್ಡಿಯಂತೆ ಮಾಡಿದೆ |

ಸರ್ವದಾ ಸರ್ವತ್ರ ಕಣ್ಣನ್ನು ರೆಪ್ಪೆ ರಕ್ಷಿಸಿದಂತೆ ಎನ್ನ ರಕ್ಷಿಸಿದೆ ||

ವದನದಿ ನುಡಿಸಿದ ಮಾತನ್ನು ನಿಜವಾಗಿಸಿ ಗೌರವಿಸಿದೆ |

ಮಾಡಿದ ಕಾರ್ಯವ ಜಯವನ್ನಾಗಿಸಿ ಉನ್ನತಿ ನೀಡಿದೆ ||

ಶುದ್ಧ ಮಾಡುತ ಅಂತ:ಕರಣ ಸರ್ವಕಾರ್ಯಕಾರಣ ಪ್ರೇರಕನಾದೆ |

ಮಾಡಿದುಪಕಾರವ ಅಳೆಯಲಾರೆ, ಮರೆಯಲಾರೆ, ತೀರಿಸಲಾರೆ ||

ತನು ಮನದಿ ಅಶುದ್ದಳ ಶುದ್ಧಗೊಳಿಸಿದೆ ಸ್ವಚ್ಛಮೂರುತಿಯೆ |

ಮನದಿ ನೆನೆದಿದ್ದನ್ನು ನಿಜಕೆ ತಂದು ತೋರಿಸಿದೆ ಸಾಕ್ಷಿಯೆ ||

ನೀನೆನಗೇನು ಸಂಬಂಧವೆಂದು ಇದೆಲ್ಲವ ಮಾಡಿದೆಯೇ ದಯಾನಿಧೇ |

ನಿನ್ನನರಿಯದಾದೆ ಒಮ್ಮೆಯಾದರೂ ನಿನ್ನ ತೋರಿಸಿಕೊಡೋ ಅದೃಶ್ಯ ಬಾಂಧವನೇ ||

ಕನ್ಣಿಗೆ ಕಾಣದಿದ್ದರೂ ಸದಾ ನೆರವಿನ ಹಸ್ತ ಚಾಚಿದ ಅಪ್ರತ್ಯಕ್ಷ ದೈವವೆ |

ನಿನ್ನ ಇರವು-ಹರುವಿನ ಅರಿವು ನೀಡಿ ಸರ್ವವಶತ್ವವ ನಿರೂಪಿಸಿದೆ ||

ದೊಡ್ಡ ಗಂಡಾಂತರ ಒದಗಿದಾಗ ಬಿಡದೆ ಚಿಕ್ಕದಾಗಿಸಿ ಸಲುಹಿದೆ |

ಬಂದನೋವು ಅರಿವಿಗೆ ಬಾರದಂತೆ ಎನಗೆ ಉಣಿಸಿದೆ ||

ಬಿಡದೆ ನಿನ್ನುಪಕಾರವ ಜನುಮ ಜನುಮಕೂ ಸ್ಮರಿಸುವಂತೆ ಮಾಡು |

ಒಡೆಯಾ, ಪ್ರಾಣಸಖ ಶ್ರೀಕೃಷ್ಣವಿಠ್ಠಲ ನಿನ್ನ ಋಣ ತೀರಿಸುವ ಬಗೆ ತಿಳಿಸು ||

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು